ಮೊದಲ ಸಾಲು ಹಾಡಿದವರಿಗೆ, ಎರಡನೇ ಸಾಲು ಬರೆದವರಿಗೆ!

ಜನವರಿ 25, 2011

 

 

 

 

 

 

 

 

 

 

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ

ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್
ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ ||ಪ||

ಸಂಗೀತ ಕಲೆ ಮೆಚ್ಚಿ ವೀಣೆಯ ಹಿಡಿದೊಡೆ
ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ ||೧||

ಶರಣರಿಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ ||೨||

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸೆ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯ ಮಡಿಲಲ್ಲಿ ನಲಿವೆ ||೩||

ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.

ವಿಚಿತ್ರ, ಆದರೂ ಸತ್ಯ ಎಂದು ಹೇಳಬಹುದಾದ ಮೂರು ಸಂಗತಿ ಗಳಿವೆ. ಮೊದಲನೆಯದು- ಒಂದು ಹಾಡನ್ನು ಸಭೆ-ಸಮಾ ರಂಭಗಳಲ್ಲಿ ಎದೆತುಂಬಿ ಹಾಡಿದ ಗಾಯಕನೊಬ್ಬ, ಆ ಗಾಯ ನಕ್ಕೆ ಭಕ್ಷೀಸಿನ ರೂಪದಲ್ಲಿ ಬಂದ ಹಣದಿಂದಲೇ ಒಂದು ಮನೆ ಕಟ್ಟಿಕೊಂಡ! ಎರಡನೆಯದು-ಆ ಹಾಡು ಬರೆದ ಚಿತ್ರ ಸಾಹಿತಿ ಮಾತ್ರ ಬಡವನಾಗಿಯೇ ಉಳಿದ! ಮೂರನೆಯದು-ಕನ್ನಡದ ಸೂಪರ್‌ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಾಡನ್ನು ಒಳಗೊಂಡಿರುವ ಸಿನಿಮಾ ಇನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ!
ಅಮ್ಮನ ಜೋಗುಳದಂತೆ, ಗೆಳತಿಯ ಕಾಲ್ಗೆಜ್ಜೆ ದನಿಯಂತೆ, ಕಂದನ ನಗೆಯಂತೆ ಮತ್ತು ಅಪ್ಪ ಹೇಳಿದ ಕಥೆಯಂತೆ ಈ ವಾರ ನಿಮ್ಮೆದುರು ತೆರೆ ದುಕೊಳ್ಳಲಿರುವುದು-‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂಬ ಹಾಡಿನ ಚರಿತೆ. ಈ ಅಪರೂಪದ, ಅನುಪಮ ಗೀತೆ ಬರೆದವರು ಸಿ.ವಿ. ಶಿವಶಂಕರ್.
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ; ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಲಕ್ಷ್ಮಣರಾವ್ ಹೊಯಿಸಳ ಅವರ ಅಳಿಯ ಸಿ.ವಿ. ಶಿವಶಂಕರ್. ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಗರಡಿಯಲ್ಲಿ ಪಳಗಿದ ಶಿವಶಂಕರ್, ನಟ, ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ, ಗೀತೆ ರಚನೆಕಾರ… ಹೀಗೆ ಎಲ್ಲ ಕ್ಷೇತ್ರದಲ್ಲೂ ಕೈಯಾಡಿಸಿ ಗೆದ್ದವರು. ಕನ್ನಡ ನಾಡು-ನುಡಿಯ ವೈಭವ ಸಾರುವ ಹಾಡುಗಳನ್ನು ಹೆಚ್ಚಾಗಿ ಬರೆದದ್ದು ಶಿವಶಂಕರ್ ಅವರ ಹೆಗ್ಗಳಿಕೆ. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’ ಗೀತೆಯನ್ನು ಬರೆದ ಸಂದರ್ಭ ಯಾವುದು? ಆ ಹಾಡು ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಶಿವಶಂಕರ್ ಉತ್ತರಿಸಿದ್ದು ಹೀಗೆ:
‘ಇದು ೭೦ರ ದಶಕದ ಮಾತು. ನಾನಾಗ ‘ಕೂಡಲ ಸಂಗಮ’ ಹೆಸರಿನ ಸಿನಿಮಾ ನಿರ್ಮಾಣ-ನಿರ್ದೇಶನದ ಕನಸು ಕಂಡಿದ್ದೆ. ಕೂಡಲ ಸಂಗಮ ಕ್ಷೇತ್ರ ಸುತ್ತಮುತ್ತ ಶೂಟಿಂಗ್ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೂ ಮೊದಲು ಲೋಕೇಶನ್ ನೋಡಿಕೊಂಡು ಬರೋಣವೆಂದು ಅಂಬಾಸಿಡರ್ ಕಾರಿನಲ್ಲಿ ಐದಾರು ಮಂದಿ ಚಿತ್ರ ತಂಡದೊಂದಿಗೆ ಹೊರಟೆ. ಮಾರ್ಗ ಮಧ್ಯೆ ಕಾರಿನ ಟೈರ್ ಪಂಕ್ಚರ್ ಆಯಿತು. ಡ್ರೈವರ್ ಬಳಿ ಸ್ಟೆಫ್ನಿ ಇರಲಿಲ್ಲ. ಸಮೀಪದ ಹಳ್ಳಿಯಲ್ಲಿದ್ದ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕಿಸಿಕೊಂಡು ಪಯಣ ಮುಂದುವರಿಸಿ ದೆವು. ಕೂಡಲ ಸಂಗಮ ಕ್ಷೇತ್ರ ಅರ್ಧ ಕಿಲೋಮೀಟರ್ ದೂರವಿದೆ ಎನ್ನುವಾಗ ಮತ್ತೆ ಟೈರ್ ಪಂಕ್ಚರ್ ಆಯ್ತು. ಆದದ್ದಾಗಲಿ ಎಂದುಕೊಂಡು ನಡಿಗೆಯಲ್ಲೇ ದೇವಾಲಯ ತಲುಪಿದೆವು.
ದೇವರ ದರ್ಶನದ ನಂತರ ಒಂದು ಸ್ಥಳದಲ್ಲಿ ಒಬ್ಬನೇ ಕೂತೆ. ಆಗಲೇ, ಕೂಡಲ ಸಂಗಮ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಬಸವಣ್ಣನವರ ಬದುಕು, ಅವರ ಸರಳತೆ, ಒಂದು ಪಿಡುಗಾಗಿ ಕಾಡುತ್ತಿದ್ದ ಜಾತೀಯತೆ, ಅಸಮಾನತೆಯನ್ನು ತೊಡೆದುಹಾಕಲು ಅವರು ನಡೆಸಿದ ಹೋರಾಟ… ಇದೆಲ್ಲವೂ ಕಣ್ಮುಂದೆ ಬಂತು. ಅದೇ ಸಂದರ್ಭದಲ್ಲಿ ಕನ್ನಡ ನಾಡಿನ ಇತಿಹಾಸ, ವೈಭವವೆಲ್ಲ ಬಿಟ್ಟೂ ಬಿಡದೆ ನೆನಪಾಗತೊಡ ಗಿತು. ಆಗ ನನ್ನೊಳಗೆ ನಾನೇ ಅಂದುಕೊಂಡೆ: ‘ನಮ್ಮ ಕನ್ನಡ ನಾಡು ಯಾರೂ, ಎಂದೂ ಮರೆಯಲಾಗದಂಥ ಪುಣ್ಯಭೂಮಿ. ಮರುಜನ್ಮವೆಂಬುದಿದ್ದರೆ ಆಗಲೂ ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕು…’
ಇಂಥದೊಂದು ಯೋಚನೆ ಬಂತಲ್ಲ? ಅದೇ ಕ್ಷಣಕ್ಕೆ ಇದ್ದಕ್ಕಿದ್ದಂತೆ ನನ್ನೊಳಗೆ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು: ‘ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ…’ ಹಾಡಿನ ಪಲ್ಲವಿಯ ಜತೆ ಜತೆಗೇ ಒಂದು ಚರಣಕ್ಕೆ ಆಗುವಷ್ಟು ಸಾಲು ಗಳೂ ಹೊಳೆದವು. ಹೀಗೆ ಹಾಡು -ಚರಣ ಬರೆದ ಹಾಳೆಯನ್ನು ಅರ್ಚಕರಿಗೆ ಕೊಟ್ಟು, ಇದನ್ನು ಸಂಗಮನಾಥನ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಕೊಡಿ ಎಂದು ಬೇಡಿಕೊಂಡೆ. ಅವರು ಹಾಗೇ ಮಾಡಿ ದರು. ಸಿನಿಮಾದ ಹೆಸರನ್ನು ‘ಸಂಗಮ’ ಎಂದು ಬದಲಿಸಿಕೊಂಡೆ.
ಹೊಸ ಸಿನಿಮಾ ಹೇಗಿರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ. ಆಗಲೇ ಚಿಕ್ಕಬಳ್ಳಾಪುರ ಮೂಲದ ಸುಖದೇವ್ ಎಂಬ ಯುವಕನ ಪರಿಚಯವಾಯಿತು. ಆತನಿಗೆ ಸಂಗೀತ ಸಂಯೋಜನೆ ಗೊತ್ತಿತ್ತು. ಚಿತ್ರರಂಗ ಸೇರ ಬೇಕೆಂಬ ಆಸೆಯೂ ಜತೆಗಿತ್ತು. ಆತನನ್ನು ಸಂಗಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಧರಿಸಿದೆ. ಬೆಂಗಳೂ ರಿಗೆ ಬಾರಯ್ಯಾ ಅಂದೆ. ಆತ ತಕ್ಷಣವೇ ಬಂದ. ನನ್ನ ಸಿನಿಮಾ, ಅದರ ಉದ್ದೇಶ ಹಾಗೂ ಹಾಡಿನ ಬಗ್ಗೆ ವಿವರಿಸಿದೆ. ಈ ಹಿಂದೆ ಸಿದ್ಧವಾಗಿತ್ತಲ್ಲ, ಅಷ್ಟನ್ನೇ ಅವನ ಮುಂದಿಟ್ಟು, ‘ಈ ಹಾಡಿಗೆ ರಾಗ ಸಂಯೋಜನೆ ಮಾಡಪ್ಪಾ’ ಎಂದೆ. ಸುಖದೇವ್ ತುಂಬ ಶ್ರದ್ಧೆಯಿಂದ ರಾಗ ಸಂಯೋಜಿಸಿದ. ಆತನ ರಾಗ ಸಂಯೋಜನೆ ಕೇಳುತ್ತಿದ್ದಂತೆ, ಈತನಿಗೆ ಸಂಗೀತ ಶಾರದೆ ಒಲಿದಿದ್ದಾಳೆ ಎನ್ನಿಸಿತು. ಆ ಸಂತೋಷದಲ್ಲಿ ಶೃಂಗೇರಿ ಶಾರದೆಯ ಸ್ತುತಿಯಂತಿರುವ ಒಂದು ಚರಣ ಹೊಳೆಯಿತು. ಅದನ್ನು ಮೊದಲ ಚರಣವೆಂದು ಸೇರಿಸಿಕೊಂಡೆ.
ಈ ಗೀತೆಯನ್ನು ನಾಯಕ-ನಾಯಕಿ ಹಾಡುವುದೆಂದು ನಿರ್ಧರಿಸ ಲಾಗಿತ್ತು. ನಾಯಕನ ಪಾಲಿನದನ್ನು ಹಾಡಲು ಪಿ.ಬಿ. ಶ್ರೀನಿವಾಸ್ ಇದ್ದರು. ನಾಯಕಿಯ ಪಾಲಿನದನ್ನು ಯಾರಿಂದ ಹಾಡಿಸುವುದು ಎಂದುಕೊಂಡಾಗ ಹೊಳೆದದ್ದು ಉದಯೋನ್ಮುಖ ಗಾಯಕಿ ಸಿ.ಕೆ. ರಮಾ ಅವರ ಹೆಸರು. ಆಕೆಗಿದು ಮೊಟ್ಟ ಮೊದಲ ಸಿನಿಮಾ. ಕೇಳಿದವ ರೆಲ್ಲ ‘ವಾಹ್ ವಾಹ್’ ಎನ್ನಬೇಕು-ಹಾಗೆ ಹಾಡಿಬಿಟ್ಟಳು ರಮಾ. ಧ್ವನಿ ಮುದ್ರಣದ ನಂತರ ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ; ಅಷ್ಟೊಂದು ಜನಪ್ರಿಯವಾಯಿತು ಹಾಡು. ರಾಜ್ಯೋತ್ಸವ ಕಾರ್ಯ ಕ್ರಮಗಳಲ್ಲಿ, ಮೆಚ್ಚಿನ ಚಿತ್ರಗೀತೆಗಳ ಸಂದರ್ಭದಲ್ಲಿ ಈ ಗೀತೆ ಮೊಳಗು ವುದು ಕಡ್ಡಾಯವೇ ಆಗಿಹೋಯಿತು. ಹೀಗಿದ್ದಾಗಲೇ, ಈ ಗೀತೆಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದ ಕೊಲಂಬಿಯಾ ಕಂಪನಿಯವರು ಗ್ರಾಮಫೋನ್ ರೆಕಾರ್ಡ್‌ಗಳಲ್ಲಿ ಈ ಹಾಡನ್ನು ಹೊರ ತಂದರು. ಆದರೆ ನನಗೆ ನಯಾಪೈಸೆಯ ಸಂಭಾವನೆ ಕೊಡಲಿಲ್ಲ.
ವಿಪರ್‍ಯಾಸಗಳು ಹೇಗಿರುತ್ತವೋ ನೋಡಿ: ‘ಸಿರಿವಂತನಾದರೂ…’ ಹಾಡು ಕನ್ನಡಿಗರ ಮನೆ-ಮನವನ್ನು ಆವರಿಸಿಕೊಂಡಿತು. ರೇಡಿಯೋ ಸಿಲೋನ್‌ನಲ್ಲಿ ವಾರಕ್ಕೊಮ್ಮೆಯಂತೆ ವರ್ಷಗಳ ಕಾಲ ತಪ್ಪದೇ ಪ್ರಸಾರ ವಾಯಿತು. ಆದರೆ, ಅನಿವಾರ್ಯ ಕಾರಣಗಳಿಂದ ‘ಸಂಗಮ’ ಸಿನಿ ಮಾದ ಕೆಲಸ ಆರಂಭವಾಗಲೇ ಇಲ್ಲ. ಮುಂದೆ ನಾನು ಇಳಕಲ್‌ನ ಮಹಾಂತ ಶಿವಯೋಗಿಗಳ ಮಹಿಮೆ ಸಾರುವ ‘ಮಹಾತಪಸ್ವಿ’ ಹೆಸ ರಿನ ಸಿನಿಮಾ ತಯಾರಿಗೆ ನಿಂತೆ ನಿಜ. ಆದರೆ ಆ ಚಿತ್ರದಲ್ಲಿ ‘ಸಂಗಮ’ದ ಹಾಡಿಗೆ ‘ಸೂಕ್ತ ಸ್ಥಳ’ ಇರಲಿಲ್ಲ. ಈ ಬೇಸರದ ಮಧ್ಯೆ ನಾನಿದ್ದಾಗಲೇ, ಈ ಹಾಡನ್ನು ಆಕಾಶವಾಣಿ ಹಾಗೂ ವೇದಿಕೆಗಳಲ್ಲಿ ಹಾಡಿ ಜನರಿಂದ ಕಾಣಿಕೆ ಪಡೆದು, ಆ ಹಣದಿಂದಲೇ ಗುಲಬರ್ಗಾದ ಗಾಯಕನೊಬ್ಬ ಮನೆ ಕಟ್ಟಿಸಿಕೊಂಡ ಎಂಬ ಸುದ್ದಿ ಬಂತು. ಕೆಲದಿನಗಳ ನಂತರ ಆ ಗಾಯಕನೇ ನನ್ನನ್ನು ಹುಡುಕಿಕೊಂಡು ಬಂದ. ಒತ್ತಾಯದಿಂದ ತನ್ನ ಮನೆಗೆ ಕರೆದೊಯ್ದ. ತನ್ನ ಮನೆಗೆ ಆತ ‘ಸಿರಿವಂತ’ ಎಂದೇ ಹೆಸರಿಟ್ಟಿದ್ದ. ಮನೆಯ ಹೆಸರಿನ ಫಲಕದ ಮೇಲೆ ಕೈಯಾಡಿಸುತ್ತಾ- ‘ಸ್ವಾಮಿ, ನಿಮ್ಮ ಹಾಡಿಂದ ನಾನು ಬದುಕು ಕಟ್ಟಿಕೊಂಡೆ’ ಎಂದು ಕೈಮುಗಿದ. ನಾನು ತಕ್ಷಣವೇ ಹೇಳಿದೆ: ‘ಈ ಹಾಡಿನ ಮೊದಲ ಸಾಲು-ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’-ಅದು ನಿನ್ನದು. ಎರಡನೇ ಸಾಲು- ‘ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂದಿದೆ; ಅದು ನನ್ನದು!’
ಮುಂದೆ ಹಣಕಾಸಿನ ತೊಂದರೆಯ ಕಾರಣದಿಂದ ‘ಸಂಗಮ’ ಸಿನಿಮಾ ಶುರುವಾಗಲೇ ಇಲ್ಲ. ಆದರೆ ಹಾಡು ದಿನದಿನಕ್ಕೂ ಜನಪ್ರಿಯ ವಾಗುತ್ತಲೇ ಹೋಯಿತು. ಈ ಸಂದರ್ಭದಲ್ಲೇ ರೀಮಿಕ್ಸ್ ಕೆಲಸ ಶುರುವಾಯಿತಲ್ಲ? ಆಗ ಕೆಲ ಗಾಯಕರು-ಕ್ಯಾಸೆಟ್ ಕಂಪನಿಗಳು ಸೇರಿ ಕೊಂಡು ನನ್ನ ಹಾಡನ್ನು ಮತ್ತೆ ಧ್ವನಿಮುದ್ರಿಸಿಕೊಂಡು – ದುಡ್ಡು ಮಾಡಿಕೊಂಡರು. ಆದರೆ, ಯಾರೊಬ್ಬರೂ ಹಾಡಿನ ಪುನರ್ ಬಳಕೆಯ ಬಗ್ಗೆ ನನ್ನ ಅನುಮತಿ ಕೇಳಲಿಲ್ಲ. ಸಂಭಾವನೆ ಯನ್ನೂ ಕೊಡಲಿಲ್ಲ. ಹಾಡು ಅಮರವಾಯಿತು. ಹಾಡಿದವರು ಶ್ರೀಮಂತರಾದರು. ಆದರೆ ಹಾಡು ಬರೆದ ನಾನು ಬಡವನಾಗಿಯೇ ಉಳಿದುಹೋದೆ’. ಒಂದು ತೆರನಾದ ಸಂಕಟದಿಂದಲೇ ಮಾತು ನಿಲ್ಲಿಸಿದರು ಶಿವಶಂಕರ್.
***
ಒಂದು ಸ್ವಾರಸ್ಯ ಕೇಳಿ: ಈ ಎಲ್ಲ ನೋವು, ನಿರಾಸೆ, ಸಂಕಟಗಳಿಂದ ಶಿವಶಂಕರ್‌ನೊಂದಿದ್ದಾರೆ ನಿಜ. ಆದರೆ ಹತಾಶರಾಗಿಲ್ಲ. ‘ಸಿರಿವಂತನಾ ದರೂ…’ ಹಾಡನ್ನು ಹೇಗಾದರೂ ಮಾಡಿ ಕನ್ನಡಿಗರಿಗೆ ತೋರಿಸಬೇಕು ಎಂಬುದು ಅವರ ಮಹದಾಸೆ. ಅದಕ್ಕೆಂದೇ ಅವರು ‘ಕನ್ನಡ ಕುವರ’ ಹೆಸರಿನ ಸಿನಿಮಾ ತಯಾರಿಸಿದ್ದಾರೆ. ಅದರಲ್ಲಿ ಪಿ.ಬಿ.ಎಸ್.-ರಮಾ ದನಿಯಿರುವ ‘ಸಿರಿವಂತನಾದರೂ…’ ಗೀತೆಯನ್ನು ಬಳಸಿಕೊಂಡಿದ್ದಾರೆ. ಕನ್ನಡ ಭಾಷಾಭಿಮಾನದ ಕಥೆ ಹೊಂದಿರುವ ಈ ಚಿತ್ರ ಆರ್ಥಿಕ ಸಮಸ್ಯೆಯಿಂದ ‘ಡಬ್ಬಾ’ದಲ್ಲಿಯೇ ಉಳಿದುಹೋಗಿದೆ. ಕರ್ನಾಟಕ ಸರಕಾರದ ‘ಅನುಗ್ರಹ’ ಸಿಗದಿದ್ದರೆ ಈ ಸಿನಿಮಾ ತೆರೆಕಾಣಲು ಸಾಧ್ಯವೇ ಇಲ್ಲ. ನಾಡಿನ ಮಹಿಮೆ ಸಾರುವ ಈ ಅಪರೂಪದ ಗೀತೆಯನ್ನು ‘ಕಾಣುವ’ ನೆಪದಿಂದಾದರೂ ಈ ಸಿನಿಮಾಕ್ಕೆ ಆರ್ಥಿಕ ನೆರವು ನೀಡ ಬಾರದೆ? ವೇದಿಕೆಯ ಮೇಲೆ ಕನ್ನಡದ ಉದ್ಧಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವುದಾಗಿ ಹೇಳುವ ನಮ್ಮ ಮಂತ್ರಿಗಳು, ಅಕಾರಿಗಳಿಗೆ ಈ ಹಾಡು ಮತ್ತು ಅದರ ಹಿಂದಿನ ಕತೆ ಈಗಲಾದರೂ ಕೇಳಿಸಲಿ. ಹಾಡು ಬರೆದಾತನ ಎದೆಯಾಳದ ಸಂಕಟ ಅರ್ಥವಾಗಲಿ.
ಹೌದಲ್ಲವಾ? ‘ಸಿರಿವಂತನಾದರೂ….’ ಹಾಡು ಕೇಳಿದಾಗೆಲ್ಲ ಖುಷಿ ಯಾಗುತ್ತದೆ. ಕಣ್ತುಂಬಿ ಬರುತ್ತದೆ. ಈ ಹಾಡು ಬರೆದಾತನನ್ನು ಒಮ್ಮೆ ಮಾತಾಡಿಸಬೇಕು, ಅಭಿನಂದಿಸಬೇಕು ಎಂಬ ಆಸೆಯಾಗುತ್ತದೆ. ಅಂಥ ದೊಂದು ಭಾವ ನಿಮ್ಮ ಕೈ ಹಿಡಿದರೆ ೯೯೦೧೮ ೦೪೦೦೬ಕ್ಕೆ ಪೋನ್ ಮಾಡಿ. ಈ ನಂಬರಿನಲ್ಲಿ ಶಿವಶಂಕರ್ ಸಿಗುತ್ತಾರೆ. ಒಂದು ಮೆಚ್ಚು ಮಾತು ಕೇಳಿದರೆ ಆ ಹಿರಿಯ ಜೀವಕ್ಕೆ ಖುಷಿಯಾಗುತ್ತದೆ. ಮಾತಾಡಿದ ನಂತರ ಆ ಖುಷಿ ನಿಮ್ಮದೂ ಆಗುತ್ತದೆ!

ಈ ಹಾಡಲ್ಲಿ ಎಷ್ಟೋ ಮನೆಯ ತಾಯ್ತಂದೆಯರ ಸಂಕಟದ ಮಾತುಗಳಿವೆ…

ಜನವರಿ 13, 2011

 

 

 

 

 

 

 

 

 

 

ಕೇಳು ಸಂಸಾರದಲ್ಲಿ ರಾಜಕೀಯ

ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.
ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ

ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲೆ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ
ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||

ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||

ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||

ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||

ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!
ಅಂದು ಮುತ್ತಿನ ಮಾತುಗಳ ಹೇಳಿದರು
ಇಂದು ಮಾತಿನ ಈಟಿಯಿಂದ ಮೀಟಿದರು||೪||

ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!
ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್‌ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.
ಎಲ್ಲವೂ ರೆಡಿಯಾಗೇ ಇತ್ತು. ಆದರೆ, ನಾಟಕವನ್ನು ಸಿನಿಮಾ ಮಾಡಲು ಕಾಮತ್ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕಿತ್ತು. ನನಗೆ ಗೊತ್ತಿದ್ದಂತೆ ಕಾಮತ್‌ರು ಬಾಂಬೆಯಲ್ಲಿದ್ರು. ಆದರೆ ನನ್ನಲ್ಲಿ ಅವರ ವಿಳಾಸವಾಗಲಿ, ಫೋನ್ ನಂಬರ್ ಆಗಲಿ ಇರಲಿಲ್ಲ. ಮಂಗಳೂರಿನಲ್ಲಿ ಕಾಮತ್‌ರ ಮಗಳು ಇರುವುದು ಗೊತ್ತಿತ್ತು. ಆಕೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ನಿಮ್ಮ ತಂದೆಯವರಿಂದ ನಾಟಕದ ರೈಟ್ಸ್ ತಗೋಬೇಕು ಅಂತಾನೇ ಬಾಂಬೆಗೆ ಹೋಗಲು ಸಿದ್ಧನಾಗಿದ್ದೀನಿ. ಅಡ್ರೆಸ್ ಕೊಡ್ತೀರಾ ಮೇಡಂ?’ ಎಂದೆ.
‘ ಕ್ಷಮಿಸಿ ಸಾರ್. ನಮ್ಮ ತಂದೆ ಈಗ ಬಾಂಬೆಯಲ್ಲಿಲ್ಲ. ಅಂಕೋಲಾ ದಲ್ಲಿ ಇದ್ದಾರೆ. ಅಪ್ಪನ ಜತೆಗೆ ಅಮ್ಮನೂ ಅಂಕೋಲಾದಲ್ಲಿ ಇದ್ದಾರೆ. ಆದರೆ ಅಂಕೋಲೆಯಲ್ಲಿ ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅಂಕೋಲಾ ಚಿಕ್ಕ ಊರು. ಹಾಗಾಗಿ ಅವರನ್ನು ಹುಡುಕೋದು ಕಷ್ಟ ಆಗಲಾರದು’ ಎಂದು ಕಾಮತ್‌ರ ಮಗಳು ಹೇಳಿದ್ರು.
ನಾನು ಕಾಮತ್‌ರನ್ನು ಪ್ರತ್ಯಕ್ಷ ನೋಡಿರಲಿಲ್ಲ. ಆದರೆ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ವೆಂಕಟಪ್ಪ ಅವರಿಗೆ ಕಾಮತ್‌ರ ಪರಿಚಯವಿತ್ತು. ಅವರೊಂದಿಗೆ ಸಲುಗೆಯೂ ಇತ್ತು. ನಾನೂ ಬರ್‍ತೀನಿ ನಡೀರಿ ಮೂರ್ತಿಗಳೇ ಅಂದ್ರು ವೆಂಕಟಪ್ಪ. ಅವರನ್ನೂ ಕರೆದುಕೊಂಡೇ ನಾನು ಅಂಕೋಲಾ ಬಸ್ ಹತ್ತಿದೆ.
ಅಂಕೋಲದಲ್ಲಿ ನನಗಾಗಲಿ, ಶಂಕರಪ್ಪ ಅವರಿಗಾಗಲಿ ಅತ್ಯಾಪ್ತ ರೆಂದು ಹೇಳಿಕೊಳ್ಳಲು ಯಾರೂ ಇರಲಿಲ್ಲ. ಆದರೂ ನಾನು ಭಂಡ ಧೈರ್ಯದಿಂದ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಂದು ತಮಾಷೆ ನಡೆಯಿತು. ಬಸ್‌ನಲ್ಲಿ ಅಂಕೋಲದವರೇ ಆಗಿದ್ದ ಮೋಹನ್ ಬಾಸ್ಕೋಡ್ ಎಂಬಾತ ತಾವಾಗಿಯೇ ಬಂದು ಪರಿಚಯ ಹೇಳಿಕೊಂಡ್ರು. ಅವರ ಸೋದರ ಮಾವ, ಥೇಟ್ ನನ್ನ ಥರಾನೇ ಇದ್ದರಂತೆ. ಆ ಸೆಂಟಿಮೆಂಟ್‌ನ ಮೇಲೆ-‘ನೀವು ನಮ್ಮ ಮನೆಗೆ ಬರಬೇಕು. ನಮ್ಮಲ್ಲೇ ಉಳಿಯಬೇಕು’ ಎಂದು ಒತ್ತಾಯಿಸಿದರು ಮೋಹನ್. ಅಪರಿಚಿತ ಜಾಗ ದಲ್ಲಿ ಪರಿಚಿತರೊಬ್ಬರು ಸಿಕ್ಕಿದ್ರಲ್ಲ ಎನಿಸಿ ನಾವೂ ಒಪ್ಪಿದೆವು. ನಾವು ಬಂದಿರುವ ಉದ್ದೇಶವನ್ನೂ ವಿವರಿಸಿದೆವು. ಆಗ ಮೋಹನ್ ಬಾಸ್ಕೋಡ್ ಹೇಳಿದ್ರು: ‘ನಂದು ಜೀಪ್ ಇದೆ. ನಾಳೆ ಇಡೀ ದಿನ ಅವರನ್ನು ಹುಡುಕೋಣ’.
ಮರುದಿನ ಬೆಳಗ್ಗೆಯೇ ಕಾಮತ್‌ರ ವಿವರಗ ಳನ್ನು ಶಂಕರಪ್ಪ ಅವರು ಮೋಹನ್‌ರಿಗೆ ಹೇಳಿ ದರು. ಮೋಹನ್ ಅದನ್ನು ತಮ್ಮ ಪರಿಚಿತರೆಲ್ಲ ರಿಗೂ ತಿಳಿಸಿದರು. ಇಂಥ ಮುಖ ಚಹರೆಯ ವ್ಯಕ್ತಿಯನ್ನು ನೀವು ಕಂಡಿರಾ ಎಂದು ಸಿಕ್ಕವರನ್ನೆಲ್ಲ ಕೇಳುತ್ತಲೇ ಹೋದೆವು. ಕಡೆಗೆ ಒಬ್ಬರು ಹೇಳಿದರು. ಇಲ್ಲಿಂದ ೧೫ ಕಿ.ಮೀ ದೂರದಲ್ಲಿ ಒಂದು ದೇವಸ್ಥಾನ ಇದೆ. ಅಲ್ಲಿ ನೀವು ಹೇಳಿದಂಥ ಒಬ್ರು ಇದ್ದಾರೆ…’
ಬಾಸ್ಕೋಡ್ ಅವರ ಜೀಪಿನಲ್ಲಿ ನಾವೆಲ್ಲಾ ಆ ದೇವಸ್ಥಾನದ ಬಳಿಗೆ ಹೋದಾಗ ಬೆಳಗಿನ ೧೧ ಗಂಟೆ. ಬಿಸಿಲು ಚುರುಗುಡುತ್ತಿತ್ತು. ಆ ಪ್ರದೇಶದಲ್ಲಿ ಒಂದು ದೇವಾಲಯವಿತ್ತು. ಎದುರಿಗೇ ಒಂದು ಹಳೆಯ ಬಾವಿ. ಅಲ್ಲಿಂದ ಕೂಗಳತೆ ದೂರದಲ್ಲಿ ಒಂದು ಗುಡಿಸಲಿತ್ತು. ಅಷ್ಟು ಬಿಟ್ಟರೆ ಇಡೀ ಪ್ರದೇಶ ಬಟಾಬಯಲು! ಇಂಥ ಜಾಗದಲ್ಲಿ ನನ್ನ ಪ್ರೀತಿಯ ನಾಟಕಕಾರ ಹೇಗಿರಲು ಸಾಧ್ಯ? ನಮಗೆ ಸಿಕ್ಕಿದ ಮಾಹಿ ತಿಯೇ ತಪ್ಪಿರಬೇಕು ಅಂದುಕೊಂಡೆ ನಾನು. ಈ ಸಂದರ್ಭದಲ್ಲೇ ತುಂಡು ಪಂಚೆ ಉಟ್ಟ ವ್ಯಕ್ತಿಯೊಬ್ಬರು ದೇವಾಲಯದ ಮುಂದೆ ಬಂದರು ನೋಡಿ, ಆ ಕ್ಷಣವೇ ನನ್ನ ಜತೆಗಿದ್ದ ಶಂಕರಪ್ಪನವರು-
‘ರೀ ಸ್ವಾಮಿ ಕಾಮತ್ರೇ, ನಿಂತ್ಕೊಳ್ಳಿ, ನಿಂತ್ಕೊಳ್ಳಿ’ ಅಂದರು!
ಈ ಮಾತು ಕೇಳಿದ ಕಾಮತ್ ಗಕ್ಕನೆ ನಿಂತರು. ಎರಡೇ ನಿಮಿಷ ದಲ್ಲಿ ಗೆಳೆಯನ ಗುರುತು ಹಿಡಿದು ಬಾಚಿ ತಬ್ಬಿಕೊಂಡರು. ‘ಸ್ವಲ್ಪ ಮಾತಾಡಲಿಕ್ಕಿದೆ ಕಾಮತ್ರೇ. ನೀವಿರುವ ಗುಡಿಸಲಿಗೆ ಹೋಗೋಣ ನಡೀರಿ’ ಎಂದರು ಶಂಕರಪ್ಪ. ಎಲ್ಲರೂ ಗುಡಿಸಲಿಗೆ ಬಂದೆವು. ಅಲ್ಲಿ ಕಾಮತರ ಪತ್ನಿ ಇದ್ದರು. ಅವರು ಹೇಳಿದ ವಿಷಯ ಕೇಳಿ ನಾನು ಕೂತಲ್ಲೇ ನಡುಗಿದೆ. ಏನೆಂದರೆ ಕಾಮತ್ ಮತ್ತು ಅವರ ಪತ್ನಿ ಇದ್ದ ಗುಡಿಸಲು ಅವರದಾಗಿರಲಿಲ್ಲ. ಅವರಿಗೆ ಅಲ್ಲಿ ಜಮೀನೂ ಇರಲಿಲ್ಲ. ಯಾರದೋ ಗುಡಿಸಲು. ಯಾರದೋ ಜಮೀನು. ಅಲ್ಲಿದ್ದ ಭತ್ತದ ಗದ್ದೆಯ ಬದುವಿನಲ್ಲಿ ಸಿಗುತ್ತಿದ್ದ ಗೆಡ್ಡೆ-ಗೆಣಸು ತಿಂದೇ ಈ ದಂಪತಿ ಬದುಕ್ತಾ ಇದ್ರು. ಬಹುಶಃ ಏನೋ ಆರ್ಥಿಕ ತೊಂದರೆ ಇತ್ತೆಂದು ಕಾಣುತ್ತೆ. ವಿಷಯ ತಿಳಿಸಿದ್ದರೆ ಮಂಗಳೂರಿನಲ್ಲಿದ್ದ ಮಗಳು ಸಹಾಯ ಮಾಡ್ತಿದ್ದಳು. ಆದರೆ, ಮಹಾಸ್ವಾಭಿಮಾನಿಯಾದ ಕಾಮತ್ ಯಾರಿಗೂ ಏನೂ ಹೇಳದೆ ದೇಶಾಂತರ ಹೊರಟವರಂತೆ ಬಂದುಬಿಟ್ಟಿದ್ರು. ಗುಡಿಸಲಿನಲ್ಲಿದ್ದ ಪಾತ್ರೆ ಪಗಡಗಳೆಲ್ಲ ಖಾಲಿ ಖಾಲಿ! ಅವರು ಊಟ ಮಾಡಿ ನಾಲ್ಕು ದಿನ ಆಗಿತ್ತು ಎಂಬ ವಿಷಯ ಕೂಡ ಆಗಲೇ ಗೊತ್ತಾಯ್ತು. ನನ್ನ ಪ್ರೀತಿಯ ನಾಟಕಕಾರ ಇದ್ದ ಸ್ಥಿತಿ ಕಂಡು ಕರುಳು ಕಿವಿಚಿದ ಹಾಗಾಯ್ತು. ತಕ್ಷಣವೇ ಬಾಸ್ಕೋಡ್ ಅವರನ್ನು ಹೊರಡಿಸಿಕೊಂಡು ಅಂಕೋಲಾಕ್ಕೆ ಬಂದೆ. ಅಲ್ಲಿ, ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನು ಖರೀದಿಸಿ ವಾಪಸ್ ಕಾಮತರ ಗುಡಿಸಲಿಗೆ ಹೋದೆವು. ಕಾಮತರ ಪತ್ನಿ, ನಮ್ಮನ್ನೇ ಬೆರಗಿನಿಂದ ನೋಡಲು ಶುರು ಮಾಡಿದ್ರು. ಆಗ ಹೇಳಿದೆ. ‘ಅಮ್ಮಾ, ಅಡುಗೆ ಮಾಡಿ. ಎಲ್ರೂ ಜತೇಲಿ ಊಟ ಮಾಡೋಣ…’
ಊಟಕ್ಕೆ ಕೂತ ಕಾಮತ್‌ರು ಸಂತೋಷ, ಭಾವೋದ್ವೇಗ ತಡೆಯ ಲಾಗದೆ ಬಿಕ್ಕಳಿಸಿ ಅಳಲು ಶುರು ಮಾಡಿದ್ರು. ಅವರನ್ನು ಸಮಾಧಾನಿ ಸಿದೆ. ನಂತರ ಹತ್ತು ಸಾವಿರ ರೂಪಾಯಿ ಕೊಟ್ಟು ನಮಸ್ಕಾರ ಮಾಡಿ ಹೇಳಿದೆ: ‘ನಿಮ್ಮ ನಾಟಕವನ್ನು ಸಿನಿಮಾ ಮಾಡ್ತಿದೀನಿ. ಒಪ್ಪಿಗೆ ಕೊಡಿ ಸಾರ್’. ತಕ್ಷಣವೇ ಎರಡು ಬಾಕ್ಸ್‌ಗಳನ್ನು ತಂದ ಕಾಮತರು-‘ಒಪ್ಪಿಗೆ ಕೊಟ್ಟಿದೀನಿ. ಜತೆಗೆ, ಅಲ್ಲಿರೋ ಎಲ್ಲಾ ಪುಸ್ತಕಗಳೂ ನಿಮಗೇ. ತಗೊಂಡು ಹೋಗಿ’ ಎಂದರು.
‘ಶೂಟಿಂಗ್ ನೋಡಲು ಬನ್ನಿ ಸಾರ್’ ಎಂದು ಆಹ್ವಾನಿಸಿದೆ. ಕಾಮತ್‌ರೂ ಒಪ್ಪಿದ್ದರು. ಆದರೆ ದುರಂತ ನೋಡಿ, ಶೂಟಿಂಗ್‌ಗೆ ಒಂದು ವಾರ ಬಾಕಿ ಇದೆ ಅನ್ನುವಾಗ ಹೃದಯಾಘಾತದಿಂದ ಕಾಮತರು ತೀರಿಕೊಂಡ ಸುದ್ದಿ ಬಂತು. ಈ ಬೇಸರದ ಮಧ್ಯೆಯೇ ಗೀತೆರಚನೆಯ ಕೆಲಸ ಶುರುವಾಯ್ತು. ಅದಕ್ಕೆಂದೇ ಶಿವಾನಂದ ಸರ್ಕಲ್ ಬಳಿಯ ಪ್ರಣಾಮ್ ಹೋಟೆಲಿನಲ್ಲಿ ರೂಂ ಮಾಡಿದ್ವಿ. ಈ ಸಂದರ್ಭದಲ್ಲಿಯೇ ದೊಡ್ಡರಂಗೇಗೌಡರ ಮೂಲಕ ಪರಿಚಯ ವಾದವರು ಸು. ರುದ್ರಮೂರ್ತಿ ಶಾಸ್ತ್ರಿ. ‘ಶಾಸ್ತ್ರಿಗಳು ಚೆನ್ನಾಗಿ ಬರೀ ತಾರೆ. ಅವರಿಂದಲೂ ಒಂದು ಹಾಡು ಬರೆಸಿ’ ಅಂದರು ದೊ.ರಂ. ಗೌಡ. ‘ಸರಿ’ ಎಂದು ಶಾಸ್ತ್ರಿಗಳಿಗೆ ಸಿನಿಮಾದ ಸನ್ನಿವೇಶ ವಿವರಿಸಿದೆ. ಅದೇ ಸಂದರ್ಭದಲ್ಲಿ ಕಾಮತ್‌ರನ್ನು ಭೇಟಿ ಮಾಡಿ ಬಂದ ಕಥೆ ಯನ್ನೂ ಹೇಳಿದೆ. ಈ ವೇಳೆಗಾಗಲೇ ದೊಡ್ಡರಂಗೇಗೌಡರ ಕವಿತೆಯ ಮೊದಲ ಎರಡು ಸಾಲು ಬಳಸಿ ಹಂಸಲೇಖಾ ರಾಗ ಸಂಯೋಜನೆ ಮುಗಿಸಿದ್ರು. ಆ ಟ್ಯೂನ್ ಕೇಳಿಸಿಕೊಂಡು ಥೀಮ್ ಸಾಂಗ್ ಬರೆಯ ಬೇಕಿತ್ತು. ಶಾಸ್ತ್ರಿಗಳು ಇಡೀ ಸಂದರ್ಭವನ್ನು ಅನುಭವಿಸಿದವರಂತೆ ಹಾಡು ಬರೆದರು. ಸ್ವಾರಸ್ವವೆಂದರೆ-ಆ ಹಾಡಲ್ಲಿ ಸಿನಿಮಾದ ಸಂದರ್ಭವಿರಲಿಲ್ಲ. ಬದಲಿಗೆ-ಇಡೀ ಭರತ ಖಂಡದ ಮನೆಮನೆಯ ತಾಯ್ತಂದೆಯರ ವಿಷಾದ ಗೀತೆಯಿತ್ತು ಮತ್ತು ಅದೇ ಕಾರಣಕ್ಕೆ ಹಾಡು ಎಂದೆಂದಿಗೂ ಪ್ರಸ್ತುತ ಎಂಬಂತೆ ಆಗಿಹೋಯ್ತು…’
ಇಷ್ಟು ಹೇಳಿ ಹಾಡಿನ ಕಥೆಗೆ ‘ಶುಭಂ’ ಹೇಳಿದರು ಶ್ರೀನಿವಾಸಮೂರ್ತಿ.

ಅವರು-ಏನ್ ಕೇಳಿದ್ರೂ ಕೊಡ್ತೇನೆ ಅಂದರು;ಇವರು -ಅದನ್ನೇ ಹಾಡಾಗಿಸಿದರು!

ಜನವರಿ 6, 2011

ಏನೇ ಕೇಳು ಕೊಡುವೆ ನಿನಗೆ ನಾನೀಗ
ಚಿತ್ರ: ಗೀತಾ. ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಇಳಯರಾಜ. ಗಾಯನ: ಎಸ್ಪೀಬಿ-ಎಸ್. ಜಾನಕಿ

ಮಾತು: ‘ಹಲೋ, ಈಸ್ ಇಟ್ ೨೬೨೬೬?’
‘ಯೆಸ್’
‘ಹಾಯ್ ಸಂಜು…’
‘ಹಾಯ್ ಗೀತಾ…’
‘ಸಂಜು, ನಾ ಊಟಿಗೆ ಹೋಗ್ತಿದೀನಿ’
‘ಕಂಗ್ರಾಜುಲೇಷನ್ಸ್, ಯಾವಾಗ?’
‘ನಾಳೆ ಬರ್‍ತೀಯ ತಾನೇ?’

ಹಾಡು: ಏನೇ ಕೇಳು ಕೊಡುವೆ ನಿನಗೆ ನಾನೀಗ
ನಿನ್ನ ಬಯಕೆ ಏನು ಮನದಾಸೆ ಏನು
ಬಾ ಹೇಳು ಕಿವಿಯಲ್ಲಿ
ಏನೇ ಕೇಳು ಕೊಡುವೆ ನಿನಗೆ ನಾನೀಗ ||ಪ||

‘ಬಾಳು ಒಂದಾಟ ದಿನವೂ ಹೊಸ ನೋಟ
ಒಲಿದ ಹುಡುಗ ಜತೆಯಾಗಿರಲು ಸಂತೋಷ’
‘ಬಾಳು ಒಂದಾಟ ದಿನವೂ ಹೊಸನೋಟ
ಒಲಿದ ಹುಡುಗಿ ಜತೆಯಾಗಿರಲು ಸಂತೋಷ’

ಪುಟ್ಟದೊಂದು ಮಾತು ಹೇಳೋ ಆಸೆ ಬಂತು
ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
ಬೇರೆ ಏನು ಬೇಕು ನೀನು ಇರುವಾಗ
ನಿನ್ನ ಜತೆಯೇ ಸಾಕು…ಸವಿನುಡಿಯೇ ಸಾಕು, ಸಾಕು ನಿನ್ನೊಲುಮೆ
ಬೇರೆ ಏನು ಬೇಕು ನೀನು ಇರುವಾಗ? ||೧||

ಹಾ… ಕಣ್ಣುಗಳು ಕಲೆತಾಗ ಮನಸೆರಡು ಬೆರೆತಾಗ
ಮಿಂಚೊಂದು ಮೈಯಲ್ಲಿ ಸಂಚರಿಸಿದಾಗ
ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
ವಿರಹದುರಿ ಒಡಲಲ್ಲಿ ಸುಡುತಲಿರುವಾಗ
ನಿನ್ನ ಸೇರಿ ಹಾಯಾಗಿರಲು ನಾ ಬಂದೆ
ನಿನ್ನ ಬಯಕೆ ಅರಿತೆ, ಮನದಾಸೆ ತಿಳಿದೆ, ಬಾ ಇನ್ನೂ ಹತ್ತಿರಕೆ ||೨||

ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಕನಸಾಗಿ, ಒಂದು ಪಾತ್ರವಾಗಿ, ಮರೆಯಲಾಗದ ‘ಚಿತ್ರ’ವಾಗಿ ಕನ್ನಡಿಗರನ್ನು ಬಿಟ್ಟೂ ಬಿಡದೆ ಕಾಡುವ ವ್ಯಕ್ತಿತ್ವ ನಟ ಶಂಕರ್‌ನಾಗ್ ಅವರದು. ಶಂಕರ್‌ನಾಗ್ ಅಂದರೆ ಸಾಕು- ಮನಸು ಮೂಕವಾಗುತ್ತದೆ. ಹೃದಯ ಭಾರವಾಗುತ್ತದೆ. ಹೆಸರೇ ಗೊತ್ತಿಲ್ಲದ ಕೆಲವರು ಶಂಕರ್‌ನಾಗ್ ಕುರಿತು ಮಾತಿಗೆ ನಿಂತಿದ್ದರೆ ಅದನ್ನು ಕೇಳುತ್ತಲೇ ನಿಂತುಬಿಡುವ ಆಸೆಯಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲ ಮನಸು ಮಾತಾಡುವುದು ಹೀಗೆ: ’Uಛಿ ಞಜಿoo qsಟ್ಠ oeZhZ Zಜ..’
ಶಂಕರ್‌ನಾಗ್ ಸಿನಿಮಾದ ಹಾಡುಗಳ ಹಿಂದಿರುವ ಕಥೆಯನ್ನು ಈ ಅಂಕಣದಲ್ಲಿ ಬರೆಯಲೇಬೇಕು ಎಂದು ಕನಸು ಕಂಡಿದ್ದು ವರ್ಷದ ಹಿಂದೆ. ಆದರೆ ಕನಸು ನನಸಾದದ್ದು ಮಾತ್ರ ಮೊನ್ನೆ ಮೊನ್ನೆ- ಹೊಸ ವರ್ಷದ ಮುಸ್ಸಂಜೆ. ಅವತ್ತು ಆಕಸ್ಮಿಕವಾಗಿ ಸಿಕ್ಕವರು ಶಂಕರ್‌ನಾಗ್ ಅವರ ಜೀವದ ಗೆಳೆಯ ರಮೇಶ್ ಭಟ್. ಭಟ್ಟರು ಅವತ್ತು ಮಾತಾಡುವ ಮೂಡ್‌ನಲ್ಲಿದ್ದರು. ‘ಸಾರ್ ಹಾಡಿನ ಕಥೆ..’ ಅನ್ನುತ್ತಿದ್ದಂತೆಯೇ ‘ಗೀತಾ’ ಸಿನಿಮಾದ ಒಂದು ಹಾಡಿನ ಕಥೆ ಹೇಳಲಾ? ಎಂದವರೇ ಶುರುಮಾಡಿಯೇ ಬಿಟ್ಟರು. ಮಾತು ಮುಂದುವರಿದಿದ್ದು ಹೀಗೆ:
***
ಆಗಷ್ಟೇ ‘ಮಿಂಚಿನ ಓಟ’ ಸಿನಿಮಾ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಕಂಡಿತ್ತು. ಆಗಲೇ ಒಂದು ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವ ಯೋಚನೆಯಲ್ಲಿದ್ದ ಶಂಕರ್. ಅದಕ್ಕೆ ಕಥೆ-ಚಿತ್ರಕಥೆಯ ಕೆಲಸವೂ ಮುಗಿದಿತ್ತು. ರಾಜ್‌ಕುಮಾರ್ ಚಿತ್ರಗಳನ್ನು ನಿರ್ಮಿಸುತ್ತಿದ್ದ ದ್ವಾರಕಾನಾಥ್ ಮತ್ತು ಭಕ್ತವತ್ಸಲಂ ನಿರ್ಮಾಣದ ಜವಾಬ್ದಾರಿ ಹೊರಲು ಮುಂದೆ ಬಂದಿದ್ದರು. ಹೊಸ ಚಿತ್ರಕ್ಕೆ ‘ಗೀತಾ’ ಎಂದು ಹೆಸರಿಟ್ಟಿದ್ದ ಶಂಕರ್‌ನಾಗ್, ಅದಕ್ಕೆ ಇಳಯರಾಜಾ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸಲು ನಿರ್ಧರಿಸಿದ್ದ. ಈ ಸಂಬಂಧವಾಗಿ ಚರ್ಚಿಸಲೆಂದೇ ಶಂಕರ್‌ನಾಗ್ ಮತ್ತು ಅರುಂಧತಿ ಮದ್ರಾಸ್‌ಗೆ ತೆರಳಿದ್ದರು. ಜತೆಗೆ ನನ್ನನ್ನೂ ಕರೆದೊಯ್ದಿದ್ದರು.
ಆಗೆಲ್ಲ ಈಗಿನಂತೆ ಪೆನ್‌ಡ್ರೈವ್, ಮೊಬೈಲ್ ರೆಕಾರ್ಡಿಂಗ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಹಾಡಿನ ಟ್ಯೂನ್‌ಗಳನ್ನು ಟೇಪ್ ರೆಕಾರ್ಡರ್‌ನಲ್ಲಿ ಧ್ವನಿಮುದ್ರಿಸಿಕೊಳ್ಳಬೇಕಿತ್ತು. ಅದಕ್ಕೆಂದೇ ಬೆಂಗಳೂರಿನ ಬರ್ಮಾ ಬಜಾರ್‌ನಲ್ಲಿ ಒಂದು ಟೇಪ್ ರೆಕಾರ್ಡರ್ ಖರೀದಿಸಿಯೇ ನಾವು ಮದ್ರಾಸ್ ತಲುಪಿದ್ದೆವು. ಇಳಯರಾಜ ಹಾಗೂ ಶಂಕರ್‌ನಾಗ್ ಮಧ್ಯೆ ಒಳ್ಳೆಯ ಅಂಡರ್‌ಸ್ಟ್ಯಾಂಡಿಂಗ್ ಇತ್ತು. ಯಾವ ಯಾವ ಸಂದರ್ಭದಲ್ಲಿ ಹಾಡುಗಳಿರಬೇಕು ಎಂಬ ಮಾಹಿತಿ ಪಡೆದುಕೊಂಡ ಇಳಯ ರಾಜ, ಕೆಲವೇ ನಿಮಿಷದಲ್ಲಿ ಒಂದು ಟ್ಯೂನ್ ಕೇಳಿಸಿದರು. ಅದನ್ನು ರೆಕಾರ್ಡ್ ಮಾಡಿಕೊಂಡದ್ದಾಯಿತು. ನಂತರ- ‘ಶಂಕರ್, ಎಸ್ಪೀಬಿ-ಎಸ್.ಜಾನಕಿ ಇಬ್ರೂ ನನಗೆ ನಾಡಿದ್ದಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಅಷ್ಟರೊಳಗೆ ಒಂದು ಹಾಡು ಬರೆಸಿದ್ರೆ ರೆಕಾರ್ಡಿಂಗ್ ಮಾಡಬಹುದು’ ಅಂದರು. ಒಂದು ಹಾಡನ್ನು ಹಾಡಿಸಿ, ಚಿತ್ರದ ರೆಕಾರ್ಡಿಂಗ್‌ಗೆ ಚಾಲನೆ ನೀಡಬೇಕೆಂಬುದು ಶಂಕರ್‌ನಾಗ್ ನಿರ್ಧಾರವೂ ಆಗಿತ್ತು.
ಆ ದಿನಗಳಲ್ಲಿ ಗೀತೆರಚನೆಗೆ ಹೆಸರಾಗಿದ್ದವರೆಂದರೆ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಮತ್ತು ವಿಜಯ ನಾರಸಿಂಹ. ‘ಗೀತಾ’ ಚಿತ್ರಕ್ಕೆ ಉದಯಶಂಕರ್ ಅವರಿಂದಲೇ ಹಾಡು ಬರೆಸಬೇಕೆಂಬುದು ಶಂಕರ್‌ನಾಗ್ ಆಸೆಯಾಗಿತ್ತು. ಸಾಮಾನ್ಯವಾಗಿ ಮದ್ರಾಸ್‌ನಲ್ಲಿ ಉಳಿದಿದ್ದರೆ ಪಾಮ್‌ಗ್ರೋವ್ ಹೋಟೆಲಿನ ರೂಂ. ನಂಬರ್ ೨೧೩ರಲ್ಲಿ ಎಂ. ರಂಗರಾವ್, ಅಥವಾ ಸ್ವಾಗತ್ ಹೋಟೆಲಿನ ರೂಂ. ನಂ. ೧೦೮ರಲ್ಲಿ ಇರುತ್ತಿದ್ದರು ಉದಯಶಂಕರ್. ಈ ಎರಡೂ ಕಡೆಗಳಲ್ಲಿ ಇಲ್ಲ ಎಂದಾದರೆ ರಾಜ್‌ಕುಮಾರ್ ಬ್ಯಾನರ್‌ನ ಸಿನಿಮಾದ ಕಥೆ-ಚಿತ್ರಕಥೆ- ಸಂಭಾಷಣೆ- ಗೀತೆರಚನೆಯ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ ಎಂದು ನಂಬಲಾಗುತ್ತಿತ್ತು.
‘ಗೀತಾ’ ಚಿತ್ರಕ್ಕೆ ಅರ್ಜೆಂಟಾಗಿ ಹಾಡು ಬರೆಸಬೇಕು ಅನ್ನಿಸಿದಾಗ ನಾವು ಪಾಮ್‌ಗ್ರೋಮ್ ಹಾಗೂ ಸ್ವಾಗತ್ ಹೋಟೆಲ್‌ಗಳಲ್ಲಿ ವಿಚಾರಿಸಿ ನೋಡಿದೆವು. ಚಿ.ಉ. ಅಲ್ಲಿರಲಿಲ್ಲ. ಅವರು ಎಲ್ಲಿರಬಹುದು ಎಂದು ವಿಚಾರಿಸಿದಾಗ ಮೈಸೂರಿನಲ್ಲಿ ರಾಜ್ ಅಭಿನಯದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆಯೆಂದೂ, ಉದಯ ಶಂಕರ್ ಅಲ್ಲಿದ್ದಾರೆಂದೂ ಗೊತ್ತಾಯಿತು. ‘ಭಟ್ರೆ, ನೀವು ಈಗಿಂದೀಗಲೇ ಮೈಸೂರಿಗೆ ಹೊರಡಿ. ಉದಯಶಂಕರ್ ಅವರನ್ನು ನಾಳೆ ಬೆಳಗ್ಗೇನೇ ಭೇಟಿ ಮಾಡಿ ಟ್ಯೂನ್ ಕೇಳಿಸಿ. ಕನಿಷ್ಠ ಒಂದು ಹಾಡನ್ನಾದ್ರೂ ಬರೆಸಿಕೊಂಡು ರಾತ್ರಿ ೧೧ ಗಂಟೆಗೆ ಮೈಸೂರು ಬಿಡಿ. ಹಾಗೆ ಮಾಡಿದ್ರೆ ಮರುದಿನ ಬೆಳಗಿನ ಜಾವಕ್ಕೇ ಮದ್ರಾಸಿಗೆ ಬಂದಿರ್‍ತೀರಿ. ಆನಂತರ ನಾವು ಹಾಡಿನ ರೆಕಾರ್ಡಿಂಗ್ ಮುಗಿಸೋಣ’ ಅಂದ ಶಂಕರ್. ನಾನು ಟೇಪ್ ರೆಕಾರ್ಡರ್ ತಗೊಂಡು ತರಾತುರಿಯಲ್ಲೇ ಮೈಸೂರಿಗೆ ಹೊರಟೆ.
ಬೆಳಗಿನ ಜಾವಕ್ಕೇ ಮೈಸೂರು ತಲುಪಿ, ರಾಜ್ ಸಿನಿಮಾ ಚಿತ್ರೀಕರಣವಾಗುತ್ತಿದ್ದ ಜಾಗಕ್ಕೆ ಹೋದೆ. ಆದರೆ ಅಲ್ಲಿ ಉದಯಶಂಕರ್ ಸಿಗಲಿಲ್ಲ. ಸಂಜೆಯವರೆಗೆ ನಾನು ಹುಡುಕಿದ್ದೇ ಹುಡುಕಿದ್ದು. ಆದರೂ ಉದಯಶಂಕರ್ ಸಿಗಲಿಲ್ಲ. ಈ ಹುಡುಕಾಟದ ವೇಳೆಯಲ್ಲೇ ಉದಯಶಂಕರ್ ಅವರು ಮೈಸೂರಿನ ಸುಜಾತಾ ಹೋಟೆಲಿನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂತು. ಸಂಜೆಯಾಗುತ್ತಿದ್ದಂತೆಯೇ ಆ ಹೋಟೆಲಿಗೆ ಹೋಗಿ ವಿಚಾರಿಸಿದೆ. ‘ಸಾರ್, ಉದಯಶಂಕರ್ ಅವರು ಇಲ್ಲಿ ಉಳ್ಕೊಂಡಿರೋದು ನಿಜ. ಆದರೆ ಈಗ ಅವರು ಹೊರಗೆ ಹೋಗಿದ್ದಾರೆ. ಅವರು ಎಲ್ಲಿಯೇ ಇದ್ರೂ ರಾತ್ರಿ ಒಂಭತ್ತು ಗಂಟೆಗೆ ಬಂದೇ ಬರ್‍ತಾರೆ. ಕಾದು ನೋಡಿ’ ಎಂದರು ಆ ಹೋಟೆಲಿನ ಮ್ಯಾನೇಜರ್.
ರಾತ್ರಿ ಒಂಭತ್ತು ಗಂಟೆಗೆ ಮತ್ತೆ ಆ ಹೋಟೆಲಿಗೆ ಹೋದೆ. ಅಲ್ಲಿ ಉದಯ ಶಂಕರ್ ಇದ್ದರು. ತಕ್ಷಣವೇ ಅವರ ಬಳಿ ಧಾವಿಸಿ ಎಲ್ಲ ವಿಷಯ ಹೇಳಿದೆ. ‘ಈಗ ೧೧.೩೦ಗೆ ಮದ್ರಾಸಿಗೆ ಬಸ್ಸಿದೆ. ನಾನು ಹೋಗಲೇಬೇಕು ಸಾರ್. ಅಷ್ಟರೊಳಗೆ ನೀವು ಒಂದು ಹಾಡನ್ನಾದ್ರೂ ಬರೆದು ಕೊಡಲೇಬೇಕು. ಏಕೆಂದರೆ ನಾಳೆ ರೆಕಾರ್ಡಿಂಗ್‌ಗೆ ಎಸ್ಪೀಬಿ ಹಾಗೂ ಎಸ್. ಜಾನಕಿಯವರ ಕಾಲ್‌ಶೀಟ್ ತಗೊಂಡಿದೀವಿ. ನಿಮ್ಮ ಹಾಡಿಗಾಗಿ ಮದ್ರಾಸಿನಲ್ಲಿ ಇಳಯರಾಜ, ಶಂಕರ್ ಹಾಗೂ ಅರುಂಧತಿ ಕಾಯ್ತಾ ಇದ್ದಾರೆ’ ಅಂದೆ.
ನನ್ನ ಅವಸರದ ಮಾತುಗಳನ್ನೆಲ್ಲ ಕೇಳಿ, ಒಮ್ಮೆ ಮಗುವಿನಂತೆ ನಕ್ಕರು ಉದಯಶಂಕರ್. ನಂತರ-‘ಅಲ್ಲಪ್ಪಾ, ಈಗಾಗ್ಲೇ ರಾತ್ರಿ ೯ ಗಂಟೆ ಆಗಿದೆ. ೧೧.೩೦ಕ್ಕೆ ಮದ್ರಾಸ್ ಬಸ್ ಹತ್ತಬೇಕು. ಅಷ್ಟರೊಳಗೇ ಹಾಡು ಬೇಕು ಅಂತಿದ್ದೀರ. ನಿಮಗೆ ಹಾಡು ಕೊಡಲು ನಾನು ರೆಡಿ. ಆದರೆ ಈಗ ನನ್ನ ಜೇಬೊಳಗೆ ಯಾವ ಹಾಡೂ ಇಲ್ವಲ್ಲ, ಏನು ಮಾಡಲಿ?’ ಎಂದರು. ಕ್ಷಣ ಕಾಲದ ನಂತರ -‘ಗಾಬರಿಯಾಗಬೇಡಿ. ನಿಮ್ಗೆ ಖಂಡಿತ ಒಂದು ಹಾಡು ಬರೆದುಕೊಡ್ತೀನಿ. ಅದ್ರೆ ನೀವು ನನಗೇನು ಕೊಡ್ತೀರಾ?’ ಎಂದು ಕೇಳಿಬಿಟ್ಟರು.
ಈ ಪ್ರಶ್ನೆ ನನಗೆ ಅನಿರೀಕ್ಷಿತವಾಗಿತ್ತು. ‘ಉದಯ ಶಂಕರ್ ಅವರಿಗೆ ಮೊದಲು ಟ್ಯೂನ್ ಕೇಳಿಸು. ಇದೊಂದು ಪ್ರೇಮಗೀತೆ, ಯುಗಳಗೀತೆ ಎಂದು ಹೇಳು. ನಂತರ ಅವರು ಹಾಡು ಕೊಡ್ತಾರೆ. ತಗೊಂಡು ಬಾ…’ ಇಷ್ಟು ಮಾತ್ರ ಹೇಳಿದ್ದ ಶಂಕರ. ಆದರೆ ಹಾಡು ಬರೆದ್ರೆ ಏನು ಕೊಡ್ತೀರಿ ಎಂಬ ಪ್ರಶ್ನೆ ಹಾಕಿದ್ದರು ಉದಯಶಂಕರ್. ‘ಆದದ್ದಾಗಲಿ’ ಎಂದುಕೊಂಡು ‘ಏನು ಕೊಡಬೇಕು ಅಂತ ನೀವೇ ಹೇಳಿಬಿಡಿ ಸಾರ್’ ಅಂದೇಬಿಟ್ಟೆ.
ಈ ಮಾತು ಕೇಳಿ ನನ್ನನ್ನೇ ವಾರೆನೋಟದಿಂದ ನೋಡಿದ ಉದಯಶಂಕರ್-ಹಾಗಾಗೊಲ್ಲ ಭಟ್ರೇ. ಈಗ ಹಾಡು ಕೊಟ್ರೆ ಏನು ಕೊಡ್ತಾನೆ ಅಂತ ಒಮ್ಮೆ ಶಂಕರ್‌ನಾಗ್‌ನನ್ನೇ ಕೇಳಿಬಿಡಿ’ ಅಂದವರೇ, ಒಂದು ಖಾಲಿ ಹಾಳೆ ತಗೊಂಡು ಅದರ ಮೇಲೆ ‘ಓಂ’ ಎಂದು ಬರೆದರು.
ಉದಯಶಂಕರ್ ಮಾತಿಗೆ ಪ್ರತಿ ಹೇಳುವ ಹಾಗಿರಲಿಲ್ಲ. ನಾನು ಸರಸರನೆ ರಿಸೆಪ್ಶನ್‌ಗೆ ಬಂದೆ. ಅಲ್ಲಿಂದ ಮದ್ರಾಸಿಗೆ ಫೋನ್ ಮಾಡಿ ಶಂಕರ್‌ನಾಗ್‌ಗೆ ಎಲ್ಲವನ್ನೂ ವಿವರವಾಗಿ ಹೇಳಿದೆ. ಈಗ ಹಾಡು ಬರೆದುಕೊಟ್ರೆ ಏನು ಕೊಡ್ತಾರೋ ಕೇಳ್ಕೊಂಡು ಬನ್ನಿ ಅಂದಿದಾರೆ. ನಾನು ಏನೆಂದು ಉತ್ತರ ಹೇಳಲಿ ಶಂಕರ್?’ ಎಂದು ಗಾಬರಿಯಿಂದ ಪ್ರಶ್ನಿಸಿದೆ.
ನನ್ನ ಮಾತು ಕೇಳಿ ಒಮ್ಮೆ ಜೋರಾಗಿ ನಕ್ಕ ಶಂಕರ್‌ನಾಗ್-‘ ಅವರು ಏನು ಕೇಳಿದ್ರೂ ಕೊಡ್ತಾರೆ’ ಅಂತ ಹೇಳು ‘ ಅಂದುಬಿಟ್ಟ. ನಾನು ಸರ್ರನೆ ಉದಯ ಶಂಕರ್ ರೂಮಿಗೆ ಬಂದು-‘ಸಾರ್, ನೀವು ಏನು ಕೇಳಿದ್ರೂ ಕೊಡ್ತಾನಂತೆ ಶಂಕರ್‌ನಾಗ್’ ಎಂದೆ. ನನ್ನ ಮಾತು ಕೇಳಿ ಒಮ್ಮೆ ಖುಷಿಯಿಂದ ಕಣ್ಣರಳಿಸಿದರು ಉದಯಶಂಕರ್. ನಂತರ, ‘ಹೌದಾ? ಏನು ಕೇಳಿದ್ರೂ ಕೊಡ್ತೀನಿ ಅಂದಿದಾನಾ ಶಂಕರ್‌ನಾಗ್? ಸರಿ ಸರಿ. ಸ್ವಲ್ಪ ಹೊತ್ತು ಇಲ್ಲೇ ಕುಳಿತಿರಿ. ಹಾಡು ಬರೆದುಕೊಡ್ತೀನಿ’ ಅಂದರು. ನಂತರದ ಇಪ್ಪತ್ತನೇ ನಿಮಿಷಕ್ಕೆ ನನ್ನ ಕೈಲಿ ಹಾಡಿನ ಹಾಳೆಯಿತ್ತು. ಮೊದಲೆರಡು ಸಾಲು ನೋಡಿದೆನೋ ಇಲ್ಲವೋ; ನನಗೇ ಗೊತ್ತಿಲ್ಲದಂತೆ ಕಣ್ತುಂಬಿಕೊಂಡಿತು. ಏಕೆಂದರೆ-‘ಏನು ಕೇಳಿದ್ರೂ ಕೊಡ್ತೇನೆ’ ಎಂದು ಶಂಕರ್‌ನಾಗ್ ಹೇಳಿದ್ದನಲ್ಲ? ಆ ಸಾಲನ್ನೇ ಇಟ್ಟುಕೊಂಡು-‘ ಏನೇ ಕೇಳು ಕೊಡುವೆ ನಿನಗೆ ನಾನೀಗ/ ನಿನ್ನ ಬಯಕೆ ಏನು, ಮನದಾಸೆ ಏನು/ ಹೇಳು ಬಾ ಕಿವಿಯಲ್ಲಿ’ ಎಂದು ಬರೆದಿದ್ದರು.
ನಾನು ಮಾತೇ ಹೊರಡದೆ ನಿಂತುಬಿಟ್ಟಿದ್ದೆ. ಆಗಲೇ ಉದಯಶಂಕರ್ ಮೆಲ್ಲಗೆ ನನ್ನ ಮೈ ತಟ್ಟಿ ಹೇಳಿದರು: ಇನ್ನೂ ಸಮಯವಿದೆ. ಈ ಹಾಡಲ್ಲಿ ಏನಾದ್ರೂ ಬದಲಾವಣೆ ಬೇಕಿದ್ರೆ ಹೇಳಿ, ಬದಲಿಸಿ ಕೊಡ್ತೇನೆ…’
ಅವರ ಸರಳತೆ, ದೊಡ್ಡ ಮನಸ್ಸು ಕಂಡು ಮತ್ತಷ್ಟು ಖುಷಿಯಾಯಿತು. ಹಾಡು ಅದ್ಭುತವಾಗಿದೆ ಸಾರ್. ನಾನು ಹೋಗಿಬರ್‍ತೀನಿ ಎನ್ನುತ್ತಾ ತಕ್ಷಣ ಹೊರಟೆ. ಹಾಡಿನ ಸಾಹಿತ್ಯ ಕಂಡು ಶಂಕರ್‌ನಾಗ್, ಇಳಯರಾಜಾ ತುಂಬಾ ಖುಷಿಪಟ್ಟರು. ಎಸ್ಪೀಬಿ- ಎಸ್. ಜಾನಕಿ ಅದ್ಭುತವಾಗಿ ಹಾಡಿದರು. ಪರಿಣಾಮ, ಅದು ಎಂದೂ ಮರೆಯದ ಹಾಡಾಯಿತು!’
***
ಹಾಡಿನ ನೆಪದಲ್ಲಿ ಇಬ್ಬರು ‘ಶಂಕರ’ರನ್ನೂ ಮತ್ತೆ ಮತ್ತೆ ನೆನೆಯುವಂತೆ ಮಾಡಿದ ರಮೇಶ್‌ಭಟ್ ಅವರಿಗೆ -‘ಸಾರ್, ಇನ್ನೊಂದೆರಡು ಕಥೆ ಹೇಳಿ’ ಎಂದು ಬೇಡಿಕೊಂಡರೆ -ಅವರು ‘ತಥಾಸ್ತು’ ಅಂದೇ ಬಿಟ್ಟರು!

ಸಾಧನೆಗೆ ಅಸಾಧ್ಯವಾದುದು ಇಲ್ಲ, ಇಲ್ಲ, ಇಲ್ಲ !

ಡಿಸೆಂಬರ್ 30, 2010

 

 

 

 

 

 

 

ಕಣ್ಮುಂದೆ ಇರೋದು ಇನ್ನು ಒಂದೇ ದಿನ. ಒಂದು ದಿನ ಕಳೆಯಿತೆಂದರೆ- ಚಿಯರ್‍ಸ್! ಅದು ಹೊಸ ವರ್ಷದ ಮೊದಲ ದಿನ. ಪ್ರತಿಬಾರಿಯೂ ಅಷ್ಟೆ. ಡಿಸೆಂಬರ್ ಬಂದಾಕ್ಷಣವೇ ನಮಗೆ ಹೊಸ ವರ್ಷ ನೆನಪಾಗುತ್ತದೆ. ಸರಿದು ಹೋಗುತ್ತಿರುವ ವರ್ಷದಲ್ಲಿ ಒಂದು ಸೋಲಿಗೆ, ಸಂಕಟಕ್ಕೆ, ಅವಮಾನಕ್ಕೆ, ಯಾತನೆಗೆ ಸಿಕ್ಕಿಕೊಂಡವರು ಹೊಸ ವರ್ಷದಲ್ಲಾದರೂ ನನಗೆ ನೆಮ್ಮದಿ ಸಿಗಲಿ ಎಂದು ಆಸೆ ಪಡುತ್ತಾರೆ. ಅದೇ ರೀತಿ, ಈಗಾಗಲೇ ಯಶಸ್ಸಿನ ಕುದುರೆ ಮೇಲಿರುವ ಜನ, ಅದೇ ಯಶಸ್ಸು ಹೊಸ ವರ್ಷದಲ್ಲೂ ಮುಂದುವರಿಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಪೂಜೆ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಹೋಮ ಮಾಡಿಸುತ್ತಾರೆ. ಜ್ಯೋತಿಷ್ಯದ ಮೊರೆ ಹೋಗುತ್ತಾರೆ…
ಇಂಥ ಸಂದರ್ಭದಲ್ಲಿಯೇ ಕೆಲವರು ಬೇರೆಯದೇ ಧಾಟಿಯಲ್ಲಿ ಮಾತಾಡಲು ಶುರು ಮಾಡುತ್ತಾರೆ. ಅವರ ಪ್ರಕಾರ- ‘ಗೆಲುವು ಎಂಬುದು ಕೇವಲ ಅದೃಷ್ಟದ ಆಟ. ಅದು ಹಣೆಬರಹ. ಅದು ದೈವಕೃಪೆ! ಅದೊಂಥರಾ ಲಾಟರಿ ಇದ್ದ ಹಾಗೆ! ಯಶಸ್ಸು ಎಂಬುದು ಯಾವತ್ತೂ ಶ್ರೀಮಂತರ ಪಕ್ಷಪಾತಿ. ಹಾಗಾಗಿ, ಆಕಾಶಕ್ಕೆ ಏಣಿ ಹಾಕುವ ಕೆಲಸ ಮಾಡಲೇಬಾರದು. ‘ಬಡವಾ, ನೀ ಮಡಗಿದಹಾಂಗಿರು’ ಎಂದು ಗಾದೆಯೇ ಇದೆ. ಅದರಂತೆ ಇದ್ದು ಬಿಡಬೇಕು. ಅದೇ ಸರಿ….’
ವಿಪರಾಸ್ಯವೆಂದರೆ, ಇಂಥ ಪೆದ್ದು ಪೆದ್ದು ಮಾತುಗಳನ್ನೇ ನಂಬುವ, ಅದನ್ನು ಅನುಮೋದಿಸುವ, ಅದನ್ನೇ ಅನುಸರಿಸಿ ಬದುಕುವ ಮಂದಿ ಕೂಡಾ ನಮ್ಮ ಮಧ್ಯೆ ಇದ್ದಾರೆ.
ಒಂದು ಮಾತು ನೆನಪಿರಲಿ : ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅಲ್ಲೆಲ್ಲ ಮಹಾನ್ ವ್ಯಕ್ತಿಗಳ ಸಾಧನೆಯ ಬದುಕಿನ ಕಥೆಗಳು ಕಣ್ಣು ಕುಕ್ಕುತ್ತವೆ. ಸ್ವಾರಸ್ಯವೇನೆಂದರೆ, ಒಂದು ಗೆಲುವಿನ ಮೆಟ್ಟಿಲು ಹತ್ತಿ ನಿಲ್ಲುವ ಮುನ್ನ ಅದೇ ಸಾಧಕ ಹತ್ತಕ್ಕೂ ಹೆಚ್ಚು ಬಾರಿ ಸೋಲಿನ ಮೆಟ್ಟಿಲು ಮೇಲೆ ಹೊರಳಾಡಿರುತ್ತಾನೆ ಮತ್ತು ಆತ ಕೂಡ ನಮ್ಮ ನಿಮ್ಮೆಲ್ಲರಂತೆಯೇ ಜನ ಸಾಮಾನ್ಯನೇ ಆಗಿರುತ್ತಾನೆ. ಈ ಮಾತಿಗೆ ಉದಾಹರಣೆಯಾಗಿ ಒಂದು ಕಥೆ ಕೇಳಿ :
ಅವನು ಅಮೆರಿಕನ್. ಆತ ನಮ್ಮ ನಿಮ್ಮಂತೆಯೇ ಇದ್ದ ಮನುಷ್ಯ. ಬದುಕಲ್ಲಿ ಏನಾದರೂ ಸಾಸಬೇಕು ಎಂದು ಅವನಿಗೆ ಆಸೆಯಿತ್ತು. ಕನಸುಗಳಿದ್ದವು. ಛಲವಿತ್ತು, ಆತ್ಮವಿಶ್ವಾಸವಿತ್ತು. ‘ಸಾಧನೆ’ ಮಾಡಲು ಹಣ ಬೇಕು ಅನ್ನಿಸಿದಾಗ ಈತ ಚಿಕ್ಕಂದಿನಲ್ಲೇ ದುಡಿಯಲು ನಿಂತ. ವರ್ಷ ವರ್ಷವೂ ಇಷ್ಟಿಷ್ಟೇ ದುಡ್ಡು ಸೇರಿಸಿಕೊಂಡ. ಹಣದ ಗಂಟು ಒಂದಿಷ್ಟು ದೊಡ್ಡದಾಗುವ ವೇಳೆಗೆ ಅವನಿಗೆ ೨೧ ವರ್ಷವಾಯ್ತು. ಗಂಟಿನ ಹಣದ ಬಲದಿಂದಲೇ ಆತ ವ್ಯಾಪಾರ ಶುರು ಮಾಡಿದ. ಒಂದು ವರ್ಷ ಬಿಸಿನೆಸ್ ಮಾಡಿದ. ಲಾಭದ ಮಾತು ಹಾಗಿರಲಿ, ಹಾಕಿದ ಬಂಡವಾಳವೂ ಬರಲಿಲ್ಲ. ಈ ಸೋಲು ಮರೆಯುವ ಸಲುವಾಗಿ, ಮುಂದಿನ ವರ್ಷ ಆತ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ರ್ಸ್ಪಸಿದ. ಅಲ್ಲೂ ಸೋತ. ಛೆ, ಯಾಕೋ ನನ್ನ ನಸೀಬು ನೆಟ್ಟಗಿಲ್ಲ ಎಂದು ಗೊಣಗಿಕೊಂಡು ಮತ್ತೆ ದುಡಿಮೆಗೆ ನಿಂತ. ಭರ್ತಿ ಎರಡು ವರ್ಷ ಹಗಲಿರುಳೂ ದುಡಿದ. ಪರಿಣಾಮ, ಒಂದಿಷ್ಟು ದುಡ್ಡು ಜತೆಯಾಯಿತು. ವ್ಯಾಪಾರದಲ್ಲಿ ಹಿಂದೊಮ್ಮೆ ಸೋತಿದ್ದನಲ್ಲ? ಆ ತಪ್ಪುಗಳನ್ನೆಲ್ಲ ನೆನಪಿಟ್ಟುಕೊಂಡೇ ಮತ್ತೆ ವ್ಯಾಪಾರ ಆರಂಭಿಸಿದ. ಅದೇ ಸಂದರ್ಭದಲ್ಲಿ ಮದುವೆಯಾದ. ಮೊದಲ ವರ್ಷ ವ್ಯವಹಾರ ಮತ್ತು ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ಈ ಮಹಾರಾಯನ ೨೬ನೇ ವರ್ಷದಲ್ಲಿ ಮತ್ತೊಂದು ಆಘಾತವಾಯಿತು. ಒಂದೆಡೆ ವ್ಯಾಪಾರದಲ್ಲಿ ಲಾಸ್ ಆಯಿತು. ಆ ಬಗ್ಗೆ ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ನ್ಯುಮೋನಿಯಾಕ್ಕೆ ತುತ್ತಾಗಿ ಆತನ ಹೆಂಡತಿಯೂ ತೀರಿಹೋದಳು. ಹೀಗೆ, ಒಂದರ ಹಿಂದೊಂದರಂತೆ ಸೋಲು, ಸಂಕಟಗಳಿಂದ ಆತ ಮನೋರೋಗಿಯೇ ಆಗಿ ಹೋದ. ಓಹ್, ಇನ್ನು ಇವನ ಕಥೆ ಮುಗೀತು. ಇವನು ಹುಚ್ಚ ಆಗೋದು ಗ್ಯಾರಂಟಿ ಎಂದು ಗೆಳೆಯರು, ಬಂಧುಗಳೆಲ್ಲ ನಿರ್ಧರಿಸಿದ್ದರು. ಆದರೆ, ಪವಾಡ ನಡೆದೇ ಹೋಯಿತು. ಒಂದು ವರ್ಷದ ಅವಯಲ್ಲಿ ಈತ ವೈದ್ಯರೇ ಬೆರಗಾಗುವಂತೆ ಚೇತರಿಸಿಕೊಂಡ.
ಮುಂದಿನ ಏಳು ವರ್ಷಗಳ ಕಾಲ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಎಂಬುದು ಹೆಚ್ಚಿನವರಿಗೆ ಗೊತ್ತಾಗಲೇ ಇಲ್ಲ. ಆತ ಕ್ಷಣಕ್ಷಣವೂ ಒಂದು ಗೆಲುವಿಗಾಗಿ ಕಾತರಿಸುತ್ತಲೇ ಬದುಕಿದ. ಅವನಿಗೆ ೩೪ ವರ್ಷವಾಗಿದ್ದಾಗ ಮತ್ತೊಂದು ಮಹಾಚುನಾವಣೆ ಬಂತು. ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ. ಸೋತ. ಅದುವರೆಗೂ ಈತನ ಹಲವಾರು ವಿಫಲ ಸಾಹಸಗಳನ್ನು ನೋಡಿದ್ದ ಜನ ನಕ್ಕರು. ಗೇಲಿ ಮಾಡಿದರು. ‘ಏನಪ್ಪಾ ನಿನ್ನ ಆಟ, ಹೀಗೆಲ್ಲ ಆಡುವ ಬದಲು ತೆಪ್ಪಗಿರಬಾರದಾ?’ ಎಂದು ಬುದ್ಧಿ ಹೇಳಿದರು.
ಎಲ್ಲರ ಬುದ್ಧಿಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಈತ, ತನ್ನ ೪೫ನೇ ವಯಸ್ಸಿನಲ್ಲಿ ಸೆನೆಟ್ ಸಭೆಯ ಚುನಾವಣೆಗೆ ನಿಂತು ಸೋತ. ಇಷ್ಟಾದ ಮೇಲಾದರೂ ಸುಮ್ಮನಿರಬಾರದೆ? ಅವನು ಸುಮ್ಮನಿರಲಿಲ್ಲ. ಎರಡು ವರ್ಷಗಳ ನಂತರ, ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಅದೇ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇ ರ್ಸ್ಪಸಿದ. ಯಥಾಪ್ರಕಾರ ಸೋತ. ಈ ಮತ್ತೊಂದು ಮಹಾಸೋಲೂ ಅವನನ್ನು ಧೃತಿಗೆಡಿಸಲಿಲ್ಲ. ಎರಡು ವರ್ಷ ಸುಮ್ಮನಿದ್ದವನು ಮತ್ತೆ ಸೆನೆಟ್ ಚುನಾವಣೆಗೆ ರ್ಸ್ಪಸಿ ಅಲ್ಲಿಯೂ ಸೋತ!
ಇದನ್ನು ಕಂಡ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಇವನನ್ನು ಗೇಲಿ ಮಾಡಿದರು. ಮರುಕದಿಂದ ನೋಡಿದರು. ಸೋಲಿನ ದೊರೆ ಎಂದು ಹೀಯಾಳಿಸಿದರು. ಸೋಲುವುದರಲ್ಲಿ ಗಿನ್ನಿಸ್ ರೆಕಾರ್ಡ್ ಸೇರೋ ಆಸಾಮಿ ಎಂದರು. ಯಾರು ಅದೆಷ್ಟೇ ಟೀಕಿಸಿದರೂ ಈತ ಅದನ್ನು ಕಂಡೂ ಕಾಣದವನಂತೆ ಮುನ್ನಡೆದ ಮತ್ತು ತನ್ನ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ರ್ಸ್ಪಸಿ ಪ್ರಚಂಡ ಬಹುಮತದಿಂದ ಗೆದ್ದ!
ಅಂದಹಾಗೆ, ನೂರಾರು ಸೋಲುಗಳ ಮಧ್ಯೆಯೇ ಗೆಲುವಿನ ಅರಮನೆಗೆ ನಡೆದು ಬಂದ ಆತ ಯಾರು ಗೊತ್ತೆ?
ಅಬ್ರಹಾಂ ಲಿಂಕನ್!

ಈಗ ಯೋಚಿಸಿ. ಹಣೆಬರಹವನ್ನೋ, ವಿಯಾಟವನ್ನೋ, ಅದೃಷ್ಟವನ್ನೋ ಹಳಿದುಕೊಂಡು ಅಬ್ರಹಾಂ ಲಿಂಕನ್ನನೂ ಸುಮ್ಮನೇ ಉಳಿದಿದ್ದರೆ ಏನಾಗುತ್ತಿತ್ತು ಹೇಳಿ? ಆತನೂ ಜಗತ್ತಿನ ಕೋಟ್ಯಂತರ ಸೋತು ಹೋದವರ, ಕನಸನ್ನೇ ಕಾಣದವರ ಪಟ್ಟಿಗೆ ಸೇರಿ ಹೋಗುತ್ತಿದ್ದ. ಆದರೆ, ನನ್ನಿಂದ ಏನೂ ಆಗುವುದಿಲ್ಲ ಎಂದು ಯೋಚಿಸುವ ಬದಲಿಗೆ ನನ್ನಿಂದ ಎಲ್ಲವೂ ಸಾಧ್ಯ ಎಂದು ಅವನು ಸೋಲಿನ ಹಾದಿಯಲ್ಲೂ ಒಂದೊಂದೇ ದಿಟ್ಟ ಹೆಚ್ಚೆ ಇಟ್ಟಿದ್ದರಿಂದ ಆಕಾಶಕ್ಕೇ ಏಣಿ ಹಾಕುವುದು ಅವನಿಂದ ಸಾಧ್ಯವಾಯಿತು.
ಗೆಳೆಯರೆ, ಸಾಧನೆಗೆ ಅಸಾಧ್ಯವಾದುದು ಉಹುಂ- ಇಲ್ಲ, ಇಲ್ಲ, ಇಲ್ಲ. ಲಿಂಕನ್‌ನ ಗೆಲುವಿನ ಬದುಕು ಎಲ್ಲರಿಗೂ ಮಾದರಿಯಾಗಿರಲಿ. ಅವನಿಗೆ ಸಿಕ್ಕಂಥ ಹೆಸರು, ಯಶಸ್ಸು ಈ ಹೊಸ ವರ್ಷದಲ್ಲಿ ಎಲ್ಲರದೂ ಆಗಲಿ ಎಂಬ ಶುಭಾಕಾಂಕ್ಷೆಯೊಂದಿಗೆ- ಒಂದು ದಿನ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು.

ಈ ಗೀತೆಯ ಮಾಧುರ್ಯಕ್ಕೆ ಸಾಟಿಯಿಲ್ಲ ಅಂದಿದ್ದರು ಇಳಯರಾಜ!

ಡಿಸೆಂಬರ್ 30, 2010

ಇರಬೇಕು ಇರಬೇಕು…
ಚಿತ್ರ ನಗುವ ಹೂವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಆರ್.ಎನ್. ಸುದರ್ಶನ್

ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ ||ಪ||

ಇರಬೇಕು ಇರಬೇಕು ತಾವರೆ ಎಲೆಯ ತರಹ
ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ ||೧||

ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ
ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ
ನೋಡಲೆ ಬಾರದು ಹಿಂದೆ ||೨||
೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು. ಈ ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ. ಹೇಗೆ ಗೊತ್ತಾ? ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು. (ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್. ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್. ಸುದರ್ಶನ್ ಅವರು ಈ ಚಿತ್ರದ ನಾಯಕನಾಗಿ ಮಾತ್ರವಲ್ಲ, ಗಾಯಕನಾಗಿಯೂ ಮಿಂಚಿದರು ಎಂಬುದು ಮತ್ತೊಂದು ವಿಶೇಷ.
ನಗುವ ಹೂವು-ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಸುತ್ತ ಹೆಣೆದ ಕಥೆ. ಅಂಥ ಕಥೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಸುದರ್ಶನ್ ಹೀಗೆಂದರು: ‘ನಮ್ಮ ತಾಯಿಯವರು ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ಎರಗಿದ ಬಹುದೊಡ್ಡ ಆಘಾತ. ಒಂದು ಮನೆಯ ನೆಮ್ಮದಿಯನ್ನೇ ಹಾಳು ಮಾಡುವ ಕ್ಯಾನ್ಸರ್ ಬಗ್ಗೆ ತಿಳಿ ಹೇಳಬೇಕು. ಆ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕು ಅನ್ನಿಸ್ತು. ಈ ಕಾರಣದಿಂದಲೇ ಕ್ಯಾನ್ಸರ್ ರೋಗಿಯೊಬ್ಬನ ಬದುಕಿನ ಕಥೆ ಹೊಂದಿದ್ದ ಸಿನಿಮಾ ತಯಾರಿಸಲು ನಿರ್ಧರಿಸಿದ್ದೆವು…’
ಸಂಕ್ಷಿಪ್ತವಾಗಿ ಹೇಳುವುದಾದರೆ ‘ನಗುವ ಹೂವು’ ಚಿತ್ರದ ಕಥೆ ಇಷ್ಟು. ಒಂದು ಕ್ಯಾನ್ಸರ್ ಆಸ್ಪತ್ರೆ. ಈ ಆಸ್ಪತ್ರೆಯ ಒಡತಿಯ ಮಗನಿಗೇ ಕ್ಯಾನ್ಸರ್! (ಈತ ಚಿತ್ರದ ಎರಡನೇ ನಾಯಕ) ನಾಯಕ-ನಾಯಕಿ, ಈ ಆಸ್ಪತ್ರೆಯಲ್ಲಿ ಕ್ರಮವಾಗಿ ಡಾಕ್ಟರ್ ಹಾಗೂ ನರ್ಸ್ ಆಗಿರುತ್ತಾರೆ. ನರ್ಸ್ ಮೇಲೆ ಡಾಕ್ಟರ್‌ಗೆ ಮೋಹ. ಆದರೆ ಸಂಕೋಚದ ಕಾರಣದಿಂದ ಆತ ಹೇಳಿಕೊಂಡಿರುವುದಿಲ್ಲ. ಇದೇ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳೂ ಇರುತ್ತವೆ. ಆ ಮಕ್ಕಳ ವಾರ್ಡ್‌ಗೆ ದಿನವೂ ಹೋಗಿ ಸಿಹಿ ಹಂಚುತ್ತಿರುತ್ತಾನೆ ಡಾಕ್ಟರ್. ಈ ಮಕ್ಕಳ ಪೈಕಿ ಒಂದು ಮಗು- ಕಥಾ ನಾಯಕ-ನಾಯಕಿಯನ್ನು ತುಂಬಾ ಹಚ್ಚಿಕೊಂಡಿರುತ್ತದೆ. ಅವನನ್ನು ‘ಅಪ್ಪಾ’ ಎಂದೂ, ನಾಯಕಿಯನ್ನು ಅಮ್ಮಾ ಕರೆಯುತ್ತಿರುತ್ತದೆ. ಈ ನಾಯಕ, ಶಸ್ತ್ರ ಚಿಕಿತ್ಸೆ ಯಶಸ್ವಿಯಾದರೆ ಸಾಕು- ಒಂದು ಗುಲಾಬಿ ಹೂ ತಗೊಂಡು ತನ್ನ ಛೇಂಬರ್‌ಗೆ ಹೋಗುತ್ತಿರುತ್ತಾನೆ. ಬಹುಶಃ ಆತ ದೇವರ ಫೋಟೋಗೆ ಇಡಲೆಂದು ಹೂ ಕೊಂಡೊಯ್ಯುತ್ತಾನೆ ಎಂದೇ ಆಸ್ಪತ್ರೆಯ ಅಷ್ಟೂ ಜನ ತಿಳಿದಿರುತ್ತಾರೆ.
ಅದೊಮ್ಮೆ ಡಾಕ್ಟರ್ ಬೇರೊಂದು ಊರಿಗೆ ಹೋಗಿದ್ದ ಸಂದರ್ಭದಲ್ಲಿ ವಾರ್ಡ್‌ನಲ್ಲಿದ್ದ ಮಕ್ಕಳೆಲ್ಲ ಡಾಕ್ಟರ್ ಛೇಂಬರ್‌ಗೆ ನುಗ್ಗುತ್ತವೆ. ಅಲ್ಲಿದ್ದ ಎಲ್ಲಾ ವಸ್ತುಗಳನ್ನೂ ಚಲ್ಲಾಪಿಲ್ಲಿ ಮಾಡುತ್ತವೆ. ಈ ಸಂದರ್ಭದಲ್ಲಿಯೇ ನಾಯಕಿ ಅಲ್ಲಿಗೆ ಬರುತ್ತಾಳೆ. ಡಾಕ್ಟರ್ ಛೇಂಬರಿನಲ್ಲಿ ತನ್ನ ಫೋಟೋ ಇರುವುದೂ, ಅದರ ಪಕ್ಕದಲ್ಲಿಯೇ ಒಂದು ಗುಲಾಬಿ ಇರುವುದೂ ಅವಳ ಗಮನಕ್ಕೆ ಬರುತ್ತದೆ. ಇದೇ ವೇಳೆಗೆ ನಾಯಕನೂ ಅಲ್ಲಿಗೆ ಬರುತ್ತಾನೆ. ಒಬ್ಬರ ಮನಸ್ಸು ಒಬ್ಬರಿಗೆ ಅರ್ಥವಾಗುತ್ತಿದ್ದಂತೆಯೇ ಪ್ರೀತಿ ಚಿಗುರುತ್ತದೆ. ತನ್ನ ಪ್ರೀತಿಯ ಕಾಣಿಕೆಯಾಗಿ ನಾಯಕ ಒಂದು ಉಂಗುರ ತೊಡಿಸುತ್ತಾನೆ.
ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿ ಇರುತ್ತಾನಲ್ಲ? ಅವನನ್ನು ನಾಯಕಿ (ನರ್ಸ್) ತುಂಬ ಆಪ್ತವಾಗಿ ಉಪಚರಿಸುತ್ತಾಳೆ. ಆತ ಅದನ್ನೇ ತಪ್ಪಾಗಿ ಭಾವಿಸಿ ಅವಳಲ್ಲಿ ಪ್ರೇಮ ನಿವೇದನೆ ಮಾಡಿಬಿಡುತ್ತಾನೆ. ಈ ವಿಷಯ ತಿಳಿದ ನಾಯಕ-‘ಹೇಳಿ ಕೇಳಿ ಆತ ಕ್ಯಾನ್ಸರ್ ರೋಗಿ. ನೀನು ನಿರಾಕರಣೆಯ ಮಾತಾಡಿದರೆ ಆತನಿಗೆ ಶಾಕ್ ಆಗಬಹುದು. ಆ ಶಾಕ್‌ಗೆ ಆತ ಬೇಗನೆ ಸತ್ತೂ ಹೋಗಬಹುದು. ಹಾಗೆ ಮಾಡಬೇಡ. ರೋಗಿಗಳ ಸೇವೆಯೇ ನಮ್ಮ ಪರಮಗುರಿ. ನಿನ್ನ ಮಾತಿಂದ ಆತ ಒಂದಷ್ಟು ದಿನವಾದರೂ ನೆಮ್ಮದಿಯಿಂದ ಇರ್‍ತಾನೆ. ಹಾಗಾಗಿ ಆತನ ಆಹ್ವಾನವನ್ನು ಒಪ್ಪಿಕೋ’ ಎನ್ನುತ್ತಾನೆ. ಬೇರೆ ದಾರಿ ಕಾಣದೆ ನಾಯಕಿ ಒಪ್ಪಿಗೆಯ ಮಾತಾಡಿದರೆ ಒಂದೆರಡೇ ದಿನಗಳಲ್ಲಿ ಮದುವೆ ನಡೆಸುವುದೆಂದು ನಿರ್ಧರಿಸಲಾಗುತ್ತದೆ.
ಮದುವೆಯ ಹಿಂದಿನ ದಿನ, ತನ್ನ ಪರಿಸ್ಥಿತಿ ನೆನೆದು ನಾಯಕಿ ಅಳುತ್ತಿರುತ್ತಾಳೆ. ಅದನ್ನು ಕಂಡ ಒಂದು ಮಗು-‘ಅಮ್ಮಾ ಯಾಕೆ ಅಳ್ತಾ ಇದೀಯ?’ ಎನ್ನುತ್ತದೆ. ಈಕೆ-‘ಎಲ್ಲಾ ನನ್ನ ಹಣೆಬರಹ’ ಎಂದು ಬಿಕ್ಕಳಿಸುತ್ತಾಳೆ. ‘ಹಣೆಬರಹ’ ಅಂದ್ರೆ ಏನಮ್ಮಾ ಎಂದು ಮಗು ಮತ್ತೆ ಕೇಳುತ್ತದೆ.’ ಅದನ್ನು ನಿಮ್ಮ ಅಪ್ಪನ ಬಳಿ ಕೇಳು’ ಅನ್ನುತ್ತಾಳೆ ನಾಯಕ. ಅಮಾಯಕ ಮಗು ನಾಯಕನ ಬಳಿ ಬಂದು ಕೇಳಿದಾಗ-‘ನಾವು ಏನನ್ನು ಬಯಸುತ್ತೇವೆಯೋ, ಅದು ನಡೆಯದೇ ಹೋದರೆ- ಅದನ್ನೇ ಹಣೆಬರಹ’ ಅಂತಾರೆ ಅನ್ನುತ್ತಾನೆ ನಾಯಕ. ನಂತರ-‘ತುಂಬಾ ಹೊತ್ತಾಗಿದೆ. ನಿನ್ನನ್ನು ಮಲಗಿಸಿ ಬರ್‍ತೇನೆ ನಡಿ’ ಎನ್ನುತ್ತಾ ಮಕ್ಕಳ ವಾರ್ಡ್‌ಗೆ ಬರುತ್ತಾನೆ. ಅಲ್ಲಿ ಕೆಲವು ಮಕ್ಕಳು ಮಲಗಿರುತ್ತವೆ. ಕೆಲವು ತಮ್ಮ ಪಾಡಿಗೆ ತಾವು ಕೂತಿರುತ್ತವೆ. ಭವಿಷ್ಯದ ಬಗ್ಗೆ, ಕಣ್ಮುಂದೆಯೇ ಇರುವ ಸಾವಿನ ಬಗ್ಗೆ ಏನೊಂದೂ ಗೊತ್ತಿಲ್ಲದ ಈ ಮಕ್ಕಳು ಎಷ್ಟೊಂದು ನೆಮ್ಮದಿಯಿಂದ ಇದ್ದಾವಲ್ಲ; ಎಲ್ಲರೂ ಹೇಗೇ ಬದುಕಿದರೆ ಚೆಂದ ಅಲ್ಲವೇ ಎಂದುಕೊಂಡು ಆ ಮಕ್ಕಳನ್ನು ನೋಡುತ್ತಾ ಹಾಡುತ್ತಾನೆ: ‘ ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ..!
ಪಾಸಿಟಿವ್ ಥಿಂಕಿಂಗ್ ಸಂದೇಶದ ಈ ಹಾಡು ರೂಪುಗೊಂಡ ಬಗೆಯನ್ನು ಸುದರ್ಶನ್ ಅವರು ವಿವರಿಸಿದ್ದು ಹೀಗೆ: ಚಿತ್ರದಲ್ಲಿ ಎಲ್ಲಿ ಹಾಡು ಬರಬೇಕು, ಹಾಡುಗಳು ಹೇಗಿರಬೇಕು ಎಂಬ ಚರ್ಚೆ ಶುರುವಾಗಿತ್ತು. ಆಗ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಥಟ್ಟನೆ ಹೇಳಿದರು. ಇದು ಮಕ್ಕಳ ಮುಂದೆ ಹೇಳುವ ಹಾಡು. ಹಾಗಾಗಿ ಸರಳವಾಗಿರಲಿ. ಹಾಡಲ್ಲಿ ಶೋಕ ಅಥವಾ ಪ್ರೇಮದ ಸಾಲುಗಳು ಬರುವುದು ಬೇಡ. ಬದಲಿಗೆ, ಬದುಕಲ್ಲಿ ಭರವಸೆ ಮೂಡಿಸುವ ಸಾಲುಗಳಿರಲಿ…’ ಹೀಗೆ ಸಲಹೆ ನೀಡಿದ ಜಿ.ಕೆ.ವಿ. ಮರುಕ್ಷಣವೇ- ಲಲಲಾಲ ಲಲಲಾಲ ಲಲಲಲ ಲಲಲ ಲಾಲ…. ಲಲಲಾಲ ಲಲಲಾಲ ಲಲಲಲ ಲಾಲಲ ಲಲಲ…’ ಎಂದು ಟ್ಯೂನ್ ಕೊಟ್ಟರು. ಈ ಸಂದರ್ಭದಲ್ಲಿ ಜಿ.ಕೆ.ವಿ ಅವರ ಶಿಷ್ಯರಾಗಿದ್ದವರು ಇಳಯರಾಜಾ.
ನಮ್ಮಣ್ಣ ಆರ್. ಎನ್. ಜಯಗೋಪಾಲ್ ಅತ್ಯುತ್ತಮ ವಯಲಿನ್ ವಾದಕನಾಗಿದ್ದ. ಹಾಗಾಗಿ ಅವನಿಗೆ ರಾಗದ ಮೇಲೆ ಒಳ್ಳೆಯ ಹಿಡಿತವಿತ್ತು. ಹಾಡು- ಪ್ರೇಮಗೀತೆಯಾಗಬಾರದು, ಶೋಕ ಗೀತೆಯೂ ಆಗಬಾರದು. ಮಕ್ಕಳ ಗೀತೆಯಂತೆಯೂ ಇರಬಾರದು. ಬದಲಿಗೆ ಮಕ್ಕಳನ್ನು ಸಾಧನೆಯೆಡೆಗೆ ಪ್ರಚೋದಿಸುವಂಥ ಹಾಡಾಗಬೇಕು ಎಂಬ ಜಿ.ಕೆ.ವಿ ಯವರ ಮಾತನ್ನೇ ಮತ್ತೆ ಮತ್ತೆ ನೆನಪಿಸಿಕೊಂಡ ಆತ ಪಲ್ಲವಿ ಮತ್ತು ಮೊದಲ ಚರಣವನ್ನು ಚಕಚಕನೆ ಬರೆದು ಹೇಳಿದ. ‘ತಾವರೆ ನೀರಲ್ಲಿರುತ್ತದೆ. ಆದರೆ ಅದರ ಎಲೆಯ ಮೇಲೆ ಒಂದೇ ಒಂದು ಹನಿಯೂ ನಿಲ್ಲುವುದಿಲ್ಲ. ಅಂತೆಯೇ ಬದುಕೂ ಸಹ. ನಾವು ಸಂತೋಷ ಮತ್ತು ದುಃಖವನ್ನು ಒಂದೇ ಭಾವದಿಂದ ಸ್ವೀಕರಿಸಬೇಕು ಎಂಬುದಕ್ಕೆ ಮೊದಲ ಚರಣ’ ಎಂದು ವಿವರಣೆಯನ್ನೂ ನೀಡಿದ.
‘ಸರಿ, ಎರಡನೇ ಚರಣದಲ್ಲಿ ಮಕ್ಕಳಿಗೆ ಭರವಸೆ ಹೆಚ್ಚಿಸುವಂಥ ಸಾಲುಗಳು ಬೇಕು ಅನ್ನಿಸಿತು. ಚರ್ಚೆಗೆ ಕೂತಿದ್ದ ಎಲ್ಲರೂ ಅದೇ ಮಾತು ಹೇಳಿದೆವು. ಆಗ ಜಯಗೋಪಾಲ್ ಒಂದೆರಡು ನಿಮಿಷ ಯೋಚಿಸಿ- ‘ಇರಬೇಕು, ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಅಪೂರ್ವ ಕಾಂತಿಯ ಸಾಲುಗಳನ್ನು ಬರೆದುಕೊಟ್ಟ. ಚಿಕ್ಕಂದಿನಲ್ಲೇ ನಾನು ಶಾಸ್ತ್ರೀಯ ಸಂಗೀತ ಕಲಿತಿದ್ದೆ. ಯೌವನದ ದಿನಗಳಲ್ಲಿ ನಾವು ಅರೆನ್ನಾರ್ ಸೋದರರು ಸಂಗೀತ ಕಾರ್ಯಕ್ರಮವನ್ನೂ (ಆರ್‌ಎನ್‌ಜೆ ವಯಲಿನ್, ಕೃಷ್ಣಪ್ರಸಾದ್- ಮೃದಂಗ ವಾದ್ಯ ಪ್ರವೀಣರಾಗಿದ್ದರು) ನೀಡುತ್ತಿದ್ದೆವು. ಈ ವಿಷಯ ಗೊತ್ತಿದ್ದ ಜಿ.ಕೆ. ವೆಂಕಟೇಶ್- ‘ಈ ಹಾಡನ್ನು ನೀನೇ ಹಾಡಯ್ಯ ಚಿನ್ನೂ’ ಅಂದರು. ಪರಿಣಾಮ- ಈ ಹಾಡಿಗೆ ದನಿಯಾಗುವ ಸುಯೋಗ ನನ್ನದಾಯಿತು.
ನಗುವ ಹೂವು ಸಿನಿಮಾ ಗೆದ್ದಿತು. ರಾಷ್ಟ್ರಪ್ರಶಸ್ತಿ ಪಡೆಯಿತು. ಇದಾಗಿ ಎರಡು ದಶಕದ ನಂತರ ಚೆನ್ನೈನ ಒಂದು ರೆಕಾರ್ಡಿಂಗ್ ಸ್ಟುಡಿಯೋಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆ ವೇಳೆಗೆ ಖ್ಯಾತಿಯ ತುತ್ತು ತುದಿಯಲ್ಲಿದ್ದ ಇಳಯರಾಜಾ ಅವರೂ ಅಲ್ಲಿಗೆ ಬಂದಿದ್ದರು. ಅವರನ್ನು ಒಮ್ಮೆ ಮಾತಾಡಿಸಬೇಕೆಂಬ ಆಸೆ. ಆದರೆ, ಅವರು ಗುರುತಿಸದಿದ್ದರೆ ಏನು ಮಾಡುವುದು ಎಂಬ ಸಹಜ ಆತಂಕ ನನ್ನದು. ನಾನು ಈ ಚಡಪಡಿಕೆಯಲ್ಲಿದ್ದಾಗಲೇ ಇಳಯ ರಾಜಾ ನನ್ನನ್ನು ನೋಡಿದರು. ತಕ್ಷಣ, ನಿಂತ ಜಾಗದಲ್ಲೇ ಜೋರಾಗಿ- ‘ಇರಬೇಕು, ಇರಬೇಕೂ ಅರಿಯದ ಕಂದನ ತರಹ’ ಎಂದು ಹಾಡುತ್ತ ಹಾಡುತ್ತಲೇ ನನ್ನೆಡೆಗೆ ಬಂದರು. ನನ್ನ ಕೈ ಹಿಡಿದು ಎದೆಗೆ ಒತ್ತಿಕೊಂಡು. ‘ಎಂಥಾ ಒಳ್ಳೆಯ ಹಾಡಲ್ವಾ ಸಾರ್ ಇದೂ? ಈ ಹಾಡಿನ ಮಾಧುರ್ಯಕ್ಕೆ ಸಾಟಿ ಯಾವುದಿದೆ ಹೇಳಿ’ ಎಂದು ಉದ್ಗರಿಸಿದರು. ಅವರ ಮನದ ಮಾತು ಕೇಳಿದಾಗ ಸಂತೋಷ ಹೆಚ್ಚಾಯಿತು. ಆ ಕಾರಣಕ್ಕೆ ಕಣ್ತುಂಬಿಕೊಂಡಿತು…. ಹೀಗೆ ಹೇಳುತ್ತ ಹೇಳುತ್ತಲೇ ಭಾವಪರವಶರಾಗಿ ಮತ್ತೆ ಹಾಡಿದರು ಸುದರ್ಶನ್: ಇರಬೇಕು ಇರಬೇಕು ಅರಿಯದ ಕಂದನ ತರಹ/ ನಗಬೇಕು ಅಳಬೇಕು ಇರುವಂತೆ ಹಣೆ ಬರಹ…’
***
ಸೂಕ್ಷ್ಮವಾಗಿ ಗಮನಿಸಿ: ಈ ಹಾಡು ರಚನೆಯಾಗಿ ನಾಲ್ಕು ದಶಕಗಳೇ ಕಳೆದಿವೆ. ಆದರೆ ಈ ಹಾಡು, ಅದರಲ್ಲಿರುವ ಸಂದೇಶ ಇಂದಿಗೂ ಪ್ರಸ್ತುತ ಎನ್ನುವಂತಿದೆ. ಮುಗಿದು ಹೋಗುತ್ತಿರುವ ವರ್ಷದಲ್ಲಿ ಕೈ ಹಿಡಿದಿದ್ದ ನೋವು, ಸೋಲು, ಯಾತನೆಗಳಿಂದ ಬೇಸರಗೊಂಡವರಿಗೆ- ‘ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ/ ನೋವಿರಲಿ ನಲಿವಿರಲಿ ನೋಡಲೆ ಬಾರದು ಹಿಂದೆ’ ಎಂಬ ಹಾಡಿನ ಸಾಲುಗಳನ್ನೇ ನೆನಪಿಸುತ್ತ- ಹೊಸ ವರ್ಷದ ಶುಭಾಶಯ-ಒಂದು ದಿನ ಮುಂಚಿತವಾಗಿ!

‘ಪ್ರೇಮ ಸಂಭಾಷಣೆ’ಯ ಸಂದರ್ಭದಲ್ಲಿ ಗುರು-ಶಿಷ್ಯರ ಮೌನ ಸಂಭಾಷಣೆ!

ಡಿಸೆಂಬರ್ 15, 2010


ಚಿತ್ರ: ಧರ್ಮಸೆರೆ ಗೀತೆರಚನೆ: ವಿಜಯ ನಾರಸಿಂಹ
ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ-ಎಸ್. ಜಾನಕಿ
ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸಕಾವ್ಯ ಮಧುರಾ ಮಧುರಾ ಮಧುರಾ||ಪ||

ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ
ಶೃಂಗಾರ ಭಾವಗಂಗಾ
ಸುಂದರ, ಸುಲಲಿತ, ಮಧುರಾ ಮಧುರಾ ಮಧುರಾ||೧||

ರ ಶರದಿ ಮೆರೆವಂತೆ ಮೊರೆವಂತೆ
ಹೊಸರಾಗ ಧಾರೆಯಂತೆ
ಮಂಜುಳ, ಮಧುಮಯ, ಮಧುರಾ ಮಧುರಾ ಮಧುರಾ||೨||

ಚೈತ್ರ ತಂದ ಚಿಗುರಂತೆ, ಚೆಲುವಂತೆ
ಸೌಂದರ್ಯ ಲಹರಿಯಂತೆ
ನಿರ್ಮಲ, ಕೋಮಲಾ, ಮಧುರಾ ಮಧುರಾ ಮಧುರಾ||೩||

‘ಧರ್ಮಸೆರೆ’ ಚಿತ್ರದ ಹಾಡಿನ ಬಗ್ಗೆ ಹೇಳ್ತೀನಿ ಅಂದಿದ್ದೆ ಅಲ್ವಾ? ಆ ಸ್ವಾರಸ್ಯವನ್ನೇ ಹೇಳ್ತೀನಿ ಕೇಳಿ ಎನ್ನುತ್ತಾ ಮಾತು ಆರಂಭಿಸಿದರು ಪ್ರಣಯರಾಜ ಶ್ರೀನಾಥ್. ಅವರ ಮಾತಿನ ಕಥೆ ಮುಂದುವರಿದಿದ್ದು ಹೀಗೆ:
‘ಇದು ೧೯೭೮-೭೯ರ ಮಾತು. ಆಗ ನಟ ವಜ್ರಮುನಿ ಅವರು ತಮ್ಮ ಸ್ವಂತ ನಿರ್ಮಾಣದಲ್ಲಿ ‘ಗಂಡ ಭೇರುಂಡ’ ಸಿನಿಮಾ ಆರಂಭಿಸಿದ್ದರು. ಇದೇ ಸಂದಭ ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ‘ಧರ್ಮಸೆರೆ’ ಆರಂಭಿಸಿದ್ದರು. ಎರಡೂ ಚಿತ್ರಗಳಿಗೂ ನಾನೇ ನಾಯಕನಾಗಿದ್ದೆ. ಮೊದಲು ಪುಟ್ಟಣ್ಣ ಅವರ ಸಿನಿಮಾಕ್ಕೆ, ನಂತರ ವಜ್ರಮುನಿಯವರ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್‌ನಲ್ಲಿ ೭-೮ ದಿನಗಳ ಕಾಲ ‘ಧರ್ಮಸೆರೆ’ಯ ಶೂಟಿಂಗ್ ನಡೆಯಿತು.
ಅದೊಂದು ರಾತ್ರಿ ಊಟ ಮುಗಿಸಿಕೊಂಡು ನಾನು ಉಳಿದುಕೊಂಡಿದ್ದ ಹೈವೇ ಹೋಟೆಲಿಗೆ ಬರುವಾಗಲೇ ಯಾಕೋ ಹೊಟ್ಟೆ ತೊಳೆಸಿದಂತಾಯಿತು. ರೂಂಗೆ ಬಂದರೆ ಬಿಟ್ಟೂ ಬಿಡದಂತೆ ವಾಂತಿ-ಬೇ. ಹೌದು. ನನಗೆ ಫುಡ್ ಪಾಯಿಸನ್ ಆಗಿತ್ತು. ಬೆಳಗ್ಗೆ ಆಗುವ ವೇಳೆಗೆ ಹಾಸಿಗೆಯಿಂದ ಮೇಲೇಳಲೂ ಆಗದಷ್ಟು ನಿತ್ರಾಣನಾಗಿ ಹೋಗಿದ್ದೆ. ಸಾಮಾನ್ಯವಾಗಿ ಹೈವೇ ಹೋಟೆಲಿನಲ್ಲಿ ಉಳಿದುಕೊಂಡರೆ, ಬೆಳಗ್ಗೆ ಎದ್ದ ತಕ್ಷಣ ರಿಸೆಪ್ಶನ್‌ಗೆ ಫೋನ್ ಮಾಡಿ ನನ್ನ ಇಷ್ಟದ ಹಾಡು ಹಾಕುವಂತೆ ಹೇಳುತ್ತಿದ್ದೆ. ರೂಂನಲ್ಲಿದ್ದ ಸ್ಪೀಕರ್ ಮೂಲಕ ಹಾಡು ಕೇಳಿ ನಂತರ ಶೂಟಿಂಗ್‌ಗೆ ಹೊರಡುತ್ತಿದ್ದೆ.
ಆದರೆ, ಎಷ್ಟು ಹೊತ್ತಾದರೂ ನನ್ನಿಂದ ‘ಹಾಡುಗಳ ಪ್ರಸಾರ ಕೋರಿ’ ಫೋನ್ ಬಾರದ್ದನ್ನು ಕಂಡು ಅನುಮಾನಗೊಂಡ ನನ್ನ ಆತ್ಮೀಯರೂ, ಹೋಟೆಲಿನ ಮ್ಯಾನೇಜರೂ ಆಗಿದ್ದ ಶಮ್ಮಿಯವರು ತಮ್ಮಲ್ಲಿದ್ದ ಮಾಸ್ಟರ್ ಕೀ ಬಳಸಿ ನನ್ನ ರೂಂ ಬಾಗಿಲು ತೆರೆದಿದ್ದಾರೆ. ಆಗ ನಾನು ಹೊಟ್ಟೆ ನೋವು ತಡೆಯಲಾಗದೆ ಒದ್ದಾಡುತ್ತಿದ್ದೆ. ಶಮ್ಮಿಯವರು ತಕ್ಷಣವೇ ಫೋನ್ ಮಾಡಿ ಡಾಕ್ಟರನ್ನು ಕರೆಸಿ, ಚಿಕಿತ್ಸೆ ಕೊಡಿಸಿದರು.
ಆ ಕ್ಷಣದಲ್ಲಿ ಯಾಕೆ ಹಾಗನ್ನಿಸಿತೋ ಕಾಣೆ. ಮೈಸೂರಲ್ಲಿಯೇ ಇದ್ದರೆ ನಾನು ಉಳಿಯಲಾರೆ ಅನ್ನಿಸಿಬಿಡ್ತು. ಎರಡನೇ ಹೆರಿಗೆಗೆ ಗರ್ಭಿಣಿಯಾಗಿದ್ದ ಹೆಂಡತಿಯ ಚಿತ್ರ ಕಣ್ಮುಂದೆ ಬಂತು. ‘ಶಮ್ಮೀ, ಒಂದೇ ಒಂದ್ಸಲ ನನ್ನ ಹೆಂಡತೀನ ನೋಡಬೇಕು ಅನ್ನಿಸ್ತಿದೆ. ದಯವಿಟ್ಟು ಈಗಲೇ ನನ್ನನ್ನು ಬೆಂಗಳೂರ್‍ಗೆ ಕಳಿಸಿಕೊಡಿ’ ಎಂದು ಕೇಳಿಕೊಂಡೆ. ತಕ್ಷಣವೇ ಒಂದು ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದ ಶಮ್ಮಿ, ಹಿಂದಿನ ಸೀಟ್‌ನಲ್ಲಿ ಮಲಗಿ ಪ್ರಯಾಣಿಸುವಂತೆ ಸೂಚಿಸಿದರು. ಹೋಟೆಲಿನಿಂದ ದಿಂಬುಗಳನ್ನೂ ಒದಗಿಸಿಕೊಟ್ಟರು.
ಈ ವೇಳೆಗಾಗಲೇ ಬೆಳಗಿನ ಹತ್ತು ಗಂಟೆ ಆಗಿತ್ತು. ಅತ್ತ ಚಿತ್ರೀಕರಣಕ್ಕೆ ಸಿದ್ಧರಾಗಿದ್ದ ಪುಟ್ಟಣ್ಣನವರು-ಶ್ರೀನಾಥ್ ಇನ್ನೂ ಶೂಟಿಂಗ್ ಸ್ಪಾಟ್‌ಗೆ ಬಂದಿಲ್ಲ. ಯಾಕೆ ಅಂತ ತಿಳಿದು ಬಾ’ ಎಂದು ತಮ್ಮ ಸಹಾಯಕನನ್ನು ಕಳಿಸಿದ್ದರು. ನಾನು ಅವರಿಗೆ ನನ್ನ ಅನಾರೋಗ್ಯದ ಬಗ್ಗೆ ವಿವರಿಸಿದೆ. ತುಂಬಾ ನಿಶ್ಶಕ್ತಿ ಆಗಿರುವುದರಿಂದ ಬೆಂಗಳೂರಿಗೆ ಹೋಗ್ತಾ ಇದೀನಪ್ಪಾ. ಗುರುಗಳಿಗೆ ಹಾಗಂತ ಹೇಳಿಬಿಡು’ ಎಂದೂ ಹೇಳಿದೆ.
ವಿಪರ್‍ಯಾಸ ಕೇಳಿ: ಪುಟ್ಟಣ್ಣನವರ ಬಳಿಗೆ ಹೋದ ಆ ‘ಸಹಾಯಕ’ ನನ್ನ ಅನಾರೋಗ್ಯದ ಬಗ್ಗೆ ಹೇಳಲೇ ಇಲ್ಲ. ಬದಲಾಗಿ-‘ಶ್ರೀನಾಥ್ ನಾಟಕ ಮಾಡ್ತಾ ಇದಾರೆ ಸಾರ್. ಬಹುಶಃ ಬೇರೆ ನಿರ್ಮಾಪಕರಿಗೆ ಡೇಟ್ಸ್ ಕೊಟ್ಟಿದಾರೆ ಅನ್ನುತ್ತೆ. ಹಾಗಾಗಿ ಬೆಂಗಳೂರಿಗೆ ಹೊರಟಿದ್ದಾರೆ’ ಅಂದು ಬಿಟ್ಟಿದ್ದಾನೆ!
ಪುಟ್ಟಣ್ಣನವರಿಗೆ ನನ್ನ ಮೇಲೆ ಅಪಾರ ಪ್ರೀತಿ, ನಂಬಿಕೆ. ಅವರು ತಕ್ಷಣವೇ ಅಡ್ಡಡ್ಡ ತಲೆಯಾಡಿಸಿ-ಶ್ರೀನಾಥ್ ನನ್ನ ಪ್ರೀತಿಯ ಶಿಷ್ಯ. ಅವನು ಹಾಗೆ ಮಾಡೋದಿಲ್ಲ’ ಎಂದಿದ್ದಾರೆ. ನಂತರ ಏನಾಗಿದೆ ಅಂತ ನೋಡಿಕೊಂಡು ಬಾಪ್ಪಾ ಎಂದು ಮತ್ತೊಬ್ಬ ಸಹಾಯಕರನ್ನು ಕಳಿಸಿದ್ದಾರೆ. ಬೇರೊಬ್ಬ ಸಹಾಯಕರು ಹೋಟೆಲಿಗೆ ಬರುವ ವೇಳೆಗೆ ನನ್ನ ಕಾರು ಬೆಂಗಳೂರಿನ ಹಾದಿ ಹಿಡಿದಿತ್ತು. ವಾಪಸ್ ಹೋದ ಎರಡನೇ ಸಹಾಯಕ-‘ಸರ್, ಶ್ರೀನಾಥ್ ಅವರು ನನಗೆ ಸಿಗಲಿಲ್ಲ’ ಎಂದು ಬಿಟ್ಟಿದ್ದಾರೆ. ಈ ಸಂದರ್ಭ ಬಳಸಿಕೊಂಡ ಮೊದಲು ಬಂದಿದ್ದ ವ್ಯಕ್ತಿ-‘ನಾನು ಮೊದಲೇ ಹೇಳಲಿಲ್ವ ಸಾರ್? ಶ್ರೀನಾಥ್ ಖಂಡಿತ ನಾಟಕ ಮಾಡ್ತಾ ಇದ್ದಾರೆ. ಅಲ್ಲಿ ಬೇರೆ ಸಿನಿಮಾದ ಶೂಟಿಂಗ್ ಇರಬೇಕು. ಅದಕ್ಕೇ ಅವಸರದಲ್ಲಿ ಹೋಗಿದ್ದಾರೆ’ಎಂದು ಬಿಟ್ಟಿದ್ದಾನೆ.
ಈ ಮಾತು ಕೇಳಿದ ಪುಟ್ಟಣ್ಣ ಕಿಡಿಕಿಡಿಯಾಗಿದ್ದರೆ. ಅವರಿಗೆ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ನಿರ್ಮಾಪಕ ಎನ್. ವೀರಾಸ್ವಾಮಿ ಅವರಿಗೆ ಟ್ರಂಕ್ ಕಾಲ್ ಮಾಡಿ ವಿಷಯ ತಿಳಿಸಿ, ಶ್ರೀನಾಥ್‌ಗೆ ನೀವು ಬುದ್ಧಿ ಹೇಳಿ ಎಂದಿದ್ದಾರೆ. ಶ್ರೀನಾಥ್ ನನಗೇ ಹೀಗೆ ಮಾಡಬಹುದಾ ಎಂದೂ ಪ್ರಶ್ನೆ ಹಾಕಿದ್ದಾರೆ. ‘ಛೆ ಛೆ, ಶ್ರೀನಾಥ್ ಅಂಥವರಲ್ಲ’ ಎಂದು ವೀರಾಸ್ವಾಮಿಯವರು ಹೇಳಿದರೂ ಪುಟ್ಟಣ್ಣನವರಿಗೆ ಸಮಾಧಾನವಾಗಿಲ್ಲ. ಇದರಿಂದ ಬೇಸರಗೊಂಡ ವೀರಾಸ್ವಾಮಿಯವರು ನನ್ನನ್ನೇ ಗದರಿಸಿ ಬುದ್ಧಿ ಹೇಳಲು ಮಲ್ಲೇಶ್ವರಂನಲ್ಲಿದ್ದ ನಮ್ಮ ಅತ್ತೆಯ ಮನೆಗೆ ಬಂದರು. ಅಲ್ಲಿ ನಿತ್ರಾಣನಾಗಿ ಮಲಗಿದ್ದ ನನ್ನನ್ನು ಕಂಡು ಆವಾಕ್ಕಾದರು. ಪುಟ್ಟಣ್ಣನವರ ಸಿಟ್ಟು, ಅದಕ್ಕೆ ಕಾರಣ ವಿವರಿಸಿ-‘ಹೆದರಬೇಡ. ಬೇಗ ಹುಶಾರಾಗು’ ಎಂದು ಧೈರ್ಯ ಹೇಳಿದರು. ನಂತರ ಪುಟ್ಟಣ್ಣನವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದ್ದಾರೆ. ಆದರೆ, ವೀರಸ್ವಾಮಿಯವರ ಮಾತು ನಂಬದ ಪುಟ್ಟಣ್ಣ-‘ ನೀವೂ ಕೂಡ ಶ್ರೀನಾಥ್ ಪರವಾಗಿಯೇ ಮಾತಾಡ್ತಾ ಇದೀರಾ? ಎನ್ನುತ್ತಾ ಪೋನ್ ಕುಕ್ಕಿದ್ದಾರೆ!
ನಾನು ಸಂಪೂರ್ಣ ಗುಣಮುಖನಾಗುವ ವೇಳೆಗೆ ಮೂರು ವಾರ ಕಳೆದುಹೋಗಿತ್ತು. ಆ ವೇಳೆಗೆ ಪುಟ್ಟಣ್ಣ ಅವರಿಗೆ ನೀಡಿದ್ದ ಡೇಟ್ಸ್ ಮುಗಿದಿತ್ತು. ಈ ಕಡೆ ವಜ್ರಮುನಿ ಅವರ ‘ಗಂಡು ಭೇರುಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗುವುದಿತ್ತು. ಪುಟ್ಟಣ್ಣ ಅವರು-ನನ್ನ ಸಿನಿಮಾದ ಚಿತ್ರೀಕರಣ ಮುಗಿಸದೆ ಹೋಗುವಂತಿಲ್ಲ’ ಎಂದು ಮೊದಲೇ ಹೇಳಿದ್ದರು. ಈ ಸಂದರ್ಭದಲ್ಲಿ ಒಂದು ಕಡೆ ಗುರುಗಳು, ಮತ್ತೊಂದು ಕಡೆ ಪ್ರೀತಿಯ ಗೆಳೆಯ! ಇಬ್ಬರಿಗೂ ನಾನು ನ್ಯಾಯ ಒದಗಿಸಲೇ ಬೇಕಿತ್ತು. ಯಾರನ್ನೂ ಬಿಟ್ಟು ಕೊಡುವ ಹಾಗಿರಲಿಲ್ಲ. ಮುಂದೇನು ಮಾಡುವುದು ಎಂದು ನಾನು ದಿಕ್ಕು ತೋಚದೆ ಕೂತಿದ್ದಾಗ ಮತ್ತೆ ವೀರಾಸ್ವಾಮಿಯವರು ನನ್ನ ಸಹಾಯಕ್ಕೆ ಬಂದರು. ಅವರೇ ಮುಂದೆ ನಿಂತು ಖಾಜಿ ನ್ಯಾಯ ಮಾಡಿದರು. ಅದರಂತೆ ಒಂದೊಂದು ದಿನ ಒಬ್ಬೊಬ್ಬರ ಚಿತ್ರದಲ್ಲಿ ನಾನು ನಟಿಸುವುದೆಂದು ತೀರ್ಮಾನವಾಯಿತು. ಈ ನ್ಯಾಯಕ್ಕೆ ಎರಡೂ ಕಡೆಯವರು ಒಪ್ಪಿದರು. ಉಡುಪಿ-ಕುಂದಾಪುರದ ಮಧ್ಯೆ ಇದ್ದ ಒಂದು ನದಿ ಪ್ರದೇಶದಲ್ಲಿ ‘ಈ ಸಂಭಾಷಣೆ’ ಹಾಡಿನ ಚಿತ್ರೀಕರಣ ಶುರುವಾಯಿತು. ಆಗಷ್ಟೇ ಮದುವೆಯಾದ ಜೋಡಿಯ ಪ್ರಣಯಗೀತೆ ಇದು. ಇದನ್ನು ಪುಟ್ಟಣ್ಣ ವಿಶೇಷ ಆಸಕ್ತಿ ವಹಿಸಿ ಬರೆಸಿದ್ದರು. ಆದರೆ ಚಿತ್ರೀಕರಣ ಶುರುವಾಗುವ ವೇಳೆಗೆ ನಮ್ಮ ಮಧ್ಯೆ ಮುನಿಸು ಬೆಳೆದಿತ್ತು. ಮಾತುಕತೆ ನಿಂತುಹೋಗಿತ್ತು. ನಾನು ಮೇಕಪ್ ಮಾಡಿಸಿಕೊಂಡು ಕೂತಿದ್ದರೆ, ಪುಟ್ಟಣ್ಣನವರು ತಮ್ಮ ಸಹಾಯಕರನ್ನು ಕರೆದು-‘ ಎಲ್ಲಪ್ಪಾ ನಮ್ಮ ಹೀರೋ? ಕರೆಯಪ್ಪಾ ಅವರನ್ನು… ಕ್ಯಾಮರಾ ಮುಂದೆ ನಿಲ್ಲೋಕೆ ಹೇಳಿ ಅವರಿಗೆ…’ ಎಂದು ನನಗೆ ಕೇಳಿಸುವಂತೆಯೇ ಹೇಳುತ್ತಿದ್ದರು. ನಾನು ಒಂದೂ ಮಾತಾಡದೆ ಕ್ಯಾಮರಾ ಮುಂದೆ ನಿಂತರೆ-‘ಅವರಿಗೆ ಹಾಡಿನ ಸಾಲು ಹೇಳಪ್ಪಾ’ ಅನ್ನುತ್ತಿದ್ದರು. ಸಹಾಯಕರು-ಹಾಡಿನ ಸಾಲು ಹೇಳಿ, ಮುಖ ಭಾವ ಹೇಗಿರಬೇಕೆಂದು ವಿವರಿಸಲು ಹೊರಟರೆ-ಹಾಗಲ್ಲಪ್ಪಾ, ಅವರಿಗೆ ಹಾಡಿನ ಸಾಲು ಹೇಳಿದರೆ, ಸಾಕು. ಅವರು ಹೀರೋ! ಅವರಿಗೆ ಉಳಿದಿದ್ದೆಲ್ಲಾ ಅರ್ಥವಾಗುತ್ತೆ’ ಎನ್ನುತ್ತಿದ್ದರು. ಅವರ ಪ್ರತಿ ಮಾತಲ್ಲೂ ಪ್ರೀತಿ, ವ್ಯಂಗ್ಯ, ಸಿಡಿಮಿಡಿ ಇರುತ್ತಿತ್ತು. ತಮ್ಮ ಸಿಟ್ಟನ್ನು ಅವರು ಮಾತಿನ ಮೂಲಕವೇ ತೋರಿಸುತ್ತಿದ್ದರು.
‘ಈ ಸಂಭಾಷಣೆ…’ ಹಾಡನ್ನು ಹೆಚ್ಚಾಗಿ ಕ್ಲೋಸ್ ಅಪ್ ಶಾಟ್‌ನಲ್ಲಿ ಚಿತ್ರಿಸಲಾಗಿದೆ. ಶೂಟಿಂಗ್ ಸಂದರ್ಭದಲ್ಲಿ ನನ್ನ ಮುಂದೆ ಕ್ಯಾಮರಾ, ಅದರ ಹಿಂದೆ ಛಾಯಾಗ್ರಾಹಕ ಮಾರುತಿರಾವ್, ಅವರ ಹಿಂದೆ ಪುಟ್ಟಣ್ಣ ಇರುತ್ತಿದ್ದರು. ಗುರುಗಳ ಮನಸ್ಸು ಗೆಲ್ಲಬೇಕು ಎಂದುಕೊಂಡು ನಾನೂ ತನ್ಮಯವಾಗಿ ಅಭಿನಯಿಸಿದೆ. ತಮ್ಮ ಕಲ್ಪನೆಯಂತೆಯೇ ದೃಶ್ಯ ಮೂಡಿ ಬಂದಾಗ, ಸಿಟ್ಟು ಮರೆತು ನಿಂತಲ್ಲೇ ಕಣ್ತುಂಬಿಕೊಳ್ಳುತ್ತಿದ್ದರು ಪುಟ್ಟಣ್ಣ. ಕೆಲವೊಂದು ಬಾರಿ ಮಾತೇ ಆಡದೆ ‘ಸೂಪರ್’ ಎಂಬಂತೆ ಕೈ ಸನ್ನೆಯ ಮೂಲಕ ತೋರ್ಪಡಿಸಿ ಸಂತೋಷ ಪಡುತ್ತಿದ್ದರು. ನಟಿಸುತ್ತಿದ್ದಾಗಲೇ ಅವರ ಸಂತೋಷ, ಸಂಭ್ರಮವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ.
ಹಾಡಿನ ಚಿತ್ರೀಕರಣ ಮುಗಿವ ವೇಳೆಗೆ ಗುರುಗಳ ಸಿಟ್ಟು ಇಳಿದಿತ್ತು. ಮಾತಾಡಲು ಶುರು ಮಾಡಿದ್ದರು. ಅದೊಂದು ದಿನ ನಾನು-‘ಗುರುಗಳೇ ನನ್ನ ಅನಾರೋಗ್ಯದಿಂದ ಎಲ್ಲರಿಗೂ ತೊಂದ್ರೆ ಆಯ್ತು. ಕ್ಷಮಿಸಿ. ನಿಮಗೆ ನನ್ನ ಮೇಲೆ ವಿಪರೀತ ಪ್ರೀತಿ, ನಂಬಿಕೆ. ಹಾಗಿದ್ರೂ ಸಿಟ್ಟು ಮಾಡಿಕೊಂಡ್ರಿ. ಮಾತು ಬಿಟ್ಟಿರಿ. ಛೇಡಿಸಿದಿರಿ. ಎಷ್ಟೇ ಸಿಟ್ಟು ಬಂದ್ರೂ ನನ್ನ ಮೇಲಿದ್ದ ಪ್ರೀತಿ ಕಡಿಮೆಯಾಗಲಿಲ್ಲ. ಶೂಟಿಂಗ್ ವೇಳೆಯಲ್ಲಿ ನೀವು ಭಾವುಕರಾದದ್ದನ್ನು, ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದ್ದನ್ನು ನಾನು ಗಮನಿಸಿ ಸಂತೋಷಪಟ್ಟೆ’ ಎಂದೆ.
ತಕ್ಷಣವೇ ಪುಟ್ಟಣ್ಣನವರು- ‘ಓ… ಅದನ್ನೂ ನೀನು ನೋಡಿಬಿಟ್ಯಾ? ಅಯ್ಯೋ ಮುಂಡೇದೆ, ಅದನ್ನು ನೋಡಿ ಬಿಟ್ಟೆಯಾ ನೀನೂ?’ ಎನ್ನುತ್ತಾ ನಕ್ಕರು. ಮುಂದುವರಿದು-‘ಕಲಿತು ಬಿಟ್ಟಿದ್ದೀಯ ಕಣೋ. ನನ್ನಿಂದ ಎಲ್ಲವನ್ನೂ ಕಲಿತು ಬಿಟ್ಟಿದ್ದೀಯ’ ಎಂದರು. ‘ನಿಮ್ಮ ಶಿಷ್ಯ ಅಂದ ಮೇಲೆ ಕಲಿಯಲೇ ಬೇಕಲ್ವಾ ಗುರುಗಳೇ’ ಅಂದೆ. ಕೆಲ ಸಮಯದ ನಂತರ ಪುಟ್ಟಣ್ಣನವರು ಹೇಳಿದರು: ಶ್ರೀನಾಥ್, ಈ ಸಂಭಾಷಣೆ… ಹಾಡು ಪ್ರೀತಿಸುವ ಗಂಡು-ಹೆಣ್ಣಿಗೆ ಮಾತ್ರ ಸಂಬಂಸಿದ್ದಲ್ಲ. ಅದು ಗೆಳೆಯರ ಮಾತೂ ಆಗಬಹುದು. ಮುನಿದು ಕೂತವರ ಮನಸುಗಳ ಮಾತೂ ಆಗಬಹುದು. ಮಾತಿಲ್ಲದ ಸಂದರ್ಭದಲ್ಲೂ ಜತೆಗಿರುತ್ತೆ ನೋಡು, ಆ ನಂಬಿಕೆಯ ಸಂಭಾಷಣೆಯೂ ಆಗಬಹುದು. ಹಾಗಾಗಿ ಈ ಹಾಡು ಎಲ್ಲರ ಮನಸಿನ ಹಾಡು. ಇದು ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತೆ’ ಎಂದರು. ಅವರ ಮಾತು ನಿಜವಾಗಿದೆ. ಈ ಹಾಡಿನ ಚಿತ್ರೀಕರಣದ ವೇಳೆಯಲ್ಲಿ ಒತ್ತಡದ ಕಾರಣದಿಂದ ನಾನು ಗೊಂದಲಕ್ಕೆ ಬೀಳದಂತೆ ನೋಡಿಕೊಂಡ ಪುಟ್ಟಣ್ಣ, ಆರತಿ ಹಾಗೂ ವಜ್ರಮುನಿಯವರಿಗೆ ನಾನು ಎಂದೆಂದೂ ಋಣಿ…’
ಹಾಡಿನ ಕಥೆ ಮುಗಿಸಿ, ಅಗಲಿದ ಗುರುಗಳು ಹಾಗೂ ಗೆಳೆಯನನ್ನು ನೆನೆದು ಕಣ್ತುಂಬಿಕೊಂಡರು ಶ್ರೀನಾಥ್.

ಇದು ಬರೀ ಚಿತ್ರಗೀತೆಯಲ್ಲ, ಎಲ್ಲರ ಬದುಕಿನ ಹಾಡು….

ಡಿಸೆಂಬರ್ 9, 2010

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಚಿತ್ರ: ಶುಭಮಂಗಳ , ಗೀತರಚನೆ: ಚಿ. ಉದಯಶಂಕರ್
ಸಂಗೀತ ವಿಜಯಭಾಸ್ಕರ್. ಗಾಯನ‘ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ
ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ, ಬಾಳಿನ ಗುರಿಯಮ್ಮಾ ||ಪ||

ಬಾಲ್ಯದ ಆಟ, ಆ ಹುಡುಗಾಟ ಇನ್ನೂ ಮಾಸಿಲ್ಲ ಆಹಾ…
ಆಟದೆ ಸೋತು ರೋಷದಿ ಕಚ್ಚಿದ
ಗಾಯವ ಮರೆತಿಲ್ಲಾ ಆಹಾ… ಗಾಯವ ಮರೆತಿಲ್ಲ ||೧||

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದಿ ಬರಿಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಊದಿಸಿದೇ ಕೆನ್ನೇ ಆಹಾ… ನಾನದ ಮರೆಯುವೆನೇ ||೨||
‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ…’

ಸಂಗವ ಬಿಟ್ಟು ಜಗಳ ಆಡಿದ ದಿನಾವಾ ಮರೆತಿಲ್ಲ, ಆಹಾ….
ಮರೆಯಲಿ ನನ್ನಾ ಮೋರಿಗೆ ತಳ್ಳಿದ
ತುಂಟಿಯ ಮರೆತಿಲ್ಲ, ಆಹಾ… ಜಾಣೆಯ ಮರೆತಿಲ್ಲ ||೩||

ಈ ಹಾಡು ಕೇಳುತ್ತಿದ್ದಂತೆಯೇ ಬಹುಪಾಲು ಜನರಿಗೆ ತಮ್ಮ ಬಾಲ್ಯ ನೆನಪಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾವು ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು, ತಮಾಷೆಗಳು, ಗೆಳಯರೊಂದಿಗೆ ಆಡಿದ ಆಟ, ಜಗಳ, ಕುಸ್ತಿ…. ಎಲ್ಲವೂ ಒಂದೊಂದಾಗಿ ನೆನಪಿಗೆ ಬರುತ್ತವೆ. ಆ ಸಂದರ್ಭದಲ್ಲಿಯೇ ಎದುರು ಮನೆಯಲ್ಲಿಯೋ, ಪಕ್ಕದ ಬೀದಿಯಲ್ಲಿಯೋ ಇದ್ದ ಗೆಳತಿಯೂ ನೆನಪಾಗುತ್ತಾಳೆ. ಅವಳೊಂದಿಗೆ ಕುಂಟಾಬಿಲ್ಲೆ ಆಡಿದ್ದು, ಕಾಗೆ ಎಂಜಲು ಮಾಡಿಕೊಂಡು ಪೆಪ್ಪರ್‌ಮೆಂಟ್ ತಿಂದದ್ದು, ಯಾವುದೋ ಸಣ್ಣ ಕಾರಣಕ್ಕೆ ‘ಠೂ’ ಬಿಟ್ಟಿದ್ದು, ನಂತರ ಭರ್ತಿ ಎರಡೂವರೆ ತಿಂಗಳು ಮಾತಾಡದೆ ಉಳಿದದ್ದು; ಹಾಗಿದ್ದರೂ ಕದ್ದು ಕದ್ದು ಅವಳ ಬಗ್ಗೆ ವಿಚಾರಿಸಿಕೊಂಡದ್ದು, ಕಡೆಗೊಮ್ಮೆ ಹಬ್ಬದ ನೆಪದಲ್ಲಿ ಮಾತಾಡಿಸಿದ್ದು; ನಂತರ-ನೀನೇ ಮೊದಲು ಮಾತಾಡಿಸಿದ್ದು ಎಂದು ಇಬ್ಬರೂ ಜಂಭ ಹೊಡೆದದ್ದು… ಇಂಥ ಘಟನೆಗಳೆಲ್ಲ ಬಿಟ್ಟೂ ಬಿಡದೆ ನೆನಪಾಗುತ್ತವೆ. ಹಾಗಾಗಿ, ಹಾಡು ಕೇಳುತ್ತಾ ಹೋದಂತೆಲ್ಲ ಅದು ಚಿತ್ರಗೀತೆ ಅನ್ನಿಸುವುದಿಲ್ಲ. ಬದಲಿಗೆ, ನಮ್ಮ ಬದುಕಿನ ಹಾಡು, ಹಾಡಲ್ಲಿರುವುದೆಲ್ಲ ನಮ್ಮದೇ ಪಾಡು ಎನ್ನಿಸಿಬಿಡುತ್ತದೆ.
ಈ ಹಾಡು ಬರೆದವರು ಚಿ. ಉದಯಶಂಕರ್. ‘ಶುಭಮಂಗಳ’ ಚಿತ್ರದಲ್ಲಿ ಬಾಲ್ಯದ ‘ಸ್ನೇಹ’ ಹೊಂದಿದ್ದ ನಾಯಕ-ನಾಯಕಿ ಯೌವ್ವನದ ದಿನಗಳಲ್ಲಿ ಭೇಟಿಯಾಗುತ್ತಾರೆ. ಆಗ ನಾಯಕಿಯನ್ನು ದೋಣಿಯಲ್ಲಿ ಕೂರಿಸಿಕೊಂಡು ಹಾಗೇ ಸುಮ್ಮನೆ ಒಂದು ರೌಂಡ್ ಹೊರಡುತ್ತಾನೆ ನಾಯಕ. ಅವನಿಗೆ ಆ ಕ್ಷಣಕ್ಕೆ ಬಾಲ್ಯದ ಬದುಕು ನೆನಪಾಗುತ್ತದೆ. ಅವಳಿಗೂ ಹಳೆಯ ದಿನಗಳನ್ನು ನೆನಪಿಸಬೇಕು ಎಂಬ ಮಹದಾಸೆಯಿಂದ ಆತ ಹಾಡುತ್ತಾನೆ: ‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ… ಪಯಣಿಗ ನಾನಮ್ಮ…’
‘ಬಾಲ್ಯದ ಸ್ನೇಹವೇ ಯೌವ್ವನದಲ್ಲಿ ಪ್ರೇಮವಾಗಿ ಬದಲಾಗುತ್ತದೆ!’ -ಇದು ಎಂಥವರೂ ಒಪ್ಪಲೇಬೇಕಾದ ಕಹಿ ಸತ್ಯ. ಎಷ್ಟೋ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ತುಂಬಾ ಸಲುಗೆಯಿದೆ ಎಂಬ ಕಾರಣ ಮುಂದಿಟ್ಟುಕೊಂಡೇ ಹುಡುಗರು ಪ್ರೊಪೋಸ್ ಮಾಡಿಬಿಡುತ್ತಾರೆ. ವಾಸ್ತವ ಹೀಗಿದ್ದರೂ, ಚಂದುಳ್ಳಿ ಚೆಲುವೆಯಂಥ ನಾಯಕಿ ಎದುರಿಗೇ ಇದ್ದಾಗಲೂ ಪ್ರೇಮದ ಹಾಡು ಹೇಳುವ ಬದಲು ಸ್ನೇಹದ ಹಾಡು ಹೇಳುತ್ತಾನೆ. ‘ಅವಳ’ ಸನ್ನಿಯಲ್ಲಿ ‘ಅವನು’ ಸ್ನೇಹವನ್ನೇ ಧ್ಯಾನಿಸುವಂಥ ಹಾಡನ್ನು ಹೇಗೆ ಬರೆದರು ಉದಯಶಂಕರ್? ಈ ಹಾಡು ಸೃಷ್ಟಿಗೆ ಅವರಿಗೆ ಪರೋಕ್ಷವಾಗಿ ನೆರವಿಗೆ ಬಂದ ಅಂಶಗಳಾದರೂ ಯಾವುವು?
ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳಿದವರು ‘ಶುಭಮಂಗಳ’ದ ನಾಯಕನೂ ಆಗಿದ್ದ ಪ್ರಣಯ ರಾಜ ಶ್ರೀನಾಥ್. ಆ ಹಾಡಿನ ಕಥೆ ಹೀಗೆ…
ಇದು ೧೯೭೫ರ ಮಾತು. ಆ ವೇಳೆಗೆ ನಾನು ೩೯ ಚಿತ್ರಗಳಲ್ಲಿ ಅಭಿನಯಿಸಿದ್ದೆ. ನಾಯಕ ಅನ್ನಿಸಿಕೊಂಡಿದ್ದೆ ನಿಜ. ಆದರೆ ‘ಸ್ಟಾರ್’ ಅನ್ನಿಸಿಕೊಂಡಿರಲಿಲ್ಲ. ಮನಸ್ಸಿಗೆ ತೃಪ್ತಿಕೊಡುವಂಥ ಪಾತ್ರಗಳು ಸಿಕ್ಕಿರಲಿಲ್ಲ. ಅಂಥ ಸಂದರ್ಭದಲ್ಲಿ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ತಮ್ಮ ರಘುನಂದನ್ ಇಂಟರ್‌ನ್ಯಾಷನಲ್ ಸಂಸ್ಥೆಗಾಗಿ ಒಂದು ಸಿನಿಮಾ ನಿರ್ದೇಶಿಸುವಂತೆ ಪುಟ್ಟಣ್ಣ ಕಣಗಾಲ್ ಅವರನ್ನು ಕೇಳಿಕೊಂಡರು. ಆ ವೇಳೆಗಾಗಲೇ ನಿರ್ದೇಶಕರಾಗಿ, ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ದೇಶನದಿಂದಾಗಿ ಖ್ಯಾತಿಯ ತುತ್ತ ತುದಿಯಲ್ಲಿದ್ದರು ಪುಟ್ಟಣ್ಣ. ರವೀ ಅವರು ಒಂದು ಸಿನಿಮಾ ನಿರ್ದೇಶಿಸಿ ಕೊಡಿ ಎಂದು ಕೇಳಿಕೊಂಡರಲ್ಲ? ಆಗ, ಶ್ರೀಮತಿ ‘ವಾಣಿ’ ಅವರ ‘ಶುಭಮಂಗಳ’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದರು ಪುಟ್ಟಣ್ಣ.
ಆ ಚಿತ್ರಕ್ಕೆ ನಟ ಶಿವರಾಂ ಸಹಾಯಕ ನಿರ್ದೇಶಕರು. ಅವರಿಗೆ ನನ್ನ ಮೇಲೆ ಯಾಕೋ ವಿಶೇಷ ಪ್ರೀತಿ. ನಿರ್ಮಾಪಕ ರವೀ ಅವರಿಗೂ ನನ್ನ ಮೇಲೆ ವಿಪರೀತ ಮಮಕಾರ. ಈ ಹೊಸ ಚಿತ್ರಕ್ಕೆ ಶ್ರೀನಾಥ್ ಅವರನ್ನೇ ನಾಯಕನನ್ನಾಗಿ ತೆಗೆದುಕೊಳ್ಳಿ ಎಂದು ರವೀ ಹಾಗೂ ಶಿವರಾಂ ಇಬ್ಬರೂ ಪುಟ್ಟಣ್ಣ ಅವರಲ್ಲಿ ಕೇಳಿಕೊಂಡಿದ್ದರು. ‘ನನ್ನ ಸಿನಿಮಾದ ನಾಯಕ-ನಾಯಕಿಯ ಬಗ್ಗೆ ನನಗಿರುವ ಅಂದಾಜುಗಳೇ ಬೇರೆ. ನನ್ನ ಕಥೆಗೆ ಒಪ್ಪುವಂತಿದ್ದರೆ ಮಾತ್ರ ಶ್ರೀನಾಥ್‌ನನ್ನು ಹೀರೋ ಮಾಡ್ತೀನಿ’ ಎಂದು ಮೊದಲೇ ಹೇಳಿದ್ದರು ಪುಟ್ಟಣ್ಣ. ನಂತರ, ನನ್ನನ್ನು ಐದಾರು ಬಗೆಯಲ್ಲಿ ‘ಟೆಸ್ಟ್’ ಮಾಡಿದರು. ಕಡೆಗೊಮ್ಮೆ ನಾನು ‘ಶುಭಮಂಗಳ’ದ ಹೀರೋ ಆದೆ.
ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆ ರಚನೆಯ ಕೆಲಸ ಶುರುವಾಯಿತು. ಈ ಎಲ್ಲ ಕೆಲಸ ನಡೆದದ್ದು ಮದ್ರಾಸಿನಲ್ಲಿ. ಪುಟ್ಟಣ್ಣನವರ ಸಿನಿಮಾ ಕುರಿತ ಚರ್ಚೆ ಎಂದರೆ, ಅದೊಂಥರಾ ಪಿಕ್‌ನಿಕ್ ಇದ್ದಂತೆ ಇರುತ್ತಿತ್ತು. ಸಿನಿಮಾದ ಚರ್ಚೆಯಲ್ಲಿ ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಗೀತೆರಚನೆಕಾರ, ಗಾಯಕ…. ಹೀಗೆ ಎಲ್ಲರೂ ಪಾಲ್ಗೊಳ್ಳಬಹುದಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಿರ್ಮಾಪಕ ರವೀ, ಸಹ ನಿರ್ದೇಶಕ ಶಿವರಾಂ, ಸಂಗೀತ ನಿರ್ದೇಶಕ ವಿಜಯ ಭಾಸ್ಕರ್, ಗೀತ ರಚನೆಕಾರ ಚಿ. ಉದಯಶಂಕರ್… ಇವರೆಲ್ಲಾ ಈ ಸಿನಿಮಾದಿಂದ ಶ್ರೀನಾಥ್‌ಗೆ ಒಳ್ಳೆಯದಾಗಲಿ ಎಂದೇ ಬಯಸಿದ್ದರು.
ಈ ಸಂದರ್ಭದಲ್ಲಿಯೇ- ಸಿನಿಮಾ ಮೊದಲ ಹಾಡು ಹೇಗಿರಬೇಕು ಎಂಬ ಚರ್ಚೆ ಶುರುವಾಯಿತು. ‘ಬಾಲ್ಯವನ್ನು ನೆನಪು ಮಾಡಿಕೊಂಡು ನಾಯಕ ಹಾಡುವಂತಾಗಲಿ. ಇವನ ಹಾಡು ಕೇಳಿ ನಾಯಕಿಗೂ ಬಾಲ್ಯ ನೆನಪಾಗುವಂತೆ ಹಾಡು ಸೃಷ್ಟಿಯಾಗಲಿ’ ಎಂದರು ಪುಟ್ಟಣ್ಣ. ಹೀಗೆ, ಹಾಡಿನ ಸಂದರ್ಭದ ಬಗ್ಗೆ ಹೇಳಿದವರೇ-ತಮ್ಮ ಬಾಲ್ಯದ ಬಗ್ಗೆಯೂ ಹೇಳಿಕೊಂಡರು. ತಾವು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದುದು, ತರಲೆ ಮಾಡುತ್ತಿದ್ದುದು, ಕಾಲೇಜು ಮೆಟಟಿಲೇರದೇ ಹೋದದ್ದು… ಎಲ್ಲವನ್ನೂ ನೆನಪಿಸಿಕೊಂಡರು. ಅವರ ಮಾತು ಕೇಳುತ್ತಿದ್ದಂತೆಯೇ ಚಿ. ಉದಯಶಂಕರ್, ಕೆ.ಎಸ್.ಎಲ್. ಸ್ವಾಮಿ, ವಿಜಯಭಾಸ್ಕರ್ ಕೂಡ ಬಾಲ್ಯದ ಬಗ್ಗೆ ತಮ್ಮ ತುಂಟತನದ ಬಗ್ಗೆ ಹೇಳಿಕೊಂಡರು. ಎಲ್ಲರ ಕಥೆ ಕೇಳಿದ ನಂತರ- ‘ಸಾರ್, ನಾಯಕ ಕಡಲಿನಲ್ಲಿ ದೋಣಿ ವಿಹಾರ ಹೋಗ್ತಾ ಇರ್‍ತಾನೆ. ಆಗಲೇ ಹಳೆಯ ನೆನಪಲ್ಲಿ ತೇಲಿ ಹೋಗಿ ಬಾಲ್ಯದ ಮಧುರ ಸ್ನೇಹವನ್ನು ನೆನಪು ಮಾಡಿಕೊಳ್ತಾನೆ ಅಲ್ಲವಾ? ಅಂದರೆ, ಇದು ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಾನ…. ಅಂದರು ಚಿ. ಉದಯಶಂಕರ್.
ಅವರ ಮಾತು ಎಲ್ಲರಿಗೂ ಇಷ್ಟವಾಯಿತು. ಒಪ್ಪಿಗೆಯಾಯತು. ನಂತರದ ಹತ್ತು ನಿಮಿಷದಲ್ಲಿ ಒಬ್ಬರೇ ಕೂತು ಏನನ್ನೋ ಗುಣಗುಣಿಸುತ್ತಾ ಹಾಡಿನ ಪಲ್ಲವಿ ಹಾಗೂ ಚರಣವನ್ನು ಬರೆದರು ಉದಯಶಂಕರ್. ಮೊದಲ ಚರಣದಲ್ಲಿ ಅವರು-‘ಆಟದೆ ಸೋತೂ ರೋಷದಿ ಕಚ್ಚಿದ ಗಾಯವ ಮರೆತಿಲ್ಲ…’ ಎಂದು ಬರೆದರಲ್ಲ? ಅದನ್ನು ನೋಡಿ ಎಲ್ಲರಿಗೂ ಖುಷಿಯಾಯಿತು. ನಗು ಬಂತು. ತಂತಮ್ಮ ಬಾಲ್ಯ ಬಿಟ್ಟೂ ಬಿಡದೆ ನೆನಪಾಯ್ತು. ಪುಟ್ಟಣ್ಣ ಅವರಂತೂ ಆನಂದ ತುಂದಿಲರಾಗಿ-ಇದೇ, ಇದೇ ನನಗೆ ಬೇಕಾಗಿದ್ದುದ್ದು. ಈ ಸಾಲುಗಳಲ್ಲಿ ನಾಯಕ-ನಾಯಕಿ ಇಬ್ರೂ ಸಿಕ್ತಾರೆ. ಹಾಡು ಅವರಿಬ್ಬರದೇ ಅಲ್ಲ, ಎಲ್ಲರದೂ ಆಗುತ್ತೆ. ಇದು ಖಂಡಿತ ಎಲ್ಲರನ್ನೂ ತಲುಪುತ್ತೆ ಎಂದು ಭವಿಷ್ಯ ಹೇಳಿಬಿಟ್ಟರು.
ಈ ಪ್ರೋತ್ಸಾಹದ ಮಾತುಗಳಿಂದ ಸಹಜವಾಗಿಯೇ ಖುಷಿಯಾದ ಉದಯಶಂಕರ್, ಎರಡನೇ ಚರಣದಲ್ಲಿ ಎಲ್ಲರ ಬದುಕಲ್ಲೂ ನಡೆದಿರಬಹುದಾದ ಒಂದು ಅದ್ಭುತ ಸಾಲನ್ನೇ ಹಾಡಾಗಿಸಿದರು. ಅದೇ-ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ…’ ಇಷ್ಟನ್ನು ಮಾತ್ರ ಕೇಳಿದರೆ-ಅದು, ಹೀರೊ ತನ್ನ ಬಗ್ಗೆಯೇ ಹೇಳಿಕೊಳ್ಳುವ ಮಾತು ಅನ್ನಿಸುವುದುಂಟು. ಆದರೆ ಹಾಡಿನ ಸಾಲನ್ನು ಅಷ್ಟಕ್ಕೇ ಬಿಡಲಿಲ್ಲ ಉದಯಶಂಕರ್… ಎನ್ನುತ ನಾನು ಕೆಣಕಲು ನಿನ್ನ ಊದಿಸಿದೇ ಕೆನ್ನೆ, ಆಹಾ… ನಾನದ ಮರೆಯುವೆನೇ?’ ಎಂಬ ಇನ್ನೊಂದು ಸಾಲು ತಂದಿಟ್ಟರು. ಪರಿಣಾಮ, ಹಾಡಿನ ಮೊದಲ ಸಾಲು ಕೇಳಿದಾಗ ಖುಷಿಯಿಂದ ನಗುವ ನಾಯಕಿ ಹಿಂದೆಯೇ ಬರುವ ಇನ್ನೊಂದು ಸಾಲು ಕೇಳಿದಾಗ ಹುಸಿ ಮುನಿಸಿನಿಂದ ನಾಯಕನಿಗೆ ಹೊಡೆಯಲು ಹೋಗುತ್ತಾಳೆ. ಹಾಡು ನೋಡುತ್ತಾ ಕೂತವರಿಗೆ ಇದೆಲ್ಲಾ ತಮ್ಮದೇ ಬದುಕಿನ, ನೆನಪಿನ ಪುಟ ಎಂದು ಮತ್ತೆ ಮತ್ತೆ ಅನ್ನಿಸುವುದೇ ಆಗ.
ಹೀಗೆ, ಗೆಳೆತನದ ಬಗ್ಗೆ ಸವಿ ಮಾತುಗಳನ್ನು ಆಡಿಕೊಂಡು, ಶ್ರೀನಾಥ್‌ಗೆ ಒಳಿತಾಗಲಿ, ಎಂಬ ಸದಾಶಯದಿಂದಲೇ ಉದಯಶಂಕರ್ ಹಾಡು ಬರೆದರು. ವಿಜಯಭಾಸ್ಕರ್ ಅದಕ್ಕೆ ರಾಗ ಸಂಯೋಜಿಸಿದರು. ಅದೊಂದು ದಿನ ಎಸ್ಪೀಬಿ-ಎದೆ ತುಂಬಿ ಹಾಡಿಯೂ ಬಿಟ್ಟರು.
‘ಶುಭಮಂಗಳ’ದ ಶೂಟಿಂಗ್ ನಡೆಯುತ್ತಿದ್ದುದು ಕಾರವಾರದಲ್ಲಿ ನಾವೆಲ್ಲರೂ ಶೂಟಿಂಗ್‌ನಲ್ಲಿ ‘ಬ್ಯುಸಿ’ಯಾಗಿದ್ದ ಸಂದರ್ಭದಲ್ಲಿಯೇ ಈ ಕಡೆ ಬೆಂಗಳೂರಿನಲ್ಲಿ ನನ್ನ ಪತ್ನಿ ಗೀತಾ, ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಳು. ೧೯೭೫ರ ನವೆಂಬರ್ ೨೬, ೨೭ ಎಂದು ಡಾಕ್ಟರು ಡೇಟ್ ಕೊಟ್ಟಿದ್ದರು. ಶೂಟಿಂಗ್‌ನಲ್ಲಿದ್ದ ನನಗೆ ಆಗಿಂದಾಗ್ಗೆ ಗೀತಾಳ ನೆನಪಾಗುತ್ತಿತ್ತು. ಚೊಚ್ಚಲು ಹೆರಿಗೆಯ ಸಂದರ್ಭದಲ್ಲಿ ನಾನು ದೂರ ಇದ್ದೇನಲ್ಲ? ಅವಳಿಗೆ ಗಾಬರಿಯಾಯ್ತೋ ಏನೋ ಎಂದೆಲ್ಲಾ ಚಡಪಡಿಸುತ್ತಿದ್ದೆ. ಒಂದು ದಿನ ಸಂದರ್ಭ ನೋಡಿ ಪುಟ್ಟಣ್ಣ ಅವರಿಗೂ ಈ ವಿಷಯ ತಿಳಿಸಿದೆ’. ಒಂದೆರಡು ದಿನ ರಜೆ ಕೊಡಿ ಸಾರ್, ಹೋಗಿ ಒಮ್ಮೆ ನೋಡಿಕೊಂಡು ಬರ್‍ತೇನೆ’ ಎಂದೆ. ಪುಟ್ಟಣ್ಣ ಒಪ್ಪಿದರು. ‘ನೀನು ವಾಪಸ್ ಬಂದ ನಂತರವೇ ಹಾಡಿನ ಚಿತ್ರೀಕರಣ ನಡೆಸೋಣ. ಖುಷಿಯಾಗಿ ಹೋಗಿ ಬಾ ಮರೀ’ ಅಂದರು.
ಬೆಂಗಳೂರಿಗೆ ಬಂದವನೇ ಆಸ್ಪತ್ರೆಯಲ್ಲಿದ್ದ ಗೀತಾಗೆ ಹೊಸ ಸಿನಿಮಾದ ಎಲ್ಲ ವಿಷಯ ತಿಳಿಸಿದೆ. ಡಾಕ್ಟರು ಹೇಳಿದ್ದ ದಿನಾಂಕದಲ್ಲಿ ಹೆರಿಗೆ ಆಗಲಿಲ್ಲ. ಆಗ ಗೀತಾ ಹೇಳಿದ್ಲು: ‘ನನ್ನನ್ನು ಹುಷಾರಾಗಿ ನೋಡಿಕೊಳ್ಳಲು ಇಲ್ಲಿ ಜನ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ಈ ಸಿನಿಮಾ ನಿಮಗೆ ಒಂಥರಾ ಛಾಲೆಂಜ್ ಇದ್ದ ಹಾಗೆ. ಅಲ್ಲಿ ಇಡೀ ಚಿತ್ರತಂಡವೇ ನಿಮಗಾಗಿ ಕಾಯುತ್ತಿದೆ. ನೀವು ಹೋಗದಿದ್ರೆ ನಿರ್ಮಾಪಕರಿಗೆ ತೊಂದರೆ ಆಗುತ್ತೆ. ನಿಮ್ಮ ಯಶಸ್ಸು ಬಯಸುವ ಅವರೆಲ್ಲರ ಗೆಳೆತನಕ್ಕೆ ಬೆಲೆ ಕಟ್ಟಲು ಆಗೋದಿಲ್ಲ. ನೀವು ತಕ್ಷಣ ಹೊರಡಿ…’
ಸರಿ, ತಕ್ಷಣವೇ ಕಾರವಾರಕ್ಕೆ ವಾಪಸ್ ಬಂದೆ. ಶೂಟಿಂಗ್ ಶುರುವಾಯಿತು. (ನಾನು ಕಾರವಾರ ತಲುಪಿದ ನಂತರ ಡಿಸೆಂಬರ್ ೨ರಂದು ಬೆಂಗಳೂರಲ್ಲಿ ಮಗ ಹುಟ್ಟಿದ ಸುದ್ದಿ ಬಂತು.) ಇಲ್ಲಿ ಮುಖ್ಯವಾಗಿ ಇನ್ನೂ ಒಂದು ಮಾತು ಹೇಳಬೇಕು. ಆರತಿ ನನಗೆ ಆಗ (ಮತ್ತು ಈಗಲೂ) ಆಪ್ತ ಗೆಳತಿ. ಎಲ್ಲ ವಿಷಯವನ್ನೂ ಆಕೆ ನನ್ನೊಂದಿಗೆ ಮುಕ್ತವಾಗಿ ಮಾತಾಡುತ್ತಿದ್ದಳು. ಚಿತ್ರತಂಡದವರ ಒಡನಾಟ, ಆರತಿಯ ಆಪ್ತ ಮಾತು, ಪುಟ್ಟಣ್ಣನವರ ಹಾರೈಕೆ, ಬಾಳಸಂಗಾತಿ ಗೀತಾಳ ಹಿತವಚನ… ಇದೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಆ ಹಾಡಲ್ಲಿ ನನ್ನ ಮುಖಭಾವ ತುಂಬ ಆಪ್ತವಾಗಿ ಕಾಣಲು ಇದೂ ಒಂದು ಕಾರಣ ಆಗಿರಬೇಕು….
*****
‘ಸ್ನೇಹದ ಕಡಲಲ್ಲೀ…’ ಎಂದು ಮತ್ತೆ ಮತ್ತೆ ಗುನುಗುತ್ತಲೇ ಈ ಕಥೆ ಹೇಳಿದ ಶ್ರೀನಾಥ್, ‘ಶುಭಮಂಗಳ’ದ ಮೂಲಕ ನಾನೂ ‘ಸ್ಟಾರ್’ ಅನ್ನಿಸಿಕೊಂಡೆ ಎಂದು ಹೆಮ್ಮೆಯಿಂದ ಹೇಳಿದರು. ಅಷ್ಟಕ್ಕೇ ಸುಮ್ಮನಾಗದೆ ‘ಧರ್ಮಸೆರೆ’ ಚಿತ್ರದ ‘ ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’ ಹಾಡಿನ ಕಥೆಯನ್ನೂ ಹೇಳಿದರು. ಆ ಗಂಧರ್ವ ಗೀತೆಯ ಕಥೆ ಮುಂದಿನವಾರ!

ಅಧಿಕಾರದ ಮದದಲ್ಲಿ ತೇಲಬೇಡ

ಡಿಸೆಂಬರ್ 6, 2010

 

 

 

 

 

 

 

 

 

ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ.
ಈಗ ಹೇಳಲಿರುವ ಕಥೆ [^] ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. ಅವನ ಹೆಸರು ಸುಬ್ಬ. ಒಂದು ಮಾಸಲು ಅಂಗಿ, ಅಲ್ಯುಮಿನಿಯಂ ತಟ್ಟೆ ಹಾಗೂ ಮಾರುದ್ದದ ಒಂದು ಕೋಲು. ಇವಿಷ್ಟೂ ಸುಬ್ಬನ ಆಸ್ತಿ. ಬೆಳಗಿನ ಹೊತ್ತು, ಈಶ್ವರನ ದೇವಾಲಯದ ಮುಂದಿನ ಅರಳೀಕಟ್ಟೆಯಲ್ಲಿ ಆತ ಕೂತಿರುತ್ತಿದ್ದ. ದೇವಸ್ಥಾನಕ್ಕೆಂದು ಬಂದವರು ಏನಾದರೂ ಕೊಟ್ಟರೆ ಅದನ್ನು ಪಡೆದುಕೊಳ್ಳುತ್ತಿದ್ದ. ಬೆಳಗ್ಗೆ-ಮಧ್ಯಾಹ್ನ-ಸಂಜೆ ಏನು ಸಿಗುತ್ತಿತ್ತೋ ಅದನ್ನು ಖುಷಿಯಿಂದ ತಿನ್ನುತ್ತಿದ್ದ. ಬಹುಶಃ ಅವನಿಗೆ ಆಸೆಯಿರಲಿಲ್ಲ. ನಾಳೆಗೆ ಕೂಡಿಡುವ ಬುದ್ಧಿಯೂ ಇರಲಿಲ್ಲ. ಹಾಗಾಗಿ ಅವನು ಮನೆಮನೆಯಲ್ಲಿ ಭಿಕ್ಷೆ ಕೇಳಲು ಹೋಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಊರಿನ ಯಾರದಾದರೂ ಮನೆಯ ಜಗುಲಿಯಲ್ಲಿ ಮಲಗಿಬಿಡುತ್ತಿದ್ದ. ಬೆಳಗ್ಗೆ ಆದದ್ದೇ ತಡ, ಊರ ಸಮೀಪವಿದ್ದ ಕೆರೆಯ ಬಳಿ ಹೋಗಿ, ನಿತ್ಯಕರ್ಮಗಳನ್ನು ಮುಗಿಸಿ ಸೀದಾ ಬಂದು ಅರಳೀಕಟ್ಟೆಯಲ್ಲಿ ಕೂತುಬಿಡುತ್ತಿದ್ದ.
ಸುಬ್ಬನಿಂದ ಯಾವತ್ತೂ ಯಾರಿಗೂ ತೊಂದರೆಯಾಗಿರಲಿಲ್ಲ. ದಿನವೂ ಒಂದೊಂದು ಮನೆಯ ಜಗುಲಿಯಲ್ಲಿ ಮಲಗುತ್ತಿದ್ದನಲ್ಲ? ಆಗ, ಕೂಡ ಮನೆಯವರಿಗೆ ಯಾವುದೇ ರೀತಿಯ ಕಿರಿಕಿರಿಯಾಗದಂತೆ ಎಚ್ಚರವಹಿಸುತ್ತಿದ್ದ. ಅವನು ಹೊರಗಿದ್ದಾನೆ ಎಂದರೆ, ಮನೆಯ ರಕ್ಷಣೆಗೆ ಒಬ್ಬ ಸಮರ್ಥ ಕಾವಲುಗಾರ ಇದ್ದಂತಾಗುತ್ತಿತ್ತು. ಈ ಕಾರಣದಿಂದ ಊರಿನ ಯಾರೂ ಸುಬ್ಬನನ್ನು ಯಾಕಪ್ಪಾ ಇಲ್ಲಿ ಉಳ್ಕೊಂಡಿದೀಯ ಎಂದು ಕೇಳುತ್ತಿರಲಿಲ್ಲ.
ಹುಟ್ಟು ಸೋಮಾರಿಯಂತಿದ್ದ, ಭಿಕ್ಷೆಯನ್ನೇ ಬದುಕಾಗಿಸಿಕೊಂಡಿದ್ದ ಸುಬ್ಬನಿಗೆ ಒಂದು ವಿಶೇಷ ಗುಣವಿತ್ತು. ಜನ ಏನಾದರೂ ಸಮಸ್ಯೆ ಹೇಳಿದರೆ, ಅವನು ಅದಕ್ಕೆ ಪರಿಹಾರ ಹೇಳುತ್ತಿದ್ದ. ಎಷ್ಟೇ ಕಷ್ಟದ ಸಮಸ್ಯೆ ಅಂದುಕೊಂಡರೂ ಅದನ್ನು ಸುಲಭವಾಗಿ ಬಿಡಿಸುತ್ತಿದ್ದ. ಹೀಗೆ ಪರಿಹಾರ ಹೇಳುತ್ತಿದ್ದನಲ್ಲ? ಅದಕ್ಕೆ ನಯಾಪೈಸೆಯ ಗೌರವಧನವನ್ನೂ ಪಡೆಯುತ್ತಿರಲಿಲ್ಲ. ಬದಲಾಗಿ, ಇದು ನನ್ನ ಆತ್ಮ ಸಂತೋಷದ ಕೆಲಸ ಎಂದು ಬಿಡುತ್ತಿದ್ದ. ರಾಂಪುರದ ಕಡುಬಡವನಿಂದ ಹಿಡಿದು ಪಟೇಲರವರೆಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಬ್ಬನ ಬಳಿಗೆ ಸಮಸ್ಯೆಹೊತ್ತುಕೊಂಡು ಬರುತ್ತಿದ್ದರು. ಆತ ಎಲ್ಲವನ್ನೂ ಕೇಳಿಸಿಕೊಂಡು ಐದಾರು ನಿಮಿಷದ ನಂತರ ಪರಿಹಾರ ಹೇಳುವುದನ್ನು ವಿಸ್ಮಯದಿಂದ ಕೇಳುತ್ತಿದ್ದರು. ನಂತರ, ಇಷ್ಟೊಂದು ಬುದ್ಧಿವಂತನಾಗಿದ್ದರೂ ಈತ ಪಟ್ಟಣಕ್ಕೆ ಹೋಗಿ ಕೈ ತುಂಬಾ ಸಂಪಾದಿಸದೆ, ಕುಗ್ರಾಮದಲ್ಲಿ ಭಿಕ್ಷೆ ಬೇಡುವುದಾದರೂ ಏಕೆ ಎಂದು ತಮಗೆ ತಾವೇ ಕೇಳಿಕೊಳ್ಳುತ್ತಿದ್ದರು. ಉತ್ತರ ಹೊಳೆಯದೇ ಹೋದಾಗ ಸುಮ್ಮನಾಗುತ್ತಿದ್ದರು.
ಹೀಗಿರುವಾಗಲೇ ಒಂದು ದಿನ ಮಹಾರಾಜರ ಸವಾರಿ ರಾಂಪುರ ಗ್ರಾಮಕ್ಕೆ ಬಂತು. ಅಂದಮೇಲೆ ಕೇಳಬೇಕೆ? ಈಶ್ವರ ದೇವಾಲಯವನ್ನು ಬಗೆಬಗೆಯಲ್ಲಿ ಅಲಂಕರಿಸಲಾಯಿತು. ಪಟೇಲರೂ ಸೇರಿದಂತೆ ಊರ ಹಿರಿಯರೆಲ್ಲ ಬೆಳಗಿನಿಂದಲೇ ಮಹಾರಾಜರ ದಾರಿ ಕಾಯುತ್ತಿದ್ದರು. ಕಡೆಗೊಮ್ಮೆ ಮಹಾರಾಜರ ಸವಾರಿ ಬಂದೇ ಬಂತು. ಮುಖಂಡರಿಂದ ಮಹಾರಾಜರು ಆತಿಥ್ಯ ಸ್ವೀಕರಿಸಿದರು. ತುಸು ಹೊತ್ತು ವಿಶ್ರಾಂತಿ ಪಡೆದರು. ನಂತರ ಪ್ರಜೆಗಳ ಸುಖ-ದುಃಖ ಕೇಳಲು ಹೊರಟ. ಆ ಸಂದರ್ಭದಲ್ಲಿಯೇ ಅರಳೀ ಕಟ್ಟೆಯಲ್ಲಿ ಒಂದು ಮಾಸಲು ಅಂಗಿ-ಅಲ್ಯುಮಿನಿಯಂ ತಟ್ಟೆ ಹಿಡಿದು ಕೂತಿದ್ದ ಸುಬ್ಬ ಮಹಾರಾಜರ ಕಣ್ಣಿಗೆ ಬಿದ್ದ.
ತಮ್ಮದು ರಾಮರಾಜ್ಯ, ಸುಭಿಕ್ಷಾ ಸಾಮ್ರಾಜ್ಯ ಎಂಬುದು ಮಹಾರಾಜರ ನಂಬಿಕೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಿಕ್ಷುಕನೊಬ್ಬ ಕಣ್ಣಿಗೆ ಬಿದ್ದುದರಿಂದ ಅವರಿಗೆ ತುಂಬ ಬೇಜಾರಾಯಿತು. ಛೆ, ನಮ್ಮ ರಾಜ್ಯದಲ್ಲಿ ಈಗಲೂ ಭಿಕ್ಷುಕರು ಇದ್ದಾರಲ್ಲ ಎಂದು ನೊಂದುಕೊಂಡರು. ನಂತರ ಪಟೇಲರನ್ನು ಕರೆದು-ಯಾರೀತ? ನೋಡೋಕೆ ಗಟ್ಟಿಮುಟ್ಟಾಗೇ ಇದ್ದಾನೆ. ಇವನಿಗೆ ದುಡಿದು ತಿನ್ನಲು ಏನು ದಾಡಿ ಎಂದು ಪ್ರಶ್ನೆ ಹಾಕಿದರು. `ಮಹಾಪ್ರಭುಗಳೆ, ಈತ ಭಿಕ್ಷುಕ ನಿಜ. ಆದರೆ ಇವನು ಅಪಾರ ಬುದ್ಧಿವಂತನೂ ಹೌದು. ಎಂಥ ಸಮಸ್ಯೆಗೂ ಪರಿಹಾರ ಹೇಳಬಲ್ಲ ಶಕ್ತಿ ಈ ಭಿಕ್ಷುಕನಿಗಿದೆ. ಅಂದಹಾಗೆ, ಇವನ ಹೆಸರು ಸುಬ್ಬ. ಇವನನ್ನು ನಮ್ಮ ಊರಿನ ಆಸ್ತಿ ಎಂದು ಕರೆದರೂ ತಪ್ಪಿಲ್ಲ ಸ್ವಾಮಿ…!’
ಪಟೇಲರಿಂದ ಈ ಬಗೆಯ ಉತ್ತರ ಕೇಳಿ ಮಹಾರಾಜರಿಗೆ ಆಶ್ಚರ್ಯವಾಯಿತು. ಹಿಂದೆಯೇ, ಈ ಭಿಕ್ಷುಕನ ಇನ್ನೊಂದು ಮುಖವನ್ನು ನೋಡಿಬಿಡುವ ಆಸೆಯೂ ಬಲಿಯಿತು. ಅದೇ ಸಂದರ್ಭಕ್ಕೆ, ತುಂಬ ದಿನಗಳಿಂದಲೂ ಪರಿಹಾರವಾಗದೆ ತಲೆ ತಿನ್ನುತ್ತಿದ್ದ ಆಡಳಿತಕ್ಕೆ ಸಂಬಂಸಿದ ಸಮಸ್ಯೆಯೊಂದು ನೆನಪಾಯಿತು. ತಕ್ಷಣವೇ ಭಿಕ್ಷುಕನ ಬಳಿ ಹೋದ ಮಹಾರಾಜರು-`ನೋಡಯ್ಯ, ನನ್ನದೊಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರ ಸೂಚಿಸಿದರೆ ನಿನಗೆ ಬಹುಮಾನವಾಗಿ ಒಂದು ಚಿನ್ನದ ನಾಣ್ಯ ಕೊಡ್ತೇನೆ’ ಎಂದರು.
ಈ ಸುಬ್ಬ ತಕ್ಷಣವೇ ಹೀಗೆಂದ: `ಮಹಾಪ್ರಭುಗಳೆ, ನನಗೆ ಚಿನ್ನದ ನಾಣ್ಯ ಬೇಡ. ಅದನ್ನು ನೀವೇ ಇಟ್ಟುಕೊಳ್ಳಿ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನೆಂದು ಹೇಳಿ…’ ಒಬ್ಬ ಯಃಕಶ್ಚಿತ್ ಭಿಕ್ಷುಕನಿಂದ ಈ ಬಗೆಯ ಉತ್ತರವನ್ನು ಮಹಾರಾಜರು ನಿರೀಕ್ಷಿಸಿರಲಿಲ್ಲ. ಅವರಿಗೆ ತುಂಬ ಬೇಸರವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. `ಇರಲಿ’ ಎಂದುಕೊಂಡು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಭಿಕ್ಷುಕ ಸುಬ್ಬ ಐದಾರು ನಿಮಿಷ ತಲೆ ತಗ್ಗಿಸಿದ್ದ. ಆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಂಡ. ಕೈ ಬೆರಳುಗಳನ್ನು ಬಿಡಿಸಿ, ಮಡಿಚಿ ಅದೇನೇನೋ ಲೆಕ್ಕಾಚಾರ ಮಾಡಿದ. ನಂತರ ಒಂದು ಪರಿಹಾರ ಹೇಳಿಯೇ ಬಿಟ್ಟ. ಅದು ಮಹಾರಾಜರಿಗೆ ಸರಿ ಕಾಣಿಸಿತು. ಅವರು ಸುಬ್ಬನನ್ನು ಪ್ರೀತಿ, ಅಭಿಮಾನ, ಮೆಚ್ಚುಗೆಯಿಂದ ನೋಡುತ್ತ, ಒಂದು ಚಿನ್ನದ ನಾಣ್ಯವನ್ನು ಅವನ ಮುಂದಿಟ್ಟು: ಇದನ್ನು ನೀನು ಸ್ವೀಕರಿಸಲೇಬೇಕು ಎಂದು ಹೇಳಿ ಅರಮನೆಗೆ ಬಂದರು. ಮರುದಿನ ಮಹಾರಾಜರಿಗೆ, ಆಡಳಿತದ ವಿಷಯಕ್ಕೆ ಸಂಬಂಸಿದಂತೆ ಇನ್ನೊಂದು ಸಮಸ್ಯೆ ತಲೆದೋರಿತು. ಮಂತ್ರಿಮಂಡಲದ ಪ್ರಮುಖರ ಮುಂದೆ ಈ ಸಮಸ್ಯೆ ಇಟ್ಟರು. ಅವರು ಸೂಚಿಸಿದ ಪರಿಹಾರಗಳು ಮಹಾರಾಜರಿಗೆ ಇಷ್ಟವಾಗಲಿಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಮತ್ತೆ ರಾಂಪುರದ ಭಿಕ್ಷುಕ ಸುಬ್ಬನ ನೆನಪಾಯಿತು. ಅವತ್ತೇ ಸಂಜೆ ಸಮಸ್ಯೆಯೊಂದಿಗೆ ರಾಜ, ಸುಬ್ಬನ ಮುಂದೆ ನಿಂತಿದ್ದ.
ಸುಬ್ಬ ಈ ಬಾರಿಯೂ ಮಹಾರಾಜನಿಗೆ ತುಂಬ ಇಷ್ಟವಾಗುವಂಥ ರೀತಿಯಲ್ಲೇ ಸಮಸ್ಯೆಗೆ ಪರಿಹಾರ ಸೂಚಿಸಿದ. ಅದನ್ನು ಕೇಳಿದ ನಂತರವಂತೂ ಸುಬ್ಬನ ಪ್ರಚಂಡ ಬುದ್ಧಿಶಕ್ತಿಯ ಕುರಿತು ಮಹಾರಾಜರಿಗೆ ಅನುಮಾನವೇ ಉಳಿಯಲಿಲ್ಲ. ಅವರು ಎರಡೇ ಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬಂದು ಸುಬ್ಬನನ್ನು ಉದ್ದೇಶಿಸಿ ಹೀಗೆಂದರು: `ಸುಬ್ಬು ಅವರೇ, ನೀವು ಒಂದೊಂದು ಸಮಸ್ಯೆಗೂ ಪರಿಹಾರ ಸೂಚಿಸುವ ರೀತಿ ಸೊಗಸಾಗಿದೆ. ಒಬ್ಬ ಮಹಾಮಂತ್ರಿಗೆ ಇರಬೇಕಾದ ಬುದ್ಧಿ ಶಕ್ತಿ ನಿಮಗಿದೆ. ಅದು ಸದುಪಯೋಗ ಆಗಬೇಕು. ಹಾಗಾಗಿ ನೀವು ದಯವಿಟ್ಟು ಅರಮನೆಗೆ ಬನ್ನಿ. ನನ್ನ ವಿಶೇಷ ಸಲಹೆಗಾರರೆಂದು ನೇಮಿಸಿಕೊಳ್ಳುತ್ತೇನೆ. ನಿಮಗೆ ಅರಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನಿಮಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ನಮಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿ…’
ಮಹಾರಾಜರು ಹೇಳಿದ ಮೇಲೆ ಕೇಳಬೇಕೆ? ಅವತ್ತೇ ಅಲ್ಲಲ್ಲಿ ಹರಿದುಹೋಗಿದ್ದ, ಗಬ್ಬುನಾತ ಹೊಡೆಯುತ್ತಿದ್ದ ಶರ್ಟು, ಅಲ್ಯುಮಿನಿಯಂ ತಟ್ಟೆ ಹಾಗೂ ಹಳೆಯ ಊರುಗೋಲಿನೊಂದಿಗೇ ಸುಬ್ಬ ಅರಮನೆಗೆ ಬಂದ. ಮರುದಿನದಿಂದಲೇ ಅವನ ಗೆಟಪ್ಪು ಬದಲಾಗಿಹೋಯಿತು. ಮೊದಲಿಗೆ, ಸುಬ್ಬನ ಹೆಸರು ಸುಬ್ರಾಯ ಶರ್ಮ ಎಂದಾಯಿತು. ಕೆಲವರು ಅವನನ್ನು ಜೋಯ್ಸರೇ ಎನ್ನಲೂ ಶುರುಮಾಡಿದರು. ಮಹಾರಾಜರಂತೂ ತುಂಬ ಪ್ರೀತಿಯಿಂದ `ಮಂತ್ರಿಗಳೇ…’ ಎಂದೇ ಕರೆಯುತ್ತಿದ್ದರು. ಮಹಾರಾಜರ ನಿವಾಸದ ಪಕ್ಕದಲ್ಲೇ ಇದ್ದ ಇನ್ನೊಂದು ಸೌಧದಲ್ಲಿ ಸುಬ್ಬುವಿನ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಒಂದು ಕಾಲದಲ್ಲಿ ವಾರವಿಡೀ ಸ್ನಾನ ಮಾಡದಿದ್ದ ಸುಬ್ಬ, ಈಗ ಪ್ರತಿದಿನವೂ ಸುಗಂಧದ್ರವ್ಯ ಹಾಕಿದ್ದ ನೀರಲ್ಲೆ ಕೈ ತೊಳೆಯುವುದನ್ನು, ದಿನದಿನವೂ ಮಡಿ ವಸ್ತ್ರ ಧರಿಸುವುದನ್ನು; ಅರಮನೆಯ ಶಿಸ್ತು, ಶಿಷ್ಟಾಚಾರದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಂಡ. ಈ ಹಿಂದೆಲ್ಲಾ ರಾಂಪುರದ ಅರಳೀಕಟ್ಟೆಯಲ್ಲಿ ಕೂತು ಅವರಿವರ ಸಂಕಟಗಳಿಗೆ ಪರಿಹಾರ ಹೇಳುತ್ತಿದ್ದವನು, ಈಗ ರಾಜನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳುವಂಥವನಾದ. ಮಹಾರಾಜರು ಈ ಸುಬ್ರಾಯನನ್ನು ಅದೆಷ್ಟು ಹಚ್ಚಿಕೊಂಡರೆಂದರೆ, ಅರಮನೆಯ ಹಾಗೂ ರಾಜ್ಯದ ಎಲ್ಲ ರಹಸ್ಯಗಳನ್ನೂ ಅವನೊಂದಿಗೆ ಹೇಳಿಕೊಂಡರು.
ಮಹಾರಾಜರು ಮೊನ್ನೆ ಮೊನ್ನೆಯಷ್ಟೇ ಬಂದ ಸುಬ್ರಾಯಶರ್ಮನಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿದ್ದು ಅರಮನೆಯಲ್ಲಿದ್ದ ಉಳಿದ ಮಂತ್ರಿಗಳನ್ನು ಕೆರಳಿಸಿತು. ಹಾಗೆಯೇ ಸುಬ್ರಾಯನ ಅತಿಯಾದ ಬುದ್ಧಿವಂತಿಕೆ ಕಂಡು ಅವರಿಗೆ ಅನುಮಾನವೂ ಬಂತು. ಸಮಯ ನೋಡಿ ಮಹಾರಾಜರಿಂದ ಅವನನ್ನು ದೂರ ಮಾಡಲೇಬೇಕು ಎಂದು ಅವರೆಲ್ಲ ಲೆಕ್ಕ ಹಾಕಿಯೇಬಿಟ್ಟರು. ಸುಬ್ರಾಯನ ಒಂದೇ ಒಂದು ತಪ್ಪಿಗಾಗಿ ಹುಡುಕುತ್ತಿದ್ದವರಿಗೆ, ಕಡೆಗೂ ಅಂಥದೊಂದು ಸಂದರ್ಭ ಒದಗಿಬಂತು. ಈ ವೇಳೆಗೆ ಸುಬ್ರಾಯ ಅರಮನೆಗೆ ಬಂದು ವರ್ಷವೇ ಕಳೆದಿತ್ತು. ಅದೊಂದು ದಿನ ಮಂತ್ರಿಮಂಡಲದ ಎಲ್ಲರೂ ಸೇರಿ ಮಹಾರಾಜರ ಬಳಿ ಹೋದರು. `ಪ್ರಭೂ, ನಾವೆಲ್ಲ ನಿಮ್ಮೊಂದಿಗೆ ಒಂದು ಮಹತ್ವದ ವಿಷಯ ಕುರಿತು ಚರ್ಚಿಸಬೇಕಾಗಿದೆ. ಒಂದು ರಹಸ್ಯ ಸಭೆಯ ಏರ್ಪಾಡು ಮಾಡಿ. ಆದರೆ, ಒಂದು ವಿನಂತಿ. ಈ ಸಭೆಗೆ ಸುಬ್ರಾಯ ಶರ್ಮರನ್ನು ಕರೆಯಬಾರದು’ ಎಂದರು.
ಈ ಮಂತ್ರಿಗಳೆಲ್ಲ ಅರಮನೆಯಲ್ಲಿ ದಶಕಗಳಿಂದ ಇದ್ದವರು. ಹಾಗಾಗಿ ಅವರನ್ನು ಸಂದೇಹದಿಂದ ನೋಡಲು ರಾಜನಿಗೆ ಮನಸ್ಸಾಗಲಿಲ್ಲ. `ವಿಷಯ ಮಹತ್ವದ್ದೇ ಇರಬೇಕು. ಹೇಗಿದ್ದರೂ ದಿನವೂ ಸಂಜೆ ಸುಬ್ರಾಯ ಶರ್ಮ ಅಂತಃಪುರದಲ್ಲಿ ನಡೆವ ಚರ್ಚೆಗೆ ಬರುತ್ತಾನೆ. ಆಗ ಇದನ್ನೆಲ್ಲ ಹೇಳಿದರಾಯಿತು ಎಂದೇ ರಾಜ ಯೋಚಿಸಿದ. ನಂತರ, ಗುಪ್ತ ಸಭೆಗೆ ದಿನವನ್ನೂ ನಿಗದಿಪಡಿಸಿದ.
`ಮಹಾರಾಜರೆ, ನಮ್ಮ ಮಾತನ್ನು ದಯಮಾಡಿ ನಂಬಿ. ನಾವು ಕಳೆದು ಐದು ತಿಂಗಳಿನಿಂದಲೂ ದಿನದಿನವೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರವೇ ಈ ಮಾತು ಹೇಳುತ್ತಿದ್ದೇನೆ. ಏನೆಂದರೆ- ಸುಬ್ರಾಯ ಶರ್ಮ ಬೇರೆ ಯಾರೂ ಅಲ್ಲ. ಆತ ಶತ್ರುದೇಶದ ಗೂಢಚಾರಿ. ಅವನಿಗೆ ಸಕಲೆಂಟು ವಿದ್ಯೆಗಳನ್ನು ಕಲಿಸಿದ ನಂತರವೇ ನಮ್ಮ ದೇಶಕ್ಕೆ ಕಳಿಸಲಾಗಿದೆ. ಇಲ್ಲವಾದರೆ, ಒಬ್ಬ ಯಃಕಶ್ಚಿತ್ ಭಿಕ್ಷುಕನಿಗೆ ಇಂಥ ಅಪರೂಪದ ಬುದ್ಧಿವಂತಿಕೆ ಬರಲು ಹೇಗೆ ಸಾಧ್ಯ? ನಾವು ಕಣ್ಣಾರೆ ಕಂಡಿರುವ ಮಾತು ಕೇಳಿ; ಸುಬ್ರಾಯ ಪ್ರತಿದಿನವೂ ಸಂಜೆ ತನ್ನ ಮಹಲಿನ ಸಮೀಪವಿರುವ ಪುಟ್ಟದೊಂದು ಕೋಣೆಗೆ ತಪ್ಪದೇ ಹೋಗುತ್ತಾನೆ. ಒಬ್ಬನೇ ಹೋಗುತ್ತಾನೆ. ಹಾಗೆ ಹೋಗುವ ಮುನ್ನ ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಹಾಗೆ ಕೋಣೆಯ ಒಳಗೆ ಹೋದವನು, ಅರ್ಧ ಗಂಟೆಯ ನಂತರ ಹೊರಗೆ ಬರುತ್ತಾನೆ. ಹಾಗೆ ಹೊರಬಂದವನನ್ನು ಕೋಣೆಯಲ್ಲಿ ಇಷ್ಟು ಹೊತ್ತು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾನೆ. ಬಹುಶಃ ಅವನು ತನ್ನವರಿಗೆ ಆ ಕೋಣೆಯಲ್ಲಿ ನಿಂತು ನಮ್ಮ ರಾಜ್ಯದ ರಹಸ್ಯವನ್ನೆಲ್ಲ ಹೇಳುತ್ತಾನೆ ಅನಿಸುತ್ತೆ. ಆ ಕೋಣೆಯಿಂದ ಹೊರಹೋಗಲು ಸುರಂಗ ಮಾರ್ಗವಿದ್ದರೂ ಇದ್ದೀತು. ಯಾವುದನ್ನೂ ನೀವೇ ಪರಿಶೀಲಿಸಿ ಬೇಕಾದರೆ…’ ಎಂದರು.
ಒಂದು ಅನುಮಾನದ ಅಡ್ಡಗೆರೆ ಎಂಥ ಮಧುರ ಬಾಂಧವ್ಯವನ್ನೂ ಅಳಿಸಿಹಾಕಬಲ್ಲದು. ಮಹಾರಾಜನ ವಿಷಯದಲ್ಲೂ ಹೀಗೇ ಆಯಿತು. ಮಂತ್ರಿಮಂಡಲದ ಸದಸ್ಯರೆಲ್ಲರ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ರಾಜನಿಗೆ ಸುಬ್ರಾಯ ಶರ್ಮ ಒಬ್ಬ ಗೂಢಚಾರಿ ಎಂಬುದು ಗ್ಯಾರಂಟಿಯಾಗಿ ಹೋಯಿತು. ಅದುವರೆಗೆ ಅವನ ಬುದ್ಧಿವಂತಿಕೆಯ ವಿಷಯದಲ್ಲಿ ಇದ್ದ ಅಭಿಮಾನವೆಲ್ಲ ಕ್ಷಣ ಮಾತ್ರದಲ್ಲಿಯೇ ಅನುಮಾನವಾಗಿ ಬದಲಾಯಿತು. ಇರಲಿ. ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡೋಣ. ಆನಂತರವೇ ಸುಬ್ರಾಯನನ್ನು ಶಿಕ್ಷಿಸೋಣ ಎಂದು ನಿರ್ಧರಿಸಿದ ರಾಜ. ಅದೊಂದು ಸಂಜೆ ಸುಬ್ರಾಯ ಆ ಕೋಣೆಗೆ ಹೋದ ಹತ್ತು ನಿಮಿಷದ ನಂತರ ತಾನೂ ಹೋಗಲು ನಿರ್ಧರಿಸಿದ. ಕೋಣೆಯ ಸುತ್ತಲೂ ಮಾರುವೇಷದಲ್ಲಿ ಸೈನಿಕರನ್ನು ಬಿಟ್ಟು ಒಳಗಿನಿಂದ ಯಾರೇ ಅಪರಿಚಿತರು ಬಂದರೂ ಹಿಂದೆ ಮುಂದೆ ನೋಡದೆ ಕತ್ತರಿಸಿ ಹಾಕಿ ಎಂದು ಸೈನಿಕರಿಗೆ ತನ್ನ ಆದೇಶ ನೀಡಿದ.
ಕಡೆಗೂ, ಎಲ್ಲರೂ ಅಂದುಕೊಂಡಿದ್ದ ಸಮಯ ಬಂತು. ಸುಬ್ರಾಯ ಶರ್ಮ ಅವಸರದಲ್ಲಿ ಎಂಬಂತೆ ತನ್ನ ಮನೆಗೆ ಸಮೀಪದ ಕೋಣೆ ಹೊಕ್ಕ. ಸ್ವಲ್ಪ ದೂರದಲ್ಲಿ ಮಾರು ವೇಷದಲ್ಲಿದ್ದ ರಾಜ ಇದನ್ನು ಗಮನಿಸಿದ. ಸುಬ್ರಾಯ, ಕಳ್ಳನಂತೆ ಸುತ್ತಮುತ್ತ ನೋಡಿ ಕೊಣೆ ಪ್ರವೇಶಿಸಿದನಲ್ಲ? ಅದನ್ನು ಕಂಡು ರಾಜನ ರಕ್ತ ಕುದಿಯಿತು. ಅವನ ದೇಶದ್ರೋಹ ಏನಿರಬಹುದು ಎಂದು ನೆನಪು ಮಾಡಿಕೊಂಡು ನಿಂತಲ್ಲೇ ಕಟಕಟನೆ ಹಲ್ಲು ಕಡಿದ. ನಂತರ, ತನ್ನನ್ನು ತಾನೇ ನಿಗ್ರಹಿಸಿಕೊಂಡು, ಸಮಾಧಾನ ಮಾಡಿಕೊಂಡು ಸದ್ದಾಗದಂತೆ ಆ ಕೋಣೆಯ ಬಳಿ ಬಂದು, ದಬದಬನೆ ಬಾಗಿಲು ಬಡಿದ.
`ಯಾರದು?’ ಎಂದ ಸುಬ್ರಾಯನ ತಣ್ಣಗಿನ ದನಿಗೆ `ನಾನು. ಬಾಗಿಲು ತೆಗೆ’ ಎಂದ ರಾಜ. ಬಾಗಿಲು ತೆರೆಯಿತು. ರಾಜ ಕತ್ತಿ ಹಿಡಿದುಕೊಂಡೇ ಒಳಗೆ ಬಂದ. ಸುಬ್ರಾಯನನ್ನು ಬಿಟ್ಟು ಯಾವ ಕುನ್ನಿಯೇ ಕಂಡರೂ ಅದರ ತಲೆ ಹಾರಿಸಬೇಕು ಎಂಬುದು ರಾಜನ ಎಣಿಕೆಯಾಗಿತ್ತು. ಆದರೆ, ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಬದಲಿಗೆ ಸುಬ್ರಾಯನ ಹಳೆಯ ಸಂಗಾತಿಗಳಾದ ಹರಕು ಬಟ್ಟೆ, ಅಲ್ಯುಮಿನಿಯಂ ತಟ್ಟೆ ಹಾಗೂ ಊರುಗೋಲಿತ್ತು. ಅವನನ್ನೇ ಬೆರಗಿನಿಂದ ನೋಡಿದ ರಾಜ-`ನೀನು ದಿನಾಲೂ ಇಲ್ಲಿಗೆ ಬರ್‍ತೀಯಂತೆ. ಸ್ವಲ್ಪ ಹೊತ್ತು ಇಲ್ಲೇ ಇರ್‍ತೀಯಂತೆ. ಇಲ್ಲಿ ನೀನು ಏನು ಮಾಡ್ತಿರ್‍ತೀಯ? ಹೇಳು…’ ಅಂದ.
`ಮಹಾಪ್ರಭುಗಳೆ, ಒಂದು ಕಾಲದಲ್ಲಿ ಬೀದೀಲಿ ಕೂತು ಭಿಕ್ಷೆ ಬೇಡುತ್ತಿದ್ದವ ನಾನು. ಅಂಥವನಿಗೆ ಈಗ ರಾಜ ಮರ್ಯಾದೆ ಸಿಗುತ್ತಿದೆ. ಅಧಿಕಾರದ ಅಮಲಿನಲ್ಲಿ ತೇಲಬೇಡ. ಈ ಹಿಂದೆ ನೀನು ಏನಾಗಿದ್ದೆ ಎಂಬುದನ್ನು ಮರೆಯಬೇಡ ಎಂದು ನನಗೆ ನಾನೇ ಹೇಳಿಕೊಳ್ಳುವ ಸಲುವಾಗಿ ದಿನವೂ ಕೋಣೆಗೆ ಬರುತ್ತಿದ್ದೆ. ಈ ಹಳೆಯ ಸಂಗಾತಿಗಳ ಮುಂದೆ ನಿಂತು ಆ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನೀವು ಯಾರನ್ನೋ ಬೇಟೆಯಾಡಲು ಬಂದಂತಿದೆಯಲ್ಲ, ಯಾರ ನಿರೀಕ್ಷೆಯಲ್ಲಿ ಬಂದಿರಿ ಮಹಾಪ್ರಭು ಎಂದ ಸುಬ್ಬ ಉರುಫ್ ಸುಬ್ರಾಯ ಶರ್ಮ.
ಈ ಮಾತು ಕೇಳಿ ರಾಜನಿಗೆ ತನ್ನ ಕುರಿತು ನಾಚಿಕೆಯಾಯಿತು. ಸುಬ್ರಾಯನ ವಿಷಯವಾಗಿ ಏನೇನೋ ಕಲ್ಪಿಸಿಕೊಂಡಿದ್ದಕ್ಕೆ ಅಸಹ್ಯ ಅನ್ನಿಸಿತು. ಆತ ಏನೊಂದೂ ಮಾತಾಡದೆ, ಸುಬ್ರಾಯನನ್ನು ಬಾಚಿ ತಬ್ಬಿಕೊಂಡ. ಆ ಅಪ್ಪುಗೆ, ಅದರ ಬಿಸುಪು ಜತೆಗೇ ಇದ್ದ ಮೌನ-ಅದೆಷ್ಟೊ ಪ್ರಶ್ನೆಗಳಿಗೆ ಉತ್ತರ ಹೇಳಿತು…

ಒಂದೇ ಒಂದು ಕಣ್ಣ ಬಿಂದು…

ಡಿಸೆಂಬರ್ 2, 2010

ಒಂದೇ ಒಂದು ಕಣ್ಣ ಬಿಂದು…
ಚಿತ್ರ: ಬೆಳ್ಳಿ ಕಾಲುಂಗುರ. ಸಾಹಿತ್ಯ-ಸಂಗೀತ: ಹಂಸಲೇಖ.
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೇ ಸಂತಸ ಇರಲು ||ಪ||

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ ||ಅ.ಪ||

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ
ಸುಟ್ಟು ಹಾಕೊ ಬೆಂಕಿಯೇ ತನ್ನ ತಾನೇ ಸುಟ್ಟರೆ
ದಾರಿ ತೊರೋ ನಾಯಕ, ಒಂಟಿ ಎಂದು ಕೊಂಡರೆ
ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲ್ಲಿ
ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲ್ಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ ||೧||

ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಸಿದೆ ನನ್ನಾಣೆ
ಸಂತಸದ ಕಣ್ಣ ರಪ್ಪೆ ಸಂಸಿದೆ ನನ್ನಾಣೆ

ದೇವರ ಗುಡಿಗು ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ ||೨|

‘ಪತ್ರಿಕೆ’ಯ ಓದುಗರೂ, ಈ ಅಂಕಣದ ಅಭಿಮಾನಿಯೂ ಆದ ರಾಘವೇಂದ್ರ ಉಡುಪ ಅವರು ಚಿತ್ರರಂಗಕ್ಕೆ ಸಂಬಂಸಿದಂತೆ ಮೂರು ಕುತೂಹಲಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ:
೧. ಕನ್ನಡದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ವಿಜಯ ಭಾಸ್ಕರ್ ಒಬ್ಬರು. ಪುಟ್ಟಣ್ಣ ಕಣಗಾಲ್ ಅವರ ಅತಿ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು ಅವರ ಹೆಗ್ಗಳಿಕೆ. ಅವರಿಗೆ ಸುರ್‌ಸಿಂಗಾರ್ ಎಂಬ ಬಿರುದೂ ಇತ್ತು. ಇಷ್ಟಾದರೂ, ರಾಜ್ ಕುಮಾರ್ ಸಂಸ್ಥೆಯ ಯಾವುದೇ ಚಿತ್ರಕ್ಕೂ ವಿಜಯಭಾಸ್ಕರ್ ಅವರು ಸಂಗೀತ ನೀಡಲಿಲ್ಲವಲ್ಲ ಏಕೆ? ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ಅವರು ಒಂದೇ ಒಂದು ಚಿತ್ರ ಗೀತೆಯನ್ನೂ ಹಾಡಲಿಲ್ಲವಲ್ಲ ಏಕೆ?
೨. ಆಯಾ ಕ್ಷೇತ್ರದ ಪ್ರತಿಭಾವಂತರನ್ನು ಹುಡುಕಿ, ಅವರಿಂದ ಅತ್ಯುತ್ತಮ ಕೆಲಸ ತೆಗೆಯುತ್ತಿದ್ದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಆದರೆ ಕನ್ನಡ ಚಿತ್ರರಂಗ ಕಂಡ ಮಹಾನ್ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಹಾಗೂ ರಾಜನ್-ನಾಗೇಂದ್ರ ಅವರಿಗೆ ಒಂದೇ ಒಂದು ಸಿನಿಮಾದಲ್ಲೂ ಪುಟ್ಟಣ್ಣನವರು ಅವಕಾಶ ಕೊಡಲಿಲ್ಲವಲ್ಲ ಯಾಕೆ? ಈ ಮಹಾನ್ ಪ್ರತಿಭೆಗಳ ಜತೆ ಕೈಜೋಡಿಸಿದ್ದರೆ ಇನ್ನೂ ಅತಿಮಧುರ ಗೀತೆಗಳನ್ನು ಕೊಡಬಹುದಿತ್ತು. ಆದರೆ ಪುಟ್ಟಣ್ಣ ಕಣಗಾಲ್ ಅವರಂಥ ಮಹಾನ್ ನಿರ್ದೇಶಕ ಕೂಡ ಈ ಬಗ್ಗೆ ಯೋಚಿಸಲಿಲ್ಲವಲ್ಲ ಏಕೆ?
೩. ಕನ್ನಡದ ಶ್ರೇಷ್ಠ ಗೀತೆರಚನೆಕಾರರ ಪೈಕಿ ವಿಜಯ ನಾರಸಿಂಹ ಕೂಡ ಒಬ್ಬರು. ಹಾಗಿದ್ದರೂ ಅವರು ರಾಜ್‌ಕುಮಾರ್ ಸಂಸ್ಥೆಯ ಚಿತ್ರಕ್ಕೆಂದು ಬರೆದದ್ದು ಒಂದೇ ಹಾಡು-ಅದು ‘ಪ್ರೇಮದ ಕಾಣಿಕೆ’ ಚಿತ್ರಕ್ಕೆ. (ಓಹಿಲೇಶ್ವರ ಚಿತ್ರಕ್ಕೆ ವಿಜಯ ನಾರಸಿಂಹ ಹಾಡು ಬರೆದಿದ್ದಾರೆ ನಿಜ. ಆದರೆ ಅದು ರಾಜ್ ಕಂಪನಿ ತಯಾರಿಸಿದ ಚಿತ್ರವಲ್ಲ.) ಯಾಕೆ ಹೀಗೆ? ಈ ವಿಷಯಗಳಿಗೆ ಸಂಬಂಸಿದಂತೆ ಏನಾದರೂ ‘ಕಥೆಗಳು’ ಇವೆಯೋ ಹೇಗೆ?
ಚಿತ್ರರಂಗದ ‘ಹಳೆಯ ಪುಟಗಳನ್ನು’ ತಿರುವಿ ಹಾಕಿದರೆ ಇಂಥವೇ ಹತ್ತಾರು ಪ್ರಶ್ನೆಗಳು ಹುಟ್ಟುತ್ತಾ ಹೋಗುತ್ತವೆ. ಒಂದೊಂದು ಸಂದರ್ಭದಲ್ಲಿ ಇಂಥ ಪ್ರಶ್ನೆಗಳಲ್ಲೇ ತಪ್ಪುಗಳಿರಬಹುದು! ಈ ಪ್ರಶ್ನೆಗಳಿಗೆಲ್ಲ ‘ಇದಮಿತ್ಥಂ’ ಎಂದು ಉತ್ತರ ಹೇಳಲು ಸಾಧ್ಯವೇ ಇಲ್ಲ. ಇಂಥ ವಿಷಯಗಳ ಬಗ್ಗೆ ಸಂಬಂಧಪಟ್ಟವರೇ ಉತ್ತರ ಹೇಳಬೇಕು, ಸ್ಪಷ್ಟನೆ ನೀಡಬೇಕು,… ಅಷ್ಟೇ….
***
ರಾಘವೇಂದ್ರ ಉಡುಪ ಅವರ ಪ್ರಶ್ನೆಗಳ ಕುರಿತು ಯೋಚಿಸುತ್ತಿದ್ದಾಗಲೇ ಕೇಳಿಬಂದದ್ದು-‘ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ’ ಎಂಬ ಹಾಡು… ಒಮ್ಮೆ ಎಸ್ಪಿ, ಬಾಲಸುಬ್ರಹ್ಮಣ್ಯಂ, ಇನ್ನೊಮ್ಮೆ ಎಸ್, ಜಾನಕಿ ಹಾಡಿರುವ ಈ ಸೋಲೊ ಹಾಡು ‘ಬೆಳ್ಳಿ ಕಾಲುಂಗುರ’ ಚಿತ್ರದ್ದು. ಪ್ರೀತಿಯ ಮಹತ್ವ ಸಾರುವ, ಪ್ರೀತಿಸಿದ ಜೀವಕ್ಕೆ ಸಮಾಧಾನ ಹೇಳುವ, ಧೈರ್ಯ ತುಂಬುವ, ಮಧುರ ಪ್ರೀತಿಗೆ ಸಾಕ್ಷಿಯಾಗುವ ಈ ಹಾಡು ಬರುವ ಎರಡು ಸಂದರ್ಭಗಳೂ ಆಪ್ತವಾಗಿವೆ. ಆ ಸನ್ನಿವೇಶಗಳ ವಿವರಣೆ ಹೀಗೆ:
ಸಂಶೋಧನೆಯ ನೆಪದಲ್ಲಿ ಹಂಪಿಗೆ ಬರುವ ನಾಯಕ, ಅಲ್ಲಿಯೇ ನಾಯಕಿಯನ್ನು ನೋಡುತ್ತಾನೆ. ಮೊದಲ ಭೇಟಿಯೇ ಪ್ರೀತಿಗೂ ಕಾರಣವಾಗುತ್ತದೆ. ಆದರೆ, ನಾಯಕಿಯ ಮನೆಯಲ್ಲಿ ಇವರ ಪ್ರೀತಿಗೆ, ಪಿಸುಮಾತಿಗೆ, ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ನಾಯಕಿಯ ನೆರಳಿನಂತಿದ್ದ ಆ ಮನೆಯ ಕಾವಲುಗಾರ- ‘ನಮ್ಮ ಹುಡುಗಿಯ ತಂಟೆಗೆ ಬಂದರೆ ಹುಶಾರ್’ ಎಂದು ನಾಯಕನನ್ನು ಎಚ್ಚರಿಸುತ್ತಾನೆ. ಈ ಎಚ್ಚರಿಕೆಯನ್ನೂ ಮೀರಿ ನಾಯಕ ಮುಂದುವರಿದಾಗ ಅವನಿಗೆ ಚನ್ನಾಗಿ ಬಾರಿಸುತ್ತಾನೆ. ಇಷ್ಟಾದರೂ ನಾಯಕ-ನಾಯಕಿಯ ಪ್ರೀತಿ ಮುಂದುವರಿಯುತ್ತದೆ. ಯಾರು ಏನೇ ಅಂದರೂ ಸರಿ, ನಾವು ಜತೆಯಾಗಿರೋಣ ಎಂದು ನಿರ್ಧರಿಸುವ ಈ ಜೋಡಿ ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಹೇಳಿದ ಮಾತು ಮೀರಿ ನಡೆದ ಕಾರಣಕ್ಕೆ ನಾಯಕಿಯ ಕಾಲಿಗೆ ‘ಬರೆ’ ಹಾಕಲಾಗುತ್ತದೆ. ಇಷ್ಟೆಲ್ಲ ರಗಳೆಯ ನಂತರವೂ ಸೀದಾ ಕಾಡಿಗೆ ಹೋಗುತ್ತದೆ. ಕಾಡಲ್ಲಿ ನಡೆದೂ ನಡೆದು ನಾಯಕಿಯ ಕಾಲಲ್ಲಿ ಗಾಯವಾಗುತ್ತದೆ. ಈ ಸಂದರ್ಭದಲ್ಲಿ ನಾಯಕನೇ ತನ್ನ ಗೆಳತಿಯ ಸೇವೆಗೆ ನಿಲ್ಲುತ್ತಾನೆ.
ಪ್ರೀತಿಯ ಹುಡುಗ ತನ್ನ ಸೇವೆಗೆ ನಿಂತದ್ದು ಕಂಡು ನಾಯಕಿಗೆ ಕಣ್ತುಂಬಿ ಬರುತ್ತದೆ. ಅವಳು -‘ಛೆ ಛೆ, ನಾನು ನಿಮ್ಮ ಸೇವೆ ಮಾಡಬೇಕೇ ವಿನಃ ನೀವು ನನ್ನ ಸೇವೆಗೆ ನಿಲ್ಲಬಾರದು’ ಅನ್ನುತ್ತಾಳೆ. ಆಗ ನಾಯಕ- ‘ನಾನು ಬೇರೆ, ನೀನು ಬೇರೆಯಲ್ಲ. ನಾವಿಬ್ರೂ ಒಂದೇ. ನಮ್ಮದು ಜೋಡಿ ಜೀವ…’ ಎನ್ನುತ್ತಾ ಅವಳ ಸೇವೆಗೆ ನಿಲ್ಲುತ್ತಾನೆ. ಈ ಪ್ರೀತಿಯ ಮಾತು ಕೇಳಿ ಭಾವುಕಳಾದ ಆಕೆ ಕಣ್ತುಂಬಿಕೊಂಡರೆ, ತಕ್ಷಣ ನಾಯಕ ಹಾಡುತ್ತಾನೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಮುಂದೆ ಕಥೆ ಬೇರೊಂದು ತಿರುವಿಗೆ ಹೊರಳಿಕೊಳ್ಳುತ್ತದೆ. ಆಸ್ತಿಯ ಆಸೆಯಿಂದ ಸ್ವಂತ ಅಕ್ಕ- ಭಾವನೂ, ನಾಯಕಿಯ ಮೇಲಿನ ಆಸೆಯಿಂದ ಪ್ರೀತಿಯ ಗೆಳೆಯನೂ ನಾಯಕನಿಗೆ ಮೋಸ ಮಾಡುತ್ತಾರೆ. ಗೆಳೆಯ ಮತ್ತು ಅವನ ‘ಕಡೆಯವರಿಂದ’ ನಾಯಕನಿಗೆ ವಿಪರೀತ ಏಟೂ ಬೀಳುತ್ತದೆ. ಆತ ಆಸ್ಪತ್ರೆಯಲ್ಲಿದ್ದಾಗ ನಾಯಕಿ ಬರುತ್ತಾಳೆ. ಈ ಸಂದರ್ಭದಲ್ಲಿ ತನ್ನ ದುರಾದೃಷ್ಟ ಹಾಗೂ ಅಸಹಾಯಕ ಸ್ಥಿತಿಯನ್ನು ನೆನೆದು ನಾಯಕ ಕಣ್ತುಂಬಿಕೊಳ್ಳಬೇಕು… ಅಷ್ಟರಲ್ಲಿಯೇ ಗೆಳೆಯನ ಹಳೆಯ ಮಾತನ್ನು ಅವನಿಗೇ ನೆನಪಿಸುವಂತೆ ಥೇಟ್ ಅಮ್ಮನ ದನಿಯಲ್ಲಿ ನಾಯಕಿ ಹಾಡುತ್ತಾಳೆ: ‘ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’
ಈ ಹಾಡು ಕೇಳುತ್ತಿದ್ದಂತೆ ಯಾಕೋ ಖುಷಿಯಾಗುತ್ತದೆ. ಹಾಡಿನ ಒಂದೊಂದೇ ಸಾಲು ಮುಗಿಯುತ್ತಾ ಹೋದಂತೆಲ್ಲ ಹಳೆಯ ಗೆಳತಿ(ಳೆಯ), ಹಳೆಯ ಪ್ರೇಮ, ಹಳೆಯ ಮಾತು, ಆಗ ನೀಡಿದ ಭಾಷೆ-ಎಲ್ಲವೂ ನೆನಪಾಗುತ್ತದೆ ಮತ್ತು ಎಷ್ಟೇ ತಡೆದುಕೊಂಡರೂ ಕಣ್ಣೀರ ಹನಿಯೊಂದು ಕೆನ್ನೆ ತೋಯಿಸಿ ಬಿಡುತ್ತದೆ.
ಆಣೆ -ಪ್ರಮಾಣದ ಈ ಹಾಡನ್ನು ಹೇಗೆ, ಎಲ್ಲಿ ಬರೆದರು ಹಂಸಲೇಖ? ಈ ಹಾಡು ಬರೆವ ಸಂದರ್ಭದಲ್ಲಿ ಅವರ ಕಣ್ಮುಂದೆ ಇದ್ದ ಚಿತ್ರ ಯಾವುದು? ಎಲ್ಲ ಪ್ರೇಮಿಗಳೂ ತಾವು ಪ್ರೀತಿಸುವ ವ್ಯಕ್ತಿಗೆ ಸಮಾಧಾನ ಹೇಳುವ ಧಾಟಿಯಲ್ಲಿದೆ ಈ ಹಾಡು. ಅಂದಹಾಗೆ, ಈ ಹಾಡಿನ ಹಿಂದಿರುವ ಕಥೆ ಯಾರದು? ಯಾವುದನ್ನೂ ಸುಲಭವಾಗಿ ಒಪ್ಪದ ನಿರ್ದೇಶಕ ಕೆ.ವಿ. ರಾಜು ಈ ಹಾಡನ್ನು ಹೇಗೆ ಬರೆಸಿದರು?
ಇಂಥವೇ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟಾಗ ಹಂಸಲೇಖಾ ಉತ್ತರಿಸಿದ್ದು ಹೀಗೆ: ‘ಬೆಳ್ಳಿ ಕಾಲುಂಗುರ ಚಿತ್ರದ ನಿರ್ದೇಶಕ ಕೆ.ವಿ. ರಾಜು. ಆತ ಚಿತ್ರರಂಗದ ಜೀನಿಯಸ್. ಸಿನಿಮಾದ ಎಲ್ಲ ವಿಭಾಗವೂ ಅವರಿಗೆ ಅಂಗೈ ಗೆರೆಯಷ್ಟೇ ಚನ್ನಾಗಿ ಪರಿಚಯವಿತ್ತು. ಸಿನಿಮಾ ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದ ರಾಜುಗೆ ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಗೌರವವಿತ್ತು. ಆತನ ಸಿನಿಮಾದಲ್ಲಿ ನಟಿಸಿದ್ದ ಅಮಿತಾಭ್ ಬಚ್ಚನ್, ರಾಜು ಪ್ರತಿಭೆಯನ್ನು ಮುಕ್ತವಾಗಿ ಕೊಂಡಾಡಿದ್ದರು.
ರಾಜುವಿನ ಯೋಚನೆ ಹಾಗೂ ಸಿನಿಮಾ, ಪ್ರೀತಿ ನನಗೆ ತುಂಬ ಇಷ್ಟವಾಗಿತ್ತು. ಆತ ತನ್ನ ಮನಸನ್ನೇ ನನ್ನೆದುರು ತೆರೆದಿಡುತ್ತಿದ್ದ ತನ್ನ ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಸೂಪರ್ ಆಗಿರಬೇಕು ಎಂದು ಆತ ಆಸೆ ಪಡುತ್ತಿದ್ದ. ಗುಣಮಟ್ಟದ ದೃಷ್ಟಿಯಲ್ಲಿ ಯಾವ ರಾಜಿಗೂ ಆತ ಒಪ್ಪುತ್ತಿರಲಿಲ್ಲ. ನನ್ನ ಸಿನಿಮಾಕ್ಕೆ ಇಂಥದೇ ಹಾಡು ಬೇಕೆಂದು ಕೇಳುತ್ತಿದ್ದ. ಒಂದು ಹಾಡು ಬರೆದುಕೊಟ್ಟರೆ, ಯಾಕೋ ಮನಸ್ಸಿಗೆ ಸಮಾಧಾನ ಆಗಿಲ್ಲ. ಇದಕ್ಕಿಂತ ಚನ್ನಾಗಿರೊದನ್ನು ಬರೆದು ಕೊಡಿ ಗುರುಗಳೇ ಎಂದು ದುಂಬಾಲು ಬೀಳುತ್ತಿದ್ದ. ಆತನ ಒತ್ತಾಯ ಕಂಡು ನನಗೂ ಖುಷಿಯಾಗುತ್ತಿತ್ತು. ಕೆ.ವಿ. ರಾಜು-ಹಂಸಲೇಖಾ ಕಾಂಬಿನೇಷನ್‌ನಲ್ಲಿ ಹಿಟ್ ಹಾಡುಗಳು ಬಂದಿರುವುದಕ್ಕೆ ಇದೂ ಒಂದು ಕಾರಣ ಅನ್ಕೋತೀನಿ ನಾನು…
ಪರಿಸ್ಥಿತಿ ಹೀಗಿದ್ದಾಗಲೇ ಸಾ.ರಾ. ಗೋವಿಂದು ನಿರ್ಮಾಣದ ‘ಬೆಳ್ಳಿ ಕಾಲುಂಗುರ’ ಚಿತ್ರದ ನಿರ್ದೇಶನಕ್ಕೆ ರಾಜು ಆಯ್ಕೆಯಾದ. ಬೆಂಗಳೂರಿನ ಮೋತಿ ಮಹಲ್ ಹೋಟೆಲಿನಲ್ಲಿ ಸಿನಿಮಾದ ಕೆಲಸ ಆರಂಭವಾಯಿತು. ಈ ಸಂದರ್ಭದಲ್ಲಿಯೇ ಅದೊಮ್ಮೆ ನನ್ನನ್ನು ಕರೆಸಿಕೊಂಡ ರಾಜು ಕಥೆ ಹೇಳಿದ. ಹಾಡುಗಳು ಯಾವ್ಯಾವ ಸಂದರ್ಭದಲ್ಲಿ ಬೇಕು ಎಂಬುದನ್ನೂ ಹೇಳಿದ. ಕಡೆಗೆ ಒಂದು ದಿನವನ್ನು ‘ಫಿಕ್ಸ್’ ಮಾಡಿ- ‘ಅವತ್ತು ನೀವು ನನ್ನೆದುರೇ ಕೂತು ಹಾಡಿನ ಟ್ಯೂನ್ ಮತ್ತು ಸಾಹಿತ್ಯವನ್ನು ಕೊಡಬೇಕು ಗುರುಗಳೇ…’ ಅಂದ.
ನಿಗಯಾಗಿದ್ದ ದಿನ ಬಂದೇ ಬಂತು. ಅವತ್ತು ಹೋಟೆಲಿಗೆ ಹೋದೆ. ಹಾರ್‍ಮೋನಿಯಂ ಮುಂದಿಟ್ಟುಕೊಂಡು ಕೂತೆ. ಸಿನಿಮಾದ ಕಥೆಯನ್ನು ಕಣ್ಮುಂದೆ ತಂದುಕೊಂಡೆ. ನಾಯಕ, ನಾಯಕಿ ಇಬ್ಬರೂ ತುಂಬ ಕಷ್ಟದಲ್ಲಿದ್ದಾಗ ಕೇಳಿಬರುವ ಹಾಡಿದು. ಹಾಡು ಬರೆಯಬೇಕು ಅಂದುಕೊಂಡಾಗ ನನ್ನ ಕಣ್ಮುಂದೆ ಬಂದದ್ದು ಕೇವಲ ನಾಯಕ- ನಾಯಕಿಯ ಚಿತ್ರವಲ್ಲ. ಬದಲಿಗೆ ಸಮಸ್ತ ಪ್ರೇಮಿಗಳದ್ದು. ತನ್ನ ಬದುಕಿನ ನಾವೆ ಮುಳುಗಿಹೋಯಿತು ಎಂಬಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಲಿದು ಬಂದವನು(ಳು) ಕಾಣಿಸಿಕೊಂಡರೆ ಪ್ರೇಯಸಿ/ ಪ್ರಿಯಕರನಿಗೆ ದುಃಖ ಉಮ್ಮಳಿಸಿ ಬರುತ್ತದೆ. ಅಂಥ ಸಂದರ್ಭದಲ್ಲಿ ಒಲಿದು ಬಂದವನು(ಳು)-‘ ಉಹುಂ, ನೀನೀಗ ಅಳಬಾರ್‍ದು. ಹೀಗೆಲ್ಲ ಅತ್ತರೆ ನನ್ನ ಮೇಲಾಣೆ’ ಎಂದು ಬಿಡುತ್ತಾರೆ. ಈ ‘ಆಣೆ’ಗೆ ಮೀರಿ ನಡೆದುಕೊಂಡರೆ ಒಲಿದವರಿಗೆ ಕೆಡುಕಾಗಬಹುದು ಎಂಬ ಒಂದೇ ಕಾರಣಕ್ಕೆ ಕಣ್ಣೀರೇ ಬತ್ತಿ ಹೋಗುವಂತೆ ಮಾಡುವ ಪ್ರೇಮಿಗಳು ಎಲ್ಲ ಕಡೆಯೂ ಇದ್ದಾರೆ…
ನಾನು ಕಂಡಿದ್ದ, ಕೇಳಿದ್ದ ಹಲವಾರು ಪ್ರೇಮಿಗಳ ನೆನಪು ಒಂದರ ಹಿಂದೊಂದರಂತೆ ಕಣ್ಮುಂದೆ ಬರುತ್ತಿದ್ದಂತೆಯೇ ಹಾಡಿನ ಮೊದಲ ಸಾಲು ಹೊಳೆದುಬಿಟ್ಟಿತು. ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ…’ ಮೊದಲ ಸಾಲು ಮುಗಿಸುವುದರೊಳಗೆ ನಾನೇ ಭಾವುಕನಾಗಿದ್ದೆ. ಈ ಸಾಲಲ್ಲಿ ಏನೋ ಆಕರ್ಷಣೆ ಇದೆ ಅನಿಸಿದ್ದೇ ಆಗ. ನಂತರದ್ದೆಲ್ಲ ಸರಾಗ. ತುಂಬ ಸುಲಭದಲ್ಲಿ ಮೊದಲ ಚರಣ ಮುಗಿದು ಹೋಯಿತು. ನಾನು ಸರಸರನೆ ಬರೀತಾ ಇದ್ದುದು ನೋಡಿದ ರಾಜು- ‘ಆಯ್ತಾ ಗುರುಗಳೇ?’ ಎಂದರು.
ಯಾವುದೇ ಹಾಡು ಕೊಟ್ಟರೂ-ಇದಕ್ಕಿಂತ ಸೂಪರ್ ಆಗಿರೋದು ಕೊಡಿ ಎನ್ನುತ್ತಿದ್ದ ರಾಜು ಮಾತು ನೆನಪಿಗೆ ಬಂತು. ನಂತರದ ಹದಿನೈದು ನಿಮಿಷದಲ್ಲಿ ಅದೇ ಟ್ಯೂನ್‌ಗೆ ಇನ್ನೂ ನಾಲ್ಕು ಹಾಡು ಬರೆದೆ. ನಂತರ, ಮೊದಲು ಬರೆದಿದ್ದ ಹಾಡನ್ನು ಎತ್ತಿಟ್ಟುಕೊಂಡು, ಬಾಕಿ ನಾಲ್ಕು ಹಾಡುಗಳನ್ನು ಒಂದರ ನಂತರ ಒಂದನ್ನು ಕೇಳಿಸಿದೆ. ಆ ಪುಣ್ಯಾತ್ಮ ನಾಲ್ಕನ್ನೂ ಒಪ್ಪಲಿಲ್ಲ. ‘ಗುರುಗಳೇ ನನಗೆ ಇದೆಲ್ಲಕ್ಕಿಂತ ಚನ್ನಾಗಿರೋದು ಬೇಕು. ಬೇರೆಯದು ಕೊಡಿ’ ಅಂದ!
ಆಗ ಮೆಲ್ಲಗೆ ಮೊದಲೇ ಬರೆದಿಟ್ಟಿದ್ದ ‘ಒಂದೇ ಒಂದು ಕಣ್ಣ ಬಿಂದು’ ಹಾಡು ಹೊರತೆಗೆದೆ. ಹಾರ್‍ಮೋನಿಯಂ ಬಾರಿಸುತ್ತಾ ಅದರ ಪಲ್ಲವಿಯನ್ನು ಹಾಡಿದೆ ನೋಡಿ- ಅವನ್ನು ಕೇಳಿ, ಕೆ.ವಿ. ರಾಜು ಮುಖ ಊರಗಲವಾಯಿತು. ಆತ ಸಂಭ್ರಮದಿಂದ-‘ಗುರುಗಳೇ, ಈ ಹಾಡು ಸೂಪರ್’ ಎಂದು ಉದ್ಗರಿಸಿದ. ಮುಂದೆ ಸಿನಿಮಾ ಬಿಡುಗಡೆಯಾದಾಗ ರಾಜು ತೆಗೆದ ಉದ್ಗಾರವನ್ನೇ ಪ್ರೇಕ್ಷಕರೂ ರಿಪೀಟ್ ಮಾಡಿದರು….’
ಹಳೆಯ ನೆನಪೊಂದು ಥೇಟ್ ಹಾಡಿನಂತೆಯೇ ತಮ್ಮ ಕೈ ಹಿಡಿದು ಕಾಡಿದ ಸೊಗಸಿಗೆ ತಾವೇ ಒಮ್ಮೆ ಬೆರಗಾಗಿ ನಗುತ್ತಾ ಮಾತು ಮುಗಿಸಿದರು ಹಂಸಲೇಖ.
***
ಇವತ್ತು ಎಲ್ಲರೂ ಮಾತು ಮಾತಿಗೂ ಪಾಸಿಟಿವ್ ಥಿಂಕಿಂಗ್ ಎನ್ನುತ್ತಾರೆ. ಅಂಥದೇ ಭಾವ ಹೊಮ್ಮಿಸುವ ಹಾಡನ್ನು ಹಂಸಲೇಖ ದಶಕಗಳ ಹಿಂದೆಯೇ ಬರೆದಿದ್ದರಲ್ಲ? ಆ ಕಾರಣಕ್ಕಾಗಿ ಎಲ್ಲ ಪ್ರೇಮಿಗಳ ಪರವಾಗಿ ಅವರಿಗೆ ಅಭಿನಂದನೆ.

ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು!

ನವೆಂಬರ್ 18, 2010

ಹೇಳಲಾರೆನು ತಾಳಲಾರೆನು…
ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ

ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನು
ಮೆಚ್ಚಿ ಪ್ರೀತಿಯ ಕಾಮನೆ ||ಪ||

ಎಂದೋ ನಾನು ನಿನ್ನ ಕಂಡೆ
ಅಂದೇ ಆಸೆ ಮೂಡಿದೆ
ಕೂಗಿ ಕರೆದ ಕಣ್ಣ ಭಾಷೆ
ನನ್ನ ಹೃದಯ ಕದ್ದಿದೆ ||೧||

ಸ್ವರ್ಗಲೋಕ ಇಲ್ಲೇ ತೇಲಿ
ಒಲಿದ ಜೀವ ಹಾಡಿದೆ
ಎಲ್ಲಿ ನೀನೋ ಅಲ್ಲೆ ನಾನು
ನಮ್ಮ ನಲ್ಮೆ ಕೂಡಿದೆ ||೨||

ನೋವು ನಲಿವು ತುಂಬಿಕೊಂಡು
ಪ್ರೇಮ ಪಯಣ ಸಾಗಿದೆ
ಅರಿತ ಮೇಲೆ ಬೆರೆತ ಮೇಲೆ
ರಾಗ ಧಾರೆ ಹರಿದಿದೆ ||೩||

ಸಾವಿರ ಮಾತುಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಹಾಡಿನ ಮೂಲಕ ಹೇಳಿಬಿಡಬಹುದು. ಅದು ಹಾಡಿಗಿರುವ ಶಕ್ತಿ. ಈ ಕಾರಣದಿಂದಲೇ ಉತ್ಕಟ ಸನ್ನಿವೇಶದ ಸಂದರ್ಭಗಳಲ್ಲಿ ಹಾಡುಗಳನ್ನು ಬಳಸುವ; ಆ ಮೂಲಕ ಸನ್ನಿವೇಶದ ತೀವ್ರತೆ ಹೆಚ್ಚುವಂತೆ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಪ್ರೀತಿ ಬದುಕಾದಾಗ, ಮನಸು ಮೈಮರೆತಾಗ, ಕನಸು ಕಣ್ಣಾದಾಗ, ಸಂಕಟ ಕೈ ಹಿಡಿದಾಗ, ಸಂಭ್ರಮ ಹೆಚ್ಚಿದಾಗ, ವಿಪರೀತ ಸಿಟ್ಟು ಬಂದಾಗ, ಪರಮಾಪ್ತರು ಕಣ್ಮರೆಯಾದಾಗ, ಪರಮಾತ್ಮ ಪ್ರತ್ಯಕ್ಷವಾದಾಗ… ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ಆ ಕ್ಷಣದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವೇ ಇಲ್ಲ. ಆದರೆ ಆ ಕೆಲಸವನ್ನು ಹಾಡುಗಳು ಮಾಡಬಲ್ಲವು. ಸಿನಿಮಾ ಅಂದ ಮೇಲೆ ಅದರಲ್ಲಿ ಒಂದೆರಡಾದರೂ ಹಾಡುಗಳು ಇರಲೇಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಕಾರಣದಿಂದಲೇ.
ಸ್ವಾರಸ್ಯ ಕೇಳಿ: ಒಂದು ಸಿನಿಮಾಕ್ಕೆ ಕಥೆ ಹುಡುಕಲು, ಸಂಭಾಷಣೆ ಬರೆಯಲು, ಚಿತ್ರಕಥೆ ಸಿದ್ಧಪಡಿಸಲು, ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲು ನಿರ್ಮಾಪಕ, ನಿರ್ದೇಶಕರು ಆರೇಳು ತಿಂಗಳ ಕಾಲ ತೆಗೆದುಕೊಳ್ಳುತ್ತಾರೆ. ಆದ್ರೆ ಹಾಡುಗಳ ರಚನೆಗೆ ಮಾತ್ರ ದಮ್ಮಯ್ಯ ಅಂದರೂ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಡಿನ ಸಂದರ್ಭ ವಿಹರಿಸಿ-‘ಈಗ್ಲೇ ಆಗಬೇಕ್’ ಎಂದು ಅಪ್ಪಣೆ ಹೊರಡಿಸಿ ಹಾಡು ಬರೆಸಿಕೊಂಡ ಉದಾಹರಣೆಗಳೂ ಇವೆ.
ಒಂದು ಸಂತೋಷವೆಂದರೆ ನಮ್ಮ ಗೀತರಚನೆಕಾರರು ಇಂಥ ಸವಾಲುಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದ್ದಾರೆ. ತಮಗೆ ದೊರಕಿದ ೧೫-೨೦ ನಿಮಿಷಗಳ ಅಲ್ಪಾವಯಲ್ಲಿಯೇ ದಶಕಗಳ ನಂತರವೂ ನೆನಪಲ್ಲಿ ಉಳಿಯುವಂಥ ಗೀತೆಗಳನ್ನು ರಚಿಸಿದ್ದಾರೆ; ರಚಿಸುತ್ತಿದ್ದಾರೆ. ಗೀತೆರಚನೆಕಾರರಿಗೆ ಸಿಗುವ ಅಲ್ಪಾವಯ ಬಗ್ಗೆ ಹಾಡುಗಳ ರಚನೆಗೆ ಸಂಬಂಸಿದಂತೆ ಹಿರಿಯ ಗೀತೆರಚನೆಕಾರರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ:
ಗೀತೆ ರಚನೆಕಾರ ಸದಾ ಕಾಲವೂ ಎಚ್ಚರದಿಂದಿರಬೇಕು. ಹಾಡು ಸೃಷ್ಟಿಗೆ ಆತ ಸದಾ ಸಿದ್ಧನಾಗಿರಬೇಕು. ಗೀತೆರಚನೆ ಎಂಬುದು ಅವಸರದ ಹೆರಿಗೆ. ಅದು ಒಂದು ರೀತಿಯಲ್ಲಿ ಆಶುಭಾಷಣ ಸ್ಪರ್ಧೆ ಇದ್ದ ಹಾಗೆ. ಹಾಡು ಬರೆಯಲು ಸಿಗುವ ಸಮಯ ತುಂಬಾ ಕಡಿಮೆ. ಆ ಅಲ್ಪಾವಯಲ್ಲೇ ಅವನು ಮಿಂಚಬೇಕು. ಪದಗಳೊಂದಿಗೆ ಆಟ ಆಡಬೇಕು. ಹಾಡು ಕಟ್ಟಬೇಕು. ಹೀಗೆ ಹಾಡು ಹೆಣೆಯುವ ನೆಪದಲ್ಲಿ ಆ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬೇಕು. ಹಾಡಿನ ಪ್ರತಿ ಸಾಲೂ ಸಂದರ್ಭಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು.
ಹೆಚ್ಚಿನ ಸಂದರ್ಭಗಳಲ್ಲಿ ಇಂಥದೇ ನಿರ್ದಿಷ್ಟ ಸಂದರ್ಭದಲ್ಲಿ ಹಾಡು ಬರಬೇಕು ಎಂದು ಸಿನಿಮಾ ತಯಾರಿಯ ಹಂತದಲ್ಲಿಯೇ ನಿರ್ಧರಿಸಲಾಗುತ್ತದೆ. ನಂತರ, ಅದನ್ನು ಸಂಗೀತ ನಿರ್ದೇಶಕ ಹಾಗೂ ಗೀತೆರಚನೆಕಾರರಿಗೆ ತಿಳಿಸಲಾಗುತ್ತದೆ. ಆ ನಂತರದಲ್ಲಿ ಮೊದಲು ಟ್ಯೂನ್ ಸಿದ್ಧವಾಗುತ್ತದೆ. ನಂತರ ಆ ಟ್ಯೂನ್‌ಗೆ ಹೊಂದಿಕೆಯಾಗುವಂತೆ ಚಿತ್ರ ಸಾಹಿತಿಗಳು ಹಾಡು ಬರೆಯುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಮೊದಲೇ ಹಾಡು ಬರೆಸಿ ನಂತರ ಟ್ಯೂನ್ ಮಾಡುವುದೂ ಉಂಟು.
ಕೆಲವೊಂದು ಆಕಸ್ಮಿಕ ಸಂದರ್ಭದಲ್ಲಿ ಮಾತ್ರ, ಈ ತೆರನಾದ ಸಿದ್ಧ ಸೂತ್ರಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ. ಏಕೆಂದರೆ, ಆಗ ನಿರ್ಮಾಪಕ-ನಿರ್ದೇಶಕರು ಒಂದು ಖಚಿತ ಸಂದರ್ಭವನ್ನು ವಿವರಿಸುವುದೇ ಇಲ್ಲ. ಬದಲಾಗಿ-‘ಜನರಲ್ಲಾಗಿ ಬರೆದು ಬಿಡಿ ಸಾರ್’ ಅಂದಿರುತ್ತಾರೆ.( ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯಿರಿ ಅಂದ್ರೆ ಏನರ್ಥ?) ತಮಾಷೆ ಕೇಳಿ: ಇಂಥ ಸಂದರ್ಭದಲ್ಲಿ ಕೂಡ ಗೀತರಚನೆಕಾರ ನಿರಾಕರಣೆಯ ಮಾತಾಡುವಂತಿಲ್ಲ. ಬದಲಿಗೆ, ನನಗಿದು ಸತ್ವಪರೀಕ್ಷೆಯ ಸಂದರ್ಭ ಎಂದುಕೊಂಡೇ ಆತ ಗೀತೆರಚನೆಗೆ ತೊಡಗಬೇಕು. ಅಚಾನಕ್ಕಾಗಿ ಎದುರಾದ ಪರೀಕ್ಷೆಯಲ್ಲಿ ‘ಪಾಸ್’ ಆಗಬೇಕು!
‘ಬೆಂಕಿ-ಬಿರುಗಾಳಿ’ ಚಿತ್ರದ ಸೂಪರ್ ಹಿಟ್ ಗೀತೆ-‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ… ಹೀಗೆ ಸೃಷ್ಟಿಯಾದ ಸಂದರ್ಭವನ್ನು ವಿವರಿಸುವ ಮುನ್ನ ಪೂರಕ ಮಾಹಿತಿಯಂತೆ ಇಷ್ಟೆಲ್ಲ ಹೇಳಬೇಕಾಯಿತು. ವಿಷ್ಣು ವರ್ಧನ್-ಜಯಮಾಲಾ ಅಭಿನಯದಲ್ಲಿ ಚಿತ್ರಿಸಿರುವ ಈ ಹಾಡಿಗೆ ದನಿಯಾಗಿರುವವರು ಯೇಸುದಾಸ್-ವಾಣಿ ಜಯರಾಂ. ಈ ಹಾಡು ಬರೆದವರು-ದೊಡ್ಡರಂಗೇಗೌಡ. ವಿಶೇಷ ಏನೆಂದರೆ ದೊಡ್ಡರಂಗೇಗೌಡರು ಈ ಹಾಡು ಬರೆದದ್ದು ತೀರಾ ತೀರಾ ಆಕಸ್ಮಿಕವಾಗಿ. ಆ ಸಂದರ್ಭವನ್ನು ಗೌಡರು ವಿವರಿಸಿದ್ದು ಹೀಗೆ:
೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದ ಸಮಸ್ತ ಚಟುವಟಿಕೆ ನಡೆಯುತ್ತಿದ್ದುದು ಚೆನ್ನೈನಲ್ಲಿ. ಮೂಲತಃ ಕಾಲೇಜು ಉಪನ್ಯಾಸಕನಾಗಿದ್ದವ ನಾನು. ಸಿನಿಮಾಗಳಿಗೆ ಹಾಡು ಬರೆಯಬೇಕಾದ ಸಂದರ್ಭ ಬಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಶನಿವಾರ ಕಾಲೇಜು ಮುಗಿಸಿಕೊಂಡು ಚೆನ್ನೈಗೆ ಹೋಗುತ್ತಿದ್ದೆ. ಭಾನುವಾರ ಬೆಳಗಿನಿಂದ ಸಂಜೆಯೊಳಗೆ ಹಾಡುಗಳನ್ನು ಬರೆದುಕೊಟ್ಟು, ಅವತ್ತೇ ರಾತ್ರಿ ಹೊರಟು ಸೋಮವಾರ ಬೆಳಗಿನ ಜಾವಕ್ಕೇ ಬೆಂಗಳೂರು ತಲುಪಿಕೊಳ್ಳುತ್ತಿದ್ದೆ. ನಂತರ ಕಾಲೇಜಿನ ನಂಟು ಮುಂದುವರಿಸುತ್ತಿದ್ದೆ.
ಹೀಗಿದ್ದಾಗಲೇ ವಿಷ್ಣು ವರ್ಧನ್ ಅಭಿನಯದ ‘ಮಿನುಗಲೆ ಮಿನುಗಲೆ ನಕ್ಷತ್ರ’ ಹೆಸರಿನ ಸಿನಿಮಾಕ್ಕೆ ಹಾಡು ಬರೆಯಲು ಕರೆಬಂತು. ಅದಕ್ಕೆ ಮಾರುತಿ ಶಿವರಾಂ ನಿರ್ದೇಶನ, ಜಿ.ಕೆ. ವೆಂಕಟೇಶ್ ಅವರ ಸಂಗೀತವಿತ್ತು. ಪದ್ಧತಿಯಂತೆ ಒಂದು ಶನಿವಾರ ಚೆನ್ನೈಗೆ ಹೊರಟೆ. ಅಲ್ಲಿನ ಸ್ವಾಗತ್ ಹೋಟೆಲಿನಲ್ಲಿ ಉಳಿದುಕೊಂಡೆ. ಮರುದಿನ ಬೆಳಗ್ಗೆ ಸೀದಾ ಪ್ರಸಾದ್ ಸ್ಟುಡಿಯೋಗೆ ಹೋದೆ. ಜಿ.ಕೆ. ವೆಂಕಟೇಶ್, ಟ್ಯೂನ್ ಕೇಳಿಸಿದರು. ಆ ಸಿನಿಮಾಕ್ಕೆಂದು ಮಧ್ಯಾಹ್ನದೊಳಗೇ ಐದು ಹಾಡುಗಳನ್ನು ಬರೆದು ಮುಗಿಸಿದೆ. (ಮುಂದೆ ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆಯಾಗಲಿಲ್ಲ.) ಬಂದ ಕೆಲಸ ಮುಗೀತು ಎಂಬ ನಿರಾಳ ಭಾವದಲ್ಲಿ ನಾನಿದ್ದಾಗಲೇ ಅಲ್ಲಿಗೆ ಎಚ್.ಡಿ. ಗಂಗರಾಜು ಬಂದರು. ನನ್ನನ್ನು ಕಂಡವರೇ-‘ಮೇಸ್ಟ್ರೆ, ಎವಿಎಂಸಿ ಥಿಯೇಟರ್‌ಗೆ ಹೋಗೋಣ ಬನ್ನಿ. ಅಲ್ಲಿ ಸ್ವಲ್ಪ ಕೆಲಸ ಇದೆ’ ಎಂದು ಹೊರಡಿಸಿಯೇ ಬಿಟ್ರು. ಅಲ್ಲಿ ಬಂದು ನೋಡಿದರೆ-ಒಂದು ಸಿನಿಮಾದ ಚರ್ಚೆ ನಡೀತಿತ್ತು. ಅದೇ-ಬೆಂಕಿ ಬಿರುಗಾಳಿ. ವಿಷ್ಣು ವರ್ಧನ್, ಜಯಮಾಲಾ, ಶಂಕರ್‌ನಾಗ್ ತಾರಾಗಣವೆಂದು ನಿರ್ಧರಿಸಿದ್ದಾಗಿತ್ತು. ತಿಪಟೂರು ರಘು ನಿರ್ದೇಶನ, ಎಂ. ರಂಗರಾವ್ ಸಂಗೀತದ ಹೊಣೆ ಹೊತ್ತಿದ್ದರು.
ನಾನು ಎವಿಎಂಸಿ ಥಿಯೇಟರಿಗೆ ಹೋದಾಗ ಅಲ್ಲಿ ಯೇಸುದಾಸ್, ವಾಣಿ ಜಯರಾಂ, ಎಂ. ರಂಗರಾವ್, ತಿಪಟೂರು ರಘು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಇದ್ದರು. ನನ್ನನ್ನು ಕಂಡ ತಿಪಟೂರು ರಘು-‘ನೋಡಿ ಸಾರ್, ನಮ್ಮ ಹೊಸ ಸಿನಿಮಾಕ್ಕೆ ಹಾಡು ಬೇಕು. ಈಗಾಗಲೇ ಟ್ಯೂನ್ ಸಿದ್ಧವಾಗಿದೆ. ಸಂಗೀತ ಕೂಡ ರೆಡಿಯಾಗಿದೆ. ಆದರೆ ಸಾಹಿತ್ಯ ಇಲ್ಲ. ದಯವಿಟ್ಟು ಹಾಡು ಬರೆದುಕೊಡಿ’ ಅಂದ್ರು.
ತೀರಾ ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶ ಕಂಡು ಖುಷಿ, ಅಚ್ಚರಿ ಎರಡೂ ಆಯ್ತು. ಒಂದೆರಡು ನಿಮಿಷ ಯೋಚಿಸಿ-‘ಆಯ್ತು, ಬರೆದುಕೊಡ್ತೀನಿ. ಸಂದರ್ಭ ಏನೂಂತ ಹೇಳಿ’ ಅಂದೆ. ಆಗ ತಿಪಟೂರು ರಘು ಅವರು-‘ಅಯ್ಯೋ, ಈ ಹಾಡಿಗೆ ಅಂಥ ಮಹತ್ವವಾದ ಸಂದರ್ಭವೇನೂ ಇಲ್ಲ, ಜನರಲ್ ಡ್ಯೂಯೆಟ್ ಸಾಂಗ್ ಅಷ್ಟೇ. ಜನರಲ್ಲಾಗಿ ಯೋಚಿಸಿ ಬರೆದುಬಿಡಿ ಸಾರ್’ ಅಂದ್ರು.
ಇಂಥದೇ ಎಂದು ಸಂದರ್ಭ ಇದ್ದಾಗ, ಅದನ್ನು ಒಂದು ರೀತಿಯಲ್ಲಿ ಕಲ್ಪಿಸಿಕೊಂಡು ನಾಯಕ-ನಾಯಕಿಯರ ಮಾತುಗಳು ಹೀಗೇ ಇರಬಹುದೇನೋ ಎಂದು ಅಂದಾಜು ಮಾಡಿಕೊಂಡು ಬರೆಯುವುದು ಸುಲಭ. ಆದರೆ, ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯುವುದು ಹೇಗೆ? ನಾನು ಈ ತಾಕಲಾಟದ ಮಧ್ಯೆಯೇ ಬರೆಯಲು ಕುಳಿತಿದ್ದೆ. ಸುತ್ತಮುತ್ತ ಚಿತ್ರ ತಂಡದ ಬಾಕಿ ಜನರಿದ್ದರು. ಮೊದಲ ಐದಾರು ನಿಮಿಷದಲ್ಲಿ ಏನೆಂದರೆ ಏನೂ ಹೊಳೆಯಲಿಲ್ಲ. ಅದೇ ಬೇಸರದಲ್ಲಿ ಒಮ್ಮೆ ತಲೆ ಎತ್ತಿದೆ. ನನ್ನನ್ನು ನೋಡಿದವರು-‘ಆಯ್ತಾ ಸಾರ್?’ ಎಂದು ಕೇಳುವುದೆ?
ನನ್ನ ಸಂಕಟ ನನಗೆ. ಇವರಿಗೆ ತಮಾಷೆ ಅಂದುಕೊಂಡೆ. ನಂತರದ ಒಂದೆರಡು ನಿಮಿಷದಲ್ಲಿ -‘ಸಾರ್, ಏನಾದ್ರೂ ಹೊಳೀತಾ?’ ಎಂಬ ಪ್ರಶ್ನೆಯನ್ನು ಎಂ. ರಂಗರಾವ್ ಮತ್ತು ತಿಪಟೂರು ರಘು ಕೂಡ ಕೇಳಿದರು. ನನ್ನ ಮನಸ್ಸಿನ ಸಂಕಟವನ್ನು ಯಾರಿಗೂ ಹೇಳುವಂತಿಲ್ಲವಲ್ಲ ಅನಿಸ್ತು. ಇಂಥದೊಂದು ಯೋಚನೆ ಬಂದಾಗಲೇ ಮಿಂಚು ಹೊಳೆದಂತಾಯ್ತು. ಹೆಚ್ಚಿನ ಸಿನಿಮಾಗಳಲ್ಲಿ ಪ್ರೀತಿಯಲ್ಲಿ ಮುಳುಗಿದ ನಾಯಕ-ನಾಯಕಿ ಕೂಡ ಪರಸ್ಪರ ಭಾವನೆಗಳನ್ನು ಹೇಳಲಾರದ, ಸುಮ್ಮನಿರಲೂ ಆಗದಂಥ ಮನಸ್ಥಿತಿಯಲ್ಲಿ ಬದುಕ್ತಾ ಇರ್‍ತಾರಲ್ವ? ಹಾಗಾಗಿ ‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ’ ಎಂಬುದನ್ನೇ ಹಾಡಿನ ಮೊದಲು ಸಾಲು ಮಾಡಿದರೆ ಹೇಗೆ ಅನ್ನಿಸ್ತು. ಈ ಸಾಲು ಎಂ. ರಂಗರಾವ್ ಅವರು ಕೇಳಿಸಿದ್ದ ಟ್ಯೂನ್‌ಗೆ ತುಂಬಾ ಚನ್ನಾಗಿ ಹೊಂದಿಕೊಳ್ತಾ ಇತ್ತು. ಹೀಗೆ ಯೋಚಿಸುತ್ತಿದ್ದಾಗಲೇ ಸರಸರನೆ ಪಲ್ಲವಿಯ ಸಾಲುಗಳು ಹೊಳೆದುಬಿಟ್ಟವು.
ಸಂಕೋಚದಿಂದಲೇ ಅವುಗಳನ್ನು ರಂಗರಾವ್ ಅವರಿಗೆ ತೋರಿಸಿದೆ. ರಾಯರು ‘ಅದ್ಭುತ’ ಎಂದು ಉದ್ಗರಿಸಿದರು. ‘ಮುಂದುವರಿಸಿ ಸಾರ್’ ಎಂದು ಹುರಿದುಂಬಿಸಿದರು. ಆ ನಂತರದಲ್ಲಿ ಎಲ್ಲವೂ ಸರಾಗ, ಸರಾಗ. ಮುಂದಿನ ಹತ್ತೇ ನಿಮಿಷದ ಅವಯಲ್ಲಿ ಪ್ರೇಮಿಗಳ ಮನದ ಮಾತಾಗುವಂಥ ಒಂದು ಯುಗಳ ಗೀತೆ ಸೃಷ್ಟಿಯಾಗಿ ಹೋಯ್ತು. ನಿಜ ಹೇಳಬೇಕೆಂದರೆ, ಅವತ್ತು ಚೆನ್ನೈನಲ್ಲಿ ಬೇರೆ ಯಾವ ಗೀತ ರಚನೆಕಾರರೂ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನಿಂದ ಹಾಡು ಬರೆಸಿದ್ದರು! ಆ ಕ್ಷಣದ ಸತ್ವಪರೀಕ್ಷೆಯಲ್ಲಿ ನಾನು ಗೆದ್ದಿದ್ದೆ. ಮುಂದೆ ಆ ಗೀತೆಯ ಪ್ರತಿ ಅಕ್ಷರನ್ನೂ ಅಕ್ಕರೆಯಿಂದ ಹಾಡಿದ ಯೇಸುದಾಸ್-ವಾಣಿಜಯರಾಂ, ಅದನ್ನೊಂದು ಸ್ಮರಣೀಯ ಯುಗಳ ಗೀತೆಯನ್ನಾಗಿ ಮಾಡಿಬಿಟ್ಟರು….’
ಇಪ್ಪತ್ತಾರು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಖುಷಿ ಪಡುತ್ತಲೇ ಹಾಡಿನ ಕತೆಗೆ ಮಂಗಳ ಹಾಡಿದರು ದೊಡ್ಡರಂಗೇಗೌಡ.
***
ಅನಿರೀಕ್ಷಿತವಾಗಿ ಹಾಡು ಬರೆಯಬೇಕಾಗಿ ಬಂದಾಗ ಕವಿಯೊಬ್ಬ ಅನುಭವಿಸುವ ತಳಮಳ-ಚಿತ್ರದಲ್ಲಿ ಒಂದು ಯುಗಳ ಗೀತೆಗೆ ವಸ್ತುವಾದದ್ದು ವಿಚಿತ್ರ ಮತ್ತು ಸ್ವಾರಸ್ಯ. ಅಲ್ಲವೇ?