<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಒಲವೇ ಮರೆಯದ ಮಮಕಾರ..!</title>
	<atom:link href="http://manigulabi.wordpress.com/feed/" rel="self" type="application/rss+xml" />
	<link>http://manigulabi.wordpress.com</link>
	<description></description>
	<lastBuildDate>Sat, 14 Jan 2012 19:14:32 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='manigulabi.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://s2.wp.com/i/buttonw-com.png</url>
		<title>ಒಲವೇ ಮರೆಯದ ಮಮಕಾರ..!</title>
		<link>http://manigulabi.wordpress.com</link>
	</image>
	<atom:link rel="search" type="application/opensearchdescription+xml" href="http://manigulabi.wordpress.com/osd.xml" title="ಒಲವೇ ಮರೆಯದ ಮಮಕಾರ..!" />
	<atom:link rel='hub' href='http://manigulabi.wordpress.com/?pushpress=hub'/>
		<item>
		<title>ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!</title>
		<link>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-2/</link>
		<comments>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-2/#comments</comments>
		<pubDate>Thu, 23 Jun 2011 14:21:52 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=794</guid>
		<description><![CDATA[ನಿನ್ನ ಸವಿನೆನಪೆ ಮನದಲ್ಲಿ&#8230; ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ. ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ. ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ ಪ್ರೀತಿಯ ಸವಿಮಾತೆ ಉಪಾಸನೆ ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು ಶೃಂಗಾರ ರಸಧಾರೆ ಉಸಿರಾಯಿತು &#124;&#124;ಪ&#124;&#124; ಹೂ ಬಾಣ ಹೂಡಲು ಕಾಮನಬಿಲ್ಲು ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು ಉಸಿರಾಟ ನೀನು ಬಿಸಿ ಮಿಡುಕಾಟ ನಾನು ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು &#124;&#124;೧&#124;&#124; ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ ನೀ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=794&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p>ನಿನ್ನ ಸವಿನೆನಪೆ ಮನದಲ್ಲಿ&#8230;</p>
<p>ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.<br />
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.</p>
<p>ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ<br />
ಪ್ರೀತಿಯ ಸವಿಮಾತೆ ಉಪಾಸನೆ<br />
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು<br />
ಶೃಂಗಾರ ರಸಧಾರೆ ಉಸಿರಾಯಿತು ||ಪ||</p>
<p>ಹೂ ಬಾಣ ಹೂಡಲು ಕಾಮನಬಿಲ್ಲು<br />
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು<br />
ಉಸಿರಾಟ ನೀನು ಬಿಸಿ ಮಿಡುಕಾಟ ನಾನು<br />
ನಿನ್ನಲಿ ನಾ ಮರುಳಾದೆನು<br />
ನೀನೆ ಈ ಬಾಳ ಬಾನು ||೧||</p>
<p>ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ<br />
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ<br />
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು<br />
ನಿನ್ನ ವಿನಾ ನಾ ಬಾಳೆನೂ<br />
ಇನ್ನೂ ದಯೆ ಬಾರದೇನು<br />
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ<br />
ಬಾಳಲಿ ಬೆಳಕಾಗು ಮಹೇಶ್ವರ<br />
ನಮ್ಮ ಕೈಹಿಡಿದು ಕಾಪಾಡು ಕರುಣಾಕರ<br />
ನಿನ್ನಲ್ಲಿ ಶರಣಾದೆ ಶಿವಶಂಕರ<br />
ಶರಣು ಶಿವಶಂಕರ ಶರಣು ಅಭಯಂಕರ<br />
ಶರಣು ಶಿವಶಂಕರ ಶರಣು ಅಭಯಂಕರ ||೨||</p>
<p>ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.<br />
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.<br />
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ&#8230; ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!<br />
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.<br />
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.<br />
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!<br />
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!<br />
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!<br />
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.<br />
************<br />
ತಿಂಗಳ ಹಿಂದಿನ ಮಾತು.<br />
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.&#8217;ಹಾಡು ಹುಟ್ಟಿದ ಸಮಯ&#8217; ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ&#8230;ನಾನು ಬಂದು ಮಾಹಿತಿ ತಗೋತೇನೆ ಅಂದೆ.&#8217;ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ&#8230;ನಾನು ಫ್ರೀ ಇದ್ದೇನೆ&#8217; ಅಂದರು ಬಸಂತ್.<br />
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ&#8230;ದಯವಿಟ್ಟು ತಪ್ಪು ತಿಳ್ಕೊಬೇಡಿ&#8230;ನಾನು ಬ್ಯುಸಿ ಇವತ್ತು&#8230;ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-&#8217; ಅಯ್ಯೋ ಸಾರ್&#8230;ಸಾರೀ ..&#8217;.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಹಾಡಿನ ಕಥೆ ಅರಳಿಕೊಂಡಿತು.<br />
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ&#8230;</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/794/"><img alt="" border="0" src="http://feeds.wordpress.com/1.0/comments/manigulabi.wordpress.com/794/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/794/"><img alt="" border="0" src="http://feeds.wordpress.com/1.0/delicious/manigulabi.wordpress.com/794/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/794/"><img alt="" border="0" src="http://feeds.wordpress.com/1.0/facebook/manigulabi.wordpress.com/794/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/794/"><img alt="" border="0" src="http://feeds.wordpress.com/1.0/twitter/manigulabi.wordpress.com/794/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/794/"><img alt="" border="0" src="http://feeds.wordpress.com/1.0/stumble/manigulabi.wordpress.com/794/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/794/"><img alt="" border="0" src="http://feeds.wordpress.com/1.0/digg/manigulabi.wordpress.com/794/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/794/"><img alt="" border="0" src="http://feeds.wordpress.com/1.0/reddit/manigulabi.wordpress.com/794/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=794&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-2/feed/</wfw:commentRss>
		<slash:comments>2</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>
	</item>
		<item>
		<title>ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!</title>
		<link>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86/</link>
		<comments>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86/#comments</comments>
		<pubDate>Thu, 23 Jun 2011 14:17:37 +0000</pubDate>
		<dc:creator>ಮಣಿಕಾಂತ್</dc:creator>
		
		<guid isPermaLink="false">http://manigulabi.wordpress.com/?p=787</guid>
		<description><![CDATA[ನಿನ್ನ ಸವಿನೆನಪೆ ಮನದಲ್ಲಿ&#8230; ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ. ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ. ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ ಪ್ರೀತಿಯ ಸವಿಮಾತೆ ಉಪಾಸನೆ ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು ಶೃಂಗಾರ ರಸಧಾರೆ ಉಸಿರಾಯಿತು &#124;&#124;ಪ&#124;&#124; ಹೂ ಬಾಣ ಹೂಡಲು ಕಾಮನಬಿಲ್ಲು ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು ಉಸಿರಾಟ ನೀನು ಬಿಸಿ ಮಿಡುಕಾಟ ನಾನು ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು &#124;&#124;೧&#124;&#124; ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ ನೀ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=787&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p>ನಿನ್ನ ಸವಿನೆನಪೆ ಮನದಲ್ಲಿ&#8230;</p>
<p>ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.<br />
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.</p>
<p>ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ<br />
ಪ್ರೀತಿಯ ಸವಿಮಾತೆ ಉಪಾಸನೆ<br />
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು<br />
ಶೃಂಗಾರ ರಸಧಾರೆ ಉಸಿರಾಯಿತು ||ಪ||</p>
<p>ಹೂ ಬಾಣ ಹೂಡಲು ಕಾಮನಬಿಲ್ಲು<br />
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು<br />
ಉಸಿರಾಟ ನೀನು ಬಿಸಿ ಮಿಡುಕಾಟ ನಾನು<br />
ನಿನ್ನಲಿ ನಾ ಮರುಳಾದೆನು<br />
ನೀನೆ ಈ ಬಾಳ ಬಾನು ||೧||</p>
<p>ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ<br />
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ<br />
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು<br />
ನಿನ್ನ ವಿನಾ ನಾ ಬಾಳೆನೂ<br />
ಇನ್ನೂ ದಯೆ ಬಾರದೇನು<br />
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ<br />
ಬಾಳಲಿ ಬೆಳಕಾಗು ಮಹೇಶ್ವರ<br />
ನಮ್ಮ ಕೈಹಿಡಿದು ಕಾಪಾಡು ಕರುಣಾಕರ<br />
ನಿನ್ನಲ್ಲಿ ಶರಣಾದೆ ಶಿವಶಂಕರ<br />
ಶರಣು ಶಿವಶಂಕರ ಶರಣು ಅಭಯಂಕರ<br />
ಶರಣು ಶಿವಶಂಕರ ಶರಣು ಅಭಯಂಕರ ||೨||</p>
<p>ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.<br />
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.<br />
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ  ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ&#8230; ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!<br />
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.<br />
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.<br />
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!<br />
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!<br />
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!<br />
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ  ಮನಸ್ಸುಗಳಿಗೂ ಕೃತಜ್ಞತೆ.<br />
************<br />
ತಿಂಗಳ ಹಿಂದಿನ ಮಾತು.<br />
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.&#8217;ಹಾಡು ಹುಟ್ಟಿದ ಸಮಯ&#8217; ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ&#8230;ನಾನು ಬಂದು ಮಾಹಿತಿ ತಗೋತೇನೆ ಅಂದೆ.&#8217;ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ&#8230;ನಾನು ಫ್ರೀ ಇದ್ದೇನೆ&#8217; ಅಂದರು ಬಸಂತ್.<br />
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ&#8230;ದಯವಿಟ್ಟು ತಪ್ಪು ತಿಳ್ಕೊಬೇಡಿ&#8230;ನಾನು ಬ್ಯುಸಿ ಇವತ್ತು&#8230;ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-&#8217; ಅಯ್ಯೋ ಸಾರ್&#8230;ಸಾರೀ ..&#8217;.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್  ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಹಾಡಿನ ಕಥೆ ಅರಳಿಕೊಂಡಿತು.<br />
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ  ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ&#8230;</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/787/"><img alt="" border="0" src="http://feeds.wordpress.com/1.0/comments/manigulabi.wordpress.com/787/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/787/"><img alt="" border="0" src="http://feeds.wordpress.com/1.0/delicious/manigulabi.wordpress.com/787/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/787/"><img alt="" border="0" src="http://feeds.wordpress.com/1.0/facebook/manigulabi.wordpress.com/787/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/787/"><img alt="" border="0" src="http://feeds.wordpress.com/1.0/twitter/manigulabi.wordpress.com/787/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/787/"><img alt="" border="0" src="http://feeds.wordpress.com/1.0/stumble/manigulabi.wordpress.com/787/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/787/"><img alt="" border="0" src="http://feeds.wordpress.com/1.0/digg/manigulabi.wordpress.com/787/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/787/"><img alt="" border="0" src="http://feeds.wordpress.com/1.0/reddit/manigulabi.wordpress.com/787/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=787&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>
	</item>
		<item>
		<title>ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!</title>
		<link>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-%e0%b2%ad/</link>
		<comments>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-%e0%b2%ad/#comments</comments>
		<pubDate>Thu, 23 Jun 2011 13:29:34 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=778</guid>
		<description><![CDATA[ನಿನ್ನ ಸವಿನೆನಪೆ ಮನದಲ್ಲಿ&#8230; ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ. ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ. ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ ಪ್ರೀತಿಯ ಸವಿಮಾತೆ ಉಪಾಸನೆ ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು ಶೃಂಗಾರ ರಸಧಾರೆ ಉಸಿರಾಯಿತು &#124;&#124;ಪ&#124;&#124; ಹೂ ಬಾಣ ಹೂಡಲು ಕಾಮನಬಿಲ್ಲು ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು ಉಸಿರಾಟ ನೀನು ಬಿಸಿ ಮಿಡುಕಾಟ ನಾನು ನಿನ್ನಲಿ ನಾ ಮರುಳಾದೆನು ನೀನೆ ಈ ಬಾಳ ಬಾನು &#124;&#124;೧&#124;&#124; ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ ನೀ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=778&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p>ನಿನ್ನ ಸವಿನೆನಪೆ ಮನದಲ್ಲಿ&#8230;</p>
<p>ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.<br />
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.</p>
<p>ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ<br />
ಪ್ರೀತಿಯ ಸವಿಮಾತೆ ಉಪಾಸನೆ<br />
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು<br />
ಶೃಂಗಾರ ರಸಧಾರೆ ಉಸಿರಾಯಿತು ||ಪ||</p>
<p>ಹೂ ಬಾಣ ಹೂಡಲು ಕಾಮನಬಿಲ್ಲು<br />
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು<br />
ಉಸಿರಾಟ ನೀನು ಬಿಸಿ ಮಿಡುಕಾಟ ನಾನು<br />
ನಿನ್ನಲಿ ನಾ ಮರುಳಾದೆನು<br />
ನೀನೆ ಈ ಬಾಳ ಬಾನು ||೧||</p>
<p>ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ<br />
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ<br />
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು<br />
ನಿನ್ನ ವಿನಾ ನಾ ಬಾಳೆನೂ<br />
ಇನ್ನೂ ದಯೆ ಬಾರದೇನು<br />
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ<br />
ಬಾಳಲಿ ಬೆಳಕಾಗು ಮಹೇಶ್ವರ<br />
ನಮ್ಮ ಕೈಹಿಡಿದು ಕಾಪಾಡು ಕರುಣಾಕರ<br />
ನಿನ್ನಲ್ಲಿ ಶರಣಾದೆ ಶಿವಶಂಕರ<br />
ಶರಣು ಶಿವಶಂಕರ ಶರಣು ಅಭಯಂಕರ<br />
ಶರಣು ಶಿವಶಂಕರ ಶರಣು ಅಭಯಂಕರ ||೨||</p>
<p>ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.<br />
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.<br />
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ&#8230; ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!<br />
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.<br />
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.<br />
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!<br />
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!<br />
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!<br />
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.<br />
************<br />
ತಿಂಗಳ ಹಿಂದಿನ ಮಾತು.<br />
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.&#8217;ಹಾಡು ಹುಟ್ಟಿದ ಸಮಯ&#8217; ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ&#8230;ನಾನು ಬಂದು ಮಾಹಿತಿ ತಗೋತೇನೆ ಅಂದೆ.&#8217;ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ&#8230;ನಾನು ಫ್ರೀ ಇದ್ದೇನೆ&#8217; ಅಂದರು ಬಸಂತ್.<br />
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ&#8230;ದಯವಿಟ್ಟು ತಪ್ಪು ತಿಳ್ಕೊಬೇಡಿ&#8230;ನಾನು ಬ್ಯುಸಿ ಇವತ್ತು&#8230;ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-&#8217; ಅಯ್ಯೋ ಸಾರ್&#8230;ಸಾರೀ ..&#8217;.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ &#8216;ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ&#8230;&#8217;ಹಾಡಿನ ಕಥೆ ಅರಳಿಕೊಂಡಿತು.<br />
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ&#8230;</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/778/"><img alt="" border="0" src="http://feeds.wordpress.com/1.0/comments/manigulabi.wordpress.com/778/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/778/"><img alt="" border="0" src="http://feeds.wordpress.com/1.0/delicious/manigulabi.wordpress.com/778/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/778/"><img alt="" border="0" src="http://feeds.wordpress.com/1.0/facebook/manigulabi.wordpress.com/778/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/778/"><img alt="" border="0" src="http://feeds.wordpress.com/1.0/twitter/manigulabi.wordpress.com/778/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/778/"><img alt="" border="0" src="http://feeds.wordpress.com/1.0/stumble/manigulabi.wordpress.com/778/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/778/"><img alt="" border="0" src="http://feeds.wordpress.com/1.0/digg/manigulabi.wordpress.com/778/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/778/"><img alt="" border="0" src="http://feeds.wordpress.com/1.0/reddit/manigulabi.wordpress.com/778/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=778&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/06/23/%e0%b2%aa%e0%b3%8d%e0%b2%b0%e0%b3%87%e0%b2%ae%e0%b2%97%e0%b3%80%e0%b2%a4%e0%b3%86%e0%b2%af%e0%b3%8a%e0%b2%82%e0%b2%a6%e0%b3%81-%e0%b2%a6%e0%b2%bf%e0%b2%a2%e0%b3%80%e0%b2%b0%e0%b2%a8%e0%b3%86-%e0%b2%ad/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>
	</item>
		<item>
		<title>ಅಮ್ಮ ಪುಸ್ತಕಕ್ಕೆ ಅಕಾಡೆಮಿ ಪ್ರಶಸ್ತಿ&#8230;</title>
		<link>http://manigulabi.wordpress.com/2011/04/14/%e0%b2%85%e0%b2%ae%e0%b3%8d%e0%b2%ae-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95%e0%b2%95%e0%b3%8d%e0%b2%95%e0%b3%86-%e0%b2%85%e0%b2%95%e0%b2%be%e0%b2%a1%e0%b3%86%e0%b2%ae%e0%b2%bf/</link>
		<comments>http://manigulabi.wordpress.com/2011/04/14/%e0%b2%85%e0%b2%ae%e0%b3%8d%e0%b2%ae-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95%e0%b2%95%e0%b3%8d%e0%b2%95%e0%b3%86-%e0%b2%85%e0%b2%95%e0%b2%be%e0%b2%a1%e0%b3%86%e0%b2%ae%e0%b2%bf/#comments</comments>
		<pubDate>Thu, 14 Apr 2011 12:02:03 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಗೆ ಸುಮ್ಮನೆ]]></category>

		<guid isPermaLink="false">http://manigulabi.wordpress.com/?p=772</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ಪ್ರಿಯರೆ,ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತೋಷದ ಸಂಗತಿ ಇದೆ.ಏನೆಂದರೆ,ನನ್ನ &#8216;ಅಮ್ಮ ಹೇಳಿದ ಎಂಟು ಸುಳ್ಳುಗಳು&#8217; ಪುಸ್ತಕಕ್ಕೆ ೨೦೦೯ ನೆ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ.ಉತ್ಸಾಹವನ್ನೂ ತುಂಬಿದೆ.ನನ್ನ ಖುಷಿ ನಿಮ್ಮದೂ ಆಗಲಿ.ಭವಿಷ್ಯದಲ್ಲಿ ಎಲ್ಲರ ಪ್ರೀತಿ ನನ್ನನ್ನು ಕಾಯಲಿ&#8230;ಇದು ನನ್ನ ಪ್ರಾರ್ಥನೆ. ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ.ಇನ್ನೂ ಓದಿಲ್ಲದಿದ್ದರೆ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=772&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/04/amma-book.jpg"><img class="alignleft size-medium wp-image-779" title="amma book" src="http://manigulabi.files.wordpress.com/2011/04/amma-book.jpg?w=195&#038;h=300" alt="" width="195" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ಪ್ರಿಯರೆ,ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತೋಷದ ಸಂಗತಿ ಇದೆ.ಏನೆಂದರೆ,ನನ್ನ &#8216;ಅಮ್ಮ ಹೇಳಿದ ಎಂಟು ಸುಳ್ಳುಗಳು&#8217; ಪುಸ್ತಕಕ್ಕೆ ೨೦೦೯ ನೆ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ.ಉತ್ಸಾಹವನ್ನೂ ತುಂಬಿದೆ.ನನ್ನ ಖುಷಿ ನಿಮ್ಮದೂ ಆಗಲಿ.ಭವಿಷ್ಯದಲ್ಲಿ ಎಲ್ಲರ ಪ್ರೀತಿ ನನ್ನನ್ನು ಕಾಯಲಿ&#8230;ಇದು ನನ್ನ ಪ್ರಾರ್ಥನೆ.<br />
ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ.ಇನ್ನೂ ಓದಿಲ್ಲದಿದ್ದರೆ ದಯವಿಟ್ಟು ಓದಿ. ನಿಮ್ಮ ಬದುಕಿನ ಕಥೆಯೂ ಆ ಪುಸ್ತಕದಲ್ಲಿ ಸಿಗುತ್ತದೆ.ಜೊತೆಗೆ ಅಮ್ಮನೂ ಸಿಕ್ಕುತಾಳೆ&#8230;</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/772/"><img alt="" border="0" src="http://feeds.wordpress.com/1.0/comments/manigulabi.wordpress.com/772/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/772/"><img alt="" border="0" src="http://feeds.wordpress.com/1.0/delicious/manigulabi.wordpress.com/772/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/772/"><img alt="" border="0" src="http://feeds.wordpress.com/1.0/facebook/manigulabi.wordpress.com/772/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/772/"><img alt="" border="0" src="http://feeds.wordpress.com/1.0/twitter/manigulabi.wordpress.com/772/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/772/"><img alt="" border="0" src="http://feeds.wordpress.com/1.0/stumble/manigulabi.wordpress.com/772/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/772/"><img alt="" border="0" src="http://feeds.wordpress.com/1.0/digg/manigulabi.wordpress.com/772/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/772/"><img alt="" border="0" src="http://feeds.wordpress.com/1.0/reddit/manigulabi.wordpress.com/772/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=772&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/04/14/%e0%b2%85%e0%b2%ae%e0%b3%8d%e0%b2%ae-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95%e0%b2%95%e0%b3%8d%e0%b2%95%e0%b3%86-%e0%b2%85%e0%b2%95%e0%b2%be%e0%b2%a1%e0%b3%86%e0%b2%ae%e0%b2%bf/feed/</wfw:commentRss>
		<slash:comments>6</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/04/amma-book.jpg?w=195" medium="image">
			<media:title type="html">amma book</media:title>
		</media:content>
	</item>
		<item>
		<title>ಅಪರಾತ್ರಿಯಲ್ಲೂ ಈ ಹಾಡು ಕೇಳುತ್ತ ಕೂತಿದ್ದರಂತೆ ಎಸ್ಪಿಬಿ</title>
		<link>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3-2/</link>
		<comments>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3-2/#comments</comments>
		<pubDate>Thu, 17 Feb 2011 11:38:02 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=770</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ&#8230; ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ. ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ ಸೋತು ಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ &#124;&#124;ಪ&#124;&#124; ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ಮನಸೆಲ್ಲ ಹೊಯ್ದಾಡಿದೆ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=770&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/02/aswath.jpg"><img class="alignleft size-medium wp-image-773" title="Aswath" src="http://manigulabi.files.wordpress.com/2011/02/aswath.jpg?w=206&#038;h=300" alt="" width="206" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ&#8230;</p>
<p>ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ.<br />
ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.</p>
<p>ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ<br />
ಸೋತು ಹೋಯಿತೆ ಜೀವ<br />
ಮೂಕವಾಯಿತೆ ಭಾವ<br />
ತೂಕ ತಪ್ಪಿತೆ ಬದುಕಿಗೆ	||ಪ||</p>
<p>ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ<br />
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ<br />
ಮನಸೆಲ್ಲ ಹೊಯ್ದಾಡಿದೆ  ||೧||</p>
<p>ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ<br />
ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ<br />
ನೋವೊಂದೆ ಫಲವಾಯಿತೆ  ||೨||</p>
<p>ಸುಗಮ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲ; ಚಿತ್ರರಂಗದಲ್ಲೂ ಅಪರೂಪದ, ಅನುಪಮ ಗೀತೆಗಳಿಗೆ ರಾಗ ಸಂಯೋಜಿಸಿ ದವರು ಸಿ. ಅಶ್ವತ್ಥ್. ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಕಾಕನ ಕೋಟೆ, ಆಲೆಮನೆ, ಬಾಡದ ಹೂ, ಸ್ಪಂದನ, ಅನುಪಮ, ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿಮುತ್ತ, ಕೊಟ್ರೇಶಿ ಕನಸು&#8230; ಹೀಗೆ, ಅಶ್ವತ್ಥ್ ಸಂಗೀತ ಸಂಯೋಜನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿನಗರದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ- ಒಂದು ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆದರೆ ಸಾಕು; ನಂತರದ ಒಂದಿಡೀ ವರ್ಷ ಆ ಚಿತ್ರದ ಸಂಗೀತ ನಿರ್ದೇಶಕ ಬ್ಯುಸಿಯಾಗಿರುತ್ತಾನೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.<br />
ಆದರೆ, ಸಿ. ಅಶ್ವತ್ಥ್ ಅವರ ವಿಷಯದಲ್ಲಿ ಈ ಮಾತು ಸುಳ್ಳಾಗಿತ್ತು. ಏಕೆಂದರೆ, ಒಂದು ಸಿನಿಮಾಕ್ಕೆ ಸಂಗೀತ ನೀಡಿದ ನಂತರ, ಚಿತ್ರರಂಗಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ, ಅಲ್ಲಿಂದ ಎದ್ದು ಸುಗಮ ಸಂಗೀತ ಕ್ಷೇತ್ರಕ್ಕೆ ಬಂದುಬಿಡುತ್ತಿದ್ದರು ಅಶ್ವತ್ಥ್. ಮುಂದೆ ಒಂದೋ ಎರಡೋ ವರ್ಷಗಳು ಭಾವಗೀತೆಗಳ ರಾಗ ಸಂಯೋಜನೆಯಲ್ಲಿಯೋ, ಗಾಯನದಲ್ಲಿಯೊ ಅಥವಾ ಇನ್ಯಾವುದೋ ಹೊಸ ಸಾಹಸದಲ್ಲಿಯೋ ಕಳೆದುಹೋಗುತ್ತಿದ್ದವು. ಹೀಗೆ, ಚಿತ್ರರಂಗದಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಮರೆತಿದ್ದಾರೆ ಎನ್ನುವಾಗ ದಢದಢನೆ ನಡೆದು ಬಂದು ಇನ್ನೊಂದು ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗೆಲುವಿನ ನಗು ಬೀರುತ್ತಿದ್ದರು ಅಶ್ವತ್ಥ್.<br />
೧೯೭೯ರಲ್ಲಿ ತೆರೆಗೆ ಬಂದ ಸಿನಿಮಾ-ಏನೇ ಬರಲಿ ಪ್ರೀತಿ ಇರಲಿ. ಈ ಚಿತ್ರದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ&#8230;’ ಗೀತೆಯ ಬಗ್ಗೆ ಬರೆಯಲು ಹೊರಟಾಗ, ಅಶ್ವತ್ಥ್ ಅವರ ಗೀತಯಾತ್ರೆಯ ಬಗ್ಗೆಯೂ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಬೇಕಾಯಿತು. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ಏನೆಂದರೆ, ಸಿ. ಅಶ್ವತ್ಥ್ ಹಾಗೂ ಎಲ್. ವೈದ್ಯನಾಥನ್ ಅವರು ಒಂದಾಗಿ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದು ‘ ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಿಂದ. ಅದಕ್ಕೂ ಮುಂಚೆ ಅಶ್ವತ್ಥ್, ಹಾಡುಗಳಿಗೆ ಟ್ಯೂನ್ ಸಿದ್ಧಮಾಡಿಕೊಂಡು ಮದ್ರಾಸಿಗೆ ಹೋಗುತ್ತಿದ್ದರು. ಅಲ್ಲಿ ರೆಕಾರ್ಡಿಂಗ್ ಸಂದರ್ಭದಲ್ಲಿ ಅರ್ಕೆಸ್ಟ್ರಾ ತಂಡವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ವೈದ್ಯ ನಾಥನ್ ಮುಗಿಸಿಕೊಡುತ್ತಿದ್ದರು. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಂಗೀತ: ಸಿ. ಅಶ್ವತ್ಥ್, ನೆರವು/ಸಹಾಯ: ಎಲ್. ವೈದ್ಯನಾಥನ್ ಎಂದು ಹಾಕಲಾಗುತ್ತಿತ್ತು.<br />
ತಾವಿಬ್ಬರೂ ಜತೆಯಾಗಿ ಸಂಗೀತ ನಿರ್ದೇಶನ ಮಾಡಲು ಕಾರಣ ವಾದ ಸಂದರ್ಭ ಮತ್ತು ‘ಪ್ರೀತಿಯ ಕನಸೆಲ್ಲಾ-‘ಹಾಡು ಸೃಷ್ಟಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಸ್ನೇಹಿತರಾದ ಸುಪ್ರಭಾ ಅವರಿಗೆ ಹಿಂದೊಮ್ಮೆ ಅಶ್ವತ್ಥ್ ಅವರೇ ಹೀಗೆ ವಿವರಿಸಿದ್ದರು:<br />
‘ಸ್ಪಂದನ’  ಚಿತ್ರ ನಿರ್ಮಿಸಿದ್ದ ಪಿ. ಶ್ರೀನಿವಾಸ್, ಆನಂತರದಲ್ಲಿ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರ ತಯಾರಿಸಲು ಮುಂದಾದರು. ಆ ಚಿತ್ರಕ್ಕೆ ಅವರದೇ ಕಥೆ. ನಾಯಕನೂ ಅವರೇ. ನಾಯಕಿಯ ಪಾತ್ರಕ್ಕೆ ಮಂಜುಳಾ ಅವರನ್ನು ಆಯ್ಕೆ ಮಾಡಿದ್ದರು. ಸಂಗೀತ ನಿರ್ದೇಶನದ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ಈ ಸಿನಿಮಾದ ಮಾತುಕತೆಯ ಸಂದರ್ಭದಲ್ಲಿ ಪಿ. ಶ್ರೀನಿವಾಸ್ ಹಾಗೂ ನನಗೆ ಆತ್ಮೀಯರಾಗಿದ್ದ ಕೃಷ್ಣರಾವ್ ಅವರೂ ಇದ್ದರು. ಚಿತ್ರದಲ್ಲಿ ಸಂಗೀತ ಬಳಕೆ ಹೇಗಿರಬೇಕು ಎಂದು ಚರ್ಚಿಸುತ್ತಿದ್ದಾಗ ಅವರು ಹೇಳಿದರು: ‘ರೀ ಅಶ್ವತ್ಥ್, ನಿಮ್ಮದೂ- ವೈದೀದೂ ಒಳ್ಳೇ ಸಾಮರಸ್ಯದ ಜೋಡಿ ಕಣ್ರೀ. ಈವರೆಗಿನ ನಿಮ್ಮ ಚಿತ್ರ ಸಂಗೀತದ ಯಾತ್ರೆಯಲ್ಲಿ ಜತೆಗಾರನಾಗಿ ವೈದಿ ಯಾವಾಗಲೂ ಇದ್ದಾರೆ. ನೀವ್ಯಾಕೆ  ಈಗ ಅಧಿಕೃತವಾಗಿ ಅಶ್ವತ್ಥ್-ವೈದಿ ಅಂತ ಜೋಡಿಯಾಗಿ ಸಂಗೀತ ನಿರ್ದೇಶನಕರಾಗಬಾರದು?’<br />
ಕೃಷ್ಣರಾವ್ ಅವರ ಈ ಮಾತು ನನಗೆ ಒಪ್ಪಿಗೆಯಾಯಿತು. ವೈದಿ ಅವರಿಗೂ ಒಪ್ಪಿಗೆಯಾಯಿತು. ಪರಿಣಾಮವಾಗಿ-‘ ಏನೇ ಬರಲಿ ಪ್ರೀತಿ ಇರಲಿ’ ಸಿನಿಮಾದ ಮೂಲಕ ನಾವು ಜತೆಯಾಗಿ ಕೆಲಸ ಮಾಡಲು ಆರಂಭಿಸಿದೆವು.<br />
ಹೊಸದಾಗಿ ಮದುವೆಯಾದ ದಂಪತಿಗಳ ಸುತ್ತ ಹೆಣೆಯಲಾದ ಕಥೆ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಲ್ಲಿತ್ತು. ಮಧ್ಯಮ ವರ್ಗದವರ ಪೇಚಾಟಗಳು, ಆರ್ಥಿಕ ತೊಂದರೆ, ಅವರ ಪ್ರೀತಿ, ಸಂಕಟ&#8230; ಇತ್ಯಾದಿ ಇತ್ಯಾದಿ ಈ ಸಿನಿಮಾದ ಕಥಾವಸ್ತು. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದೇ ಹೋದಾಗ ನಾಯಕ ಅಸಹಾಯಕನಾಗಿ ಕೂತುಬಿಡುವ ಒಂದು ಸಂದರ್ಭವಿತ್ತು. ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ ಎಂದು ನನಗೆ ಅನ್ನಿಸಿತು. ಅದನ್ನೇ ಶ್ರೀನಿವಾಸ್‌ಗೆ ಹೇಳಿದೆ. ನನ್ನ ಮಾತು ಅವರಿಗೂ ಇಷ್ಟವಾಯ್ತು. ಹಾಡನ್ನು ಯಾರಿಂದ ಬರೆಸುವುದು ಎಂದುಕೊಂಡಾಗ ನೆನಪಾದದ್ದು ಕವಿ ಲಕ್ಷ್ಮೀ ನಾರಾಯಣ ಭಟ್ಟರು. ಈ ಹಿಂದೆ  ‘ಸ್ಪಂದನ’ ಚಿತ್ರಕ್ಕೂ ಭಟ್ಟರು-‘ ಎಂಥಾ ಮರುಳಯ್ಯ ಇದು ಎಂಥಾ ಮರುಳೂ&#8230;’ ಎಂಬ ಗೀತೆ ಬರೆದುಕೊಟ್ಟಿದ್ದರು. ಅದೇ ಸೆಂಟಿಮೆಂಟ್ ಜತೆಗಿಟ್ಟುಕೊಂಡು ಭಟ್ಟರಲ್ಲಿ ಹೊಸ ಗೀತೆಗೆ ಮನವಿ ಮಾಡಿಕೊಂಡೆವು. ಭಟ್ಟರು ತುಂಬ ಸಂಭ್ರಮದಿಂದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ’&#8230; ಗೀತೆ ಬರೆದುಕೊಟ್ಟರು.<br />
ಈ ಹಾಡಿಗೆ ರಾಗ ಸಂಯೋಜಿಸಿದ ಸಂದರ್ಭ ಇದೆಯಲ್ಲ? ಅದು ಬಹಳ ವಿಶೇಷವಾದದ್ದು. ಹಾಡಿನ ಸಂಯೋಜನೆಗೆ ಕೂತಾಗ ವೈದಿ ಹಾರ್ಮೋನಿಯಂ ತಂದ್ರು. ಮದ್ರಾಸಿನ ಹೋಟೆಲ್ ರೂಂನಲ್ಲಿ ಕುಳಿತೆವು. ಆಗೆಲ್ಲ ನಾನು-ವೈದಿ ಸಂವಾದ ನಡೆಸುತ್ತಿದ್ದುದು ಹೆಚ್ಚಾಗಿ ಇಂಗ್ಲಿಷಿನಲ್ಲೇ. qsಟ್ಠ oಠಿZಠಿ ಠಿeಛಿ oಟ್ಞಜ ಅoeಡಿZಠಿe ಅಂದ್ರು ವೈದಿ. ಎರಡು ನಿಮಿಷದ ನಂತರ, ನಾನು ಈ ಗೀತೆಯನ್ನು ಹಾಡಿದಾಗ, ವೈದಿ ಭಾವಪರವಶರಾಗಿ ಅತ್ತೇ ಬಿಟ್ರು. ಆಗಲೇ ನನಗೆ ಅನ್ನಿಸಿಬಿಡ್ತು: ‘ಈ ಹಾಡಲ್ಲಿ, ಈ ಸಂಗೀತದಲ್ಲಿ ಏನೋ ಆಕರ್ಷಣೆ ಇದೆ&#8230;’<br />
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕು. ಈ ಗೀತೆಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸುವುದೆಂದು ನಿರ್ಧರಿಸಲಾಗಿತ್ತು. ಜೆಮಿನಿ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್. ಆರ್ಕೆಸ್ಟ್ರಾ ತಂಡದವರೆಲ್ಲ ಸಿದ್ಧವಾಗಿದ್ದರು. ಎಸ್ಪಿ ಕೂಡಾ ಹಾಡಲು ಸಿದ್ಧರಾಗಿ ಬಂದರು. ಆಗ ವೈದಿ  ಹೇಳಿದರು:  ಅಶ್ವತ್ಥ್, ನಾನು ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡುತ್ತೇನೆ. ನೀವು ಆ ಕಡೆಯಲ್ಲಿ ನಿಂತು ೧,೨,೩-೧,೨,೩ ಹೇಳಿ ಎಂದರು. (ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಸ್ವರ ತಾಳದ ಏರಿಳಿತವನ್ನು ಗಾಯಕರು ಹಾಗೂ ವಾದ್ಯಗಾರರಿಗೆ ತಿಳಿಸಲೆಂದು ೧,೨,೩ ಹೇಳಲಾಗುತ್ತದೆ.) ಆ ರೀತಿ ಮಾಡಲು ನನಗೆ ಸಂಕೋಚ, ಭಯ ಇತ್ತು. ಹಾಗಾಗಿ- ‘ಇಲ್ರೀ, ನನ್ನಿಂದ ಈ ಕೆಲಸ ಆಗಲ್ಲ’  ಅಂದುಬಿಟ್ಟೆ. ಅದೇನೂ ಅಂಥ ಕಷ್ಟವಲ್ಲ ಅಶ್ವತ್ಥ್. ನೀವು ಸುಮ್ನೆ ೧,೨,೩ ಹೇಳ್ತಾ ಹೋಗಿ ಎಂದು ವೈದಿ ಇನ್ನಿಲ್ಲದಂತೆ ಹೇಳಿದರು. ನನಗೆ ಅದ್ಯಾಕೋ ಆ ಕೆಲಸ ಮಾಡಲು ಧೈರ್ಯ ಬರಲಿಲ್ಲ. ಸುಮ್ಮನಾಗಿಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಅವರು- ನಾನೇ ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡ್ತೇನೆ ಬಿಡಿ’ ಎಂದರು. ಹಾಗೆಯೇ ಮಾಡಿದರು!<br />
ಮೂರನೇ ಟೇಕ್‌ನಲ್ಲಿ ಹಾಡು ಓಕೆ ಆಯಿತು. ನಂತರ ಪಿ.ಎನ್. ಶ್ರೀನಿವಾಸ್ ಹಾಗೂ ಕೃಷ್ಣರಾವ್ ಈ ಹಾಡು ಕೇಳಿ ಮೆಚ್ಚಿಕೊಂಡರು. ನಮ್ಮ ಕೃಷ್ಣರಾವ್ ಅವರ ಸ್ನೇಹಿತನೊಬ್ಬ ಇದ್ದ. ಕುಮಾರ್ ಎಂದು ಅವನ ಹೆಸರು. ಅವನು ಕೊಳಲು ವಾದಕ. ಅವನಿಗೆ ಅದೇನೋ ಮನೆ ಕಡೆಯ ತೊಂದರೆ. ಈ ಕಾರಣಕ್ಕೇ ಕುಡಿಯಲು ಕಲಿತಿದ್ದ. ಅವನು, ಈ ಹಾಡು ಕೇಳಿದವನೇ-ಈ ಹಾಡೊಳಗೆ ನನ್ನ ಸಂಕಟವೆಲ್ಲಾ ಇದೆ ಅಂದ. ಈ ಹಾಡನ್ನು ಪದೇ ಪದೆ ಕೇಳೋದು, ಮತ್ತೆ ಕುಡಿದು ಬಿಕ್ಕಳಿಸೋದು&#8230; ಹೀಗೇ ಮಾಡ್ತಾ ಇದ್ದ. ಮಧ್ಯರಾತ್ರಿ ೧.೩೦ ಆದರೂ ಆ ಮಹರಾಯನ ಅಳು ನಿಲ್ಲಲೇ ಇಲ್ಲ.<br />
ಇದೆಲ್ಲ ನನ್ನ ಕಣ್ಣೆದುರೇ ನಡೀತಿತ್ತು ನೋಡಿ, ಹಾಗಾಗಿ ಸಹಜ ವಾಗಿಯೇ ಖುಷಿಯಾಗ್ತಾ ಇತ್ತು. ಒಂದು ಹಾಡಿಗೆ ಹೀಗೆ ಹತ್ತಾರು ಮಂದಿಯನ್ನು ಕಾಡುವ ಶಕ್ತಿ ಬರಬೇಕಾದರೆ ಅದಕ್ಕೆ ಎಸ್ಪಿ ಬಾಲಸುಬ್ರಹ್ಮಣಂ ಅವರ ದನಿಯಲ್ಲಿನ ಮಾಧುರ್ಯವೇ  ಕಾರಣ ಅನ್ನಿಸ್ತು. ಅವರಿಗೆ ಅಭಿನಂದನೆ ಹೇಳೋಣ ಅನ್ನಿಸ್ತು. ಅದು ಅಪರಾತ್ರಿ. ಸವಿನಿದ್ರೆಯ ಸಮಯ. ಪೋನ್ ಮಾಡಲು ಇದು ಸಮಯವಲ್ಲ ಎಂದು ಗೊತ್ತಿದ್ದೂ ಡಯಲ್ ಮಾಡಿಬಿಟ್ಟೆ. ಅವರು ಹಲೋ ಎಂದ ತಕ್ಷಣ- ಬಾಲು ಅವರೇ, ನಮಸ್ಕಾರ. ನಿಮ್ಮ ದನಿಯಿಂದ ನನ್ನ ಈ ಹಾಡಿಗೆ ಜೀವ ಬಂದಿದೆ. ನಾವೆಲ್ಲರೂ ಇಷ್ಟು ಹೊತ್ತು ಆ ಹಾಡನ್ನೇ ಕೇಳ್ತಾ ಇದ್ವಿ. ಧನ್ಯವಾದಗಳು’ ಅಂದೆ.<br />
ಆಗ ಬಾಲು ಏನೆಂದರು ಗೊತ್ತೇ? ಈಟ qsಟ್ಠ hಟಡಿ ಡಿeZಠಿ ಐZಞ ಈಟಜ್ಞಿಜ ಘೆಟಡಿ ಅoeಡಿZಠಿeಜಿ, ಐZಞ ಔಜಿoಠಿಛ್ಞಿಜ್ಞಿಜ ಠಿಟ qsಟ್ಠ್ಟ oಟ್ಞಜ. ಐಠಿ ಜಿo ಠಿeಛಿ ಟಞmಟoಜಿಠಿಜಿಟ್ಞ ಡಿeಜ್ಚಿe eZo bಟ್ಞಛಿ ಠಿeಛಿ ಞZಜಜ್ಚಿ (ನಾನು ಏನ್ಮಾಡ್ತಾ ಇದ್ದೆ ಗೊತ್ತಾ ಅಶ್ವತ್ಥ್? ಆ ಹಾಡನ್ನೇ ಕೇಳ್ತಾ ಇದ್ದೆ. ನಿಮ್ಮ ಅಪೂರ್ವ ಸಂಯೋಜನೆಯಿಂದ ಈ ಹಾಡಿಗೊಂದು ಕಳೆ ಬಂದಿದೆ) ಅಂದರು. ಎಸ್ಪಿ ಅವರಂಥ ಮಹಾನ್ ಗಾಯಕನಿಂದ ಈ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಭಾವುಕನಾಗಿ-‘ಬಾಲು ಅವರೇ, ನಿಮ್ಮ ಮಾತು ದೊಡ್ಡದು, ಮನಸೂ ದೊಡ್ಡದು’ ಎಂದು ಹೇಳಿ ಪೋನ್ ಇಟ್ಟೆ.<br />
ಮರುದಿನ ಬೆಳಗ್ಗೆ ಅದೇ ಜೆಮಿನಿ ಸ್ಟುಡಿಯೋದಲ್ಲಿ ನನ್ನ ಸಂಗೀತ ನಿರ್ದೇಶನದಲ್ಲಿ ಇನ್ನೊಂದು ಚಿತ್ರದ ರೆಕಾರ್ಡಿಂಗ್ ಇತ್ತು. ಅಲ್ಲಿಗೆ ವೈದಿ ಕೂಡ ಬಂದಿದ್ದರು. ನನ್ನನ್ನು ಕಂಡವರೇ ಕೈ ಕುಲುಕಿ- ‘ಅಶ್ವತ್ಥ್, ಎಂಥ ಅದ್ಭುತ ಸಂಯೋಜನೆಯಯ್ಯಾ ನಿನ್ನದು? ನಾನು, ನಿನ್ನೆ ರಾತ್ರಿ ಕನಿಷ್ಠ ಪಕ್ಷ ಹತ್ತು ಬಾರಿಯಾದರೂ ಆ ಹಾಡು ಕೇಳಿದ್ದೇನೆ. ಮನಸ್ಸು ಹಾಗೂ ಹೃದಯವನ್ನು ಏಕಕಾಲಕ್ಕೆ ಆವರಿಸಿಕೊಂಡ ಗೀತೆ ಅದು. ಗಾಯನಕ್ಕಿಂತ ರಾಗ ಸಂಯೋಜನೆ ಚೆಂದ. ಸಂಗೀತಕ್ಕಿಂತ ಗಾಯನವೇ ಚೆಂದ ಎಂದು ನನಗಂತೂ ಪದೇ ಪದೆ ಅನ್ನಿಸ್ತಾ ಇತ್ತು’ ಅಂದರು. ಏಕಕಾಲದಲ್ಲಿ ಒಬ್ಬ ಗಾಯಕ, ಒಬ್ಬ ಸಂಗೀತ ಸಂಯೋಜಕ ಹಾಗೂ ವಾದ್ಯ ಸಂಯೋಜಕರು ಒಂದು ಹಾಡಿನಿಂದ ಪ್ರಭಾವಿತರಾದರಲ್ಲ&#8230; ಅಂಥದೊಂದು ಗೀತೆಗೆ ನಾನು ಸಂಗೀತ ಸಂಯೋಜನೆ ಮಾಡಿದೆನಲ್ಲ? ಅದು ನನ್ನ ಬದುಕಿನ ಮಹತ್ವದ ಕ್ಷಣ ಎಂದೇ ಭಾವಿಸ್ತೇನೆ&#8230;’<br />
ಹೀಗೆಂದು ಮಾತು ಮುಗಿಸಿದ್ದರು ಅಶ್ವತ್ಥ್ .<br />
***<br />
ಸಮಯ ಸಿಕ್ಕರೆ ಈ ಅಪರೂಪದ ಹಾಡು ಕೇಳಿ. ಎಂಥ ಅರಸಿಕನಿಗೂ ಹಾಡು ಇಷ್ಟವಾಗುತ್ತದೆ. ಆನಂತರ ಅದನ್ನು ಮರೆಯುವುದೇ ಕಷ್ಟವಾಗುತ್ತದೆ!</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/770/"><img alt="" border="0" src="http://feeds.wordpress.com/1.0/comments/manigulabi.wordpress.com/770/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/770/"><img alt="" border="0" src="http://feeds.wordpress.com/1.0/delicious/manigulabi.wordpress.com/770/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/770/"><img alt="" border="0" src="http://feeds.wordpress.com/1.0/facebook/manigulabi.wordpress.com/770/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/770/"><img alt="" border="0" src="http://feeds.wordpress.com/1.0/twitter/manigulabi.wordpress.com/770/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/770/"><img alt="" border="0" src="http://feeds.wordpress.com/1.0/stumble/manigulabi.wordpress.com/770/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/770/"><img alt="" border="0" src="http://feeds.wordpress.com/1.0/digg/manigulabi.wordpress.com/770/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/770/"><img alt="" border="0" src="http://feeds.wordpress.com/1.0/reddit/manigulabi.wordpress.com/770/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=770&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3-2/feed/</wfw:commentRss>
		<slash:comments>1</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/02/aswath.jpg?w=206" medium="image">
			<media:title type="html">Aswath</media:title>
		</media:content>
	</item>
		<item>
		<title>ಅಪರಾತ್ರಿಯಲ್ಲೂ ಈ ಹಾಡು ಕೇಳುತ್ತ ಕೂತಿದ್ದರಂತೆ ಎಸ್ಪಿಬಿ</title>
		<link>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3/</link>
		<comments>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3/#comments</comments>
		<pubDate>Thu, 17 Feb 2011 11:36:54 +0000</pubDate>
		<dc:creator>ಮಣಿಕಾಂತ್</dc:creator>
		
		<guid isPermaLink="false">http://manigulabi.wordpress.com/?p=764</guid>
		<description><![CDATA[ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ&#8230; ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ. ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ. ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ ಸೋತು ಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ &#124;&#124;ಪ&#124;&#124; ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ಮನಸೆಲ್ಲ ಹೊಯ್ದಾಡಿದೆ &#124;&#124;೧&#124;&#124; ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=764&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p>ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ&#8230;</p>
<p>ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ.<br />
 ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.</p>
<p>ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ<br />
ಸೋತು ಹೋಯಿತೆ ಜೀವ<br />
ಮೂಕವಾಯಿತೆ ಭಾವ<br />
ತೂಕ ತಪ್ಪಿತೆ ಬದುಕಿಗೆ	||ಪ||</p>
<p>ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ<br />
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ<br />
ಮನಸೆಲ್ಲ ಹೊಯ್ದಾಡಿದೆ  ||೧||</p>
<p>ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ<br />
ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ<br />
ನೋವೊಂದೆ ಫಲವಾಯಿತೆ  ||೨||</p>
<p>ಸುಗಮ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲ; ಚಿತ್ರರಂಗದಲ್ಲೂ ಅಪರೂಪದ, ಅನುಪಮ ಗೀತೆಗಳಿಗೆ ರಾಗ ಸಂಯೋಜಿಸಿ ದವರು ಸಿ. ಅಶ್ವತ್ಥ್. ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಕಾಕನ ಕೋಟೆ, ಆಲೆಮನೆ, ಬಾಡದ ಹೂ, ಸ್ಪಂದನ, ಅನುಪಮ, ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿಮುತ್ತ, ಕೊಟ್ರೇಶಿ ಕನಸು&#8230; ಹೀಗೆ, ಅಶ್ವತ್ಥ್ ಸಂಗೀತ ಸಂಯೋಜನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿನಗರದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ- ಒಂದು ಸಿನಿಮಾದ ಹಾಡುಗಳು ಸೂಪರ್‌ಹಿಟ್ ಆದರೆ ಸಾಕು; ನಂತರದ ಒಂದಿಡೀ ವರ್ಷ ಆ ಚಿತ್ರದ ಸಂಗೀತ ನಿರ್ದೇಶಕ ಬ್ಯುಸಿಯಾಗಿರುತ್ತಾನೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.<br />
ಆದರೆ, ಸಿ. ಅಶ್ವತ್ಥ್ ಅವರ ವಿಷಯದಲ್ಲಿ ಈ ಮಾತು ಸುಳ್ಳಾಗಿತ್ತು. ಏಕೆಂದರೆ, ಒಂದು ಸಿನಿಮಾಕ್ಕೆ ಸಂಗೀತ ನೀಡಿದ ನಂತರ, ಚಿತ್ರರಂಗಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ, ಅಲ್ಲಿಂದ ಎದ್ದು ಸುಗಮ ಸಂಗೀತ ಕ್ಷೇತ್ರಕ್ಕೆ ಬಂದುಬಿಡುತ್ತಿದ್ದರು ಅಶ್ವತ್ಥ್. ಮುಂದೆ ಒಂದೋ ಎರಡೋ ವರ್ಷಗಳು ಭಾವಗೀತೆಗಳ ರಾಗ ಸಂಯೋಜನೆಯಲ್ಲಿಯೋ, ಗಾಯನದಲ್ಲಿಯೊ ಅಥವಾ ಇನ್ಯಾವುದೋ ಹೊಸ ಸಾಹಸದಲ್ಲಿಯೋ ಕಳೆದುಹೋಗುತ್ತಿದ್ದವು. ಹೀಗೆ, ಚಿತ್ರರಂಗದಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಮರೆತಿದ್ದಾರೆ ಎನ್ನುವಾಗ ದಢದಢನೆ ನಡೆದು ಬಂದು ಇನ್ನೊಂದು ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗೆಲುವಿನ ನಗು ಬೀರುತ್ತಿದ್ದರು ಅಶ್ವತ್ಥ್.<br />
೧೯೭೯ರಲ್ಲಿ ತೆರೆಗೆ ಬಂದ ಸಿನಿಮಾ-ಏನೇ ಬರಲಿ ಪ್ರೀತಿ ಇರಲಿ. ಈ ಚಿತ್ರದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ&#8230;’ ಗೀತೆಯ ಬಗ್ಗೆ ಬರೆಯಲು ಹೊರಟಾಗ, ಅಶ್ವತ್ಥ್ ಅವರ ಗೀತಯಾತ್ರೆಯ ಬಗ್ಗೆಯೂ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಬೇಕಾಯಿತು. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ಏನೆಂದರೆ, ಸಿ. ಅಶ್ವತ್ಥ್ ಹಾಗೂ ಎಲ್. ವೈದ್ಯನಾಥನ್ ಅವರು ಒಂದಾಗಿ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದು ‘ ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಿಂದ. ಅದಕ್ಕೂ ಮುಂಚೆ ಅಶ್ವತ್ಥ್, ಹಾಡುಗಳಿಗೆ ಟ್ಯೂನ್ ಸಿದ್ಧಮಾಡಿಕೊಂಡು ಮದ್ರಾಸಿಗೆ ಹೋಗುತ್ತಿದ್ದರು. ಅಲ್ಲಿ ರೆಕಾರ್ಡಿಂಗ್ ಸಂದರ್ಭದಲ್ಲಿ ಅರ್ಕೆಸ್ಟ್ರಾ ತಂಡವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ವೈದ್ಯ ನಾಥನ್ ಮುಗಿಸಿಕೊಡುತ್ತಿದ್ದರು. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಂಗೀತ: ಸಿ. ಅಶ್ವತ್ಥ್, ನೆರವು/ಸಹಾಯ: ಎಲ್. ವೈದ್ಯನಾಥನ್ ಎಂದು ಹಾಕಲಾಗುತ್ತಿತ್ತು.<br />
ತಾವಿಬ್ಬರೂ ಜತೆಯಾಗಿ ಸಂಗೀತ ನಿರ್ದೇಶನ ಮಾಡಲು ಕಾರಣ ವಾದ ಸಂದರ್ಭ ಮತ್ತು ‘ಪ್ರೀತಿಯ ಕನಸೆಲ್ಲಾ-‘ಹಾಡು ಸೃಷ್ಟಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಸ್ನೇಹಿತರಾದ ಸುಪ್ರಭಾ ಅವರಿಗೆ ಹಿಂದೊಮ್ಮೆ ಅಶ್ವತ್ಥ್ ಅವರೇ ಹೀಗೆ ವಿವರಿಸಿದ್ದರು:<br />
‘ಸ್ಪಂದನ’  ಚಿತ್ರ ನಿರ್ಮಿಸಿದ್ದ ಪಿ. ಶ್ರೀನಿವಾಸ್, ಆನಂತರದಲ್ಲಿ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರ ತಯಾರಿಸಲು ಮುಂದಾದರು. ಆ ಚಿತ್ರಕ್ಕೆ ಅವರದೇ ಕಥೆ. ನಾಯಕನೂ ಅವರೇ. ನಾಯಕಿಯ ಪಾತ್ರಕ್ಕೆ ಮಂಜುಳಾ ಅವರನ್ನು ಆಯ್ಕೆ ಮಾಡಿದ್ದರು. ಸಂಗೀತ ನಿರ್ದೇಶನದ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ಈ ಸಿನಿಮಾದ ಮಾತುಕತೆಯ ಸಂದರ್ಭದಲ್ಲಿ ಪಿ. ಶ್ರೀನಿವಾಸ್ ಹಾಗೂ ನನಗೆ ಆತ್ಮೀಯರಾಗಿದ್ದ ಕೃಷ್ಣರಾವ್ ಅವರೂ ಇದ್ದರು. ಚಿತ್ರದಲ್ಲಿ ಸಂಗೀತ ಬಳಕೆ ಹೇಗಿರಬೇಕು ಎಂದು ಚರ್ಚಿಸುತ್ತಿದ್ದಾಗ ಅವರು ಹೇಳಿದರು: ‘ರೀ ಅಶ್ವತ್ಥ್, ನಿಮ್ಮದೂ- ವೈದೀದೂ ಒಳ್ಳೇ ಸಾಮರಸ್ಯದ ಜೋಡಿ ಕಣ್ರೀ. ಈವರೆಗಿನ ನಿಮ್ಮ ಚಿತ್ರ ಸಂಗೀತದ ಯಾತ್ರೆಯಲ್ಲಿ ಜತೆಗಾರನಾಗಿ ವೈದಿ ಯಾವಾಗಲೂ ಇದ್ದಾರೆ. ನೀವ್ಯಾಕೆ  ಈಗ ಅಧಿಕೃತವಾಗಿ ಅಶ್ವತ್ಥ್-ವೈದಿ ಅಂತ ಜೋಡಿಯಾಗಿ ಸಂಗೀತ ನಿರ್ದೇಶನಕರಾಗಬಾರದು?’<br />
ಕೃಷ್ಣರಾವ್ ಅವರ ಈ ಮಾತು ನನಗೆ ಒಪ್ಪಿಗೆಯಾಯಿತು. ವೈದಿ ಅವರಿಗೂ ಒಪ್ಪಿಗೆಯಾಯಿತು. ಪರಿಣಾಮವಾಗಿ-‘ ಏನೇ ಬರಲಿ ಪ್ರೀತಿ ಇರಲಿ’ ಸಿನಿಮಾದ ಮೂಲಕ ನಾವು ಜತೆಯಾಗಿ ಕೆಲಸ ಮಾಡಲು ಆರಂಭಿಸಿದೆವು.<br />
ಹೊಸದಾಗಿ ಮದುವೆಯಾದ ದಂಪತಿಗಳ ಸುತ್ತ ಹೆಣೆಯಲಾದ ಕಥೆ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಲ್ಲಿತ್ತು. ಮಧ್ಯಮ ವರ್ಗದವರ ಪೇಚಾಟಗಳು, ಆರ್ಥಿಕ ತೊಂದರೆ, ಅವರ ಪ್ರೀತಿ, ಸಂಕಟ&#8230; ಇತ್ಯಾದಿ ಇತ್ಯಾದಿ ಈ ಸಿನಿಮಾದ ಕಥಾವಸ್ತು. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದೇ ಹೋದಾಗ ನಾಯಕ ಅಸಹಾಯಕನಾಗಿ ಕೂತುಬಿಡುವ ಒಂದು ಸಂದರ್ಭವಿತ್ತು. ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ ಎಂದು ನನಗೆ ಅನ್ನಿಸಿತು. ಅದನ್ನೇ ಶ್ರೀನಿವಾಸ್‌ಗೆ ಹೇಳಿದೆ. ನನ್ನ ಮಾತು ಅವರಿಗೂ ಇಷ್ಟವಾಯ್ತು. ಹಾಡನ್ನು ಯಾರಿಂದ ಬರೆಸುವುದು ಎಂದುಕೊಂಡಾಗ ನೆನಪಾದದ್ದು ಕವಿ ಲಕ್ಷ್ಮೀ ನಾರಾಯಣ ಭಟ್ಟರು. ಈ ಹಿಂದೆ  ‘ಸ್ಪಂದನ’ ಚಿತ್ರಕ್ಕೂ ಭಟ್ಟರು-‘ ಎಂಥಾ ಮರುಳಯ್ಯ ಇದು ಎಂಥಾ ಮರುಳೂ&#8230;’ ಎಂಬ ಗೀತೆ ಬರೆದುಕೊಟ್ಟಿದ್ದರು. ಅದೇ ಸೆಂಟಿಮೆಂಟ್ ಜತೆಗಿಟ್ಟುಕೊಂಡು ಭಟ್ಟರಲ್ಲಿ ಹೊಸ ಗೀತೆಗೆ ಮನವಿ ಮಾಡಿಕೊಂಡೆವು. ಭಟ್ಟರು ತುಂಬ ಸಂಭ್ರಮದಿಂದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ’&#8230; ಗೀತೆ ಬರೆದುಕೊಟ್ಟರು.<br />
ಈ ಹಾಡಿಗೆ ರಾಗ ಸಂಯೋಜಿಸಿದ ಸಂದರ್ಭ ಇದೆಯಲ್ಲ? ಅದು ಬಹಳ ವಿಶೇಷವಾದದ್ದು. ಹಾಡಿನ ಸಂಯೋಜನೆಗೆ ಕೂತಾಗ ವೈದಿ ಹಾರ್ಮೋನಿಯಂ ತಂದ್ರು. ಮದ್ರಾಸಿನ ಹೋಟೆಲ್ ರೂಂನಲ್ಲಿ ಕುಳಿತೆವು. ಆಗೆಲ್ಲ ನಾನು-ವೈದಿ ಸಂವಾದ ನಡೆಸುತ್ತಿದ್ದುದು ಹೆಚ್ಚಾಗಿ ಇಂಗ್ಲಿಷಿನಲ್ಲೇ. qsಟ್ಠ oಠಿZಠಿ ಠಿeಛಿ oಟ್ಞಜ ಅoeಡಿZಠಿe ಅಂದ್ರು ವೈದಿ. ಎರಡು ನಿಮಿಷದ ನಂತರ, ನಾನು ಈ ಗೀತೆಯನ್ನು ಹಾಡಿದಾಗ, ವೈದಿ ಭಾವಪರವಶರಾಗಿ ಅತ್ತೇ ಬಿಟ್ರು. ಆಗಲೇ ನನಗೆ ಅನ್ನಿಸಿಬಿಡ್ತು: ‘ಈ ಹಾಡಲ್ಲಿ, ಈ ಸಂಗೀತದಲ್ಲಿ ಏನೋ ಆಕರ್ಷಣೆ ಇದೆ&#8230;’<br />
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕು. ಈ ಗೀತೆಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸುವುದೆಂದು ನಿರ್ಧರಿಸಲಾಗಿತ್ತು. ಜೆಮಿನಿ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್. ಆರ್ಕೆಸ್ಟ್ರಾ ತಂಡದವರೆಲ್ಲ ಸಿದ್ಧವಾಗಿದ್ದರು. ಎಸ್ಪಿ ಕೂಡಾ ಹಾಡಲು ಸಿದ್ಧರಾಗಿ ಬಂದರು. ಆಗ ವೈದಿ  ಹೇಳಿದರು:  ಅಶ್ವತ್ಥ್, ನಾನು ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡುತ್ತೇನೆ. ನೀವು ಆ ಕಡೆಯಲ್ಲಿ ನಿಂತು ೧,೨,೩-೧,೨,೩ ಹೇಳಿ ಎಂದರು. (ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಸ್ವರ ತಾಳದ ಏರಿಳಿತವನ್ನು ಗಾಯಕರು ಹಾಗೂ ವಾದ್ಯಗಾರರಿಗೆ ತಿಳಿಸಲೆಂದು ೧,೨,೩ ಹೇಳಲಾಗುತ್ತದೆ.) ಆ ರೀತಿ ಮಾಡಲು ನನಗೆ ಸಂಕೋಚ, ಭಯ ಇತ್ತು. ಹಾಗಾಗಿ- ‘ಇಲ್ರೀ, ನನ್ನಿಂದ ಈ ಕೆಲಸ ಆಗಲ್ಲ’  ಅಂದುಬಿಟ್ಟೆ. ಅದೇನೂ ಅಂಥ ಕಷ್ಟವಲ್ಲ ಅಶ್ವತ್ಥ್. ನೀವು ಸುಮ್ನೆ ೧,೨,೩ ಹೇಳ್ತಾ ಹೋಗಿ ಎಂದು ವೈದಿ ಇನ್ನಿಲ್ಲದಂತೆ ಹೇಳಿದರು. ನನಗೆ ಅದ್ಯಾಕೋ ಆ ಕೆಲಸ ಮಾಡಲು ಧೈರ್ಯ ಬರಲಿಲ್ಲ. ಸುಮ್ಮನಾಗಿಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಅವರು- ನಾನೇ ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡ್ತೇನೆ ಬಿಡಿ’ ಎಂದರು. ಹಾಗೆಯೇ ಮಾಡಿದರು!<br />
ಮೂರನೇ ಟೇಕ್‌ನಲ್ಲಿ ಹಾಡು ಓಕೆ ಆಯಿತು. ನಂತರ ಪಿ.ಎನ್. ಶ್ರೀನಿವಾಸ್ ಹಾಗೂ ಕೃಷ್ಣರಾವ್ ಈ ಹಾಡು ಕೇಳಿ ಮೆಚ್ಚಿಕೊಂಡರು. ನಮ್ಮ ಕೃಷ್ಣರಾವ್ ಅವರ ಸ್ನೇಹಿತನೊಬ್ಬ ಇದ್ದ. ಕುಮಾರ್ ಎಂದು ಅವನ ಹೆಸರು. ಅವನು ಕೊಳಲು ವಾದಕ. ಅವನಿಗೆ ಅದೇನೋ ಮನೆ ಕಡೆಯ ತೊಂದರೆ. ಈ ಕಾರಣಕ್ಕೇ ಕುಡಿಯಲು ಕಲಿತಿದ್ದ. ಅವನು, ಈ ಹಾಡು ಕೇಳಿದವನೇ-ಈ ಹಾಡೊಳಗೆ ನನ್ನ ಸಂಕಟವೆಲ್ಲಾ ಇದೆ ಅಂದ. ಈ ಹಾಡನ್ನು ಪದೇ ಪದೆ ಕೇಳೋದು, ಮತ್ತೆ ಕುಡಿದು ಬಿಕ್ಕಳಿಸೋದು&#8230; ಹೀಗೇ ಮಾಡ್ತಾ ಇದ್ದ. ಮಧ್ಯರಾತ್ರಿ ೧.೩೦ ಆದರೂ ಆ ಮಹರಾಯನ ಅಳು ನಿಲ್ಲಲೇ ಇಲ್ಲ.<br />
ಇದೆಲ್ಲ ನನ್ನ ಕಣ್ಣೆದುರೇ ನಡೀತಿತ್ತು ನೋಡಿ, ಹಾಗಾಗಿ ಸಹಜ ವಾಗಿಯೇ ಖುಷಿಯಾಗ್ತಾ ಇತ್ತು. ಒಂದು ಹಾಡಿಗೆ ಹೀಗೆ ಹತ್ತಾರು ಮಂದಿಯನ್ನು ಕಾಡುವ ಶಕ್ತಿ ಬರಬೇಕಾದರೆ ಅದಕ್ಕೆ ಎಸ್ಪಿ ಬಾಲಸುಬ್ರಹ್ಮಣಂ ಅವರ ದನಿಯಲ್ಲಿನ ಮಾಧುರ್ಯವೇ  ಕಾರಣ ಅನ್ನಿಸ್ತು. ಅವರಿಗೆ ಅಭಿನಂದನೆ ಹೇಳೋಣ ಅನ್ನಿಸ್ತು. ಅದು ಅಪರಾತ್ರಿ. ಸವಿನಿದ್ರೆಯ ಸಮಯ. ಪೋನ್ ಮಾಡಲು ಇದು ಸಮಯವಲ್ಲ ಎಂದು ಗೊತ್ತಿದ್ದೂ ಡಯಲ್ ಮಾಡಿಬಿಟ್ಟೆ. ಅವರು ಹಲೋ ಎಂದ ತಕ್ಷಣ- ಬಾಲು ಅವರೇ, ನಮಸ್ಕಾರ. ನಿಮ್ಮ ದನಿಯಿಂದ ನನ್ನ ಈ ಹಾಡಿಗೆ ಜೀವ ಬಂದಿದೆ. ನಾವೆಲ್ಲರೂ ಇಷ್ಟು ಹೊತ್ತು ಆ ಹಾಡನ್ನೇ ಕೇಳ್ತಾ ಇದ್ವಿ. ಧನ್ಯವಾದಗಳು’ ಅಂದೆ.<br />
ಆಗ ಬಾಲು ಏನೆಂದರು ಗೊತ್ತೇ? ಈಟ qsಟ್ಠ hಟಡಿ ಡಿeZಠಿ ಐZಞ ಈಟಜ್ಞಿಜ ಘೆಟಡಿ ಅoeಡಿZಠಿeಜಿ, ಐZಞ ಔಜಿoಠಿಛ್ಞಿಜ್ಞಿಜ ಠಿಟ qsಟ್ಠ್ಟ oಟ್ಞಜ. ಐಠಿ ಜಿo ಠಿeಛಿ ಟಞmಟoಜಿಠಿಜಿಟ್ಞ ಡಿeಜ್ಚಿe eZo bಟ್ಞಛಿ ಠಿeಛಿ ಞZಜಜ್ಚಿ (ನಾನು ಏನ್ಮಾಡ್ತಾ ಇದ್ದೆ ಗೊತ್ತಾ ಅಶ್ವತ್ಥ್? ಆ ಹಾಡನ್ನೇ ಕೇಳ್ತಾ ಇದ್ದೆ. ನಿಮ್ಮ ಅಪೂರ್ವ ಸಂಯೋಜನೆಯಿಂದ ಈ ಹಾಡಿಗೊಂದು ಕಳೆ ಬಂದಿದೆ) ಅಂದರು. ಎಸ್ಪಿ ಅವರಂಥ ಮಹಾನ್ ಗಾಯಕನಿಂದ ಈ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಭಾವುಕನಾಗಿ-‘ಬಾಲು ಅವರೇ, ನಿಮ್ಮ ಮಾತು ದೊಡ್ಡದು, ಮನಸೂ ದೊಡ್ಡದು’ ಎಂದು ಹೇಳಿ ಪೋನ್ ಇಟ್ಟೆ.<br />
ಮರುದಿನ ಬೆಳಗ್ಗೆ ಅದೇ ಜೆಮಿನಿ ಸ್ಟುಡಿಯೋದಲ್ಲಿ ನನ್ನ ಸಂಗೀತ ನಿರ್ದೇಶನದಲ್ಲಿ ಇನ್ನೊಂದು ಚಿತ್ರದ ರೆಕಾರ್ಡಿಂಗ್ ಇತ್ತು. ಅಲ್ಲಿಗೆ ವೈದಿ ಕೂಡ ಬಂದಿದ್ದರು. ನನ್ನನ್ನು ಕಂಡವರೇ ಕೈ ಕುಲುಕಿ- ‘ಅಶ್ವತ್ಥ್, ಎಂಥ ಅದ್ಭುತ ಸಂಯೋಜನೆಯಯ್ಯಾ ನಿನ್ನದು? ನಾನು, ನಿನ್ನೆ ರಾತ್ರಿ ಕನಿಷ್ಠ ಪಕ್ಷ ಹತ್ತು ಬಾರಿಯಾದರೂ ಆ ಹಾಡು ಕೇಳಿದ್ದೇನೆ. ಮನಸ್ಸು ಹಾಗೂ ಹೃದಯವನ್ನು ಏಕಕಾಲಕ್ಕೆ ಆವರಿಸಿಕೊಂಡ ಗೀತೆ ಅದು. ಗಾಯನಕ್ಕಿಂತ ರಾಗ ಸಂಯೋಜನೆ ಚೆಂದ. ಸಂಗೀತಕ್ಕಿಂತ ಗಾಯನವೇ ಚೆಂದ ಎಂದು ನನಗಂತೂ ಪದೇ ಪದೆ ಅನ್ನಿಸ್ತಾ ಇತ್ತು’ ಅಂದರು. ಏಕಕಾಲದಲ್ಲಿ ಒಬ್ಬ ಗಾಯಕ, ಒಬ್ಬ ಸಂಗೀತ ಸಂಯೋಜಕ ಹಾಗೂ ವಾದ್ಯ ಸಂಯೋಜಕರು ಒಂದು ಹಾಡಿನಿಂದ ಪ್ರಭಾವಿತರಾದರಲ್ಲ&#8230; ಅಂಥದೊಂದು ಗೀತೆಗೆ ನಾನು ಸಂಗೀತ ಸಂಯೋಜನೆ ಮಾಡಿದೆನಲ್ಲ? ಅದು ನನ್ನ ಬದುಕಿನ ಮಹತ್ವದ ಕ್ಷಣ ಎಂದೇ ಭಾವಿಸ್ತೇನೆ&#8230;’<br />
ಹೀಗೆಂದು ಮಾತು ಮುಗಿಸಿದ್ದರು ಅಶ್ವತ್ಥ್ .<br />
***<br />
ಸಮಯ ಸಿಕ್ಕರೆ ಈ ಅಪರೂಪದ ಹಾಡು ಕೇಳಿ. ಎಂಥ ಅರಸಿಕನಿಗೂ ಹಾಡು ಇಷ್ಟವಾಗುತ್ತದೆ. ಆನಂತರ ಅದನ್ನು ಮರೆಯುವುದೇ ಕಷ್ಟವಾಗುತ್ತದೆ!</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/764/"><img alt="" border="0" src="http://feeds.wordpress.com/1.0/comments/manigulabi.wordpress.com/764/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/764/"><img alt="" border="0" src="http://feeds.wordpress.com/1.0/delicious/manigulabi.wordpress.com/764/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/764/"><img alt="" border="0" src="http://feeds.wordpress.com/1.0/facebook/manigulabi.wordpress.com/764/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/764/"><img alt="" border="0" src="http://feeds.wordpress.com/1.0/twitter/manigulabi.wordpress.com/764/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/764/"><img alt="" border="0" src="http://feeds.wordpress.com/1.0/stumble/manigulabi.wordpress.com/764/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/764/"><img alt="" border="0" src="http://feeds.wordpress.com/1.0/digg/manigulabi.wordpress.com/764/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/764/"><img alt="" border="0" src="http://feeds.wordpress.com/1.0/reddit/manigulabi.wordpress.com/764/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=764&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/02/17/%e0%b2%85%e0%b2%aa%e0%b2%b0%e0%b2%be%e0%b2%a4%e0%b3%8d%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b3%82-%e0%b2%88-%e0%b2%b9%e0%b2%be%e0%b2%a1%e0%b3%81-%e0%b2%95%e0%b3%87%e0%b2%b3/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>
	</item>
		<item>
		<title>ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು!</title>
		<link>http://manigulabi.wordpress.com/2011/02/11/%e0%b2%b8%e0%b2%b9%e0%b2%aa%e0%b3%8d%e0%b2%b0%e0%b2%af%e0%b2%be%e0%b2%a3%e0%b2%bf%e0%b2%95%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%a6-%e0%b2%ae%e0%b2%be%e0%b2%a4%e0%b3%87/</link>
		<comments>http://manigulabi.wordpress.com/2011/02/11/%e0%b2%b8%e0%b2%b9%e0%b2%aa%e0%b3%8d%e0%b2%b0%e0%b2%af%e0%b2%be%e0%b2%a3%e0%b2%bf%e0%b2%95%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%a6-%e0%b2%ae%e0%b2%be%e0%b2%a4%e0%b3%87/#comments</comments>
		<pubDate>Fri, 11 Feb 2011 14:30:15 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=756</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್. ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು ಲತಾ, ಬಿ.ಆರ್. ಛಾಯಾ, ಕೋರಸ್ ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಹಾಡು ನೀನು ಕನ್ನಡಿಗಾ ದೇಶಗೀತೆಯಾ &#124;&#124;ಪ&#124;&#124; ವೀರರಾದ ನಾಡವರ ಸಾಹಸದಾ ನಾಡಿದು ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು ಚಿತ್ರದುರ್ಗ ವೀರರ ಪೌರುಷದಾ ನಾಡಿದು ಕೆಳದಿಯಾ ನಾಯಕರು ಆಳಿದಂಥ ನಾಡಿದು [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=756&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/02/shivashankar.jpg"><img class="alignleft size-medium wp-image-765" title="shivashankar" src="http://manigulabi.files.wordpress.com/2011/02/shivashankar.jpg?w=236&#038;h=300" alt="" width="236" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ನಾಡ ಚರಿತೆ ನೆನಪಿಸುವಾ ವೀರಗೀತೆಯಾ<br />
ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್.<br />
ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು<br />
ಲತಾ, ಬಿ.ಆರ್. ಛಾಯಾ, ಕೋರಸ್</p>
<p>ನಾಡ ಚರಿತೆ ನೆನಪಿಸುವಾ ವೀರಗೀತೆಯಾ<br />
ಹಾಡು ನೀನು ಕನ್ನಡಿಗಾ ದೇಶಗೀತೆಯಾ  ||ಪ||</p>
<p>ವೀರರಾದ ನಾಡವರ ಸಾಹಸದಾ ನಾಡಿದು<br />
ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು<br />
ಚಿತ್ರದುರ್ಗ ವೀರರ ಪೌರುಷದಾ ನಾಡಿದು<br />
ಕೆಳದಿಯಾ ನಾಯಕರು ಆಳಿದಂಥ ನಾಡಿದು  ||೧||</p>
<p>ಬೃಂದಾವನ ಚೆಲುವಲಿ ನಲಿವಂಥ ನಾಡಿದು<br />
ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು<br />
ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು<br />
ಸ್ವಾಭಿಮಾನಿ ಪ್ರಜೆಗಳಾ ಸಂತಸದಾ ನಾಡಿದು  ||೨||</p>
<p>ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ<br />
ಸಂಗೊಳ್ಳಿ ರಾಯಣ್ಣನ ತ್ಯಾಗಭೂಮಿ ನಮ್ಮದು<br />
ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು<br />
ಎಂದೆಂದೂ ಅಳಿಯದಾ ಇತಿಹಾಸ ನಮ್ಮದು  ||೩||</p>
<p>ಕನ್ನಡ ನಾಡು-ನುಡಿಯ ಮಹತ್ವ ಸಾರುವ ಗೀತೆಗಳ ರಚನೆಯಲ್ಲಿ ಸಿ.ವಿ. ಶಿವಶಂಕರ್ ಅವರಿಗೆ ಅಗ್ರಸ್ಥಾನ. ಬದುಕಿನುದ್ದಕ್ಕೂ ಕನ್ನಡದ ವೈಭವವನ್ನೇ ಧ್ಯಾನಿಸುತ್ತ, ಪ್ರೀತಿಸುತ್ತ, ಆರಾಸುತ್ತ ಬಂದವರು ಶಿವಶಂಕರ್. ‘ತಾಯಿಯ ಹೊಣೆ’ ಚಿತ್ರದಲ್ಲಿ  ಶಾಲಾ ಮಕ್ಕಳು ಹಾಡುವ ಸಂದರ್ಭಕ್ಕೆಂದು ಅವರು ಬರೆದ ಸುಂದರ ಗೀತೆ:    ‘ನಾಡಚರಿತೆ ನೆನಪಿಸುವಾ ವೀರಗೀತೆಯಾ/ ಹಾಡು ನೀನು ಕನ್ನಡಿಗಾ ದೇಶಗೀತೆಯಾ&#8230;’ ಸೃಷ್ಟಿಯಾದ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳು ಒಂದೆರಡಲ್ಲ. ಅವುಗಳನ್ನು ಶಿವಶಂಕರ್ ಅವರೇ ರಸವತ್ತಾಗಿ ವಿವರಿಸಿದ್ದು ಹೀಗೆ:<br />
‘ಇದು ೧೯೮೫ರ ಮಾತು. ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರು ‘ತಾಯಿಯ ಹೊಣೆ’ ಚಿತ್ರದ ನಿರ್ಮಾಣ ಆರಂಭಿಸಿದ್ದರು. ತಮ್ಮ ನಿರ್ಮಾಣದ ಸಿನಿಮಾದಲ್ಲಿ ನಾಡು-ನುಡಿಯ ಮಹತ್ವ ಸಾರುವ ಸನ್ನಿವೇಶವಿದ್ದರೆ, ಅದಕ್ಕೆ ನನ್ನಿಂದಲೇ ಹಾಡು ಬರೆಸಬೇಕೆಂಬ ಹಟ ಅವರದಾಗಿತ್ತು. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಅಬ್ಬಯ್ಯ ನಾಯ್ಡು ನಿರ್ಮಾಣದ ಮೊದಲ ಚಿತ್ರ ‘ಹೂವು-ಮುಳ್ಳು’. ಆ  ಚಿತ್ರದ ಹಂಚಿಕೆ ಪಡೆಯಲು ಯಾರೂ ಮುಂದೆ ಬಂದಿರಲಿಲ್ಲ. ಆಗ, ನನ್ನ ಪರಿಚಯದ ಹಂಚಿಕೆದಾರರನ್ನು ಪುಸಲಾಯಿಸಿ ಅಬ್ಬಯ್ಯನಾಯ್ಡು ಅವರ ಸಿನಿಮಾದ ಹಂಚಿಕೆ ಪಡೆಯುವಂತೆ ಮನವೊಲಿಸಿದ್ದೆ. ಹೂವು-ಮುಳ್ಳು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸೆಂಟಿಮೆಂಟನ್ನೇ ಜತೆಗಿಟ್ಟುಕೊಂಡಿದ್ದ ಅಬ್ಯಯ್ಯ ನಾಯ್ಡು, ನನ್ನ ಸಿನಿಮಾಕ್ಕೆ ಹಾಡು ಬರೆಯಿರಿ ಎಂದು ಸಿಕ್ಕಾಗಲೆಲ್ಲ ಒತ್ತಾಯಿಸುತ್ತಿದ್ದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ‘ಕನ್ನಡದಾ ರವಿ ಮೂಡಿ ಬಂದಾ&#8230;’ ಗೀತೆ ಬರೆದಿದ್ದೆ.<br />
ಅದನ್ನೇ ನೆಪ ಮಾಡಿಕೊಂಡ ಅಬ್ಬಯ್ಯ ನಾಯ್ಡು, ತಾಯಿಯ ಹೊಣೆ ಚಿತ್ರಕ್ಕೂ ಒಂದು ಹಾಡು ಬರೆಯಿರಿ. ಉಳಿದ ಹಾಡುಗಳನ್ನು ಉದಯಶಂಕರ್ ಬರೀತಾರೆ ಅಂದ್ರು. ಸ್ವಾರಸ್ಯವೇನೆಂದರೆ, ಚಿ. ಉದಯ ಶಂಕರ್ ಮತ್ತು ನಾನು, ಒಂದೇ ಊರಿನವರು. (ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಚಿಟ್ಟನಹಳ್ಳಿ ನಮ್ಮ ಊರು), ಈ ಮೊದಲು ‘ತಾಯಿಯ ಮಡಿಲಲ್ಲಿ’ ಚಿತ್ರಕ್ಕೆ ನಾನು ಒಂದು ಹಾಡು ಬರೆದಾಗಲೂ, ಬಾಕಿ ಹಾಡುಗಳನ್ನು ಉದಯಶಂಕರ್ ಬರೆದಿದ್ದರು. ಉದಯಶಂಕರ್, ಅಪಾರ ಪ್ರತಿಭೆಯ ಗೀತೆರಚನೆಕಾರ. ಅವರ ಹಾಡು ಗಳು ‘ಅದ್ಭುತ’ ಎಂಬಂತಿರುತ್ತವೆ. ಅವುಗಳನ್ನು ಸರಿಗಟ್ಟುವಂಥ ಒಂದು ಹಾಡು ಬರೆಯಬೇಕು. ಹೇಗೆ ಶುರುಮಾಡುವುದು ಎಂದೆಲ್ಲಾ ಯೋಚಿ ಸುತ್ತಿದ್ದೆ. ಅದೇ ವೇಳೆಗೆ ಅಬ್ಬಯ್ಯ ನಾಯ್ಡು ಅವರು ಹಾಡು ಬರೆಯಲು ಮದ್ರಾಸಿಗೆ ಬರುವಂತೆ ರಿಸರ್ವೇಶನ್ ಟಿಕೆಟ್ ಕಳಿಸಿದರು.<br />
ಶಾಲಾ ಮಕ್ಕಳು ಹಾಡಿ ಕುಣಿಯುವ ಸಂದರ್ಭಕ್ಕೆ ನೀವು ಹಾಡು ಬರೆಯಬೇಕು ಎಂದು ಅಬ್ಬಯ್ಯ ನಾಯ್ಡು ಮೊದಲೇ ತಿಳಿಸಿದ್ದರು. ಶಾಲಾ ಮಕ್ಕಳ ಗೀತೆ ಅಂದ ಮೇಲೆ, ಅದು ನಾಡಿನ ವೈಭವ ಸಾರು ವಂತೆಯೇ ಇರಲಿ ಎಂದು ನಿರ್ಧರಿಸಿದೆ. ಪಲ್ಲವಿ ಹೇಗಿರಬೇಕು? ಚರಣದಲ್ಲಿ  ಏನೇನೆಲ್ಲ ಬರಬೇಕು ಎಂದು ಯೋಚಿಸುತ್ತ, ಮನದಲ್ಲೇ ಏನೇನೋ ಲೆಕ್ಕ ಹಾಕುತ್ತ ಮದ್ರಾಸಿನ ಬಸ್ ಹತ್ತಿದೆ.<br />
ಬಸ್‌ನಲ್ಲಿ  ಪಕ್ಕ ಕೂತಿದ್ದವರೊಬ್ಬರು ತುಂಬ ವಿಶ್ವಾಸದಿಂದ ಮಾತಾ ಡಿಸಿದರು. ‘ಶಿವಶಂಕರ್ ಅವರೇ, ನಿಮ್ಗೆ ನಾಡು-ನುಡಿಯ ಬಗ್ಗೆ ವಿಪ ರೀತ ಅಭಿಮಾನ ಅನ್ಸುತ್ತೆ. ಅದೇ ಕಾರಣದಿಂದ ಪ್ರತಿ ಚಿತ್ರದಲ್ಲೂ  ನಾಡಿನ ಹಿರಿಮೆ ಸಾರುವ ಹಾಡುಗಳನ್ನು ಬರೆದಿದ್ದೀರಿ ಅನ್ಸುತ್ತೆ. ನಿಮ್ಮ ಗೀತೆಯಾತ್ರೆ ಹೀಗೆಯೇ ಸಾಗಲಿ. ಕನ್ನಡನಾಡಿನ ವೈಭವ ಹಾಡುಗಳ ಮೂಲಕ ಮನೆ ಮನೆ ತಲುಪಲಿ’ ಎಂದರು.<br />
ಆ ಅನಾಮಿಕ ಜತೆಗಾರ, ಸಹ ಪ್ರಯಾ ಣಿಕನ ಈ ಅಭಿಮಾನದ ಮಾತು ಕೇಳಿ ದಾಗಲೇ ಹಾಡಿನ ಮೊದಲ ಸಾಲು ಹೊಳೆ ದುಬಿಟ್ಟಿತು. ತಕ್ಷಣವೇ, ಪ್ರಯಾಣದ ಸಂದ ರ್ಭದಲ್ಲಿ  ಓದಲೆಂದು ಇಟ್ಟುಕೊಂಡಿದ್ದ  ನ್ಯೂಸ್ ಪೇಪರಿನ ಮೇಲೆ ‘ನಾಡಚರಿತೆ ನೆನಪಿಸುವಾ ವೀರಗೀತೆಯಾ&#8230;’ ಎಂದು ಬರೆದುಕೊಂಡೆ. ಈ ಗೀತೆ ಹಾಡುವವರು ಕನ್ನಡದ ಕಂದಮ್ಮಗಳು ತಾನೆ ಅಂದುಕೊಂ ಡಾಗ-‘ಹಾಡು ನೀನು ಕನ್ನಡಿಗಾ ದೇಶ ಗೀತೆಯಾ’ ಎಂಬ ಇನ್ನೊಂದು ಸಾಲು ಹೊಳೆಯಿತು! ಬಸ್ಸಿನೊಳಗೇ ಹಾಡಿನ ಪಲ್ಲವಿ ಸಿದ್ಧವಾಗಿಹೋಯಿತು.<br />
ಕನ್ನಡದ ಇತಿಹಾಸವನ್ನು, ಕನ್ನಡಕ್ಕೆ ಕೋಡು ಮೂಡಿಸಿದ ಮಹಾನು ಭಾವರ ಚರಿತ್ರೆಯನ್ನು ಚರಣಗಳಲ್ಲಿ ಹೇಳಬೇಕು ಅಂದುಕೊಂಡೆ. ಆಗಲೇ ಕಿತ್ತೂರು ಚೆನ್ನಮ್ಮ, ಮದಕರಿ ನಾಯಕ, ಕೆಂಗಲ್ ಹನುಮಂತಯ್ಯ,  ಸರ್. ಎಂ. ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ ಮುಂತಾದ ಮಹಾಮಹಿಮರ ನೆನಪು ಬಂತು. ಅವರ ಸಾಧನೆಯ ಸಾಲುಗಳನ್ನೂ ಚರಣದಲ್ಲಿ ತಂದೆ. ಇದೆಲ್ಲಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿಯೇ ನಡೆದುಹೋಯಿತು.<br />
ಮರುದಿನ ಚೆನ್ನೈನ ಜೆಮಿನಿ ಸ್ಟುಡಿಯೋಗೆ ಬಂದ ಸಂಗೀತ ನಿರ್ದೇ ಶಕ ಸತ್ಯಂ, ಕೆಲ ಸಮಯದ ನಂತರ ಅದ್ಭುತ ಎಂದು ಉದ್ಗರಿಸುವಂಥ ಟ್ಯೂನನ್ನೇ ಕೊಟ್ಟರು ನಿಜ. ಆದರೆ ಒಂದು ಯಡವಟ್ಟಾಗಿ ಹೋಗಿತ್ತು. ಚರಣದಲ್ಲಿ ‘ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು’  ಎಂಬ ಸಾಲೊಂದಿತ್ತು. ಅದರಲ್ಲಿ  ಹನುಮಂತಯ್ಯ ಎಂಬ ಪದ ರಾಗಕ್ಕೆ ಹೊಂದುತ್ತಿಲ್ಲ ಎಂದುಕೊಂಡು ‘ಯ್ಯ’ ಎಂಬುದನ್ನು ಕಿತ್ತುಹಾಕಿ ಹಾಡಿನ ಸಾಲಲ್ಲಿ  ‘ಹನುಮಂತ’ ಎಂದಷ್ಟೇ ಬಳಸಿಬಿಟ್ಟಿದ್ದರು ಸತ್ಯಂ. ಆ ಪ್ರಕಾರವೇ ಹೋಗಿದ್ದರೆ ‘ಹನುಮಂತ ಕಟ್ಟಿದ ವಿಧಾನಸೌಧ ನೋಡಿದು’ ಎಂದು ಹಾಡಬೇಕಿತ್ತು. ಈ ವಿಷಯ ತಿಳಿದು ನನಗೆ ಶಾಕ್ ಆಯ್ತು. ತಕ್ಷಣವೇ ಸತ್ಯಂ ಅವರನ್ನು ಉದ್ದೇಶಿಸಿ ಹೇಳಿದೆ: ‘ಸಾರ್, ನೀವು ನೆರೆರಾಜ್ಯದವರು. ನಿಮಗೆ ಕನ್ನಡ ನಾಡಿನ ಗಣ್ಯರ ಹೆಸರೇ ಗೊತ್ತಿಲ್ಲ. ಹೀಗಿರುವಾಗ ನನ್ನ ಹಾಡಿನ ಸಾಲನ್ನೇ ವಿರೂಪಗೊಳಿಸುವುದು ಎಷ್ಟು ಸರಿ? ‘ಹನು ಮಂತಯ್ಯ ಕಟ್ಟಿದ ವಿಧಾನಸೌಧ ನೋಡಿದು’ ಎಂದು ನಾನು ಬರೆದರೆ ಅದನ್ನು ‘ಹನುಮಂತ ಕಟ್ಟಿದ ವಿಧಾನ ಸೌಧ ನೋಡಿದು’ ಅಂತ ಬದಲಿ ಸಿದ್ದೀರಲ್ಲ? ನೆನಪಿಟ್ಟುಕೊಳ್ಳಿ. ಹನುಮಂತ ಲಂಕೆಗೆ ಸೇತುವೆ ಕಟ್ಟಿದ. ನಮ್ಮ ಹನುಮಂತಯ್ಯ ವಿಧಾನಸೌಧ ಕಟ್ಟಿದ’ ಎಂದು ಜೋರು ಮಾಡಿದೆ.<br />
ಆಗ ತಕ್ಷಣವೇ ಸತ್ಯಂ ಹೀಗೆಂದರು: ‘ನೀವು ಬರೆದಿರುವ ಸಾಲು ತಾಳಕ್ಕೆ ಹೊಂದಿಕೆಯಾಗುತ್ತಿಲ್ಲ. ಹಾಗಾಗಿ ಬೇರೆ ಬರೆದುಕೊಡಿ&#8230;’ ಸತ್ಯಂ ಅವರ ಮಾತನ್ನು ಅಲ್ಲೇ ಇದ್ದ ನಿರ್ದೇಶಕ ವಿಜಯ್ ಕೂಡಾ ಅನುಮೋದಿಸಿದರು. ಈ ಮಾತನ್ನು ನಾನು ಬಿಲ್‌ಕುಲ್ ಒಪ್ಪಲಿಲ್ಲ. ‘ನಾನು ಬರೆದಿರೋದು ಕನ್ನಡ ನಾಡು ಸದಾ ನೆನಪಿಡಬೇಕಾದವರ  ಹೆಸರಗಳನ್ನು. ಅದನ್ನು ಬದಲಿಸಲಾರೆ. ಈಗ ಹನುಮಂತಯ್ಯ ಎಂಬುದನ್ನು ಬದಲಿಸಿದೆ ಅಂದುಕೊಳ್ಳಿ: ಅದಕ್ಕೂ ಮೊದಲೇ ವಿಶ್ವೇಶ್ವರಯ್ಯ ಎಂಬ ಪದ ಇದೆ. ಅದನ್ನೂ ಬದಲಿಸಿ ಅಂತೀರ ನೀವು. ಹೀಗೆ ಮಾಡಿದ್ರೆ ಹಾಡಿಗೆ ಯಾವ ಅರ್ಥ ಇರುತ್ತೆ? ಈ ಒಂದು ಹಾಡಿಗೆ ಮಾತ್ರ, ಸಾಹಿತ್ಯ ನೋಡಿಕೊಂಡೇ ಟ್ಯೂನ್ ಹಾಕಿ’ ಎಂದೆ.<br />
ನನ್ನ ಮಾತನ್ನು ಸತ್ಯಂ ಒಪ್ಪಲೇ ಇಲ್ಲ. ಸರಿ, ಈ ವಿಷಯಕ್ಕೆ ನಮ್ಮ ನಮ್ಮಲ್ಲಿ  ಜಗಳವೇ ಶುರುವಾಗಿಹೋಯಿತು. ಆ ವೇಳೆಗೆ ಮಧ್ಯೆ ಪ್ರವೇಶಿಸಿದವರು ಗಾಯಕಿ ಬಿ.ಆರ್. ಛಾಯಾ. ಅವರು, ‘ತಾಯಿಯ ಹೊಣೆ’ ಚಿತ್ರಕ್ಕೆ ಹಾಡಲೆಂದು ಮದ್ರಾಸಿಗೆ ಬಂದಿದ್ದರು. ಅವರು ರಿಹರ್ಸಲ್ ಆರಂಭಿಸುವ ಮೊದಲೇ ನಮ್ಮ  ಜಗಳ ಶುರುವಾಗಿತ್ತು. ವಿಷಯ ಏನೆಂದು ತುಂಬ ಬೇಗ ಅರ್ಥಮಾಡಿಕೊಂಡ ಛಾಯಾ- ‘ಹನುಮಂತಯ್ಯ’ ಎಂಬ ಪದವನ್ನು ತಾಳಕ್ಕೆ ಸರಿಯಾಗಿ ಹೊಂದಿಸಿ ಕೊಂಡು ಹಾಡಬಹುದು ಎಂದು ತೋರಿಸಿಬಿಟ್ಟರು.<br />
ಈ ಹಾಡನ್ನು ಪಿ. ಸುಶೀಲ, ಬೆಂಗಳೂರು ಲತಾ ಹಾಗೂ ಬಿ.ಆರ್. ಛಾಯಾರಿಂದ ಹಾಡಿಸುವುದೆಂದು ತೀರ್ಮಾನಿಸಲಾಗಿತ್ತು. ಬಿ.ಆರ್. ಛಾಯಾ ಕನ್ನಡತಿ. ಆಕೆಗೆ ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಕೆಯೇ ಮೊದಲಿಗಳಾಗಿ ಹಾಡಲಿ ಎಂದು ನಾನು ವಾದಿಸಿದೆ. ಪಿ. ಸುಶೀಲಾ ತುಂಬಾ ಹಿರಿಯ ಗಾಯಕಿ. ಹಾಗಾಗಿ ಅವರೇ ಮೊದಲು ಶುರುಮಾಡಲಿ ಎಂದು ಸತ್ಯಂ ಪಟ್ಟು ಹಿಡಿದರು. ಈ ಬಾರಿ ನಾನೇ ಸೋತೆ.<br />
ಕೆಲ ದಿನಗಳ ನಂತರ, ಈ ಹಾಡಿನ ಚಿತ್ರೀಕರಣ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ ಎಂದು ತಿಳಿಯಿತು. ಕುತೂಹಲ ದಿಂದಲೇ ಅಲ್ಲಿಗೆ ಹೋದೆ. ಹೋದವನೇ, ಎದುರಿಗೆ ಕಂಡ ದೃಶ್ಯ ನೋಡಿ ತತ್ತರಿಸಿಹೋದೆ. ಏಕೆಂದರೆ, ನಿರ್ದೇಶಕ ವಿಜಯ್ ಅವರು, ಬಾಲನಟಿ ಬೇಬಿ ರೇಖಾಗೆ ರಾಣಿ ಚೆನ್ನಮ್ಮನ ವೇಷ ಹಾಕಿದ್ದರು. ಆ ವೇಷ ಹೇಗಿತ್ತು ಗೊತ್ತೆ? ಚೆನ್ನಮ್ಮನ ವೇಷಧಾರಿಯು ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು!<br />
ತಕ್ಷಣವೇ ನಿರ್ದೇಶಕ ವಿಜಯ್ ಅವರನ್ನು ಕರೆಸಿ ಕೇಳಿದೆ: ‘ ಸಾರ್, ರಾಣಿ ಚೆನ್ನಮ್ಮ ವಿಧವೆಯಾದ ನಂತರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳೀತಾಳೆ. ವಿಷಯ ಹೀಗಿರುವಾಗ ನೀವು ಆಕೆಯ ಪಾತ್ರಧಾರಿಗೆ ಹಣೆ ಯಲ್ಲಿ ಕುಂಕುಮ ಇಟ್ಟಿದ್ದೀರಿ. ಕೊರಳಲ್ಲಿ ತಾಳಿಯನ್ನೂ ಹಾಕಿದ್ದೀರಿ. ಹೀಗೇ ಚಿತ್ರೀಕರಿಸಿದರೆ ಅದು ನೋಡುವವರಿಗೆ ಆಭಾಸ ಅನ್ನಿಸು ವುದಿಲ್ಲವೇ?’<br />
ವಿಜಯ್ ತಕ್ಷಣವೇ ತಪ್ಪು ಒಪ್ಪಿಕೊಂಡರು. ನನಗೆ ನಿಮ್ಮ ನಾಡಿನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಹಾಗಾಗಿ ತಪ್ಪಾಗಿದೆ, ಕ್ಷಮಿಸಿ’ ಎಂದರು. ಆಗ ಅಲ್ಲಿದ್ದ ಅಬ್ಬಯ್ಯ ನಾಯ್ಡು ಅವರಿಗೆ ಹೇಳಿದೆ: ‘ಈ ಹಾಡಲ್ಲಿ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ವಿಶ್ವೇಶ್ವರಯ್ಯ, ಕೆಂಗಲ್ ಹನುಮಂತಯ್ಯನವರ ಪ್ರಸ್ತಾಪವೂ ಬರುತ್ತದೆ. ಅವರ ವೇಷಭೂಷಣ ನೈಜವಾಗಿದ್ದರೆ ಆ ಸಂದರ್ಭ ಕಳೆ ಕಟ್ಟುತ್ತದೆ&#8230;.’<br />
ಈ ಮಾತು ಕೇಳಿದ ವಿಜಯ್-‘ ಈ ಹಾಡಿನ ನೃತ್ಯ ನಿರ್ದೇಶನವನ್ನು ನೀವೇ ಮಾಡಿಬಿಡಿ ಶಿವಶಂಕರ್’ ಎಂದರು. ಈ ಮಾತಿಗೆ ಅಬ್ಬಯ್ಯ ನಾಯ್ಡು ಕೂಡ ದನಿಗೂಡಿಸಿದರು. ಪರಿಣಾಮ, ಸುಮ್ಮನೇ ಶೂಟಿಂಗ್ ನೋಡಲೆಂದು ಹೋಗಿದ್ದ ನಾನು, ಹಾಡೊಂದರ ನೃತ್ಯ ನಿರ್ದೇಶನ ಮಾಡಿ ಬಂದೆ. ನಾಡಿನ ಹಿರಿಮೆ ಬಣ್ಣಿಸುವ ಹಾಡೊಂದನ್ನು ಬರೆದದ್ದು ಮಾತ್ರವಲ್ಲದೆ ಅದಕ್ಕೆ ನೃತ್ಯ ನಿರ್ದೇಶನವನ್ನೂ ಮಾಡಿದ ಹೆಮ್ಮೆ ನನಗಿದೆ&#8230;’<br />
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶಿವಶಂಕರ್&#8230;</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/756/"><img alt="" border="0" src="http://feeds.wordpress.com/1.0/comments/manigulabi.wordpress.com/756/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/756/"><img alt="" border="0" src="http://feeds.wordpress.com/1.0/delicious/manigulabi.wordpress.com/756/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/756/"><img alt="" border="0" src="http://feeds.wordpress.com/1.0/facebook/manigulabi.wordpress.com/756/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/756/"><img alt="" border="0" src="http://feeds.wordpress.com/1.0/twitter/manigulabi.wordpress.com/756/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/756/"><img alt="" border="0" src="http://feeds.wordpress.com/1.0/stumble/manigulabi.wordpress.com/756/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/756/"><img alt="" border="0" src="http://feeds.wordpress.com/1.0/digg/manigulabi.wordpress.com/756/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/756/"><img alt="" border="0" src="http://feeds.wordpress.com/1.0/reddit/manigulabi.wordpress.com/756/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=756&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/02/11/%e0%b2%b8%e0%b2%b9%e0%b2%aa%e0%b3%8d%e0%b2%b0%e0%b2%af%e0%b2%be%e0%b2%a3%e0%b2%bf%e0%b2%95%e0%b2%a8-%e0%b2%85%e0%b2%ad%e0%b2%bf%e0%b2%ae%e0%b2%be%e0%b2%a8%e0%b2%a6-%e0%b2%ae%e0%b2%be%e0%b2%a4%e0%b3%87/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/02/shivashankar.jpg?w=236" medium="image">
			<media:title type="html">shivashankar</media:title>
		</media:content>
	</item>
		<item>
		<title>ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ</title>
		<link>http://manigulabi.wordpress.com/2011/01/28/%e0%b2%ac%e0%b2%82%e0%b2%a6%e0%b3%87-%e0%b2%87%e0%b2%b2%e0%b3%8d%e0%b2%b2%e0%b2%bf%e0%b2%97%e0%b3%86-%e0%b2%a8%e0%b2%be-%e0%b2%b8%e0%b2%82%e0%b2%9c%e0%b3%86-%e0%b2%ae%e0%b2%b2%e0%b3%8d%e0%b2%b2/</link>
		<comments>http://manigulabi.wordpress.com/2011/01/28/%e0%b2%ac%e0%b2%82%e0%b2%a6%e0%b3%87-%e0%b2%87%e0%b2%b2%e0%b3%8d%e0%b2%b2%e0%b2%bf%e0%b2%97%e0%b3%86-%e0%b2%a8%e0%b2%be-%e0%b2%b8%e0%b2%82%e0%b2%9c%e0%b3%86-%e0%b2%ae%e0%b2%b2%e0%b3%8d%e0%b2%b2/#comments</comments>
		<pubDate>Fri, 28 Jan 2011 13:39:35 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=754</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ಪ್ರೇಮವಿದೆ ಮನದೆ&#8230; ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ ನಾ ಸಂಜೇ ಮಲ್ಲಿಗೆ &#124;&#124;ಪ&#124;&#124; ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ&#8230; ಎಂಥಾ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=754&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/01/antha.gif"><img class="alignleft size-medium wp-image-757" title="antha" src="http://manigulabi.files.wordpress.com/2011/01/antha.gif?w=208&#038;h=300" alt="" width="208" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ಪ್ರೇಮವಿದೆ ಮನದೆ&#8230;<br />
ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ<br />
ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ</p>
<p>ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ<br />
ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ<br />
ನಾ ಸಂಜೇ ಮಲ್ಲಿಗೆ ||ಪ||</p>
<p>ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ<br />
ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ<br />
ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ&#8230; ಎಂಥಾ  ಬಂಧನ ||೧|</p>
<p>ಹೊಂಗನಸ ಕಂಡೆ ನನಗಾಗಿ ನೀನು<br />
ಬಗೆಬಗೆಯ ಆಸೆ ಮನದೆ ಇರಿಸಿ, ನೆನಪ ಉಳಿಸಿ,<br />
ದೂರ ಸಾಗಿದೆ, ದಾಹ ತೀರದೆ, ತೀರ ಸೇರುವೆ ||೨||</p>
<p>ಪ್ರೀತಿ-ಪ್ರೇಮದ ಹಾಡು, ಸ್ನೇಹದ ಹಾಡು, ಸೇಡಿನ ಹಾಡು, ಸಂತೋಷದ ಹಾಡು, ಸಂಕಟದ ಹಾಡು, ಸಂಗೀತದ ಹಾಡು, ಮದುವೆಯ ಹಾಡು, ಹುಟ್ಟು ಹಬ್ಬದ ನೆಪದಲ್ಲಿ ಕೇಳುವ ಹಾಡು, ಆರತಕ್ಷತೆಯ ಸಂದರ್ಭಕ್ಕೆಂದೇ ಬರೆಯುವ ಹಾಡು, ದೇವರನ್ನು ಪ್ರಾರ್ಥಿಸುವ ಹಾಡು, ಅದೇ ದೇವರಿಗೆ ಆವಾಜ್ ಹಾಕುವ ಹಾಡು&#8230; ಹೀಗೆ, ಸಿನಿಮಾಗಳಲ್ಲಿ ಬಳಕೆಯಾಗುವ ಹಾಡುಗಳ ವೆರೈಟಿ ದೊಡ್ಡದು. ಪ್ರೇಮ, ಸ್ನೇಹ, ವಿರಸ, ವಿರಹ, ಸಂತೋಷ, ಸಂಕಟ ಮುಂತಾದ ಭಾವಗಳು ಗೀತೆರಚನೆಕಾರನನ್ನೂ ಆಗಿಂದಾಗ್ಗೆ ತಟ್ಟಿರುತ್ತವೆ. ಹಾಗಾಗಿ, ಮೇಲೆ ವಿವರಿಸಿದ ವೆರೈಟಿಯ ಹಾಡುಗಳನ್ನು ಬರೆಯುವ ಸಂದರ್ಭದಲ್ಲಿ ತನ್ನ ಅನುಭವವನ್ನೆಲ್ಲ  ಆತ ಹಾಡಲ್ಲಿ ತರಬಹುದು. ಆ ಮೂಲಕ ಹಾಡಿನ ಹಾಗೂ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬಹುದು.<br />
ಆದರೆ, ಕ್ಯಾಬರೆ ಹಾಡು ಬರೆಯುವ ಸಂದರ್ಭದಲ್ಲಿ ಮಾತ್ರ ಗೀತೆರಚನೆಕಾರ ಸವಾಲು ಎದುರಿಸಬೇಕಾಗುತ್ತದೆ. ಏಕೆಂದರೆ ಕ್ಯಾಬರೆ ಹಾಡಿನ ಸಂದರ್ಭದಲ್ಲಿ ಒಂದೊಂದು ಪದದಲ್ಲೂ ವಯ್ಯಾರ, ನಾಚಿಕೆ, ಬಿಗುಮಾನ, ವಿಪರೀತದ ಆಸೆ, ಒಂದಿಷ್ಟು ನಿರಾಸೆ&#8230; ಇತ್ಯಾದಿ ಇತ್ಯಾದಿಗಳನ್ನು ತರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಗೀತೆರಚನೆಕಾರ ಶಬ್ದಗಳನ್ನು ಅದು ಹೇಗೆ ಆವಾಹಿಸಿಕೊಳ್ಳುತ್ತಾನೆ? ಕೇಳುವವರು ಮತ್ತು ನೋಡುವವರಿಗೆ ಅಮಲೇರಿಸುವಂಥ ಹಾಡನ್ನು ಹೇಗೆ ಬರೆಯುತ್ತಾನೆ?<br />
ಇದು, ಹಲವರ ಕುತೂಹಲದ ಪ್ರಶ್ನೆ.<br />
ಈ ಪ್ರಶ್ನೆಗೆ ‘ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಏಕೆಂದರೆ, ಒಬ್ಬೊಬ್ಬ ಚಿತ್ರಸಾಹಿತಿಯ ಗೀತೆರಚನೆಯ ಶೈಲಿ ಒಂದೊಂದು ರೀತಿಯದ್ದಾಗಿರುವುದು. ಆದರೆ, ಕ್ಯಾಬರೆ ಹಾಡುಗಳ ಸೃಷ್ಟಿಯ ಸಂದರ್ಭ ತಿಳಿಯಲು ಹೊರಟರೆ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳಂತೂ ಖಂಡಿತ ಸಿಗುತ್ತವೆ.<br />
ಅದಕ್ಕೊಂದು ಉದಾಹರಣೆ ಕೇಳಿ: ಅಬ್ಬಯ್ಯನಾಯ್ಡು ನಿರ್ಮಾಣದ ‘ಚೆಲ್ಲಿದ ರಕ್ತ’ ಸಿನಿಮಾದ ಕೆಲಸ ಆರಂಭವಾಗಿತ್ತು. ಅದಕ್ಕೆ ಗೀತೆರಚನೆಯ ಹೊಣೆ ಹೊತ್ತಿದ್ದವರು ಚಿ. ಉದಯಶಂಕರ್. ಸಿನಿಮಾ ಆರಂಭವಾದ ಕೆಲವೇ ನಿಮಿಷಗಳ ನಂತರ ‘ಶಿವಸ್ತುತಿಯ ಒಂದು ಹಾಡು ಬೇಕು’ ಎಂದರಂತೆ ಅಬ್ಬಯ್ಯನಾಯ್ಡು ಮತ್ತು ಆ ಚಿತ್ರದ ನಿರ್ದೇಶಕ ಸುಬ್ಬರಾವ್. ‘ಸರಿ, ನಾಳೆ ಸಂಜೆ ಜನಾರ್ದನ ಹೋಟೆಲಿಗೆ ಬನ್ನಿ. ಹಾಡು ಬರೆದು ಇಟ್ಟಿರ್‍ತೇನೆ’ ಎಂದರಂತೆ ಉದಯಶಂಕರ್. ಮರುದಿನ, ನಿಗದಿತ ಸಮಯಕ್ಕೆ ಸರಿಯಾಗಿ ಅಬ್ಬಯ್ಯ-ಸುಬ್ಬರಾವ್ ಜೋಡಿ ಜನಾರ್ದನ ಹೋಟೆಲಿಗೆ ಹೋಗಿದೆ. ಇವರನ್ನು ಕಂಡ ಉದಯಶಂಕರ್- ‘ಐದು ನಿಮಿಷ ಕೂತಿರಿ. ಹಾಡು ಬರೆದು ಕೊಡ್ತೇನೆ’ ಎಂದವರು-ನಂತರದ ಐದೇ ನಿಮಿಷದಲ್ಲಿ ‘ಶಿವನೊಲಿದರೆ ಭಯವಿಲ್ಲಾ’ ಎಂಬ ಹಾಡು ಬರೆದುಕೊಟ್ಟರಂತೆ.<br />
ಉದಯಶಂಕರ್ ಅವರಿಂದ ಮತ್ತೊಂದು ಹಾಡು ಬರೆಸಿಕೊಂಡು ಹೋಗೋಣ ಎಂದು ಮಾತಾಡಿಕೊಂಡೇ ಬಂದಿದ್ದರು ಅಬ್ಬಯ್ಯನಾಯ್ಡು-ಸುಬ್ಬರಾವ್. ಶಿವಸ್ತುತಿಯ ಹಾಡನ್ನು ಉದಯಶಂಕರ್ ಕೊಟ್ಟ ಮರುಕ್ಷಣವೇ -‘ಸಾರ್, ಒಂದು ಕ್ಯಾಬರೆ ಹಾಡು ಬೇಕಾಗಿದೆ. ಅದನ್ನೂ ಬರೆದು ಕೊಡಿ. ಖಳನಾಯಕನ ಅಡಗುದಾಣದಲ್ಲಿ  ಕ್ಯಾಬರೆ ಹಾಡು ಹಾಕೋಣ ಅನ್ಕೊಂಡಿದೀವಿ. ಆ ಸಂದರ್ಭಕ್ಕೆ ಒಂದು ಹಾಡು ಬೇಕು’ ಈಗಲೇ ಬೇಕು ಎಂದರಂತೆ.<br />
ಬಹುಶಃ ಅವತ್ತು ಉದಯಶಂಕರ್ ಅವರಿಗೆ ಇನ್ನೊಂದು ಹಾಡು ಬರೆವ ‘ಮೂಡ್’ ಇರಲಿಲ್ಲವೆಂದು ಕಾಣುತ್ತದೆ. ಅವರು- ‘ನೋಡ್ರಿ, ಈಗಷ್ಟೇ ಶಿವಸ್ತುತಿಯ ಹಾಡು ಬರೆದಿದ್ದೇನೆ. ಅದರ ಹಿಂದೆಯೇ ಒಂದು ಕ್ಯಾಬರೆ ಹಾಡು ಬರೆದುಕೊಡಿ ಅಂದ್ರೆ ಹ್ಯಾಗೆ? ಅದನ್ನು ನಾಳೆ ಬರೀತೇನೆ’ ಅಂದಿದ್ದಾರೆ. ಈ ಮಾತು ಒಪ್ಪದ ಅಬ್ಬಯ್ಯನಾಯ್ಡು-ಸುಬ್ಬರಾವ್ ಜೋಡಿ-‘ಸಾರ್, ನಮಗೆ ಹಾಡು ಈಗಲೇ ಬೇಕು. ಬೇಕೇ ಬೇಕು’ ಎಂದು ಪ್ರೀತಿಯಿಂದಲೇ ಒತ್ತಾಯಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ-‘ನೀವು ಏನು ಬರೆದ್ರೂ ಚೆನ್ನಾಗಿರುತ್ತೆ. ಬರೆದು ಕೊಡಿ ಸಾರ್ ಎಂದು ಪಟ್ಟು ಹಿಡಿದಿದ್ದಾರೆ. ಇವರ ಒತ್ತಾಯ ‘ಅತೀ’ ಅನ್ನಿಸಿದಾಗ, ಉದಯಶಂಕರ್ ಅವರಿಬ್ಬರ ಹೆಸರು ಹಾಗೂ ಅವರಿಗೆ ತಾನು ಮಾತುಗಳನ್ನೇ ಜತೆಗಿಟ್ಟುಕೊಂಡು, ಕಚಗುಳಿ ಇಡುವಂಥ ಒಂದು ಕ್ಯಾಬರೆ ಹಾಡು ಬರೆದುಬಿಟ್ಟರಂತೆ. ಆ ಹಾಡು ಹೀಗೆ ಶುರುವಾಗುತ್ತದೆ.<br />
ಅಯ್ಯೊ ಅಬ್ಬಯ್ಯಾ ಬೇಡ ಸುಬ್ಬಯ್ಯಾ<br />
ನಾಳೆ ಬಾರಯ್ಯಾ , ನಾಳೆ ಬಾರಯ್ಯಾ ಹೋ ಹೋ&#8230;<br />
‘ಅಂತ’ ಚಿತ್ರದ ಸೂಪರ್ ಹಿಟ್ ಗೀತೆ ‘ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ&#8230;’ ಹಾಡನ್ನು ಗೀತಪ್ರಿಯ ಹೇಗೆ ಬರೆದರು ಎಂದು ಸುಮ್ಮನೇ ಯೋಚಿಸಿದಾಗ ಅದಕ್ಕೊಂದು ಪೂರಕ ಮಾಹಿತಿಯಂತೆ ಉದಯಶಂಕರ್ ಬರೆದ ಅಯ್ಯೋ ಅಬ್ಬಯ್ಯಾ ಬೇಡ ಸುಬ್ಬಯ್ಯಾ ಹಾಡು ಮತ್ತು ಆ ಹಾಡು ಸೃಷ್ಟಿಯಾದ ಸಂದರ್ಭ ನೆನಪಾಯಿತು.<br />
‘ಇದೇನ ಸಂಸ್ಕೃತಿ, ಇದೇನ ಸಭ್ಯತೆ’, ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’, ‘ಬೆಳುವಲದಾ ಮಡಿಲಲ್ಲಿ ಬೆವರು ಹನಿ ಬಿದ್ದಾಗ&#8230;’, ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಶೋಕವೇ&#8230;’, ‘ಗೋಪಿಲೋಲ ಹೇ ಗೋಪಾಲ, ಈ ಜಗವೆಲ್ಲಾ ನಿನದೇ ಜಾಲ&#8230;’ ಮುಂತಾದ ಮಾಧುರ್ಯದ ಗೀತೆಗಳನ್ನು ಬರೆದವರು ಗೀತಪ್ರಿಯ. ಅವರಿಂದ ಕ್ಯಾಬರೆ ಹಾಡು ಬರೆಸಿದ ಖ್ಯಾತಿ ರಾಜೇಂದ್ರಸಿಂಗ್ ಬಾಬು ಅವರದ್ದು. ಆ ಸಂದರ್ಭವನ್ನು ಗೀತಪ್ರಿಯ ಅವರು ನೆನಪಿಸಿಕೊಂಡದ್ದು ಹೀಗೆ:<br />
ಇದು ೧೯೮೧-೮೨ರ ಮಾತು. ತನ್ನ ಜೀವದ ಗೆಳೆಯ ಅಂಬರೀಷ್ ಅವರನ್ನು ಹೀರೊ ಮಾಡಬೇಕು ಎಂಬ ಆಸೆಯಿಂದ ರಾಜೇಂದ್ರಸಿಂಗ್ ಬಾಬು ‘ಅಂತ’ ಚಿತ್ರದ ತಯಾರಿಗೆ ಸಿದ್ಧತೆ ನಡೆಸಿದ್ದರು. ಆ ಚಿತ್ರಕ್ಕೆ ನನ್ನಿಂದ ಒಂದು ಹಾಡು ಬರೆಸಬೇಕೆಂಬುದು ಅವರ ಆಸೆಯಾಗಿತ್ತು. ನನ್ನನ್ನು ಸಂಪರ್ಕಿಸಿ ಹೇಳಿದರು:  ‘ಸಾರ್, ನಮ್ಮ ಹೊಸ ಸಿನಿಮಾದಲ್ಲಿ  ಹೀಗೊಂದು ಸನ್ನಿವೇಶ. ನಾಯಕ ಮತ್ತು ಅವನ ಸೋದರಿ ಚಿಕ್ಕಂದಿನಲ್ಲಿಯೇ ಬೇರೆ ಬೇರೆಯಾಗಿರುತ್ತಾರೆ. ಮುಂದೆ ನಾಯಕ ತಂಗಿಯನ್ನು ಹುಡುಕಲೆಂದೇ ಪೊಲೀಸ್ ಇನ್‌ಸ್ಪೆಕ್ಟರ್ ಆಗುತ್ತಾನೆ. ಹಲವಾರು ಕಡೆ ಹುಡುಕಿದರೂ. ಆಕೆ ಸಿಕ್ಕುವುದಿಲ್ಲ. ಮುಂದೆ ನಾಯಕನ ವೃತ್ತಿ ಬದುಕಿನಲ್ಲಿ ಹಲವಾರು ಏರುಪೇರುಗಳಾಗುತ್ತವೆ. ಈತ ವೇಷ ಮರೆಸಿಕೊಂಡು ಖಳನಾಯಕರ ಅಡ್ಡೆಗೇ ಬರುತ್ತಾನೆ. ಖಳನಾಯಕರ ಜೊತೆಯಲ್ಲಿದ್ದುಕೊಂಡೇ ಅವರನ್ನು ನಿರ್ಮೂಲನ ಮಾಡುವ ಹವಣಿಕೆ ಅವನದು. ಕನ್ವರ್‌ಲಾಲ್ ಹೆಸರಿನ ಈತ ತಮ್ಮೊಂದಿಗೆ ಸೇರಿಕೊಂಡ ಖುಷಿಗೆ, ಆತನ ಹಿನ್ನೆಲೆ ಗೊತ್ತಿಲ್ಲದ ಖಳರೇ ಒಂದು ಕ್ಯಾಬರೆ ಡ್ಯಾನ್ಸ್ ಏರ್ಪಡಿಸುತ್ತಾರೆ. ಆಗ ನರ್ತಿಸಲು ಬಂದಾಕೆ ನಾಯಕನ ಸೋದರಿಯೇ ಆಗಿರುತ್ತಾಳೆ.<br />
ಈ ಸಂದರ್ಭದಲ್ಲಿ ಅಣ್ಣ-ತಂಗಿಗೆ ಪರಸ್ಪರರ ಗುರುತು ಸಿಕ್ಕುತ್ತದೆ. ಆದರೆ ಇಬ್ಬರೂ ಪರಿಚಯ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿರುತ್ತಾರೆ. ತಂಗಿಯನ್ನು ಆ ವೇಷದಲ್ಲಿ, ಅಂಥ ಜಾಗದಲ್ಲಿ ನೋಡಿ ನಾಯಕನಿಗೆ ಶಾಕ್ ಆಗುತ್ತದೆ. ಕ್ಯಾಬರೆ ಡ್ಯಾನ್ಸರ್ ಆಗಿದ್ದ ತಂಗಿಯದೂ ಅದೇ ಸ್ಥಿತಿ. ಇಂಥ ಸಂದರ್ಭದಲ್ಲಿ ಮನದ ಸಂಕಟವೆಲ್ಲಾ ಹಾಡಾಗಿ ಬರಬೇಕು&#8230; ಅದು ಕ್ಯಾಬರೆ ಹಾಡಿನಂತೆಯೂ ಭಾಸವಾಗಬೇಕು. ಅಣ್ಣ-ತಂಗಿಯ ಮನದ ನೋವು ಪ್ರೇಕ್ಷಕರನ್ನು ತಾಕಬೇಕು, ಅಂಥದೊಂದು ಹಾಡು ಬರೆದು ಕೊಡಿ’ ಎಂದಿದ್ದರು ರಾಜೇಂದ್ರಸಿಂಗ್ ಬಾಬು.<br />
ಅದುವರೆಗೂ ಮೃದು, ಮಧುರ ಹಾಡು ಬರೆಯುತ್ತಿದ್ದವ ನಾನು. ಈಗ ಕ್ಯಾಬರೆ ಹಾಡಿಗೆ ಪೆನ್ ತಿರುಗಿಸಬೇಕಿತ್ತು. ‘ಇರಲಿ, ಇಂಥ ಸವಾಲುಗಳು ಆಗಿಂದಾಗ್ಗೆ ಎದುರಾಗಬೇಕು. ಆಗಲೇ ಬಾಳಿಗೊಂದು ಅರ್ಥ’ ಎಂದು ಕೊಂಡೆ. ಸ್ವಲ್ಪ ಹೊತ್ತಿನ ನಂತರ ಜಿ.ಕೆ. ವೆಂಕಟೇಶ್ ಅವರು ಟ್ಯೂನ್ ಕೇಳಿಸಿದರು. ಈ ಹಾಡು ಮುಗಿಯುತ್ತಿದ್ದಂತೆಯೇ ಪ್ರೀತಿಯ ಅಣ್ಣನ ಮುಂದೆ ಕ್ಯಾಬರೆ ಡ್ಯಾನ್ಸ್ ಮಾಡಬೇಕಾಯ್ತಲ್ಲ ಎಂಬ ಸಂಕಟದಿಂದ, ಆ ನರ್ತಕಿ ಮಹಡಿ ಮೇಲಿಂದ ಜಿಗಿದು ಪ್ರಾಣ ಬಿಡುತ್ತಾಳೆ ಎಂದೂ ಹೇಳಿದ್ದರು ಸಿಂಗ್ ಬಾಬು. ಈ ಮಾತು ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದುಹೋಗಿತ್ತು. ಅಂದರೆ ನಾಯಕನ ತಂಗಿಯ ಪಾತ್ರ ಸ್ವಲ್ಪ  ಸಮಯ ಮಾತ್ರ ಕಾಣಿಸಿಕೊಂಡು ಮರೆಯಾಗುವಂಥಾದ್ದು. ಹೀಗೆ ಕಾಣಿಸಿಕೊಂಡು ಹಾಗೆ ಕಣ್ಮರೆಯಾಗುವ ಪಾತ್ರಕ್ಕೆ ಹೇಗೆ ಹಾಡು ಬರೆಯುವುದು? ಆ ಪಾತ್ರವನ್ನು ಯಾವ ವಸ್ತುವಿಗೆ ಹೋಲಿಸುವುದು ಎಂದು ಚಿಂತಿಸಿದೆ. ಈ ಸಂದರ್ಭದಲ್ಲಿಯೇ ಹೆಣ್ಣನ್ನು ಹೂವಿಗೆ ಹೋಲಿಸುವುದು ನೆನಪಿಗೆ ಬಂತು. ಆದರೆ ಈ ಸಿನಿಮಾದಲ್ಲಿ ಬರುತ್ತಿದ್ದ ಹೆಣ್ಣು ಕೆಲವೇ ಹೊತ್ತು ಕಾಣಿಸಿಕೊಂಡು ಕಣ್ಮರೆಯಾಗುವಾಕೆ. ಅವಳನ್ನು ಯಾವ ಹೂವಿಗೆ ಹೋಲಿಸಬಹುದು ಎಂದು ಯೋಚಿಸುತ್ತಾ ಕೂತೆ.<br />
ಆಗ ಕಣ್ಮುಂದೆ ಕಂಡ ಚಿತ್ರವೇ ಸಂಜೆಮಲ್ಲಿಗೆಯದ್ದು!<br />
ಸಾಮಾನ್ಯವಾಗಿ ಎಲ್ಲ ಹೂಗಳೂ ಮುಂಜಾನೆ ಅರಳುತ್ತವೆ. ಅವುಗಳನ್ನು ಮಂಗಳ ಕಾರ್ಯಗಳಿಗೆ, ದೇವರ ಪೂಜೆಗೆ ಬಳಸುತ್ತಾರೆ. ಹೆಂಗಳೆಯರು ಅವುಗಳನ್ನು ಮುಡಿಗೇರಿಸಿಕೊಳ್ಳುತ್ತಾರೆ. ಹೆಚ್ಚಿನ ಹೂಗಳು ಬೆಳಗಿಂದ ಸಂಜೆಯವರೆಗೂ ಫ್ರೆಶ್ ಆಗಿರುವಂಥ ಗುಣ ಹೊಂದಿರುತ್ತವೆ. ಆದರೆ, ಸಂಜೆ ಮಲ್ಲಿಗೆಯದು ಹಾಗಲ್ಲ. ಇನ್ನೇನು ಸೂರ್ಯ ಮುಳುಗುತ್ತಾನೆ ಎನ್ನುವ ಹೊತ್ತಿನಲ್ಲಿ ಅದು ಅರಳುತ್ತದೆ. ಕತ್ತಲಾಗುತ್ತಿದ್ದಂತೆಯೇ ಬಾಡಿ ಹೋಗುತ್ತದೆ. ಈ ಹೂವಿನ ಅರಳುವ ಮುದುಡುವ ಪ್ರಕ್ರಿಯೆ ಕೆಲವೇ ಗಂಟೆಗಳ ಕಾಲ. ಚಿಕ್ಕಂದಿನಲ್ಲಿ ನಾನು ಈ ಹೂವುಗಳನ್ನೇ ಆಸೆಯಿಂದ, ಪ್ರೀತಿ, ಬೆರಗಿನಿಂದ ನೋಡುತ್ತಿದ್ದೆ. ಅದನ್ನು  ಬಿಡಿಸಿಕೊಂಡೂ ಹೋಗುತ್ತಿದ್ದೆ. ‘ಅಯ್ಯೋ, ಅದು ಸಂಜೆ ಮಲ್ಲಿಗೆ. ಅದನ್ನು ದೇವರಿಗೆ ಮುಡಿಸಬಾರ್‍ದು’ ಎಂದು ಅಮ್ಮ ಎಚ್ಚರಿಸುತ್ತಿದ್ದಳು. ಹೊರಗೆ ಸಿಕ್ಕ ಗೆಳೆಯರು, ಬಂಧುಗಳೂ ಇದೇ ಮಾತು ಹೇಳುತ್ತಿದ್ದರು. ಇಂಥ ಮಾತುಗಳನ್ನು ಕೇಳಿದಾಗ-‘ಬೇರೆಲ್ಲ ಹೂಗಳೂ ಅರಳಿ, ಮಂಗಳ ಕಾರ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಪುನೀತವಾಗುವ ಸಂದರ್ಭದಲ್ಲಿ ಈ ಸಂಜೆಮಲ್ಲಿಗೆಗೆ ಕೆಲವೇ ಕ್ಷಣಗಳಲ್ಲಿ ಅರಳಿ ಬಾಡುವ ಅನಿವಾರ್‍ಯತೆ. ಏಕೆ ಎಂದು ನನ್ನಷ್ಟಕ್ಕೆ ನಾನೇ ಅಂದುಕೊಳ್ಳುತ್ತಿದ್ದೆ.<br />
ಹೀಗೆ, ಸಂಜೆ ಮಲ್ಲಿಗೆಯ ಬಗ್ಗೆ ಯೋಚಿಸುತ್ತಿದ್ದಾಗಲೇ ನರ್ತಕಿಯರ ಬದುಕು ನೆನಪಾಯಿತು. ಯೌವನವಿದ್ದಾಗ ಎಲ್ಲರೂ ನರ್ತಕಿಯರನ್ನು ಪ್ರೀತಿಸುತ್ತಾರೆ, ಆರಾಸುತ್ತಾರೆ, ಆಸೆಗಣ್ಣಿಂದ ನೋಡುತ್ತಾರೆ. ಬಯಸುತ್ತಾರೆ. ಆದರೆ, ಮುಪ್ಪು ಸಮೀಪಿಸಿದರೆ ಸಾಕು, ಅವರನ್ನು ಯಾರೂ ತಿರುಗಿಯೂ ನೋಡುವುದಿಲ್ಲ. ಅವರ ಬದುಕೂ ಥೇಟ್ ಸಂಜೆ ಮಲ್ಲಿಗೆಯ ಥರವೇ ಮುಗಿದು ಹೋಗುತ್ತದೆ&#8230;<br />
ಹೀಗೊಂದು ಯೋಚನೆ ಬರುತ್ತಿದ್ದಂತೆಯೇ ಒಂದೊಂದೇ ಹೊಸ ಪದಗಳು ಹಾಡಿನ ಸಾಲುಗಳಾಗಿ ಜತೆಯಾಗತೊಡಗಿದವು. ಅಣ್ಣನಿಗೆ ತನ್ನ ಬದುಕಿನ ಸಂಕಟ ಹೇಳಲೆಂದು ಆ ಕ್ಯಾಬರೆ ನರ್ತಕಿ ತನ್ನನ್ನು ತಾನು ‘ಸಂಜೆ ಮಲ್ಲಿಗೆ’ ಎಂದು ಕರೆದುಕೊಂಡರೆ ಚೆಂದ ಅನ್ನಿಸಿತು. ಹಾಗೇ ಬರೆದೆ. ಆ ನಂತರದಲ್ಲಿ ಒಂದೊಂದೇ ಹೊಸ ಪದ, ಒಂದೊಂದೇ ಹೊಸ ಸಾಲು ಸೇರಿಕೊಳ್ಳುತ್ತಾ ಹಾಡು ಸಿದ್ಧವಾಗಿಹೋಯಿತು. ಅಣ್ಣ-ತಂಗಿಯಾಗಿ ತಮ್ಮ ಅಸಹಾಯಕತೆಯನ್ನು ಮುಖಭಾವದಲ್ಲಿ ಪ್ರದರ್ಶಿಸುವ ಸಂದರ್ಭದಲ್ಲಿ ಅಂಬರೀಷ್- ಜಯಮಾಲಾ ಪೈಪೋಟಿಗೆ ಬಿದ್ದು ನಟಿಸಿದರು. ಈ ಹಾಡಿನ ದೃಶ್ಯೀಕರಣ ಎಲ್ಲರ ಮನಸ್ಸಿಗೂ ನಾಟುವಂತಿತ್ತು. ಜತೆಗೆ, ಎಸ್. ಜಾನಕಿಯವರ ದನಿಯಲ್ಲಿನ ಮಾದಕತೆ, ಜಿ.ಕೆ. ವೆಂಕಟೇಶ್ ಅವರ ಮಧುರ ಸಂಗೀತ ಈ ಗೀತೆಯನ್ನು ಸೂಪರ್ ಹಿಟ್ ಹಾಡಾಗಿಸಿತು.<br />
ಇಷ್ಟೇ ನೋಡಿ ಆ ಹಾಡಿನ ಕಥೆ ಎನ್ನುತ್ತಾ ಮಾತು ಮುಗಿಸಿದರು ಗೀತಪ್ರಿಯ.</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/754/"><img alt="" border="0" src="http://feeds.wordpress.com/1.0/comments/manigulabi.wordpress.com/754/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/754/"><img alt="" border="0" src="http://feeds.wordpress.com/1.0/delicious/manigulabi.wordpress.com/754/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/754/"><img alt="" border="0" src="http://feeds.wordpress.com/1.0/facebook/manigulabi.wordpress.com/754/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/754/"><img alt="" border="0" src="http://feeds.wordpress.com/1.0/twitter/manigulabi.wordpress.com/754/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/754/"><img alt="" border="0" src="http://feeds.wordpress.com/1.0/stumble/manigulabi.wordpress.com/754/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/754/"><img alt="" border="0" src="http://feeds.wordpress.com/1.0/digg/manigulabi.wordpress.com/754/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/754/"><img alt="" border="0" src="http://feeds.wordpress.com/1.0/reddit/manigulabi.wordpress.com/754/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=754&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/01/28/%e0%b2%ac%e0%b2%82%e0%b2%a6%e0%b3%87-%e0%b2%87%e0%b2%b2%e0%b3%8d%e0%b2%b2%e0%b2%bf%e0%b2%97%e0%b3%86-%e0%b2%a8%e0%b2%be-%e0%b2%b8%e0%b2%82%e0%b2%9c%e0%b3%86-%e0%b2%ae%e0%b2%b2%e0%b3%8d%e0%b2%b2/feed/</wfw:commentRss>
		<slash:comments>3</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/01/antha.gif?w=208" medium="image">
			<media:title type="html">antha</media:title>
		</media:content>
	</item>
		<item>
		<title>ಮೊದಲ ಸಾಲು ಹಾಡಿದವರಿಗೆ, ಎರಡನೇ ಸಾಲು ಬರೆದವರಿಗೆ!</title>
		<link>http://manigulabi.wordpress.com/2011/01/25/%e0%b2%ae%e0%b3%8a%e0%b2%a6%e0%b2%b2-%e0%b2%b8%e0%b2%be%e0%b2%b2%e0%b3%81-%e0%b2%b9%e0%b2%be%e0%b2%a1%e0%b2%bf%e0%b2%a6%e0%b2%b5%e0%b2%b0%e0%b2%bf%e0%b2%97%e0%b3%86-%e0%b2%8e%e0%b2%b0%e0%b2%a1/</link>
		<comments>http://manigulabi.wordpress.com/2011/01/25/%e0%b2%ae%e0%b3%8a%e0%b2%a6%e0%b2%b2-%e0%b2%b8%e0%b2%be%e0%b2%b2%e0%b3%81-%e0%b2%b9%e0%b2%be%e0%b2%a1%e0%b2%bf%e0%b2%a6%e0%b2%b5%e0%b2%b0%e0%b2%bf%e0%b2%97%e0%b3%86-%e0%b2%8e%e0%b2%b0%e0%b2%a1/#comments</comments>
		<pubDate>Tue, 25 Jan 2011 13:12:36 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=736</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್ ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ. ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ &#124;&#124;ಪ&#124;&#124; ಸಂಗೀತ ಕಲೆ ಮೆಚ್ಚಿ ವೀಣೆಯ ಹಿಡಿದೊಡೆ ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ ವೀರ ಖಡ್ಗವ ಝಳಪಿಸುವ ವೀರ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=736&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/01/shivashankar.jpg"><img class="alignleft size-medium wp-image-748" title="shivashankar" src="http://manigulabi.files.wordpress.com/2011/01/shivashankar.jpg?w=236&#038;h=300" alt="" width="236" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ</p>
<p>ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್<br />
ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.</p>
<p>ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ<br />
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ<br />
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ<br />
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ  ||ಪ||</p>
<p>ಸಂಗೀತ ಕಲೆ ಮೆಚ್ಚಿ ವೀಣೆಯ ಹಿಡಿದೊಡೆ<br />
ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ<br />
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ<br />
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ  ||೧||</p>
<p>ಶರಣರಿಗೆ ವಂದಿಪ ಶರಣೆ ನಾನಾದೊಡೆ<br />
ವಚನವೆ ಬದುಕಿನ ಮಂತ್ರವೆನುವೆ<br />
ವೀರಗೆ ವಂದಿಪ ಶೂರ ನಾನಾದೊಡೆ<br />
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ  ||೨||</p>
<p>ದಾಸರಿಗೆ ವಂದಿಪ ಅಭಿಮಾನಿಯಾದೊಡೆ<br />
ಕನ್ನಡ ಸಾಹಿತ್ಯ ನನ್ನಾಸೆ ಎನುವೆ<br />
ಪುಣ್ಯನದಿಯಲಿ ಮೀಯುವೆನಾದೊಡೆ<br />
ಕಾವೇರಿ ತುಂಗೆಯ ಮಡಿಲಲ್ಲಿ ನಲಿವೆ  ||೩||</p>
<p>ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ<br />
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.</p>
<p>ವಿಚಿತ್ರ, ಆದರೂ ಸತ್ಯ ಎಂದು ಹೇಳಬಹುದಾದ ಮೂರು ಸಂಗತಿ ಗಳಿವೆ. ಮೊದಲನೆಯದು- ಒಂದು ಹಾಡನ್ನು ಸಭೆ-ಸಮಾ ರಂಭಗಳಲ್ಲಿ  ಎದೆತುಂಬಿ ಹಾಡಿದ ಗಾಯಕನೊಬ್ಬ, ಆ ಗಾಯ ನಕ್ಕೆ ಭಕ್ಷೀಸಿನ ರೂಪದಲ್ಲಿ  ಬಂದ ಹಣದಿಂದಲೇ ಒಂದು ಮನೆ ಕಟ್ಟಿಕೊಂಡ! ಎರಡನೆಯದು-ಆ ಹಾಡು ಬರೆದ ಚಿತ್ರ ಸಾಹಿತಿ ಮಾತ್ರ ಬಡವನಾಗಿಯೇ ಉಳಿದ! ಮೂರನೆಯದು-ಕನ್ನಡದ ಸೂಪರ್‌ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಾಡನ್ನು ಒಳಗೊಂಡಿರುವ ಸಿನಿಮಾ ಇನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ!<br />
ಅಮ್ಮನ ಜೋಗುಳದಂತೆ, ಗೆಳತಿಯ ಕಾಲ್ಗೆಜ್ಜೆ ದನಿಯಂತೆ, ಕಂದನ ನಗೆಯಂತೆ ಮತ್ತು ಅಪ್ಪ ಹೇಳಿದ ಕಥೆಯಂತೆ ಈ ವಾರ ನಿಮ್ಮೆದುರು ತೆರೆ ದುಕೊಳ್ಳಲಿರುವುದು-‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂಬ ಹಾಡಿನ ಚರಿತೆ. ಈ  ಅಪರೂಪದ, ಅನುಪಮ ಗೀತೆ  ಬರೆದವರು ಸಿ.ವಿ. ಶಿವಶಂಕರ್.<br />
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ; ಕನ್ನಡದ ಶ್ರೇಷ್ಠ ಕವಿಗಳಲ್ಲಿ  ಒಬ್ಬರಾದ ಲಕ್ಷ್ಮಣರಾವ್ ಹೊಯಿಸಳ ಅವರ ಅಳಿಯ ಸಿ.ವಿ. ಶಿವಶಂಕರ್. ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಗರಡಿಯಲ್ಲಿ  ಪಳಗಿದ ಶಿವಶಂಕರ್, ನಟ, ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ, ಗೀತೆ ರಚನೆಕಾರ&#8230; ಹೀಗೆ ಎಲ್ಲ  ಕ್ಷೇತ್ರದಲ್ಲೂ  ಕೈಯಾಡಿಸಿ ಗೆದ್ದವರು. ಕನ್ನಡ ನಾಡು-ನುಡಿಯ ವೈಭವ ಸಾರುವ ಹಾಡುಗಳನ್ನು ಹೆಚ್ಚಾಗಿ ಬರೆದದ್ದು ಶಿವಶಂಕರ್ ಅವರ ಹೆಗ್ಗಳಿಕೆ. ‘ಸಿರಿವಂತನಾದರೂ ಕನ್ನಡ ನಾಡಲ್ಲಿ  ಮೆರೆವೆ’ ಗೀತೆಯನ್ನು ಬರೆದ ಸಂದರ್ಭ ಯಾವುದು? ಆ ಹಾಡು ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಶಿವಶಂಕರ್ ಉತ್ತರಿಸಿದ್ದು  ಹೀಗೆ:<br />
‘ಇದು ೭೦ರ ದಶಕದ ಮಾತು. ನಾನಾಗ ‘ಕೂಡಲ ಸಂಗಮ’ ಹೆಸರಿನ ಸಿನಿಮಾ ನಿರ್ಮಾಣ-ನಿರ್ದೇಶನದ ಕನಸು ಕಂಡಿದ್ದೆ. ಕೂಡಲ ಸಂಗಮ ಕ್ಷೇತ್ರ ಸುತ್ತಮುತ್ತ ಶೂಟಿಂಗ್ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೂ ಮೊದಲು ಲೋಕೇಶನ್ ನೋಡಿಕೊಂಡು ಬರೋಣವೆಂದು ಅಂಬಾಸಿಡರ್ ಕಾರಿನಲ್ಲಿ ಐದಾರು ಮಂದಿ ಚಿತ್ರ ತಂಡದೊಂದಿಗೆ ಹೊರಟೆ. ಮಾರ್ಗ ಮಧ್ಯೆ ಕಾರಿನ ಟೈರ್ ಪಂಕ್ಚರ್ ಆಯಿತು. ಡ್ರೈವರ್ ಬಳಿ ಸ್ಟೆಫ್ನಿ ಇರಲಿಲ್ಲ. ಸಮೀಪದ ಹಳ್ಳಿಯಲ್ಲಿದ್ದ ಸೈಕಲ್ ಶಾಪ್‌ನಲ್ಲಿ  ಪಂಕ್ಚರ್ ಹಾಕಿಸಿಕೊಂಡು ಪಯಣ ಮುಂದುವರಿಸಿ ದೆವು. ಕೂಡಲ ಸಂಗಮ ಕ್ಷೇತ್ರ ಅರ್ಧ ಕಿಲೋಮೀಟರ್ ದೂರವಿದೆ ಎನ್ನುವಾಗ ಮತ್ತೆ ಟೈರ್ ಪಂಕ್ಚರ್ ಆಯ್ತು. ಆದದ್ದಾಗಲಿ ಎಂದುಕೊಂಡು ನಡಿಗೆಯಲ್ಲೇ ದೇವಾಲಯ ತಲುಪಿದೆವು.<br />
ದೇವರ ದರ್ಶನದ ನಂತರ ಒಂದು ಸ್ಥಳದಲ್ಲಿ  ಒಬ್ಬನೇ ಕೂತೆ. ಆಗಲೇ, ಕೂಡಲ ಸಂಗಮ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಬಸವಣ್ಣನವರ ಬದುಕು, ಅವರ ಸರಳತೆ, ಒಂದು ಪಿಡುಗಾಗಿ ಕಾಡುತ್ತಿದ್ದ ಜಾತೀಯತೆ, ಅಸಮಾನತೆಯನ್ನು ತೊಡೆದುಹಾಕಲು ಅವರು ನಡೆಸಿದ ಹೋರಾಟ&#8230; ಇದೆಲ್ಲವೂ ಕಣ್ಮುಂದೆ ಬಂತು. ಅದೇ ಸಂದರ್ಭದಲ್ಲಿ ಕನ್ನಡ ನಾಡಿನ ಇತಿಹಾಸ, ವೈಭವವೆಲ್ಲ ಬಿಟ್ಟೂ  ಬಿಡದೆ ನೆನಪಾಗತೊಡ ಗಿತು. ಆಗ ನನ್ನೊಳಗೆ ನಾನೇ ಅಂದುಕೊಂಡೆ: ‘ನಮ್ಮ ಕನ್ನಡ ನಾಡು ಯಾರೂ, ಎಂದೂ ಮರೆಯಲಾಗದಂಥ ಪುಣ್ಯಭೂಮಿ. ಮರುಜನ್ಮವೆಂಬುದಿದ್ದರೆ ಆಗಲೂ  ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕು&#8230;’<br />
ಇಂಥದೊಂದು ಯೋಚನೆ ಬಂತಲ್ಲ? ಅದೇ ಕ್ಷಣಕ್ಕೆ ಇದ್ದಕ್ಕಿದ್ದಂತೆ ನನ್ನೊಳಗೆ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು: ‘ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ&#8230;’ ಹಾಡಿನ ಪಲ್ಲವಿಯ ಜತೆ ಜತೆಗೇ ಒಂದು ಚರಣಕ್ಕೆ ಆಗುವಷ್ಟು ಸಾಲು ಗಳೂ ಹೊಳೆದವು. ಹೀಗೆ ಹಾಡು -ಚರಣ ಬರೆದ ಹಾಳೆಯನ್ನು ಅರ್ಚಕರಿಗೆ ಕೊಟ್ಟು, ಇದನ್ನು ಸಂಗಮನಾಥನ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಕೊಡಿ ಎಂದು ಬೇಡಿಕೊಂಡೆ. ಅವರು ಹಾಗೇ ಮಾಡಿ ದರು. ಸಿನಿಮಾದ ಹೆಸರನ್ನು ‘ಸಂಗಮ’ ಎಂದು ಬದಲಿಸಿಕೊಂಡೆ.<br />
ಹೊಸ ಸಿನಿಮಾ ಹೇಗಿರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ. ಆಗಲೇ ಚಿಕ್ಕಬಳ್ಳಾಪುರ ಮೂಲದ ಸುಖದೇವ್ ಎಂಬ ಯುವಕನ ಪರಿಚಯವಾಯಿತು. ಆತನಿಗೆ ಸಂಗೀತ ಸಂಯೋಜನೆ ಗೊತ್ತಿತ್ತು. ಚಿತ್ರರಂಗ ಸೇರ ಬೇಕೆಂಬ ಆಸೆಯೂ ಜತೆಗಿತ್ತು. ಆತನನ್ನು ಸಂಗಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಧರಿಸಿದೆ. ಬೆಂಗಳೂ ರಿಗೆ ಬಾರಯ್ಯಾ ಅಂದೆ. ಆತ ತಕ್ಷಣವೇ ಬಂದ. ನನ್ನ ಸಿನಿಮಾ, ಅದರ ಉದ್ದೇಶ ಹಾಗೂ ಹಾಡಿನ ಬಗ್ಗೆ ವಿವರಿಸಿದೆ. ಈ ಹಿಂದೆ ಸಿದ್ಧವಾಗಿತ್ತಲ್ಲ, ಅಷ್ಟನ್ನೇ ಅವನ ಮುಂದಿಟ್ಟು, ‘ಈ ಹಾಡಿಗೆ ರಾಗ ಸಂಯೋಜನೆ ಮಾಡಪ್ಪಾ’ ಎಂದೆ. ಸುಖದೇವ್ ತುಂಬ ಶ್ರದ್ಧೆಯಿಂದ ರಾಗ ಸಂಯೋಜಿಸಿದ. ಆತನ ರಾಗ ಸಂಯೋಜನೆ ಕೇಳುತ್ತಿದ್ದಂತೆ, ಈತನಿಗೆ ಸಂಗೀತ ಶಾರದೆ ಒಲಿದಿದ್ದಾಳೆ ಎನ್ನಿಸಿತು. ಆ ಸಂತೋಷದಲ್ಲಿ ಶೃಂಗೇರಿ ಶಾರದೆಯ ಸ್ತುತಿಯಂತಿರುವ ಒಂದು ಚರಣ ಹೊಳೆಯಿತು. ಅದನ್ನು ಮೊದಲ ಚರಣವೆಂದು ಸೇರಿಸಿಕೊಂಡೆ.<br />
ಈ ಗೀತೆಯನ್ನು ನಾಯಕ-ನಾಯಕಿ ಹಾಡುವುದೆಂದು ನಿರ್ಧರಿಸ ಲಾಗಿತ್ತು. ನಾಯಕನ ಪಾಲಿನದನ್ನು ಹಾಡಲು ಪಿ.ಬಿ. ಶ್ರೀನಿವಾಸ್ ಇದ್ದರು. ನಾಯಕಿಯ ಪಾಲಿನದನ್ನು ಯಾರಿಂದ  ಹಾಡಿಸುವುದು ಎಂದುಕೊಂಡಾಗ ಹೊಳೆದದ್ದು ಉದಯೋನ್ಮುಖ ಗಾಯಕಿ ಸಿ.ಕೆ. ರಮಾ ಅವರ ಹೆಸರು. ಆಕೆಗಿದು ಮೊಟ್ಟ ಮೊದಲ ಸಿನಿಮಾ. ಕೇಳಿದವ ರೆಲ್ಲ ‘ವಾಹ್ ವಾಹ್’ ಎನ್ನಬೇಕು-ಹಾಗೆ ಹಾಡಿಬಿಟ್ಟಳು ರಮಾ. ಧ್ವನಿ ಮುದ್ರಣದ ನಂತರ ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ; ಅಷ್ಟೊಂದು ಜನಪ್ರಿಯವಾಯಿತು ಹಾಡು. ರಾಜ್ಯೋತ್ಸವ ಕಾರ್ಯ ಕ್ರಮಗಳಲ್ಲಿ, ಮೆಚ್ಚಿನ ಚಿತ್ರಗೀತೆಗಳ ಸಂದರ್ಭದಲ್ಲಿ  ಈ ಗೀತೆ ಮೊಳಗು ವುದು ಕಡ್ಡಾಯವೇ ಆಗಿಹೋಯಿತು. ಹೀಗಿದ್ದಾಗಲೇ, ಈ ಗೀತೆಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದ ಕೊಲಂಬಿಯಾ ಕಂಪನಿಯವರು ಗ್ರಾಮಫೋನ್ ರೆಕಾರ್ಡ್‌ಗಳಲ್ಲಿ ಈ ಹಾಡನ್ನು ಹೊರ ತಂದರು. ಆದರೆ ನನಗೆ ನಯಾಪೈಸೆಯ ಸಂಭಾವನೆ ಕೊಡಲಿಲ್ಲ.<br />
ವಿಪರ್‍ಯಾಸಗಳು ಹೇಗಿರುತ್ತವೋ ನೋಡಿ: ‘ಸಿರಿವಂತನಾದರೂ&#8230;’ ಹಾಡು ಕನ್ನಡಿಗರ ಮನೆ-ಮನವನ್ನು ಆವರಿಸಿಕೊಂಡಿತು. ರೇಡಿಯೋ ಸಿಲೋನ್‌ನಲ್ಲಿ  ವಾರಕ್ಕೊಮ್ಮೆಯಂತೆ  ವರ್ಷಗಳ ಕಾಲ ತಪ್ಪದೇ ಪ್ರಸಾರ ವಾಯಿತು. ಆದರೆ, ಅನಿವಾರ್ಯ ಕಾರಣಗಳಿಂದ ‘ಸಂಗಮ’ ಸಿನಿ ಮಾದ ಕೆಲಸ ಆರಂಭವಾಗಲೇ ಇಲ್ಲ. ಮುಂದೆ ನಾನು ಇಳಕಲ್‌ನ ಮಹಾಂತ ಶಿವಯೋಗಿಗಳ ಮಹಿಮೆ ಸಾರುವ ‘ಮಹಾತಪಸ್ವಿ’ ಹೆಸ ರಿನ ಸಿನಿಮಾ ತಯಾರಿಗೆ ನಿಂತೆ  ನಿಜ. ಆದರೆ ಆ ಚಿತ್ರದಲ್ಲಿ ‘ಸಂಗಮ’ದ ಹಾಡಿಗೆ ‘ಸೂಕ್ತ ಸ್ಥಳ’ ಇರಲಿಲ್ಲ.  ಈ ಬೇಸರದ ಮಧ್ಯೆ ನಾನಿದ್ದಾಗಲೇ, ಈ ಹಾಡನ್ನು ಆಕಾಶವಾಣಿ ಹಾಗೂ ವೇದಿಕೆಗಳಲ್ಲಿ ಹಾಡಿ ಜನರಿಂದ ಕಾಣಿಕೆ ಪಡೆದು, ಆ ಹಣದಿಂದಲೇ ಗುಲಬರ್ಗಾದ ಗಾಯಕನೊಬ್ಬ ಮನೆ ಕಟ್ಟಿಸಿಕೊಂಡ ಎಂಬ ಸುದ್ದಿ ಬಂತು. ಕೆಲದಿನಗಳ ನಂತರ ಆ ಗಾಯಕನೇ ನನ್ನನ್ನು ಹುಡುಕಿಕೊಂಡು ಬಂದ. ಒತ್ತಾಯದಿಂದ ತನ್ನ ಮನೆಗೆ ಕರೆದೊಯ್ದ. ತನ್ನ ಮನೆಗೆ ಆತ ‘ಸಿರಿವಂತ’ ಎಂದೇ ಹೆಸರಿಟ್ಟಿದ್ದ. ಮನೆಯ ಹೆಸರಿನ ಫಲಕದ ಮೇಲೆ ಕೈಯಾಡಿಸುತ್ತಾ- ‘ಸ್ವಾಮಿ, ನಿಮ್ಮ ಹಾಡಿಂದ ನಾನು ಬದುಕು ಕಟ್ಟಿಕೊಂಡೆ’ ಎಂದು ಕೈಮುಗಿದ. ನಾನು ತಕ್ಷಣವೇ ಹೇಳಿದೆ: ‘ಈ ಹಾಡಿನ ಮೊದಲ ಸಾಲು-ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’-ಅದು ನಿನ್ನದು. ಎರಡನೇ ಸಾಲು- ‘ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂದಿದೆ; ಅದು ನನ್ನದು!’<br />
ಮುಂದೆ ಹಣಕಾಸಿನ ತೊಂದರೆಯ ಕಾರಣದಿಂದ ‘ಸಂಗಮ’ ಸಿನಿಮಾ ಶುರುವಾಗಲೇ ಇಲ್ಲ. ಆದರೆ  ಹಾಡು ದಿನದಿನಕ್ಕೂ ಜನಪ್ರಿಯ ವಾಗುತ್ತಲೇ ಹೋಯಿತು. ಈ ಸಂದರ್ಭದಲ್ಲೇ ರೀಮಿಕ್ಸ್  ಕೆಲಸ ಶುರುವಾಯಿತಲ್ಲ? ಆಗ ಕೆಲ ಗಾಯಕರು-ಕ್ಯಾಸೆಟ್ ಕಂಪನಿಗಳು ಸೇರಿ ಕೊಂಡು ನನ್ನ ಹಾಡನ್ನು ಮತ್ತೆ  ಧ್ವನಿಮುದ್ರಿಸಿಕೊಂಡು &#8211; ದುಡ್ಡು ಮಾಡಿಕೊಂಡರು. ಆದರೆ, ಯಾರೊಬ್ಬರೂ ಹಾಡಿನ ಪುನರ್ ಬಳಕೆಯ ಬಗ್ಗೆ ನನ್ನ ಅನುಮತಿ ಕೇಳಲಿಲ್ಲ. ಸಂಭಾವನೆ ಯನ್ನೂ ಕೊಡಲಿಲ್ಲ. ಹಾಡು ಅಮರವಾಯಿತು. ಹಾಡಿದವರು ಶ್ರೀಮಂತರಾದರು. ಆದರೆ ಹಾಡು ಬರೆದ ನಾನು ಬಡವನಾಗಿಯೇ ಉಳಿದುಹೋದೆ’. ಒಂದು ತೆರನಾದ ಸಂಕಟದಿಂದಲೇ ಮಾತು ನಿಲ್ಲಿಸಿದರು ಶಿವಶಂಕರ್.<br />
***<br />
ಒಂದು ಸ್ವಾರಸ್ಯ ಕೇಳಿ: ಈ ಎಲ್ಲ ನೋವು, ನಿರಾಸೆ, ಸಂಕಟಗಳಿಂದ ಶಿವಶಂಕರ್‌ನೊಂದಿದ್ದಾರೆ ನಿಜ. ಆದರೆ ಹತಾಶರಾಗಿಲ್ಲ. ‘ಸಿರಿವಂತನಾ ದರೂ&#8230;’ ಹಾಡನ್ನು ಹೇಗಾದರೂ ಮಾಡಿ ಕನ್ನಡಿಗರಿಗೆ ತೋರಿಸಬೇಕು ಎಂಬುದು  ಅವರ ಮಹದಾಸೆ. ಅದಕ್ಕೆಂದೇ ಅವರು ‘ಕನ್ನಡ ಕುವರ’ ಹೆಸರಿನ ಸಿನಿಮಾ ತಯಾರಿಸಿದ್ದಾರೆ. ಅದರಲ್ಲಿ  ಪಿ.ಬಿ.ಎಸ್.-ರಮಾ ದನಿಯಿರುವ ‘ಸಿರಿವಂತನಾದರೂ&#8230;’ ಗೀತೆಯನ್ನು ಬಳಸಿಕೊಂಡಿದ್ದಾರೆ. ಕನ್ನಡ ಭಾಷಾಭಿಮಾನದ ಕಥೆ ಹೊಂದಿರುವ ಈ ಚಿತ್ರ ಆರ್ಥಿಕ ಸಮಸ್ಯೆಯಿಂದ ‘ಡಬ್ಬಾ’ದಲ್ಲಿಯೇ ಉಳಿದುಹೋಗಿದೆ. ಕರ್ನಾಟಕ ಸರಕಾರದ ‘ಅನುಗ್ರಹ’ ಸಿಗದಿದ್ದರೆ ಈ ಸಿನಿಮಾ ತೆರೆಕಾಣಲು ಸಾಧ್ಯವೇ ಇಲ್ಲ. ನಾಡಿನ ಮಹಿಮೆ ಸಾರುವ ಈ ಅಪರೂಪದ ಗೀತೆಯನ್ನು ‘ಕಾಣುವ’ ನೆಪದಿಂದಾದರೂ ಈ ಸಿನಿಮಾಕ್ಕೆ ಆರ್ಥಿಕ ನೆರವು ನೀಡ ಬಾರದೆ? ವೇದಿಕೆಯ ಮೇಲೆ ಕನ್ನಡದ ಉದ್ಧಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವುದಾಗಿ ಹೇಳುವ ನಮ್ಮ ಮಂತ್ರಿಗಳು, ಅಕಾರಿಗಳಿಗೆ ಈ ಹಾಡು ಮತ್ತು ಅದರ ಹಿಂದಿನ ಕತೆ ಈಗಲಾದರೂ ಕೇಳಿಸಲಿ. ಹಾಡು ಬರೆದಾತನ ಎದೆಯಾಳದ ಸಂಕಟ ಅರ್ಥವಾಗಲಿ.<br />
ಹೌದಲ್ಲವಾ? ‘ಸಿರಿವಂತನಾದರೂ&#8230;.’ ಹಾಡು ಕೇಳಿದಾಗೆಲ್ಲ ಖುಷಿ ಯಾಗುತ್ತದೆ. ಕಣ್ತುಂಬಿ ಬರುತ್ತದೆ. ಈ ಹಾಡು ಬರೆದಾತನನ್ನು ಒಮ್ಮೆ ಮಾತಾಡಿಸಬೇಕು, ಅಭಿನಂದಿಸಬೇಕು ಎಂಬ ಆಸೆಯಾಗುತ್ತದೆ. ಅಂಥ ದೊಂದು ಭಾವ ನಿಮ್ಮ ಕೈ ಹಿಡಿದರೆ ೯೯೦೧೮ ೦೪೦೦೬ಕ್ಕೆ ಪೋನ್ ಮಾಡಿ. ಈ ನಂಬರಿನಲ್ಲಿ ಶಿವಶಂಕರ್ ಸಿಗುತ್ತಾರೆ. ಒಂದು ಮೆಚ್ಚು ಮಾತು ಕೇಳಿದರೆ ಆ ಹಿರಿಯ ಜೀವಕ್ಕೆ ಖುಷಿಯಾಗುತ್ತದೆ. ಮಾತಾಡಿದ ನಂತರ ಆ ಖುಷಿ ನಿಮ್ಮದೂ ಆಗುತ್ತದೆ!</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/736/"><img alt="" border="0" src="http://feeds.wordpress.com/1.0/comments/manigulabi.wordpress.com/736/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/736/"><img alt="" border="0" src="http://feeds.wordpress.com/1.0/delicious/manigulabi.wordpress.com/736/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/736/"><img alt="" border="0" src="http://feeds.wordpress.com/1.0/facebook/manigulabi.wordpress.com/736/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/736/"><img alt="" border="0" src="http://feeds.wordpress.com/1.0/twitter/manigulabi.wordpress.com/736/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/736/"><img alt="" border="0" src="http://feeds.wordpress.com/1.0/stumble/manigulabi.wordpress.com/736/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/736/"><img alt="" border="0" src="http://feeds.wordpress.com/1.0/digg/manigulabi.wordpress.com/736/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/736/"><img alt="" border="0" src="http://feeds.wordpress.com/1.0/reddit/manigulabi.wordpress.com/736/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=736&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/01/25/%e0%b2%ae%e0%b3%8a%e0%b2%a6%e0%b2%b2-%e0%b2%b8%e0%b2%be%e0%b2%b2%e0%b3%81-%e0%b2%b9%e0%b2%be%e0%b2%a1%e0%b2%bf%e0%b2%a6%e0%b2%b5%e0%b2%b0%e0%b2%bf%e0%b2%97%e0%b3%86-%e0%b2%8e%e0%b2%b0%e0%b2%a1/feed/</wfw:commentRss>
		<slash:comments>0</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/01/shivashankar.jpg?w=236" medium="image">
			<media:title type="html">shivashankar</media:title>
		</media:content>
	</item>
		<item>
		<title>ಈ ಹಾಡಲ್ಲಿ ಎಷ್ಟೋ ಮನೆಯ ತಾಯ್ತಂದೆಯರ ಸಂಕಟದ ಮಾತುಗಳಿವೆ&#8230;</title>
		<link>http://manigulabi.wordpress.com/2011/01/13/%e0%b2%88-%e0%b2%b9%e0%b2%be%e0%b2%a1%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b7%e0%b3%8d%e0%b2%9f%e0%b3%8b-%e0%b2%ae%e0%b2%a8%e0%b3%86%e0%b2%af-%e0%b2%a4%e0%b2%be%e0%b2%af%e0%b3%8d/</link>
		<comments>http://manigulabi.wordpress.com/2011/01/13/%e0%b2%88-%e0%b2%b9%e0%b2%be%e0%b2%a1%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b7%e0%b3%8d%e0%b2%9f%e0%b3%8b-%e0%b2%ae%e0%b2%a8%e0%b3%86%e0%b2%af-%e0%b2%a4%e0%b2%be%e0%b2%af%e0%b3%8d/#comments</comments>
		<pubDate>Thu, 13 Jan 2011 15:21:56 +0000</pubDate>
		<dc:creator>ಮಣಿಕಾಂತ್</dc:creator>
				<category><![CDATA[ಹಾಡು ಹುಟ್ಟಿದ ಸಮಯ]]></category>

		<guid isPermaLink="false">http://manigulabi.wordpress.com/?p=731</guid>
		<description><![CDATA[&#160; &#160; &#160; &#160; &#160; &#160; &#160; &#160; &#160; &#160; ಕೇಳು ಸಂಸಾರದಲ್ಲಿ ರಾಜಕೀಯ ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ. ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೆ ಪರಕೀಯ ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ ಬರಿ ಹುಳುಕು ತುಂಬಿಹುದು ಕೇಳೊ ದೊರೆ &#124;&#124;ಪಲ್ಲವಿ&#124;&#124; ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ [...]<img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=731&amp;subd=manigulabi&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://manigulabi.files.wordpress.com/2011/01/new-image-1.jpg"><img class="alignleft size-medium wp-image-737" title="New Image-1" src="http://manigulabi.files.wordpress.com/2011/01/new-image-1.jpg?w=203&#038;h=300" alt="" width="203" height="300" /></a></p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>ಕೇಳು ಸಂಸಾರದಲ್ಲಿ ರಾಜಕೀಯ</p>
<p>ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.<br />
ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ</p>
<p>ಕೇಳು ಸಂಸಾರದಲ್ಲಿ ರಾಜಕೀಯ<br />
ತಾನು ತನ್ನ ಮನೆಯಲ್ಲೆ ಪರಕೀಯ<br />
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ<br />
ಬರಿ ಹುಳುಕು ತುಂಬಿಹುದು ಕೇಳೊ ದೊರೆ   ||ಪಲ್ಲವಿ||</p>
<p>ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ<br />
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;<br />
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು<br />
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||</p>
<p>ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ<br />
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;<br />
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ<br />
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ<br />
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು<br />
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||</p>
<p>ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ<br />
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;<br />
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ<br />
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ  ||೩||</p>
<p>ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು<br />
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?<br />
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ<br />
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!<br />
ಅಂದು ಮುತ್ತಿನ ಮಾತುಗಳ ಹೇಳಿದರು<br />
ಇಂದು ಮಾತಿನ ಈಟಿಯಿಂದ ಮೀಟಿದರು||೪||</p>
<p>ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ&#8230;’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!<br />
ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್‌ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ  ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.<br />
ಎಲ್ಲವೂ ರೆಡಿಯಾಗೇ ಇತ್ತು. ಆದರೆ, ನಾಟಕವನ್ನು ಸಿನಿಮಾ ಮಾಡಲು ಕಾಮತ್ ಅವರಿಂದ ಒಪ್ಪಿಗೆ ಪತ್ರ  ಪಡೆಯಬೇಕಿತ್ತು. ನನಗೆ ಗೊತ್ತಿದ್ದಂತೆ ಕಾಮತ್‌ರು ಬಾಂಬೆಯಲ್ಲಿದ್ರು. ಆದರೆ ನನ್ನಲ್ಲಿ ಅವರ ವಿಳಾಸವಾಗಲಿ, ಫೋನ್ ನಂಬರ್ ಆಗಲಿ ಇರಲಿಲ್ಲ. ಮಂಗಳೂರಿನಲ್ಲಿ ಕಾಮತ್‌ರ ಮಗಳು ಇರುವುದು ಗೊತ್ತಿತ್ತು. ಆಕೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ನಿಮ್ಮ ತಂದೆಯವರಿಂದ ನಾಟಕದ ರೈಟ್ಸ್  ತಗೋಬೇಕು ಅಂತಾನೇ ಬಾಂಬೆಗೆ ಹೋಗಲು ಸಿದ್ಧನಾಗಿದ್ದೀನಿ. ಅಡ್ರೆಸ್ ಕೊಡ್ತೀರಾ ಮೇಡಂ?’ ಎಂದೆ.<br />
‘ ಕ್ಷಮಿಸಿ ಸಾರ್. ನಮ್ಮ ತಂದೆ ಈಗ ಬಾಂಬೆಯಲ್ಲಿಲ್ಲ. ಅಂಕೋಲಾ ದಲ್ಲಿ ಇದ್ದಾರೆ. ಅಪ್ಪನ ಜತೆಗೆ ಅಮ್ಮನೂ ಅಂಕೋಲಾದಲ್ಲಿ ಇದ್ದಾರೆ. ಆದರೆ ಅಂಕೋಲೆಯಲ್ಲಿ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅಂಕೋಲಾ ಚಿಕ್ಕ ಊರು. ಹಾಗಾಗಿ ಅವರನ್ನು ಹುಡುಕೋದು ಕಷ್ಟ ಆಗಲಾರದು’ ಎಂದು ಕಾಮತ್‌ರ ಮಗಳು ಹೇಳಿದ್ರು.<br />
ನಾನು ಕಾಮತ್‌ರನ್ನು ಪ್ರತ್ಯಕ್ಷ ನೋಡಿರಲಿಲ್ಲ. ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ವೆಂಕಟಪ್ಪ ಅವರಿಗೆ ಕಾಮತ್‌ರ ಪರಿಚಯವಿತ್ತು. ಅವರೊಂದಿಗೆ ಸಲುಗೆಯೂ ಇತ್ತು. ನಾನೂ ಬರ್‍ತೀನಿ ನಡೀರಿ ಮೂರ್ತಿಗಳೇ ಅಂದ್ರು ವೆಂಕಟಪ್ಪ. ಅವರನ್ನೂ ಕರೆದುಕೊಂಡೇ ನಾನು ಅಂಕೋಲಾ ಬಸ್ ಹತ್ತಿದೆ.<br />
ಅಂಕೋಲದಲ್ಲಿ ನನಗಾಗಲಿ, ಶಂಕರಪ್ಪ ಅವರಿಗಾಗಲಿ ಅತ್ಯಾಪ್ತ ರೆಂದು ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆದರೂ ನಾನು ಭಂಡ ಧೈರ್ಯದಿಂದ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಂದು ತಮಾಷೆ ನಡೆಯಿತು. ಬಸ್‌ನಲ್ಲಿ ಅಂಕೋಲದವರೇ ಆಗಿದ್ದ ಮೋಹನ್ ಬಾಸ್ಕೋಡ್ ಎಂಬಾತ ತಾವಾಗಿಯೇ ಬಂದು ಪರಿಚಯ ಹೇಳಿಕೊಂಡ್ರು. ಅವರ ಸೋದರ ಮಾವ, ಥೇಟ್ ನನ್ನ ಥರಾನೇ ಇದ್ದರಂತೆ. ಆ ಸೆಂಟಿಮೆಂಟ್‌ನ ಮೇಲೆ-‘ನೀವು ನಮ್ಮ ಮನೆಗೆ ಬರಬೇಕು. ನಮ್ಮಲ್ಲೇ ಉಳಿಯಬೇಕು’ ಎಂದು ಒತ್ತಾಯಿಸಿದರು ಮೋಹನ್. ಅಪರಿಚಿತ ಜಾಗ ದಲ್ಲಿ ಪರಿಚಿತರೊಬ್ಬರು ಸಿಕ್ಕಿದ್ರಲ್ಲ ಎನಿಸಿ ನಾವೂ ಒಪ್ಪಿದೆವು. ನಾವು ಬಂದಿರುವ ಉದ್ದೇಶವನ್ನೂ ವಿವರಿಸಿದೆವು. ಆಗ ಮೋಹನ್ ಬಾಸ್ಕೋಡ್ ಹೇಳಿದ್ರು: ‘ನಂದು ಜೀಪ್ ಇದೆ. ನಾಳೆ ಇಡೀ ದಿನ ಅವರನ್ನು ಹುಡುಕೋಣ’.<br />
ಮರುದಿನ ಬೆಳಗ್ಗೆಯೇ ಕಾಮತ್‌ರ ವಿವರಗ ಳನ್ನು ಶಂಕರಪ್ಪ ಅವರು ಮೋಹನ್‌ರಿಗೆ ಹೇಳಿ ದರು. ಮೋಹನ್ ಅದನ್ನು ತಮ್ಮ ಪರಿಚಿತರೆಲ್ಲ ರಿಗೂ ತಿಳಿಸಿದರು. ಇಂಥ ಮುಖ ಚಹರೆಯ ವ್ಯಕ್ತಿಯನ್ನು ನೀವು ಕಂಡಿರಾ ಎಂದು ಸಿಕ್ಕವರನ್ನೆಲ್ಲ ಕೇಳುತ್ತಲೇ ಹೋದೆವು. ಕಡೆಗೆ ಒಬ್ಬರು ಹೇಳಿದರು. ಇಲ್ಲಿಂದ ೧೫ ಕಿ.ಮೀ ದೂರದಲ್ಲಿ ಒಂದು ದೇವಸ್ಥಾನ ಇದೆ. ಅಲ್ಲಿ ನೀವು ಹೇಳಿದಂಥ ಒಬ್ರು ಇದ್ದಾರೆ&#8230;’<br />
ಬಾಸ್ಕೋಡ್ ಅವರ ಜೀಪಿನಲ್ಲಿ ನಾವೆಲ್ಲಾ ಆ ದೇವಸ್ಥಾನದ ಬಳಿಗೆ ಹೋದಾಗ ಬೆಳಗಿನ ೧೧ ಗಂಟೆ. ಬಿಸಿಲು ಚುರುಗುಡುತ್ತಿತ್ತು. ಆ ಪ್ರದೇಶದಲ್ಲಿ ಒಂದು ದೇವಾಲಯವಿತ್ತು. ಎದುರಿಗೇ ಒಂದು ಹಳೆಯ ಬಾವಿ. ಅಲ್ಲಿಂದ ಕೂಗಳತೆ ದೂರದಲ್ಲಿ ಒಂದು ಗುಡಿಸಲಿತ್ತು. ಅಷ್ಟು ಬಿಟ್ಟರೆ ಇಡೀ ಪ್ರದೇಶ ಬಟಾಬಯಲು! ಇಂಥ ಜಾಗದಲ್ಲಿ ನನ್ನ ಪ್ರೀತಿಯ ನಾಟಕಕಾರ ಹೇಗಿರಲು ಸಾಧ್ಯ? ನಮಗೆ ಸಿಕ್ಕಿದ ಮಾಹಿ ತಿಯೇ ತಪ್ಪಿರಬೇಕು ಅಂದುಕೊಂಡೆ ನಾನು. ಈ ಸಂದರ್ಭದಲ್ಲೇ ತುಂಡು ಪಂಚೆ ಉಟ್ಟ ವ್ಯಕ್ತಿಯೊಬ್ಬರು ದೇವಾಲಯದ ಮುಂದೆ ಬಂದರು ನೋಡಿ, ಆ ಕ್ಷಣವೇ ನನ್ನ ಜತೆಗಿದ್ದ ಶಂಕರಪ್ಪನವರು-<br />
‘ರೀ ಸ್ವಾಮಿ ಕಾಮತ್ರೇ, ನಿಂತ್ಕೊಳ್ಳಿ, ನಿಂತ್ಕೊಳ್ಳಿ’ ಅಂದರು!<br />
ಈ ಮಾತು ಕೇಳಿದ ಕಾಮತ್ ಗಕ್ಕನೆ ನಿಂತರು. ಎರಡೇ ನಿಮಿಷ ದಲ್ಲಿ ಗೆಳೆಯನ ಗುರುತು ಹಿಡಿದು ಬಾಚಿ ತಬ್ಬಿಕೊಂಡರು. ‘ಸ್ವಲ್ಪ ಮಾತಾಡಲಿಕ್ಕಿದೆ ಕಾಮತ್ರೇ. ನೀವಿರುವ ಗುಡಿಸಲಿಗೆ ಹೋಗೋಣ ನಡೀರಿ’ ಎಂದರು ಶಂಕರಪ್ಪ. ಎಲ್ಲರೂ ಗುಡಿಸಲಿಗೆ ಬಂದೆವು. ಅಲ್ಲಿ ಕಾಮತರ ಪತ್ನಿ ಇದ್ದರು. ಅವರು ಹೇಳಿದ ವಿಷಯ ಕೇಳಿ ನಾನು ಕೂತಲ್ಲೇ ನಡುಗಿದೆ. ಏನೆಂದರೆ ಕಾಮತ್ ಮತ್ತು ಅವರ ಪತ್ನಿ ಇದ್ದ ಗುಡಿಸಲು ಅವರದಾಗಿರಲಿಲ್ಲ. ಅವರಿಗೆ ಅಲ್ಲಿ ಜಮೀನೂ ಇರಲಿಲ್ಲ. ಯಾರದೋ ಗುಡಿಸಲು. ಯಾರದೋ ಜಮೀನು. ಅಲ್ಲಿದ್ದ ಭತ್ತದ ಗದ್ದೆಯ ಬದುವಿನಲ್ಲಿ ಸಿಗುತ್ತಿದ್ದ ಗೆಡ್ಡೆ-ಗೆಣಸು ತಿಂದೇ ಈ ದಂಪತಿ ಬದುಕ್ತಾ ಇದ್ರು. ಬಹುಶಃ ಏನೋ ಆರ್ಥಿಕ ತೊಂದರೆ ಇತ್ತೆಂದು ಕಾಣುತ್ತೆ. ವಿಷಯ ತಿಳಿಸಿದ್ದರೆ ಮಂಗಳೂರಿನಲ್ಲಿದ್ದ ಮಗಳು ಸಹಾಯ ಮಾಡ್ತಿದ್ದಳು. ಆದರೆ, ಮಹಾಸ್ವಾಭಿಮಾನಿಯಾದ ಕಾಮತ್ ಯಾರಿಗೂ ಏನೂ ಹೇಳದೆ ದೇಶಾಂತರ ಹೊರಟವರಂತೆ ಬಂದುಬಿಟ್ಟಿದ್ರು. ಗುಡಿಸಲಿನಲ್ಲಿದ್ದ ಪಾತ್ರೆ ಪಗಡಗಳೆಲ್ಲ ಖಾಲಿ ಖಾಲಿ! ಅವರು ಊಟ ಮಾಡಿ ನಾಲ್ಕು ದಿನ ಆಗಿತ್ತು ಎಂಬ ವಿಷಯ ಕೂಡ ಆಗಲೇ ಗೊತ್ತಾಯ್ತು. ನನ್ನ ಪ್ರೀತಿಯ ನಾಟಕಕಾರ ಇದ್ದ ಸ್ಥಿತಿ ಕಂಡು ಕರುಳು ಕಿವಿಚಿದ ಹಾಗಾಯ್ತು. ತಕ್ಷಣವೇ ಬಾಸ್ಕೋಡ್ ಅವರನ್ನು ಹೊರಡಿಸಿಕೊಂಡು ಅಂಕೋಲಾಕ್ಕೆ ಬಂದೆ. ಅಲ್ಲಿ, ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನು ಖರೀದಿಸಿ ವಾಪಸ್ ಕಾಮತರ ಗುಡಿಸಲಿಗೆ ಹೋದೆವು. ಕಾಮತರ ಪತ್ನಿ, ನಮ್ಮನ್ನೇ ಬೆರಗಿನಿಂದ ನೋಡಲು ಶುರು ಮಾಡಿದ್ರು. ಆಗ ಹೇಳಿದೆ. ‘ಅಮ್ಮಾ, ಅಡುಗೆ ಮಾಡಿ. ಎಲ್ರೂ ಜತೇಲಿ ಊಟ ಮಾಡೋಣ&#8230;’<br />
ಊಟಕ್ಕೆ ಕೂತ ಕಾಮತ್‌ರು ಸಂತೋಷ, ಭಾವೋದ್ವೇಗ ತಡೆಯ ಲಾಗದೆ ಬಿಕ್ಕಳಿಸಿ ಅಳಲು ಶುರು ಮಾಡಿದ್ರು. ಅವರನ್ನು ಸಮಾಧಾನಿ ಸಿದೆ. ನಂತರ ಹತ್ತು ಸಾವಿರ ರೂಪಾಯಿ ಕೊಟ್ಟು ನಮಸ್ಕಾರ ಮಾಡಿ ಹೇಳಿದೆ: ‘ನಿಮ್ಮ ನಾಟಕವನ್ನು ಸಿನಿಮಾ ಮಾಡ್ತಿದೀನಿ. ಒಪ್ಪಿಗೆ ಕೊಡಿ ಸಾರ್’. ತಕ್ಷಣವೇ ಎರಡು ಬಾಕ್ಸ್‌ಗಳನ್ನು ತಂದ ಕಾಮತರು-‘ಒಪ್ಪಿಗೆ ಕೊಟ್ಟಿದೀನಿ. ಜತೆಗೆ, ಅಲ್ಲಿರೋ ಎಲ್ಲಾ ಪುಸ್ತಕಗಳೂ ನಿಮಗೇ. ತಗೊಂಡು ಹೋಗಿ’ ಎಂದರು.<br />
‘ಶೂಟಿಂಗ್ ನೋಡಲು ಬನ್ನಿ ಸಾರ್’ ಎಂದು ಆಹ್ವಾನಿಸಿದೆ. ಕಾಮತ್‌ರೂ ಒಪ್ಪಿದ್ದರು. ಆದರೆ ದುರಂತ ನೋಡಿ, ಶೂಟಿಂಗ್‌ಗೆ ಒಂದು ವಾರ ಬಾಕಿ ಇದೆ ಅನ್ನುವಾಗ ಹೃದಯಾಘಾತದಿಂದ ಕಾಮತರು ತೀರಿಕೊಂಡ ಸುದ್ದಿ ಬಂತು. ಈ ಬೇಸರದ ಮಧ್ಯೆಯೇ ಗೀತೆರಚನೆಯ ಕೆಲಸ ಶುರುವಾಯ್ತು. ಅದಕ್ಕೆಂದೇ ಶಿವಾನಂದ ಸರ್ಕಲ್ ಬಳಿಯ ಪ್ರಣಾಮ್ ಹೋಟೆಲಿನಲ್ಲಿ ರೂಂ ಮಾಡಿದ್ವಿ. ಈ ಸಂದರ್ಭದಲ್ಲಿಯೇ ದೊಡ್ಡರಂಗೇಗೌಡರ ಮೂಲಕ ಪರಿಚಯ ವಾದವರು ಸು. ರುದ್ರಮೂರ್ತಿ ಶಾಸ್ತ್ರಿ. ‘ಶಾಸ್ತ್ರಿಗಳು ಚೆನ್ನಾಗಿ ಬರೀ ತಾರೆ. ಅವರಿಂದಲೂ ಒಂದು ಹಾಡು ಬರೆಸಿ’ ಅಂದರು ದೊ.ರಂ. ಗೌಡ. ‘ಸರಿ’ ಎಂದು ಶಾಸ್ತ್ರಿಗಳಿಗೆ ಸಿನಿಮಾದ ಸನ್ನಿವೇಶ ವಿವರಿಸಿದೆ. ಅದೇ ಸಂದರ್ಭದಲ್ಲಿ ಕಾಮತ್‌ರನ್ನು ಭೇಟಿ ಮಾಡಿ ಬಂದ ಕಥೆ ಯನ್ನೂ ಹೇಳಿದೆ. ಈ ವೇಳೆಗಾಗಲೇ ದೊಡ್ಡರಂಗೇಗೌಡರ ಕವಿತೆಯ ಮೊದಲ ಎರಡು ಸಾಲು ಬಳಸಿ ಹಂಸಲೇಖಾ ರಾಗ ಸಂಯೋಜನೆ ಮುಗಿಸಿದ್ರು. ಆ ಟ್ಯೂನ್ ಕೇಳಿಸಿಕೊಂಡು ಥೀಮ್ ಸಾಂಗ್ ಬರೆಯ ಬೇಕಿತ್ತು. ಶಾಸ್ತ್ರಿಗಳು ಇಡೀ ಸಂದರ್ಭವನ್ನು ಅನುಭವಿಸಿದವರಂತೆ ಹಾಡು ಬರೆದರು. ಸ್ವಾರಸ್ವವೆಂದರೆ-ಆ ಹಾಡಲ್ಲಿ ಸಿನಿಮಾದ ಸಂದರ್ಭವಿರಲಿಲ್ಲ. ಬದಲಿಗೆ-ಇಡೀ ಭರತ ಖಂಡದ ಮನೆಮನೆಯ ತಾಯ್ತಂದೆಯರ ವಿಷಾದ ಗೀತೆಯಿತ್ತು ಮತ್ತು ಅದೇ ಕಾರಣಕ್ಕೆ ಹಾಡು ಎಂದೆಂದಿಗೂ ಪ್ರಸ್ತುತ ಎಂಬಂತೆ ಆಗಿಹೋಯ್ತು&#8230;’<br />
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶ್ರೀನಿವಾಸಮೂರ್ತಿ.</p>
<br />  <a rel="nofollow" href="http://feeds.wordpress.com/1.0/gocomments/manigulabi.wordpress.com/731/"><img alt="" border="0" src="http://feeds.wordpress.com/1.0/comments/manigulabi.wordpress.com/731/" /></a> <a rel="nofollow" href="http://feeds.wordpress.com/1.0/godelicious/manigulabi.wordpress.com/731/"><img alt="" border="0" src="http://feeds.wordpress.com/1.0/delicious/manigulabi.wordpress.com/731/" /></a> <a rel="nofollow" href="http://feeds.wordpress.com/1.0/gofacebook/manigulabi.wordpress.com/731/"><img alt="" border="0" src="http://feeds.wordpress.com/1.0/facebook/manigulabi.wordpress.com/731/" /></a> <a rel="nofollow" href="http://feeds.wordpress.com/1.0/gotwitter/manigulabi.wordpress.com/731/"><img alt="" border="0" src="http://feeds.wordpress.com/1.0/twitter/manigulabi.wordpress.com/731/" /></a> <a rel="nofollow" href="http://feeds.wordpress.com/1.0/gostumble/manigulabi.wordpress.com/731/"><img alt="" border="0" src="http://feeds.wordpress.com/1.0/stumble/manigulabi.wordpress.com/731/" /></a> <a rel="nofollow" href="http://feeds.wordpress.com/1.0/godigg/manigulabi.wordpress.com/731/"><img alt="" border="0" src="http://feeds.wordpress.com/1.0/digg/manigulabi.wordpress.com/731/" /></a> <a rel="nofollow" href="http://feeds.wordpress.com/1.0/goreddit/manigulabi.wordpress.com/731/"><img alt="" border="0" src="http://feeds.wordpress.com/1.0/reddit/manigulabi.wordpress.com/731/" /></a> <img alt="" border="0" src="http://stats.wordpress.com/b.gif?host=manigulabi.wordpress.com&amp;blog=3376282&amp;post=731&amp;subd=manigulabi&amp;ref=&amp;feed=1" width="1" height="1" />]]></content:encoded>
			<wfw:commentRss>http://manigulabi.wordpress.com/2011/01/13/%e0%b2%88-%e0%b2%b9%e0%b2%be%e0%b2%a1%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b7%e0%b3%8d%e0%b2%9f%e0%b3%8b-%e0%b2%ae%e0%b2%a8%e0%b3%86%e0%b2%af-%e0%b2%a4%e0%b2%be%e0%b2%af%e0%b3%8d/feed/</wfw:commentRss>
		<slash:comments>3</slash:comments>
	
		<media:content url="" medium="image">
			<media:title type="html">ಮಣಿಕಾಂತ್</media:title>
		</media:content>

		<media:content url="http://manigulabi.files.wordpress.com/2011/01/new-image-1.jpg?w=203" medium="image">
			<media:title type="html">New Image-1</media:title>
		</media:content>
	</item>
	</channel>
</rss>
