ಪ್ರಿಯರೆ,ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತೋಷದ ಸಂಗತಿ ಇದೆ.ಏನೆಂದರೆ,ನನ್ನ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕಕ್ಕೆ ೨೦೦೯ ನೆ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ.ಉತ್ಸಾಹವನ್ನೂ ತುಂಬಿದೆ.ನನ್ನ ಖುಷಿ ನಿಮ್ಮದೂ ಆಗಲಿ.ಭವಿಷ್ಯದಲ್ಲಿ ಎಲ್ಲರ ಪ್ರೀತಿ ನನ್ನನ್ನು ಕಾಯಲಿ…ಇದು ನನ್ನ ಪ್ರಾರ್ಥನೆ.
ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ.ಇನ್ನೂ ಓದಿಲ್ಲದಿದ್ದರೆ ದಯವಿಟ್ಟು ಓದಿ. ನಿಮ್ಮ ಬದುಕಿನ ಕಥೆಯೂ ಆ ಪುಸ್ತಕದಲ್ಲಿ ಸಿಗುತ್ತದೆ.ಜೊತೆಗೆ ಅಮ್ಮನೂ ಸಿಕ್ಕುತಾಳೆ…

ಕಂಗ್ರಾಟ್ಸ್ ಮಣಿ.
ಖಂಡಿತ ಓದುತ್ತೇನೆ.
ಮಣೀ ಡಿಯರ್,
ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿನಂದನೆಗಳು.
ಪ್ರೀತಿಯ ಗೆಳೆಯನಿಗೆ ಒಳ್ಳೆಯದಾಗಲಿ.
-RJ
ಪ್ರೀತಿಯ ಮಣೀ ಸರ್…
ಅಭಿನಂದನೆಗಳು ಸರ್… ಮನಸ್ಸು ಖಿನ್ನತೆಯ ಮಡುವಲ್ಲಿದ್ದಾಗಲೆಲ್ಲಾ ನಾನು ಓದುವುದೆ ”ಅಮ್ಮನ ಸುಳ್ಳುಗಳು.. ಪುಸ್ತಕವನ್ನು… ಆಪ್ತವಾದ ಬರವಣಿಗೆ . ಅಲ್ಲಿನ ಎಲ್ಲರ ಜೀವನದ ಕತೆಗಳು ದಿನವು ನೆನಪಿಗೆ ಬರುತ್ತವೆ… ಸಣ್ಣ ಸಂಗತಿಗಳಿಗೆಲ್ಲಾ ಸಾವಿನ ಮೊರೆ ಓಗುತ್ತಿರುವ ಈ ದಿನಗಳಲ್ಲಿ ಎಲ್ಲರೂ ಓದುವಂತದು, ಮುಖ್ಯವಾಗಿ ಟೀನೇಜ್ ಮಕ್ಕಳಿಗೆ ಓದಿಸುವುದು ಆರೋಗ್ಯಕರ. ಕಂಡಕ್ಟರ್ ಕಟ್ಟಿಮನಿ
congrates
ಈ ಪತ್ರಕರ್ತರೇ ಹೀಗೆ! ಎಲ್ಲರ ಸುದ್ದಿ ಬರೀತಾರೆ ತಮ್ಮ ಸುದ್ದಿನೇ ಬರೆಯಲ್ಲ!!!
ಒಲವಿನ ಗೆಳೆಯ ಮಣಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಕೇಳಿ ತುಂ ತುಂ ತುಂಬಾ ಖುಷಿಯಾಯ್ತು. ಓದುಗರ ಮನಸ್ಸು ತಟ್ಟುವ ಇಂಥದೇ ಲೇಖನಗಳು ಹರಿದು ಬರಲಿ.
ನಿಜಕ್ಕೂ ಮಣಿ ಒಂದು ಮಣಿ (ರತ್ನ )ಯೇ !
-ವಿಶ್ವನಾಥ ಬಸವನಾಳಮಠ