ಅದು ಜಿಲ್ಲಾ ಮಟ್ದದ ಕ್ರೀಡಾಕೂಟ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೆಲ್ಲ ಮಾನಸಿಕ ಅಸ್ವಸ್ಥರು, ಅಂಗವಿಕಲರು. ವಿಯ ಷಡ್ಯಂತ್ರಕ್ಕೆ ಬಲಿಯಾಗಿ ದೇಹದ ಯಾವುದೋ ಒಂದು ಅಂಗವನ್ನು ಕಳೆದುಕೊಂಡವರು.
ಅವತ್ತು ನಡೆಯಲಿದ್ದುದು ನೂರು ಮೀಟರ್ ಓಟದ ಅಂತಿಮ ಸುತ್ತಿನ ಸ್ಪರ್ಧೆ. ಕಣದಲ್ಲಿ ಉಳಿದಿದ್ದವರು ಎಂಟು ಮಂದಿ. ಆ ಪೈಕಿ ಊರುಗಾಲಿನ ಸಹಾಯದಿಂದ ಓಡುವ ಒಂದು ಹುಡುಗಿ ಕೂಡ ಇದ್ದಳು. ಮೊದಲು ಗುರಿ ತಲುಪಿದವರಿಗೆ ಕಪ್ ಮತ್ತು ಶೀಲ್ಡ್ ಕೊಡಲಾಗುವುದು ಎಂದು ಸಂಘಟಕರು ಮೇಲಿಂದ ಮೇಲೆ ಘೋಷಿಸಿದ್ದರು.
ಹೇಳಿ ಕೇಳಿ ಕಣದಲ್ಲಿರುವವರು ಅಂಗವಿಕಲರು ತಾನೆ? ಹಾಗಾಗಿ ಓಟದ ಸ್ಪರ್ಧೆಯಲ್ಲಿ ಅಂಥ ಸ್ವಾರಸ್ಯವಾಗಲಿ, ರೋಚಕ ಕ್ಷಣವಾಗಲಿ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ, ವಿಕಲಾಂಗರ ಓಟ ಹೇಗಿರುತ್ತದೋ ಎಂಬ ಕುತೂಹಲದಿಂದಲೇ ಒಂದಷ್ಟು ಮಂದಿ ಸ್ಟೇಡಿಯಂಗೆ ಬಂದಿದ್ದರು. ಇಂಥ ಕುತೂಹಲಿಗಳ ಮಧ್ಯೆಯೇ ಇದ್ದ ರ್ಸ್ಪಗಳ ಪೋಷಕರು-ಆಗಿಂದಾಗ್ಗೆ ಗಟ್ಟಿ ದನಿಯಲ್ಲಿ ತಮ್ಮ ಮಕ್ಕಳ ಕಡೆಗೆ ಕೈ ಮಾಡಿ ಕೂಗುತ್ತಾ-‘ವಿಷಲ್ ಹಾಕಿದ ತಕ್ಷಣ ಓಡಿಬಿಡಬೇಕು. ಫಸ್ಟ್ ಪ್ರೈಜೇ ತಗೋಬೇಕು ಗೊತ್ತಾಯ್ತಾ?’ ಎಂದು ಉಪದೇಶದ ಮಾತು ಹೇಳುತ್ತಿದ್ದರು.
ಕಡೆಗೊಮ್ಮೆ ಓಟ ಆರಂಭವಾಗುವ ಕ್ಷಣ ಬಂದೇ ಬಂತು. ಆಯೋಜಕರ ಕಡೆಯವರೊಬ್ಬರು -‘ರೆಡೀ, ಓನ್, ಟೂ, ಥ್ರೀ’ ಎಂದು, ನಂತರದ ಕೆಲವೇ ಸೆಕೆಂಡುಗಳಲ್ಲಿ ವಿಷಲ್ ಹಾಕಿದರು.
ಅಷ್ಟೇ, ಎಂಟೂ ಮಂದಿ ಓಡಲು ಶುರು ಮಾಡಿದರು. ಆ ಪೈಕಿ ಒಬ್ಬಾಕೆಗೆ ಕೈಗಳಿರಲಿಲ್ಲ. ಇನ್ನೊಬ್ಬಳಿಗೆ ಒಂದು ಕಾಲಿರಲಿಲ್ಲ. ಮತ್ತೊಬ್ಬಳಿಗೆ ದೃಷ್ಟಿ ಭಾಗ್ಯವಿರಲಿಲ್ಲ. ಮಗದೊಬ್ಬಳಿಗೆ ಬುದ್ಧಿ ಭ್ರಮಣೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ, ಓಡುವ ಸಂದರ್ಭದಲ್ಲಿ ಮಾತ್ರ ಈ ಮಕ್ಕಳು ತಮ್ಮ ದೈಹಿಕ ನ್ಯೂನತೆಗಳನ್ನೂ ಮರೆತು ಗುರಿ ತಲುಪುವತ್ತ ಉತ್ಸಾಹದಿಂದ ಮುನ್ನುಗ್ಗಿದ್ದರು.
ಈ ಮಕ್ಕಳ ಆಮೆ ವೇಗದ ಓಟ ಕಂಡು ಕೆಲವರಿಗೆ ನಗು, ಕೆಲವರಿಗೆ ಅಚ್ಚರಿ. ಹೀಗಿದ್ದಾಗಲೇ ಊರುಗೋಲಿನ ಸಹಾಯದಿಂದಲೇ ಓಡುತ್ತಿದ್ದ ಹುಡುಗಿಯೊಬ್ಬಳು ಆಯತಪ್ಪಿ ಬಿದ್ದುಬಿಟ್ಟಳು. ಬಿದ್ದ ರಭಸಕ್ಕೆ ಚರ್ಮ ಕಿತ್ತು ಬಂದಿತ್ತು. ನೋವಿನಿಂದ ಆಕೆ ಚೀರಿಕೊಂಡಳು. ಆ ಕ್ಷಣವೇ ಮುಂದೆ ಓಡುತ್ತಿದ್ದ ಉಳಿದ ಏಳೂ ಮಕ್ಕಳು ಹಿಂತಿರುಗಿ ನೋಡಿದರು. ಎರಡೇ ನಿಮಿಷಗಳಲ್ಲಿ ಅವರ ಕಂಗಳು ಮಾತಾಡಿಕೊಂಡವು. ಎಲ್ಲರೂ ಮತ್ತೆ ಹಿಂದಕ್ಕೆ ಓಡಲು ತೊಡಗಿ, ಗಾಯಗೊಂಡಿದ್ದಾಕೆಯ ಬಳಿ ಬಂದರು. ಆಕೆಗೆ ತಮಗೆ ತಿಳಿದಂತೆ ಚಿಕಿತ್ಸೆ ನೀಡಿದರು.
ಸ್ಟೇಡಿಯಂನಲ್ಲಿ ಇದ್ದ ಜನರೆಲ್ಲ ಓಹ್, ಹೇಳಿ ಕೇಳಿ ಇವು ಬುದ್ಧಿಭ್ರಮಿತ, ಅಂಗವಿಕಲ ಮಕ್ಕಳು ತಾನೆ? ಇವುಗಳಿಗೆ ಸ್ಪರ್ಧೆ ಇದೆ ಅನ್ನೋದೇ ಮರೆತು ಹೋಗಬಹುದು ಎಂದು ಮಾತಾಡಿಕೊಂಡರು. ಇರಲಿ, ಮುಂದೇನಾದೀತೋ ಎಂದು ಅವರೆಲ್ಲ ಬೆರಗಿನಿಂದ ನೋಡುತ್ತಿದ್ದಾಗಲೇ ಗಾಯಗೊಂಡಿದ್ದ ಹುಡುಗಿಯನ್ನು ನಿಲ್ಲಿಸಿ ಎಲ್ಲರೂ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,ಒಂದೇ ವೇಗದಲ್ಲಿ ಓಡುತ್ತಾ ಬಂದು ಎಂಟು ಮಂದಿಯೂ ಒಟ್ಟಿಗೇ ಗುರಿ ತಲುಪಿದರು!
ಆ ಕ್ಷಣದಲ್ಲಿ ಆ ಮಕ್ಕಳ ಹೃದಯ ಮಾತಾಡಿತ್ತು! ಈ ಅಪರೂಪದ ದೃಶ್ಯ ನೋಡಿದ ಆ ಮಕ್ಕಳ ಪೋಷಕರು ಬಿಕ್ಕುತ್ತಾ ಓಡಿಬಂದು ಆ ಮಕ್ಕಳನ್ನು ಅಪ್ಪಿಕೊಂಡರು. ಅಂಗವಿಕಲ ಮಕ್ಕಳು ಪ್ರದರ್ಶಿಸಿದ ‘ದೊಡ್ಡ ಗುಣ’ ಕಂಡು ಮೂಕರಾದ ಅಕಾರಿಗಳು ಎಲ್ಲ ಮಕ್ಕಳಿಗೂ ಪ್ರತ್ಯೇಕವಾಗಿಯೇ ಒಂದೊಂದು ಕಪ್ ನೀಡಿ ತಾವೂ ಕಣ್ಣೊರಸಿಕೊಂಡರು!
ಎಂಟು ಜನರೂ ಒಮ್ಮೆಗೇ ಗುರಿ ಮುಟ್ಟಿದರು!
One Comment
RSS Feed for this entry
ಪ್ರಿಯ ಮಣಿಕಾಂತ್ ಸರ್.
ಆ ಮಕ್ಕಳ ಮಾನವೀಯತೆಯ ಗುಣ ನಿಜಕ್ಕೂ ಅನುಕರಣೀಯವಾದದ್ದು, ಆಪ್ತ ಬರಹ ಇಷ್ಟವಾಯಿತು.ಹಿಂದೊಮ್ಮೆ ಅನಂತ್ ಚಿನಿವಾರ್ ಓ ಮನಸೇಯಲ್ಲಿ ಓದಿದ ನೆನಪು…
ಕಂಡಕ್ಟರ್ ಕಟ್ಟಿಮನಿ 45E